ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಹೊತ್ತಿನಲ್ಲಿ ಅದಕ್ಕಾಗಿ ಪ್ರಾಣ ತೆತ್ತ ಅಮರ ವೀರರನ್ನು ನೆನೆಯುವುದು ಭಾರತೀಯರೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ! (ಕ್ವಿಟ್ ಇಂಡಿಯಾ) ಚಳವಳಿಯಲ್ಲಿ ಭಾಗವಹಿಸಿ ಬ್ರಿಟೀಷರ ಗುಂಡೇಟಿಗೆ ಎದೆಯೊಡ್ಡಿ ಹುತಾತ್ಮರಾದ ನಾಲ್ವರು ವಿದ್ಯಾರ್ಥಿಗಳ ನೆನಪಿನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಅಖಿಲ ಭಾರತ ಸ್ವಾತಂತ್ರ್ಯ ಹೋರಾಟಗಾರರ ವೇದಿಕೆ, ಎಚ್.ಎಸ್.ದೊರೆಸ್ವಾಮಿ ವೇದಿಕೆ ಮತ್ತು ವಿದ್ಯಾರ್ಥಿ ಸಂಘಟನೆಗಳ ಸಮನ್ವಯ ಸಮತಿಯ ವತಿಯಿಂದ ಆಗಸ್ಟ್ 09ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಇರುವ ಹುತಾತ್ಮ ಸ್ತೂಪದ ಬಳಿ ಸ್ಮರಣೆ ಕಾರ್ಯಕ್ರಮ ನಡೆಯಲಿದೆ.
1942ರ ಆಗಸ್ಟ್ 9ರ ದಿನ ಬೆಂಗಳೂರಿನ (ಈಗಿನ) ಮೈಸೂರು ಬ್ಯಾಂಕ್ ಚೌಕದಲ್ಲಿ ಪ್ರತಿಭಟನಾ ನಿರತರಾಗಿದ್ದ ದೇಶಪ್ರೇಮಿ ಯುವಜನರ ಮೇಲೆ ಬ್ರೀಟಿಷರು ಗುಂಡುಗಳ ಮಳೆಗೈದಿದ್ದರು. ಅಂದು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ಶಾಮಣ್ಣ ಬೇಟೆರಂಗಪ್ಪ, ಜಿ.ವಿ.ತಿರುಮಲಯ್ಯ, ಪ್ರಹ್ಲಾದ ಶೆಟ್ಟಿ, ಹಾಗೂ ಗುಂಡಪ್ಪ
ಎಂಬ ನಾಲ್ವರು ಸ್ವಾತಂತ್ರ್ಯ ವೀರರು ಹುತಾತ್ಮರಾಗಿದ್ದರು. ಆ ಯುವಚೇತನಗಳ ನೆನಪಿನಲ್ಲಿ ಅದೇ ಜಾಗದಲ್ಲಿ ಹುತಾತ್ಮ ಸ್ತೂಪವನ್ನು ನಿರ್ಮಿಸಲಾಗಿದೆ.
ಕ್ವಿಟ್ ಇಂಡಿಯಾ ಚಳವಳಿಯನ್ನು ನೆನಯುತ್ತಾ ಸ್ವಾತಂತ್ರ್ಯ ಹೋರಾಟದ ಎಲ್ಲ ಹುತಾತ್ಮರು ಮತ್ತು ವೀರ ಸೇನಾನಿಗಳೆಲ್ಲರನ್ನೂ ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲು 75ನೇ ಸ್ವಾತಂತ್ರ್ಯೋತ್ಸವದ ಸವಿ ನೆನಪಿನಲ್ಲಿ 75 ತ್ರಿವರ್ಣ ಧ್ವಜಗಳೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಝಾನ್ಸಿ ಲಕ್ಷ್ಮಿರಾಣಿ 9113513224, ಎಚ್.ಎಂ.ವೆಂಕಟೇಶ್
8050360054, ಮಹಾಂತೇಶ್ 9448415167 ಇವರನ್ನು ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ; ಪ್ರಧಾನಿ ಮೋದಿ ಹೇಳಿದ್ದು 2022ರ ಹೊತ್ತಿಗೆ ಪ್ರತಿಯೊಬ್ಬರಿಗೂ ಪಕ್ಕಾ ಮನೆ: ಕೊಟ್ಟಿದ್ದು ಕೇವಲ ಬಾವುಟ!