Homeಚಳವಳಿಉಗುಳಲು ಆಗದ ಇತ್ತ ನುಂಗಲು ಆಗದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ಒಂದೆರಡು ಮಾತು….

ಉಗುಳಲು ಆಗದ ಇತ್ತ ನುಂಗಲು ಆಗದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ಒಂದೆರಡು ಮಾತು….

- Advertisement -
- Advertisement -

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು  ದೀರ್ಘಕಾಲದ ಅಸೌಖ್ಯದ ಬಳಿಕ ದಿಲ್ಲಿಯ ಏಮ್ಸ್ ನಲ್ಲಿ ಗುರುವಾರ ರಾತ್ರಿ  92ರ ವಯಸ್ಸಿನಲ್ಲಿ ನಿಧನರಾಗಿದ್ದು ಅವರಿಗೆ ಸಂತಾಪ ಸೂಚಿಸೋಣ. 2004ರ ಮೇ 22ರಂದು ಭಾರತದ 14ನೇ ಪ್ರಧಾನಮಂತ್ರಿಯಾಗಿ ತನ್ನ 71ರ ಹರೆಯದಲ್ಲಿ ಮನಮೋಹನ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಿ ಎರಡು ಅವಧಿ ಅಧಿಕಾರ ನಡೆಸಿದ್ದು ಇತಿಹಾಸದಲ್ಲಿ ದಾಖಲಾಗುವಂತಹದ್ದು. ಮೊದಲ ಅವಧಿಯಲ್ಲಿ ಡಾ. ಸಿಂಗ್ ಅವರ ಕುಟುಂಬದ ಸದಸ್ಯರು, ರಾಜಕೀಯ ಮಿತ್ರರು ಮತ್ತು ತನ್ನ ಪೂರ್ವಧಿಕಾರಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ – ಆಗಿನ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಭವನದಲ್ಲಿ ನಡೆಸಿದ ಸಮಾರಂಭದಲ್ಲಿ ಅಧಿಕಾರವನ್ನು ವಹಿಸಿಕೊಂಡಿದ್ದು ಈಗ ಇತಿಹಾಸ.

1972ರಲ್ಲಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಕಾಲಘಟ್ಟದ ಸಚಿವ ಸಂಪುಟದಲ್ಲಿ ಯಶವಂತರಾವ್ ಚವಾಣ್ ಅವರು ಹಣಕಾಸು ಸಚಿವರಾಗಿದ್ದರು. ಈ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಮುಖ್ಯ ಆರ್ಥಿಕ ಸಲಹೆಗಾರರಾಗಿ ಮನಮೋಹನ್ ಸಿಂಗ್ ನೇಮಕಗೊಂಡಾಗ ಅವರ ಅರ್ಥಶಾಸ್ತ್ರದಲ್ಲಿನ ಕೌಶಲ್ಯಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಅಲ್ಲಿಂದ, ಅವರು 1991ರಲ್ಲಿ ನರಸಿಂಹ ರಾವ್ ಅವರ ಅಡಿಯಲ್ಲಿ ಹಣಕಾಸು ಸಚಿವರಾಗುವ ಮೊದಲು ಹಣಕಾಸು ಕಾರ್ಯದರ್ಶಿ, ಯೋಜನಾ ಆಯೋಗದ ಸದಸ್ಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ – ಇತರ ಮಹತ್ವದ ಆರ್ಥಿಕ ಸ್ಥಾನಗಳನ್ನು ಪಡೆದಿದ್ದರು.

2004ರ ಲೋಕಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾಗುವವರೆಗೆ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಅಧಿಕಾರದಲ್ಲಿದ್ದ ಎನ್ ಡಿಎ ಸರ್ಕಾರವು ಎರಡನೇ ಅವಧಿಗೂ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ ಎಂದು ವ್ಯಾಪಕವಾಗಿ ಭಾವಿಸಲಾಗಿತ್ತು. ಬಿಜೆಪಿಯ ಹೈಕಮಾಂಡಿನ “ಭಾರತ ಪ್ರಕಾಶಿಸುತ್ತಿದೆ” ಎಂಬ ಪ್ರಚಾರವು ಆಕಾಶವಾಣಿಯಲ್ಲಿ ಮಾತ್ರವಲ್ಲದೇ ಕೆಲ ವರ್ಗದ ಜನರಲ್ಲಿ ಪ್ರಾಬಲ್ಯ ಸಾಧಿಸಿತು. ರಾಜಕೀಯ ವಿಶ್ಲೇಷಕರು ಮತ್ತು ಆಗಿನ ನಿರ್ಗಮನ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ ಡಿಎ ಗೆಲುವಿನ ಕುರಿತು ಅಗಾಧವಾಗಿ ಭವಿಷ್ಯ ನುಡಿದಿದ್ದವು. ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟವು ವಿಜಯಶಾಲಿಯಾಗಿ ಹೊರಹೊಮ್ಮಿತು. ಸರ್ಕಾರ ರಚಿಸಲು ಪ್ರಾದೇಶಿಕ ಮಿತ್ರಪಕ್ಷಗಳಿಂದ ಸಾಕಷ್ಟು ಬೆಂಬಲವನ್ನು ಪಡೆದುಕೊಂಡಿತು. ಆಗಿನ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿಯವರು ಪ್ರಧಾನ ಮಂತ್ರಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಸಂಘಪರಿವಾರ ಮತ್ತು ಅದರ ರಾಜಕೀಯ ವೇದಿಕೆ ಬಿಜೆಪಿಯು ದೇಶವ್ಯಾಪಿ ಸೋನಿಯಾರ ಕುರಿತು ವಿದೇಶಿ ಮಹಿಳೆ ಎಂಬ ಅಪಪ್ರಚಾರ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಆಗಷ್ಟೇ ಸೋತು ಸುಣ್ಣವಾಗಿದ್ದ ಬಿಜೆಪಿ ಈ ವಿಷಯದಲ್ಲಿ ಗೆಲುವನ್ನು ಸಾಧಿಸಿತ್ತು. ಕಾಂಗ್ರೆಸ್ಸಿಗೆ ಸೋನಿಯಾಗೆ ಬದಲಿ ನಾಯಕತ್ವವನ್ನು ಆಯ್ಕೆ ಮಾಡುವುದು ಅನಿವಾರ್ಯವಾಯಿತು. ಈ ಐತಿಹಾಸಿಕ ಸಾಂದರ್ಭಿಕ ಶಿಶುವಾಗಿ ಜನಿಸಿದ್ದೆ ಮನಮೋಹನ್ ಸಿಂಗ್.

ಆಗ ಸೋನಿಯಾ ಗಾಂಧಿ ತನ್ನ ಹೊರತುಪಡಿಸಿ ಬೇರೊಬ್ಬರ ಆಯ್ಕೆ ಕುರಿತು ಪಕ್ಷದಲ್ಲಿ ಆಂತರಿಕವಾಗಿ ಪ್ರತಿರೋಧ ಎದುರಿಸಿದರು. ಈ ಕುರಿತು ಅವರ ಆತ್ಮಚರಿತ್ರೆ, ಒನ್ ಲೈಫ್ ಈಸ್ ನಾಟ್ ಎನಫ್ ನಲ್ಲಿ ಮಾಜಿ ವಿದೇಶಾಂಗ ಸಚಿವ ಮತ್ತು ಕಾಂಗ್ರೆಸ್ ನಾಯಕ ನಟವರ್ ಸಿಂಗ್ ಅವರು ಸೋನಿಯಾ ಗಾಂಧಿಯವರ ನಿವಾಸದ ಆಗಿನ ಉದ್ವಿಗ್ನ ಕ್ಷಣವನ್ನು ವಿವರಿಸಿದ್ದಾರೆ. ಆಗ ರಾಹುಲ್ ಗಾಂಧಿ ತನ್ನ ತಂದೆ ರಾಜೀವ್ ಗಾಂಧಿ, ಮತ್ತು ಅಜ್ಜಿ ಇಂದಿರಾ ಗಾಂಧಿಯವರು ಹತ್ಯೆಗಳನ್ನು ಉಲ್ಲೇಖಿಸಿ ತಮ್ಮ ತಾಯಿಗೆ ಈ ಸ್ಥಾನವನ್ನು ಸ್ವೀಕರಿಸಬೇಡಿ ಎಂದು ಬಲವಾಗಿ ಒತ್ತಾಯಿಸಿರುವುದು ಇದರಲ್ಲಿ ಉಲ್ಲೇಖಿಸಲಾಗಿದೆ.

ಈ ಎಲ್ಲ ಕಾರಣದಿಂದ ಪ್ರಧಾನಿ ಹುದ್ದೆಯನ್ನು ಸೋನಿಯಾ ಸ್ವೀಕರಿಸಲು ನಿರಾಕರಿಸಿದ್ದು ಮನಮೋಹನ್ ಸಿಂಗ್ ಅವರ ಅಧಿಕಾರ ಪದಗ್ರಹಣಕ್ಕೆ ದಾರಿ ಮಾಡಿಕೊಟ್ಟಿತು. ಯಾವುದೇ ಸಾಮೂಹಿಕ ರಾಜಕೀಯ ತಳಹದಿಯಿಲ್ಲದ, ಮೃದುಭಾಷಿ, ಅರ್ಥಿಕ ತಜ್ಞ ಡಾ.ಸಿಂಗ್ ಅವರು ಅಕಸ್ಮಾತ್ ಆಗಿ ಪ್ರಧಾನಿ ಹುದ್ದೆಗೆ ಆಯ್ಕೆಯಾಗಿದ್ದರು. 1991ರ ಆರ್ಥಿಕ ಉದಾರೀಕರಣದ ಸಮಯದಲ್ಲಿ ಪಿ.ವಿ.ನರಸಿಂಹ ರಾವ್ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ ವೃತ್ತಿಜೀವನದ ಅರ್ಥಶಾಸ್ತ್ರಜ್ಞ ಡಾ.ಸಿಂಗ್ ಅವರು ನೀತಿ ವಲಯಗಳಲ್ಲಿ ಗೌರವವನ್ನು ಗಳಿಸಿದ್ದರು. ಆದರೆ ರಾಜಕೀಯ ನಾಯಕನ ವಿಶಿಷ್ಟ ಲಕ್ಷಣಗಳ ಕೊರತೆಯನ್ನು ಹೊಂದಿದ್ದರು. 1999ರಲ್ಲಿ ದಕ್ಷಿಣ ದೆಹಲಿಯಿಂದ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿ ಅವರ ಏಕೈಕ ಪ್ರಯತ್ನದಲ್ಲೇ ಸೋಲನ್ನು ಕಂಡಿದ್ದರು. ಮುಂದೆ ಅವರು ಚುನಾವಣೆಗೆ ಸ್ಪರ್ಧಿಸದೇ ರಾಜಕೀಯ ಜೀವನದುದ್ದಕ್ಕೂ ರಾಜ್ಯಸಭಾ ಸದಸ್ಯರಾಗಿ ಮುಂದುವರಿದರು.

ರಾಜೀವ್ ಗಾಂಧಿಯನ್ನು ಶ್ರೀಲಂಕಾದ ಎಲ್ಟಿಟಿಯು ಆಯೋಜಿಸಿದ್ದ ಮಾನವಬಾಂಬ್ ಸ್ಪೋಟದಲ್ಲಿ ಹತ್ಯೆ ಮಾಡಿದ ನಂತರ ರಾಜಕೀಯದಿಂದ ನಿಷ್ಕ್ರೀಯರಾಗಿದ್ದ ಸೋನಿಯಾ ಗಾಂಧಿ ಅವರು 1998ರಲ್ಲಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು. ಅಂದಿನಿಂದಲೂ ಅವರ ರಾಜಕೀಯ ಜೀವನವು ವಿವಾದಾತ್ಮಕವಾಗಿಯೇ ಮುಂದುವರಿಯಿತು. 2004ರಲ್ಲಿ ಕಾಂಗ್ರೆಸ್ ಚುನಾವಣಾ ಯಶಸ್ಸಿನ ಹೊರತಾಗಿಯೂ, ಸುಷ್ಮಾ ಸ್ವರಾಜ್ ಮತ್ತು ಉಮಾಭಾರತಿ ಅವರಂತಹ ಬಿಜೆಪಿ ನಾಯಕರು ಸೋನಿಯಾರನ್ನು ವಿವಾದದಲ್ಲೇ ಮುಳುಗಿಸಿದರು ಮತ್ತು ಅದನ್ನು ಮುಂದುವರಿಸುತ್ತಾ ಜೀವಂತವಾಗಿರಿಸಿದರು. ಸುಷ್ಮಾ ಸ್ವರಾಜ್ ಅವರಂತು ಸೋನಿಯಾ ಗಾಂಧಿ ಪ್ರಧಾನಿಯಾದರೆ ತನ್ನ ತಲೆ ಬೋಳಿಸುವುದಾಗಿ ಸವಾಲು ಹಾಕಿದರು. ಹೀಗೆ ಬಿಜೆಪಿಯು ಸೋನಿಯಾರ ವಿರುದ್ಧ ವಿದೇಶಿ ಮಹಿಳೆ ಎಂಬ ಗುಮ್ಮವನ್ನು ತೋರಿಸಿ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡುತ್ತಲೇ ಹೋಯಿತು.

ವಿರೋಧ ಪಕ್ಷಗಳಿಂದ “ಆಕಸ್ಮಿಕ ಪ್ರಧಾನ ಮಂತ್ರಿ” ಎಂಬ ಅಪಹಾಸ್ಯದಿಂದ  ಕರೆಯಲಾಗಿದ್ದರೂ, ಸಿಂಗ್ ಅವರ ದಶಕದ ಪ್ರಧಾನಮಂತ್ರಿ ಹುದ್ದೆಯ ಎರಡು ಅವಧಿಯಲ್ಲಿ ಕೆಲವು ಉತ್ತಮ ಸಾಧನೆಗಳ ಹೊರತಾಗಿಯೂ ಅಂದಿನ ಖಾಸಗೀಕರಣ ಕುರಿತ ಆರ್ಥಿಕ ನೀತಿಯು ಎಡಪಕ್ಷಗಳ ಸೇರಿದಂತೆ ಜನಪರ ಸಂಘಟನೆಗಳಿಂದ ವಿರೋಧ ಎದುರಿಸಿತ್ತು . ಅವರ ಸರ್ಕಾರವು ಮಾಹಿತಿ ಹಕ್ಕು (ಆರ್ ಟಿಐ), ಆಹಾರ ಭದ್ರತಾ ಕಾಯ್ದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಎನ್ಆರ್ಇಜಿಎ), ಮತ್ತು ಶಿಕ್ಷಣ ಹಕ್ಕು (ಆರ್ ಟಿಇ) ನಂತಹ ಸುಧಾರಣಾ ಕಾರ್ಯಕ್ರಮಗಳನ್ನು ಪ್ರಾರಂಭಿಸಿತು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಗ್ರಾಮೀಣ ಭಾಗದ ರೈತರಿಗೆ ಆ ಕಾಲಘಟ್ಟದಲ್ಲಿ ಒಂದು ಜನಪರ ಯೋಜನೆಯೇ ಆಗಿತ್ತು. ಯುಪಿಎಯ ಮೊದಲ ಅವಧಿ ಚುನಾವಣೆಯ ಮುನ್ನಾ ರಾಷ್ಟ್ರ ಮಟ್ಟದಲ್ಲಿ ರೈತರ ಸಾಲಮನ್ನ ವಿಚಾರವನ್ನು ಮುಂದಿಟ್ಟು ಜನರ ಬಳಿ ಮತ ಕೇಳಲು ಹೋದ ಯುಪಿಎ ಮೈತ್ರಿಕೂಟ ಯಶಸ್ವಿಯು ಆಯಿತು. ಯಾವುದೇ ಅವಧಿಯ ಯಾವುದೇ ಸರಕಾರದ ಜನಪರ ಯೋಜನೆಗಳು ಆಯಾ ಸರಕಾರದ ಜನಪರ ನೀತಿಯ ಭಾಗವಾಗಿ ಜಾರಿಯಾದವುಗಳಲ್ಲ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ, ಸರ್ವಾಧಿಕಾರಿ ಪಟ್ಟ ಹೊಂದಿದ್ದ ಇಂದಿರಾ ಗಾಂಧಿ ಭೂಸುಧಾರಣೆ ಕಾಯ್ದೆ ಜಾರಿಗೆ ತರವುದರ ಹಿಂದೆ ಸಾವಿರಾರು ಕಮ್ಯುನಿಸ್ಟ್ ಹೋರಾಟಗಾರರು, ದಲಿತ ಮತ್ತು ರೈತ ಸಂಘಟನೆಗಳ ನಾಯಕರು ಮತ್ತು ಜನರ ಜೀವ ತ್ಯಾಗವಿದೆ. ಲಕ್ಷಾಂತರ ಜನರು ವರ್ಷನುಗಟ್ಟಲೇ ಬೀದಿಗಿಳಿದು ನಡೆಸಿದ ಹೋರಾಟಗಳು ಕಾರಣವಾಗಿವೆ. ಇಂತಹ ಹೋರಾಟಗಳ ಕಾರಣಕ್ಕಾಗಿಯೇ ಮನಮೋಹನ್ ಸಿಂಗ್ ಪ್ರಧಾನಿಯಾದ ಕಾಲಘಟ್ಟದಲ್ಲಿ ಜಾರಿಗೆ ತಂದಿದ್ದ ಈ ಯೋಜನೆಗಳು ಆಗ ದೇಶದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದ್ದವು. ಈ ಯೋಜನೆಯ ಕಾರಣಕ್ಕಾಗಿಯೇ ಸಿಂಗ್ ಅವರ ಅಧಿಕಾರಾವಧಿಯು ವಿವಾದಗಳಿಲ್ಲದಂತೆ ಬೂದಿಮುಚ್ಚಿದ ಕೆಂಡದಂತೆ ಮುಂದುವರಿದಿತ್ತು. 2008ರಲ್ಲಿ ಭಾರತ-ಯುಎಸ್ ಪರಮಾಣು ಒಪ್ಪಂದಕ್ಕೆ ಮನಮೋಹನ್ ಸಿಂಗ್ ಸರಕಾರ ಸಹಿಹಾಕಲು ಮುಂದದಾಗ ಯುಪಿಎ ಮೈತ್ರಿಕೂಟದ ಭಾಗವಾಗಿದ್ದ ಎಡ ಪಕ್ಷಗಳು ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡವು. ಇದರ ನಂತರ ಸರ್ಕಾರವು ವಿಶ್ವಾಸ ಮತವನ್ನು ಎದುರಿಸಿ, ಕಡಿಮೆ ಅಂತರದ ವಿಶ್ವಾಸಮತದಿಂದ ಸಿಂಗ್ ಸರಕಾರವು ತನ್ನ ಅಧಿಕಾರವನ್ನು ಮುಂದುವರಿಸಿತ್ತು.

ಈಗಿನ ರಾಜ್ಯದ ಕಾಂಗ್ರೆಸ್ ಸರಕಾರವು ಗ್ಯಾರಂಟಿಯ ಬ್ರ್ಯಾಂಡಿನೊಂದಿಗೆ ಇನ್ನಿತರ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸುತ್ತಾ, ರೈತ, ಕಾರ್ಮಿಕ, ದಲಿತ ವಿರೋಧಿ ನೀತಿಗಳನ್ನು ಮುಂದುವರಿಸುತ್ತಾ, ಇನ್ನೊಂದೆಡೆ ಬಂಡವಾಳಶಾಹಿಗಳಿಗೆ ರತ್ನಗಂಬಳಿಯನ್ನು ಹಾಸಿ ಅವರಿಗೆ ಸ್ವಾಗತ ಕೋರುತ್ತಾ ತನ್ನ ಅಧಿಕಾರವನ್ನು ಮುಂದುವರಿಸುತ್ತಿರುವಂತೆಯೇ, ಅಂದಿನ ಮನಮೋಹನ್ ಸಿಂಗ್ ತನ್ನ ಅಧಿಕಾರದ ಎರಡು ಅವಧಿಯಲ್ಲಿ ಕಾಂಗ್ರೆಸ್ ಹೈಕಮಾಂಡಿನ ಬಾಲಂಗೋಚಿಯಾಗಿ ನಾಮಕಾವಸ್ತೆಯ ಪ್ರಧಾನಿಯಾಗಿದ್ದರು ಎಂಬುದನ್ನು ನಾವು ನೆನಪಿಡಬೇಕು. ಕಾಲದ ಕರೆಗೆ ಒಗೊಟ್ಟು ಕೆಲ ಜನಪರ ಯೋಜನೆಗಳನ್ನು ತಂದ ಮನಮೋಹನ್ ಸಿಂಗ್ , ಅದೇ ಸಮಯದಲ್ಲಿ ಉದ್ಯಮಿಗಳಿಗೆ ಮಣೆ ಹಾಕಿ ರೂಪಾಯಿ ಅಪಮೌಲ್ಯ, ವಿದೇಶಿ ಹೂಡಿಕೆಗೆ ಬಾಗಿಲು ತೆರೆದ ಕಾರಣ ದೇಶದಲ್ಲೆಡೆ ನಿರುದ್ಯೋಗ ಹೆಚ್ಚಳ, ರೈತ, ಕಾರ್ಮಿಕರ ಬವಣೆಗಳ ಹೆಚ್ಚಳಕ್ಕೆ ಕಾರಣವಾಗಿದ್ದನ್ನು ನಾವು ಮೈಮರೆಯಬಾರದು. ಇಂತಹ ಹಲವು ಕಾರಣಗಳಿಗಾಗಿ ಉಗುಳಲು ಆಗದ ಇತ್ತ ನುಂಗಲು ಆಗದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅವರ ಜನಪರವಾದ ಆಹಾರ ಭದ್ರತಾ ಕಾಯ್ದೆ, ಗ್ರಾಮೀಣ ಉದ್ಯೋಗ ಖಾತರಿಗಳಂತ ಯೋಜನೆಗಳನ್ನು ಹೊಗಳುತ್ತಲೇ, ಜನವಿರೋಧಿ ನೀತಿಗಳನ್ನು ತೆಗಳುತ್ತಾ ಈ ದೇಶದ ಜನತೆಯ ವಿಮೋಚನೆ ಬಯಸುವ ಸಂಘಟನೆಗಳು, ಹೋರಾಟಗಾರರು ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ.

ಮನಮೋಹನ್ ಸಿಂಗ್‌ ಎಂಬ ಮೌನಿಸಿಂಗ್…  ಇತಿಹಾಸ ಎಂದು ನಿಮ್ಮನ್ನು ಮರೆಯುವುದಿಲ್ಲ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...