ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಗೋರಖ್ಪುರ (ನಗರ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಶನಿವಾರ ಮಧ್ಯಾಹ್ನದಂದು ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
“ಪಕ್ಷದ ಉನ್ನತ ನಾಯಕತ್ವವು ಈ ಅಂತಿಮ ನಿರ್ಧಾರವನ್ನು ಹೆಚ್ಚು ಸಮಾಲೋಚನೆ ಮಾಡಿ ತೆಗೆದುಕೊಂಡಿದೆ” ಎಂದು ಒಕ್ಕೂಟ ಸರ್ಕಾರದ ಸಚಿವ ಧರ್ಮೇಂದ್ರ ಪ್ರಧಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಗೋರಖ್ಪುರ (ನಗರ) ಕ್ಷೇತ್ರವು ಮುಖ್ಯಮಂತ್ರಿಯ ಭದ್ರಕೋಟೆಯಾಗಿದ್ದು, 2017 ರವರೆಗೆ ಐದು ಬಾರಿ ಅವರನ್ನು ಲೋಕಸಭೆಗೆ ಆಯ್ಕೆ ಮಾಡಿದೆ.
ಇದನ್ನೂ ಓದಿ:ಉತ್ತರ ಪ್ರದೇಶ ಚುನಾವಣೆ: ಸಚಿವ ಸ್ಥಾನ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಬಿಜೆಪಿಯ ಸ್ವಾಮಿ ಪ್ರಸಾದ್ ಮೌರ್ಯ
ಆದಿತ್ಯನಾಥ್ ಅವರು ಈ ಹಿಂದೆ ಯಾವತ್ತೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಅವರು ಅಯೋಧ್ಯೆ ಅಥವಾ ಮಥುರಾ ಎಂಬ ಎರಡು ದೇವಾಲಯ ಪಟ್ಟಣಗಳಲ್ಲಿ ಒಂದು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳು ಇತ್ತು. ಬಿಜೆಪಿಯ ಕೇಂದ್ರ ಸಮಿತಿ ಈ ಕ್ಷೇತ್ರಗಳಿಂದ ಆದಿತ್ಯನಾಥ್ ಅವರನ್ನು ಕಣಕ್ಕಿಳಿಸಲು ಆಸಕ್ತಿ ವ್ಯಕ್ತಪಡಿಸಿತ್ತು.
ಈ ವಾರ ಆದಿತ್ಯನಾಥ್ ಸರ್ಕಾರದಿಂದ ಮೂವರು ಸಚಿವರು ಸೇರಿದಂತೆ ಉತ್ತರ ಪ್ರದೇಶದ 10 ಶಾಸಕರು ಪಕ್ಷದಿಂದ ಹೊರ ನಡೆದಿದ್ದಾರೆ. ಇದರಿಂದಾಗಿ ಬಿಜೆಪಿ ಆಂತರಿಕ ಭಿನ್ನಾಭಿಪ್ರಾಯವನ್ನು ಎದುರಿಸುತ್ತಿದೆ.
ಪ್ರಭಾವಿ ಒಬಿಸಿ ನಾಯಕರಾದ ಮಾಜಿ ಸಚಿವರಾದ ಧರಂ ಸಿಂಗ್ ಸೈನಿ ಮತ್ತು ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ ಅವರಲ್ಲಿ ಹಲವರು ಪ್ರತಿಪಕ್ಷ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಇದು ಯಾದವ ಸಮುದಾಯದ ಒಬಿಸಿ ಮತಗಳನ್ನು ಸೆಳೆಯಲು ಬಿಜೆಪಿಗೆ ದೊಡ್ಡ ಹೊಡೆತವನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ.
ಇಂಗು ತಿಂದ ಮಂಗನಂತಾಗಿರಬೇಕು….