Homeಅಂಕಣಗಳುಕನ್ನಡ ಸಾಹಿತ್ಯ ಪರಿಷತ್ ನಲ್ಲೊಬ್ಬ ಚೌಕಿದಾರ

ಕನ್ನಡ ಸಾಹಿತ್ಯ ಪರಿಷತ್ ನಲ್ಲೊಬ್ಬ ಚೌಕಿದಾರ

- Advertisement -
- Advertisement -

| ಹನುಮಂತ ಹಾಲಿಗೇರಿ |

ಕೊಳ್ಳೆಹೊಡೆಯುವವರ ಕೈಗೆ ದೇಶವನ್ನು ಕೊಟ್ಟುಬಿಟ್ಟು ನಾನು ದೇಶ ಕಾಯುವ ಚೌಕಿದಾರ ಅಂತ ಹೇಳ್ಕೊಂಡವನ ಟ್ರೋಲ್‍ಗಳನ್ನು ನಾವು ಕಳೆದ ಒಂದು ವಾರದಿಂದ ಗಮನಿಸುತ್ತಿದ್ದೇವೆ. ಅಂಥವನೇ ಇನ್ನೊಬ್ಬ ಚೌಕಿದಾರರಾದ ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗಿರಿ ಖುರ್ಚಿಯಲ್ಲಿ ಕುಳಿತಿದ್ದಾರೆ. ಬಳಿಗಾರರು ಅಧ್ಯಕ್ಷರಾದ ಮೇಲೆ ಅವರ ಸರ್ವಾಧಿಕಾರದ ಸ್ವಯಂಕೃತ ತಪ್ಪುಗಳು ಒಂದೆರಡಲ್ಲ. ಈಗ ಸೂಕ್ಷ್ಮ ಸಂವೇದನೆಯ ಕವಯತ್ರಿ ರೂಪಾ ಹಾಸನ ಅವರು ಪರಿಷತ್ತಿನ ಅಜೀವ ಸದಸ್ಯತ್ವಕ್ಕೆ ನೀಡಿರುವ ರಾಜಿನಾಮೆ ಪಡೆದುಕೊಂಡು ಮತ್ತೊಮ್ಮೆ ಕನ್ನಡ ಸಾಂಸ್ಕೃತಿಕ ಜೀವಿಗಳಿಂದ ಗೇಲಿಗೊಳಗಾಗಿದ್ದಾರೆ.

ರೂಪಾ ಅವರು ರಾಜಿನಾಮೆ ನೀಡಿದರೆ ನಾನೇನು ಮಾಡಲಿ ಎಂದು ಅವರ ಆಪ್ತರ ಹತ್ತಿರ ಸಮರ್ಥಿಸಿಕೊಳ್ಳುತ್ತಿದ್ದಾರಂತೆ. `ಅವರೇನೋ ರಾಜಿನಾಮೆ ನೀಡಿದರು. ನೀವು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷ, ಯಾವುದನ್ನು ಸ್ವೀಕರಿಸಬೇಕು. ಯಾವುದನ್ನು ಸ್ವೀಕರಿಸಿಬಾರದು ಎಂಬ ಕಾಮನ್ ಸೆನ್ಸ್ ನಿನಗೆ ಇರಬೇಕಲ್ಲವೇ?’ ಎಂದು ಬಳಿಗಾರರ ಆಪ್ತರೇ ಹಿಂದೆಮುಂದೆ ಆಡಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ರೂಪಾ ಅವರೇನು ತಮ್ಮ ಸ್ವಾರ್ಥ ಸಾಧನೆಗಾಗಿ ರಾಜೀನಾಮೆ ನೀಡಿದವರಲ್ಲ. ಅವರ ರಾಜೀನಾಮೆಯ ಹಿಂದೆ ಕನ್ನಡ ಶಾಲೆಗಳ ಏಳ್ಗೆಯ ಕುರಿತು ಸರ್ಕಾರ ಮತ್ತು ಸಾಹಿತ್ಯ ಪರಿಷತ್ತುಗಳ ನಿರ್ಲಕ್ಷ್ಯದ ವಿರುದ್ಧದ ಪ್ರತಿರೋಧದ ದನಿ ಇತ್ತು. ಮನೆಯ ಯಜಮಾನ ದಾರಿ ತಪ್ಪಿದಾಗ ಅವನ ತಪ್ಪನ್ನು ಸರಿಪಡಿಸಿ ಸರಿ ದಾರಿಗೆ ತರುವ ಉದ್ದೇಶದಿಂದ ಕನ್ನಡ ಮನೆಯ ಹಿರಿಮಗಳಾಗಿ ರೂಪಾ ಅವರು ಈ ಪತ್ರವನ್ನು ಬರೆದಿದ್ದರೇನೋ, ರಾಜಿನಾಮೆಯನ್ನು ನೀಡಲೇಬೇಕೆಂಬ ಹಟವೇನು ಅವರಲ್ಲಿ ಇದ್ದಂತಿರಲಿಲ್ಲ. ಆದರೆ, ಬಳಿಗಾರರು ರೂಪಾ ಅವರ ಎತ್ತಿರುವ ಮುಖ್ಯ ಪ್ರಶ್ನೆಗಳಾವುದರ ಬಗ್ಗೆಯೂ ಕಿಂಚಿತ್ ಗಮನ ನೀಡದೇ ಆಯ್ತು ಬೀಡಮ್ಮ ಎನ್ನುವ ದುರಹಂಕಾರಿಯಂತೆ ರಾಜೀನಾಮೆ ಪತ್ರಕ್ಕೆ ಅಂಗೀಕಾರದ ಮುದ್ರೆ ಒತ್ತಿ ತಮ್ಮ ಉದ್ದಟತನ ಮೆರೆದಿದ್ದಾರೆ.

ರೂಪಾ ಹಾಸನ ಅವರು ಕಸಾಪದ ದುಂದುವೆಚ್ಚವನ್ನು ಮತ್ತು ಕನ್ನಡಪರ ನಿಷ್ಕಾಳಜಿಯನ್ನು ಪ್ರಶ್ನಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಚಂಪಾ ಅವರು ಅಧ್ಯಕ್ಷರಾಗಿದ್ದಾಗಲೂ ಹೀಗೆಯೇ ಅಜೀವ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ಕಳಿಸಿದ್ದರು. ಆದರೆ, ಒಬ್ಬ ಹಿರಿಯ ಜೀವಪರ ಕಾಳಜಿಯ ಸಾಹಿತಿಯೂ ಆಗಿರುವ ಚಂಪಾ ಅವರು ರೂಪಾ ಅವರನ್ನು ಕರೆಸಿಕೊಂಡು “ನಿನ್ನ ಅಜೀವ ಸದಸ್ಯತ್ವದ ರಾಜೀನಾಮೆಯನ್ನು ಸ್ವೀಕರಿಸಲು ನಾನೇನು ಅಜೀವ ಅಧ್ಯಕ್ಷನೇ. ಇನ್ನೆರಡು ವರ್ಷ ಅಷ್ಟೆ ನನ್ನ ಆಟ. ನಾನೆ ಅಜೀವ ಅಧ್ಯಕ್ಷನಲ್ಲವೆಂದ ಮೇಲೆ ನಾನ್ಹೇಗೆ ನಿನ್ನ ರಾಜೀನಾಮೆ ತೆಗೆದುಕೊಳ್ಳಲಿಕ್ಕಾಗುತ್ತೆ, ಆಗೂದಿಲ್ಲ. ಆದ್ರೆ ನೀನು ಎತ್ತಿರುವ ಪ್ರಶ್ನೆಗಳೆಲ್ಲವೂ ಮೌಲಿಕವಾದವು. ಕನ್ನಡ ಶಾಲೆಗಳ ಮುಚ್ಚುತ್ತಿರುವುದನ್ನು ನಾನು ವಿರೋಧಿಸುತ್ತೇನೆ. ಸರಕಾರದೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ” ಎಂದು ಸಮಾಧಾನ ಮಾಡಿ ಕಳಿಸಿದ್ದರಂತೆ. ಆದರೆ, ಬಳಿಗಾರರು ಮಾತ್ರ ರೂಪಾ ಅವರ ಯಾವ ಪ್ರಶ್ನೆಗಳಿಗೂ ತಲೆ ಕೆಡಿಸಿಕೊಳ್ಳದೆ ರಾಜೀನಾಮೆಯನ್ನು ಸ್ವೀಕರಿಸುವ ಮೂಲಕ ಕಸಾಪದ ಅಜೀವ ಅಧ್ಯಕ್ಷರಾದವರಂತೆ ವರ್ತಿಸಿದ್ದಾರೆ. ಅವರ ಅಧಿಕಾರ ದಾಹದ ಬಗ್ಗೆ ಗೊತ್ತಿರದ್ದೇನಿಲ್ಲ. ಮೂರು ವರ್ಷದ ಅವಧಿಯನ್ನು ಬೈಲಾ ತಿದ್ದುಪಡಿ ಮಾಡಿಸಿಕೊಂಡು ಐದು ವರ್ಷಕ್ಕೆ ಏರಿಸಿಕೊಂಡಿರುವ ಅವರು ಅಜೀವ ಅಧ್ಯಕ್ಷಗಿರಿಗೂ ಏನಾದ್ರೂ ಹುನ್ನಾರ ಮಾಡಿದ್ರೂ ಮಾಡುವವರೇ ಎಂದು ಅವರ ಪಟಾಲಮ್ಮಿನ ಬಳಗದವರೇ ಮಾತಾಡಿಕೊಳ್ಳುತ್ತಿದ್ದಾರೆ.

ಮನು ಬಳಿಗಾರರ ಸರ್ವಾಧಿಕಾರಿ ಉದ್ದಟತನಗಳು ಒಂದೆರಡಲ್ಲ ಮತ್ತು ಇದೇ ಮೊದಲಲ್ಲ. ಈ ಹಿಂದೆ ಹಿರಿಯರಾದ ಎಂ.ಎಂ.ಕಲ್ಬುರ್ಗಿಯವರು ಹತ್ಯೆಯಾದಾಗ, ಆ ಹತ್ಯೆಯನ್ನು ವಿರೋಧಿಸಿ ಯುವ ಬರಹಗಾರರು ಕಸಾಪದ ಅರಳು ಪ್ರಶಸ್ತಿಯನ್ನು ವಾಪಸ್ ಮಾಡಿ ಪ್ರತಿಭಟನೆ ಮಾಡಿದ್ದರು. ಆಗ ಇದೇ ಬಳಿಗಾರರು “ಈ ಹುಡುಗರು ಪ್ರಚಾರಕ್ಕಾಗಿ ಇಂಥ ಅಗ್ಗದ ಗಿಮಿಕ್ ಮಾಡುತ್ತಿದ್ದಾರೆ” ಎಂದು ಲೂಜುಲೂಜಾಗಿ ಮಾತನಾಡುವ ಮೂಲಕ ತಮ್ಮ ಮರ್ಯಾದೆ ಕಳೆದುಕೊಂಡಿದ್ದರು. ತಮ್ಮ ಅಧಿಕಾರದ ಅವಧಿ ಮುಗಿಯಲು ಬಂದಾಗ ಕಸಾಪದ ಬೈಲಾವನ್ನೇ ಬದಲಾಯಿಸಿ ಮೂರು ವರ್ಷದ ಅವಧಿಯನ್ನು ಐದು ವರ್ಷಕ್ಕೆ ಏರಿಸಿಕೊಂಡರು. ಬೈಲಾ ಬದಲಾಯಿಸಿ ಐದು ವರ್ಷ ಮಾಡಿದ್ದು ಕಾನೂನು ಪ್ರಕಾರ ತಪ್ಪೇನೂ ಅಲ್ಲ, ಆದರೆ, ನಿಮಗೆ ಆತ್ಮಸಾಕ್ಷಿ ಅನ್ನೋದಿದ್ರೆ ಈಗ ಖುರ್ಚಿಯಿಂದ ಕೆಳಗಿಳಿಯಿರಿ. ಮುಂದಿನ ಅಧಿಕಾರಾವಧಿಯ ಅಧ್ಯಕ್ಷರು ಬೇಕಾದರೆ ಐದು ವರ್ಷ ಖುರ್ಚಿಯಲ್ಲಿರಲಿ ಎಂಬ ಪ್ರಜ್ಞಾವಂತರ ಕೂಗಿಗೆ ಬಳಿಗಾರರು ಕಿವಿಗೊಡುತ್ತಲೇ ಇಲ್ಲ.

ಇನ್ನು ಇತ್ತೀಚೆಗೆ ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ವಾನಗಳಂತೂ ಒಂದೆರಡಲ್ಲ. ಆರಂಭದಲ್ಲೇ ಸುಮಂಗಲಿಯರಿಂದ ಪೂರ್ಣಕುಂಭ ಮೆರವಣಿಗೆ ಎಂಬ ಕಂದಾಚಾರದ ವಿರುದ್ಧ ರಾಜ್ಯಾದ್ಯಂತ ಪ್ರತಿರೋಧ ಬುಗಿಲೆದ್ದರೂ ತಮ್ಮ ನವರಂದ್ರಗಳನ್ನೆಲ್ಲ ಮುಚ್ಚಿಕೊಂಡಿದ್ದ ಈ ಬಳಿಗಾರ ಸಾಹೇಬರು ಕೊನೆ ಕ್ಷಣದಲ್ಲಿ  ತಾವು ಅಂದುಕೊಂಡು ಸುಮಂಗಲಿಯರ ಕುಂಭ ಮೆರವಣಿಗೆಯನ್ನು ನಡೆಸಿ ತಮ್ಮ ಹಟವನ್ನೇ ಸಾಧಿಸಿದರು.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶೀಗ್ಲಿಯವರಾದ ಈ ಬಳಿಗಾರರ ಮೂಲತಃ ಗೌಡ್ಕಿ ಮನೆತನದಿಂದ ಬಂದವರು. ಆ ಜಮೀನ್ದಾರಿಕೆಯ ಪಳಿಯುಳಿಕೆಯೂ ಅವರ ನಡೆನುಡಿಗಳಲ್ಲಿ ಈಗಲೂ ಜೀವಂತವಾಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಉನ್ನತ ಅಧಿಕಾರದ ಹುದ್ದೆಗಳನ್ನು ಕೂಡ ಅದೇ ಗೌಡ್ಕಿ ಗತ್ತಿನಲ್ಲಿಯೇ ನಿಭಾಯಿಸಿದ್ದರು. ಕುಂತರೂ, ನಿಂತರೂ ಭಲೆ, ಭಲೆ ಎನ್ನುವ, ಬಹುಫರಾಕ್ ಹೇಳುವ ಬಾಲಬಡುಕರಿಗೆ ಮಾತ್ರ ಬಹುತೇಕ ಅನುದಾನ ಮತ್ತು ಅವಕಾಶಗಳನ್ನು ನೀಡಿದವರು. ಮುಂದೆ ಈ ಬಾಲಬಡುಕರೇ ಇವರನ್ನು ಕಸಾಪ ಚುನಾವಣೆಯಲ್ಲಿ ಗೆಲ್ಲಿಸುವಲ್ಲಿ ನೆರವಾದರು. ಕೆಲವು ಪ್ರಜ್ಞಾವಂತ ಹಿರಿಯರು ಕೂಡ ಬಳಿಗಾರರನ್ನು ಚುನಾವಣೆಯ ಸಂದರ್ಭದಲ್ಲಿ ಬೆಂಬಲಿಸಿದ್ದು ವಿಷಾದನೀಯ. ಯಾಕಾದ್ರೂ ಈ ಪುಣ್ಯಾತ್ಮನನ್ನು ಗೆಲ್ಲಿಸಿದೆವೋ ಎಂದು ಈಗ ಅವರೆಲ್ಲ ಮುಖ ಕಿವುಚಿತ್ತಿದ್ದಾರಂತೆ.

ಒಟ್ನಲ್ಲಿ ಈ ಮನುಷ್ಯ ಮನು`ಸ್ಮತಿ’ ಬಳಿಗಾರ್ ಕಸಾಪವವನ್ನು ವಸಾಹತು ಮಾಡಿಕೊಂಡಿದ್ದು ಮತ್ತೊಮ್ಮೆ ಸಾಬೀತಾಗಿದೆ. ಒಂಚೂರು ಸಾಹಿತ್ಯಿಕ ಸಂವೇದನೆ ಇದ್ದಿದ್ದರೆ, ಒಂದಿಷ್ಟು ಕನ್ನಡ ಪುಸ್ತಕಗಳನ್ನು ಓದಿಕೊಂಡಿದ್ದರೆ, ಬಹುಶಃ ಬಳಿಗಾರರು ಹೀಗೆ ಮಾಡುತ್ತಿರಲಿಲ್ಲವೇನೋ. ಈಗಲೂ ಕಾಲ ಮಿಂಚಿಲ್ಲ. ಸಾಂಸ್ಕೃತಿಕ ವಲಯದ ಪ್ರಜ್ಞಾವಂತರೆಲ್ಲರೂ ಒಟ್ಟಾಗಿ ನೀನು ನಿನ್ನ ದುರಾಡಳಿತವನ್ನು ಬಿಡದಿದ್ದರೆ ನಾವೆಲ್ಲರೂ ಸೇರಿ ಅಜೀವ ಸದಸ್ಯತ್ವಕ್ಕೆ ರಾಜಿನಾಮೆಯನ್ನು ನೀಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿ ತಿದ್ದಬೇಕಿದೆ. ಇಲ್ಲದಿದ್ದರೆ ರೂಪಾ ಅವರ ರಾಜೀನಾಮೆ ಅರ್ಥ ಕಳೆದುಕೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....