Homeಕರ್ನಾಟಕವಿಮರ್ಶೆ ಸಾಧ್ಯವಿಲ್ಲದೇ ನಿಂದನೆಗೆ ಮೊರೆ ಹೋದವರದ್ದು ವಿದ್ವತ್ತು ಒಳನೋಟ ಹೇಗಾದೀತು?

ವಿಮರ್ಶೆ ಸಾಧ್ಯವಿಲ್ಲದೇ ನಿಂದನೆಗೆ ಮೊರೆ ಹೋದವರದ್ದು ವಿದ್ವತ್ತು ಒಳನೋಟ ಹೇಗಾದೀತು?

ಮೋದಿ ಅವರು ಮರು ಆಯ್ಕೆಗೊಂಡ ಮಾತ್ರಕ್ಕೆ ಎಲ್ಲವೂ ಇಲ್ಲಿಗೆ ಮುಗಿದು ಹೋಯಿತು, ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು ಎಂದು ತಾಕೀತು ಮಾಡ ಹೊರಟಿರುವ ನೀವು ದೇಶದ ಧರ್ಮಗ್ರಂಥ ‘ಸಂವಿಧಾನ’ಕ್ಕೆ ನೆತ್ತಿಯೂರಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಬಹುದಾದ ಸಲಹೆಯಾದರೂ ಏನು

- Advertisement -
- Advertisement -

| ಟೆಲೆಕ್ಸ್ ರವಿಕುಮಾರ್ |

ರೋಹಿತ್ ಚಕ್ರತೀರ್ಥ ಅವರಿಗೆ ನಮಸ್ಕಾರಗಳು
ನಿಮ್ಮ ಲೇಖನ ‘ಮೋದಿ ಬಿರುಗಾಳಿಗೆ ಬೆತ್ತಲಾಗಿದ್ದಾರೆ ಬುದ್ದಿಜೀವಿಗಳು’ ಓದಿದೆ. ಸ್ವಲ್ಪ ನಿರಾಶೆಯಾಯಿತು. ನರೇಂದ್ರ ಮೋದಿ ಅವರ ‘ಮರುವಿಕ್ರಮ’ವನ್ನು ವಿಶ್ಲೇಷಿಸುವಾಗ ಇದಕ್ಕೆ ಕಾರಣವಾದ ಜನಪರ ಯೋಜನೆಗಳು, ರಾಜಕೀಯ ಧೋರಣೆ, ಆಡಳಿತಾತ್ಮಕ ಅಂಶಗಳು ಮತ್ತು ರಾಜಕೀಯ ವಿರೋಧಿಗಳ ಎಲ್ಲಾ ತಂತ್ರ, ಕುತಂತ್ರಗಳನ್ನು ಮೋದಿ ಹೇಗೆಲ್ಲಾ ಹಿಮ್ಮೆಟಿಸಿ ‘ವಿಜಯದ ಪರಾಕ್ರಮ’ ಮೆರೆದರು ಎಂಬುದನ್ನು ವಿಶ್ಲೇಷಣಾತ್ಮಕವಾಗಿ ಬರೆಯಬಹುದೆಂದು ನಿರೀಕ್ಷಿಸಿದ್ದ ನನಗೆ ಖಂಡಿತ ನಿರಾಶೆಯಾಯಿತು.

ನಿಮ್ಮ ‘ವಿದ್ವತ್ತು ಮತ್ತು ಒಳನೋಟ’ ಭಾರತದ ವರ್ತಮಾನದ ರಾಜಕೀಯ ನಾಗಾಲೋಟವನ್ನು ಸೈದ್ಧಾಂತಿಕ ಎದುರಾಳಿಗಳನ್ನು ಹೀಯಾಳಿಸುವಲ್ಲಿ ವ್ಯರ್ಥವಾಗಿ ಹೋಯಿತೇನೋ ಎಂದೆನಿಸುತ್ತಿದೆ. ಈ ಕಾರಣಕ್ಕಾಗಿಯೇ ನನಗೆ ನಿರಾಶೆಯಾಯಿತು ಎಂದು ಮೊದಲೆ ಹೇಳಿದ್ದು. ಮೋದಿ ಅವರ ವಿಜಯಯಾತ್ರೆಯನ್ನು ಜನಾಭಿಪ್ರಾಯಗಳಿಂದ ಕಟ್ಟಿಹಾಕುವಲ್ಲಿ ಅವರ ಸೈದ್ಧಾಂತಿಕ ಮತ್ತು ರಾಜಕೀಯ ಎದುರಾಳಿಗಳು ವಿಫಲರಾಗಿದ್ದಾರೆ ಎಂಬುದನ್ನು ನೀವು ಹೇಳುವುದಕ್ಕಿಂತಲೂ ಮಗತಟ್ಟೆಗಳಲ್ಲಿ ಕಂಡು ಕರಗಿದೆ.

ಆಡಳಿತ ವಿರೋಧಿ ಅಲೆಯನ್ನು ಹುಟ್ಟುಹಾಕುವಲ್ಲಿ ಪ್ರತಿಪಕ್ಷಗಳಾಗಲಿ, ಜನಾಭಿಪ್ರಾಯವನ್ನು ರೂಪಿಸುವಲ್ಲಿ ನೀವು ಗುರುತಿಸಲ್ಪಟ್ಟ ಬುದ್ದಿಜೀವಿಗಳಾಗಲಿ ವಿಫಲರಾಗಿದ್ದಾರೆ ನಿಜ. ಬಹುಶಃ ನಾನು ತಿಳಿದಂತೆ ಸುಳ್ಳು ಕಲೆ ಇವರಿಗೆ ಗೊತ್ತಿಲ್ಲದ ಕಾರಣ ಈ ಹಿನ್ನಡೆ ಅನುಭವಿಸಬೇಕಾಗಿ ನಿಮ್ಮ ನುಡಿ ನಾಲಿಗೆಗೆ ಈಡಾಗಬೇಕಾಗಿ ಬಂದಿದೆ. ನನ್ನ ಪ್ರಕಾರ ನರೇಂದ್ರ ಮೋದಿ ಅವರನ್ನು ಬೆತ್ತಲು (ವಿಷಯಾಧಾರಿತವಾಗಿ) ಮಾಡುವಲ್ಲಿ ಈ ನಾಡಿನ ಬುದ್ದಿಜೀವಿಗಳಿಗೆ ಸಾಧ್ಯವೆ ಆಗಲಿಲ್ಲ. ಇದೆಲ್ಲವನ್ನೂ ಮೆಟ್ಟಿ ಮೋದಿ ವಿಜಯಸಾಮ್ರಾಟರಾಗಿದ್ದು ಹೇಗೆ ಎಂಬುದನ್ನು ತಿಳಿಯಲು ನನಗಿನ್ನೂ ಕುತೂಹಲವಿದೆ.

ಮೋದಿ ಅವರನ್ನು ಸೈದ್ದಾಂತಿಕ ಕಾರಣಕ್ಕೆ, ಆಡಳಿತ ಧೋರಣೆ ಕಾರಣಕ್ಕೆ ವಿರೋಧಿಸಿದವರನ್ನು ಗುರಿಯಾಗಿಸಿಕೊಂಡ ನಿಮ್ಮ ಬರಹ ಒಂದು ಸೀಮಿತ ಚೌಕಟ್ಟಿನಲ್ಲಿ ನರಳುವಂತಿದೆ. ಮೋದಿ ಅವರು ಗೆದ್ದಾಗಿದೆ ನಿಜ, ಜನಮತವನ್ನು ಪ್ರಜಾಪ್ರಭುತ್ವ ಒಪ್ಪುವ ಎಲ್ಲರೂ ಗೌರವಿಸಲೇಬೇಕು. ಆದರೆ ಅವರ ಗೆಲುವನ್ನು ಇತರರ ಸೋಲಿಗೆ ಹೋಲಿಸುವಾಗ ಒಂದು ಘನತೆಯ ಸಂವೇದನೆ ಇಲ್ಲದೇ ಹೋದರೆ ಅದೊಂದು ‘ಅಸಾದಿಯ ಮಾರಿ ಬೈಗುಳ’ವಾಗಿ ರಂಜಿಸಬಹುದಷ್ಟೇ. ನಿಮ್ಮ ಈ ಲೇಖನ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅವುಗಳಿಗೆ ತಾವು ಉತ್ತರಿಸಿದಲ್ಲಿ ನಾನು ಸೇರಿದಂತೆ ಈ ನಾಡಿನ ಬಹುತೇಕರು ಗೌರವಿಸುವ ಬುದ್ದಿಜೀವಿಗಳ, ಸಾಹಿತ್ಯ-ಸಾಂಸ್ಕೃತಿಕ ವಲಯದ ಪ್ರತಿನಿಧಿಗಳ ಕುರಿತಾದ ನನ್ನ ಅಭಿಪ್ರಾಯವನ್ನು ಮರು ವಿಮರ್ಶೆ ಮಾಡಿಕೊಳ್ಳಲು ಸಹಕಾರಿಯಾಗಬಹುದು.

ಹೆಚ್.ಎಸ್ ದೊರೆಸ್ವಾಮಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು, ಗಾಂಧಿವಾದದ ಕೊಂಡಿಯಂತೆ ಗೌರವಿಸುತ್ತಾ ಬರಲಾಗಿದೆ. ಇದು ನಿಜವೂ ಹೌದು. ಅವರನ್ನು ‘ಗಾಂಧಿವಾದಿ’ ಎಂಬ ಕಾರಣಕ್ಕೆ ನೀವು ಹಿರಿಯಜೀವದ ಹೋರಾಟವನ್ನು ಲೇವಡಿ ಮಾಡಿವಷ್ಟು ಅಸಹನೆಗೆ ನಿಮ್ಮನ್ನು ಒಡ್ಡಿಕೊಳ್ಳಲು ಹೇಗೆ ಸಾಧ್ಯವಾಯಿತು? ಗಿರೀಶ್ ಕಾರ್ನಾಡ್, ಚಂಪಾ, ಮಹಮ್ಮದ್ ಕುಂಞ, ಕುಂ.ವಿ, ಎಸ್.ಜಿ.ಸಿದ್ದರಾಮಯ್ಯ, ಕೆ.ಮರುಳಸಿದ್ದಪ್ಪ. ಹೆಚ್.ಎಸ್.ಶಿವಪ್ರಕಾಶ್, ರಾಜೇಂದ್ರ ಚೆನ್ನಿ, ವಿವೇಕ್ ಶಾನುಭಾಗ ಅವರನ್ನೆಲ್ಲಾ ನೀವೆ ನಿಮ್ಮ ಲೇಖನದಲ್ಲಿ ‘ಪ್ರಗತಿಪರಜೀವಪರ ಸಾಕ್ಷಿ ಪ್ರಜ್ಞೆ’ಗಳು ಎಂದು ಗುರುತಿಸಿದ್ದೀರ. ಹೀಗಿರುವಾಗ ಅವರೆಲ್ಲಾ ಸೈದ್ಧಾಂತಿಕ ನೆಲಗಟ್ಟಿನಲ್ಲಿ ಮೋದಿ ಅವರನ್ನು ವಿರೋಧಿಸಿದ ಮಾತ್ರಕ್ಕೆ ನಿಮ್ಮ ಲೇವಡಿ ಸ್ತುತಿಗೆ ಈಡಾಗಿದ್ದು ಮಾತ್ರ ಸೋಜಿಗದ ಸಂಗತಿ.

‘ಒಂದಾನೊಂದು ಕಾಲವಿತ್ತು. ವಿದ್ಯಾರ್ಥಿಗಳಾಗಿದ್ದ ನಾವೆಲ್ಲ ಶಾಲೆ-ಕಾಲೇಜುಗಳ ಭಾಷಾಪಠ್ಯದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಪ್ರಶಸ್ತಿ ಸಿಕ್ಕಿದೆ ಎಂಬ ಲೆಕ್ಕದ ಮೇಲೆ ಸಾಹಿತಿಗಳ ಮೌಲ್ಯವನ್ನು ಮುಗ್ಧರಾಗಿ ಅಳೆಯುತ್ತಿದ್ದೆವು. ಕುಂವೀ, ಚಂಪಾ, ಬರಗೂರು, ಕಾರ್ನಾಡ ಎಂಬೆಲ್ಲ ಪ್ರಭೃತಿಗಳನ್ನು ನೋಡಿದರೆ ಆಹಾ ಅವರದದೆಂಥ ಉನ್ನತ ವ್ಯಕ್ತಿತ್ವ ಎಂದು ಮನಸ್ಸು ತಲೆಬಾಗುತ್ತಿತ್ತು. ಅವರು ಬರೆದದ್ದೆಲ್ಲ ಘನವಾದದ್ದೇ ಇರಬೇಕು, ಅವರ ಕತೆ-ಕವಿತೆ-ಕಾದಂಬರಿ-ನಾಟಕಗಳಲ್ಲಿ ಜೀವನದ ಪರಮ ರಹಸ್ಯಗಳೆಲ್ಲ ಅಡಗಿರಬೇಕು ಎಂದು ನಾವು ಭಾವಿಸಿದ್ದೆವು.’
ಎಂದು ಬರೆಯುವ ನಿಮ್ಮ ಗತ ನಂಬಿಕೆ ನಿಮ್ಮ ಹೊರತಾದ ಜನಸಮುದಾಯದಲ್ಲಿ ಈಗಲೂ ಸತ್ತಿಲ್ಲ. ಬಹುಶಃ ನಿಮ್ಮ ಜ್ಞಾನದ ಪರಿಧಿಯಲ್ಲಿ ಈ ಎಲ್ಲರನ್ನೂ ವಿಮರ್ಶೆಗೊಳಿಸಿದರೆ ತಪ್ಪೇನಿಲ್ಲ. ಇಲ್ಲಿ ಯಾರು ಪ್ರಶ್ನಾತೀತರಲ್ಲ. ಎಲ್ಲರೂ ವಿಮರ್ಶೆಗೆ ಒಳಪಟ್ಟು ಸೋಸಿ ಶುದ್ದರಾಗಬೇಕಾಗಿದೆ. ಆ ನಿಟ್ಟಿನಲ್ಲಿ ತಮ್ಮ ವಾದ, ವಿಚಾರಮಂಡನೆಯನ್ನು ಸ್ವಾಗತಿಸುತ್ತೇನೆ. ಆದರೆ ನೀವು ಇಲ್ಲಿ ಅವರ ವಿದ್ವತ್ತು, ಸಿದ್ಧಾಂತ ಪ್ರತಿಪಾದನೆಯಲ್ಲಿರಬಹುದಾದ ಲೋಪಗಳನ್ನು ಬಯಲು ಮಾಡದೆ ಕೇವಲ ನಿಂದನಾ ರೂಪದಲ್ಲಿ ಬೆತ್ತಲಾಗಿದ್ದಾರೆ ಎಂದು ಲೇವಡಿ ಮಾಡ ಹೊರಟಿರುವುದು ಕ್ಷುಲ್ಲಕ ತಿವಿತವಾಗಬಹುದು ಅಷ್ಟೆ. ಅದೊಂದು ಮೋದಿ ಗೆಲುವಿನ ವಿಶ್ಲೇಷಣೆ ಆಗಲಾರದು.

“ಪ್ರತಿಭಾ ನಂದಕುಮಾರ್, ಬಿ.ಟಿ. ಲಲಿತಾ ನಾಯಕ್, ಮೊಗಳ್ಳಿ ಗಣೇಶ, ಪುರುಷೋತ್ತಮ ಬಿಳಿಮಲೆ, ಜಿ. ರಾಜಶೇಖರ ಮೊದಲಾದವರೆಲ್ಲ ಆಗಿನ ಕಾಲಕ್ಕೆ ಪ್ರಶ್ನಾತೀತ ಸಾಹಿತಿಗಳು! ಇವರು ಬರೆದದ್ದನ್ನು ಕಣ್ಣಿಗೊತ್ತಿಕೊಂಡು ದೇವರ ಮನೆಯಲ್ಲಿಟ್ಟು ಪೂಜಿಸುವ ದೊಡ್ಡ ಓದುಗ ವರ್ಗವೇ ಇತ್ತು. ಇಷ್ಟಕ್ಕೂ ಇವರೆಲ್ಲ ಬರೆಯುತ್ತಿದ್ದದ್ದು ಏನಂತೀರಿ? ಕರುಳು ಕಿವುಚುವಂಥ ಬಡತನ, ಅನಕ್ಷರತೆ, ಅಸಮಾನತೆಯ ಕಣ್ಣೀರ ಕತೆಗಳು. ಹೆಣ್ಣಿನ ಮೇಲೆ ಪುರೋಹಿತಶಾಹಿಗಳು, ಬಡವರ ಮೇಲೆ ಬಂಡವಾಳಶಾಹಿಗಳು ಮಾಡುತ್ತಿದ್ದ ಕರ್ಣಕಠೋರ ಅತ್ಯಾಚಾರದ ಹಸಿಬಿಸಿ ವಿವರಗಳಿದ್ದ ಕಾವ್ಯಗಳು. ಈ ಬುದ್ಧಿವಂತರು ಬರೆದದ್ದನ್ನಷ್ಟೇ ಓದಿ ಬೆಳೆದ ನಮ್ಮಂಥ ತಿಳಿಮಿದುಳುಗಳಿಗೆ ಜಗತ್ತೆಲ್ಲ ಹೀಗೇ ಇದೆ; ಜಗತ್ತಲ್ಲಿ ಅನ್ಯಾಯ-ಅಸಮಾನತೆ ತಾಂಡವವಾಡುತ್ತಿದೆ; ಸಮಾಜದಲ್ಲಿ ಒಂದು ವರ್ಗ ಇನ್ನೊಂದು ವರ್ಗವನ್ನು ನಿತ್ಯನಿರಂತರವಾಗಿ ತುಳಿಯುತ್ತಲೇ ಇದೆ; ಹಿಂದೂ ಧರ್ಮದಲ್ಲಿರುವಷ್ಟು ಕಂದಾಚಾರ ಕಟ್ಟುಪಾಡು ಶೋಷಣೆ ಜಗತ್ತಿನ ಬೇರಾವ ಧರ್ಮ-ಜಾತಿಗಳಲ್ಲಿಲ್ಲ; ಸಮಾಜದ ಗಂಡಸರೆಲ್ಲರೂ ಸ್ತ್ರೀಯನ್ನು ಕಾಮದ ಕಣ್ಣಿಂದ ನೋಡುವುದಕ್ಕೆಂದೇ ಹುಟ್ಟಿಬಂದ ರಾಕ್ಷಸರು – ಮುಂತಾದ ಭ್ರಮೆಗಳಿದ್ದವು.

ನಾವು ಓದುತ್ತಿದ್ದ ಪ್ರಜಾವಾಣಿಯಂಥ ಪತ್ರಿಕೆಗಳು ಕೂಡ ಅದೇ ಅಭಿಪ್ರಾಯವನ್ನು ಗಟ್ಟಿ ಮಾಡುವಂತಿದ್ದವು. ಅಲ್ಲಿನ ಭಾನುವಾರದ ಪುರವಣಿಗಳಲ್ಲಿ ಕೂಡ ಮತ್ತೆ ಇದೇ ಸಾಕ್ಷಿಪ್ರಜ್ಞೆಗಳೇ ಬರೆಯುತ್ತಿದ್ದುದರಿಂದ ಜಗತ್ತಿಗಿನ್ನೊಂದು ಆಯಾಮವಿದೆ ಎಂಬುದನ್ನು ಯೋಚಿಸಲು ಅವಕಾಶವೇ ಇರಲಿಲ್ಲ’ ಇದು ನೀವೇ ಬರೆದ ನಿಮ್ಮ ಅಭಿಪ್ರಾಯ. ಇದರಲ್ಲಿ ಯಾವುದು ಬದಲಾಗಿದೆ ನೋಡಿ. ಇಂದಿಗೂ ಹೆಣ್ಣಿನ ಮೇಲೆ ಗಂಡು ಜೀವಿಯ ಅಟ್ಟಹಾಸ ನಿಂತಿಲ್ಲ. ಕಂದಾಚಾರ- ದಲಿತರ ಮೇಲಿನ ದೌರ್ಜನ್ಯ ಕೊನೆಗೊಂಡಿಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟಿ ರಕ್ತಪಾತ ನಡೆಸುವುದು ಇನ್ನಷ್ಟು ಮುಂದುವರೆದಿದೆ ಹೀಗಿರುವಾಗ ಯಾವುದು ಬದಲಾಗಿದೆ, ಸುಖೀ ಸಮಾಜವೊಂದು ನಿರ್ಮಾಣವಾಗಿದ್ದಾದರು ಎಲ್ಲಿ ಎಂಬುದನ್ನು ವಿವರಿಸಿದರೆ ತಿಳುವಳಿಕೆಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗಬಹುದು.

“ಸಂಕ್ರಾಂತಿ ನಾಟಕದಲ್ಲಿ ಕೆಳಜಾತಿಯ ಹುಡುಗನಿಗೆ ಬ್ರಾಹ್ಮಣರ ಹುಡುಗಿಯಿಂದ ಮೋಸವಾಗುವ ಸಾಧ್ಯತೆ ಇರುತ್ತದೆಯೇ ಹೊರತು ಬ್ರಾಹ್ಮಣರ ಹುಡುಗಿಗೆ ಕೆಳಜಾತಿಯ ಹುಡುಗ ಮೋಸ ಮಾಡುವ ಸಂದರ್ಭ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ! ಯಾಕೆಂದರೆ ಈ ಸಾಹಿತ್ಯ ಕೃತಿಗಳೆಲ್ಲವೂ ಒಂದು ಅಜೆಂಡಾ ಇಟ್ಟುಕೊಂಡೇ ಹೊರಡುತ್ತವೆ.” ಎಂದು ಅದರೊಳಗಿನ ‘ತಾಕಲಾಟ’, ‘ಅಜೆಂಡಾ’ ವನ್ನು ಗುರುತಿಸುವ ನೀವು ಸಮಾಜದಲ್ಲಿನ ಶತ ಶತಮಾನಗಳ ಕಾಲದಿಂದಲೂ ಈ ಜಾತಿ ತರಮದ ಸೃಷ್ಟಿಕರ್ತರು ಹೊಣೆಗಾರರು ಯಾರು ಎಂಬುದನ್ನು ಯಾಕೆ ಜಗತ್ತಿಗೆ ಸಾರಬಾರದು? ಸಾಮಾಜಿಕ ಜಾಲತಾಣದ ಪರಿಣಾಮ ಸುಳ್ಳುಗಳು ದೇಶವನ್ನು ಆಳುತ್ತಿವೆ. ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವ ಹೊತ್ತಿಗೆ ಸುಳ್ಳು ಮೇಲುಗೈ ಸಾಧಿಸಿ ಹೊರಟಿರುತ್ತದೆ. ಈಗ ಆಗಿರುವುದು ಇದೆ. ಈಗ ಸಾಹಿತಿಗಳು, ಪತ್ರಕರ್ತರು, ಬುದ್ದಿಜೀವಿಗಳು ಈಗ ನಿಜವಾದ ಮೋದಿ ವಿರೋಧಿಗಳು ಎಂಬ ಷರಾ ಬರೆದಿಟ್ಟು ನಿಂದನಾ ತಿರುಗಣಿಯಲ್ಲಿ ತಿರುವಿದ್ದೀರ.

ಇದನ್ನು ಓದಿ: ಎಮರ್ಜೆನ್ಸಿ ಭಟ್ಟನ ದುಷ್ಟಾಯಣ

ಮೋದಿ ಅವರು ಮರು ಆಯ್ಕೆಗೊಂಡ ಮಾತ್ರಕ್ಕೆ ಎಲ್ಲವೂ ಇಲ್ಲಿಗೆ ಮುಗಿದು ಹೋಯಿತು, ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು ಎಂದು ತಾಕೀತು ಮಾಡ ಹೊರಟಿರುವ ನೀವು ದೇಶದ ಧರ್ಮಗ್ರಂಥ ‘ಸಂವಿಧಾನ’ಕ್ಕೆ ನೆತ್ತಿಯೂರಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಬಹುದಾದ ಸಲಹೆಯಾದರೂ ಏನು ಎಂಬುದನ್ನು ಬರೆದಿದ್ದರೆ ಚೆನ್ನಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...