Homeಮುಖಪುಟಆಲ್ಗಾರಿದಂ ಪಕ್ಷಪಾತ, ಎಐನಲ್ಲೂ ಜಾತಿವಾದ-ತಾರತಮ್ಯ : ಹೊಸ ಚರ್ಚೆ ಹುಟ್ಟು ಹಾಕಿದ ಡಾ. ವಿಜೇಂದರ್ ಹೇಳಿಕೆ

ಆಲ್ಗಾರಿದಂ ಪಕ್ಷಪಾತ, ಎಐನಲ್ಲೂ ಜಾತಿವಾದ-ತಾರತಮ್ಯ : ಹೊಸ ಚರ್ಚೆ ಹುಟ್ಟು ಹಾಕಿದ ಡಾ. ವಿಜೇಂದರ್ ಹೇಳಿಕೆ

- Advertisement -
- Advertisement -

ಆಲ್ಗಾರಿದಂ ಪಕ್ಷಪಾತ (Algorithm bias) ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಚರ್ಚೆ ನಡೆಯುತ್ತಿದೆ. ಪ್ರಮುಖ ಸಾಮಾಜಿಕ ನ್ಯಾಯ ಹೋರಾಟಗಾರ ಮತ್ತು ವಿದ್ವಾಂಸ ಡಾ. ವಿಜೇಂದರ್ ಸಿಂಗ್ ಚೌಹಾಣ್ ಅವರು, ಚಾಟ್‌ಜಿಪಿಟಿ (ChatGPT)ಯಂತಹ ಎಐ (ಕೃತಕ ಬುದ್ದಿಮತ್ತೆ) ಉಪಕರಣಗಳಲ್ಲಿ ದತ್ತಾಂಶ ಪಕ್ಷಪಾತ (data bias) ಇರುವ ಬಗ್ಗೆ ಪ್ರಶ್ನೆ ಎತ್ತಿದ್ದು, ಅದನ್ನು ಅವರು “ಸವರ್ಣ” (ಪ್ರಬಲ ಜಾತಿ) ಎಂದು ಕರೆದಿದ್ದಾರೆ. ಆ ಬಳಿಕ 21ನೇ ಶತಮಾನದ ಅತ್ಯುನ್ನತ ಅನ್ವೇಷಣೆ ಎಂದು ಕರೆಯಲ್ಪಡುವ ಎಐನಲ್ಲೂ ಜಾತಿ ತಾರತಮ್ಯ ಇರುವ ಬಗ್ಗೆ ಚರ್ಚೆ ಶುರುವಾಗಿದೆ.

“ಪ್ರೊಫೆಸರ್ಸ್ ಡೈರಿ”ಯ ಲೇಖಕ ಪ್ರೊ. ಲಕ್ಷ್ಮಣ್ ಯಾದವ್ ಅವರ ಹೊಸ ಪುಸ್ತಕ “ಜಾತಿ ಜನಗಣತಿ” ಬಿಡುಗಡೆ ಸಮಾರಂಭದಲ್ಲಿ ನಡೆದ ಚರ್ಚೆಯಲ್ಲಿ ಡಾ. ವಿಜೇಂದರ್ ಸಿಂಗ್ ಚೌಹಾಣ್ ಅವರು ಎಐ ತಂತ್ರಜ್ಞಾನದಲ್ಲಿ ಜಾತಿ-ಆಧಾರಿತ ಪಕ್ಷಪಾತವಿದೆ ಎಂದು ಆರೋಪಿಸಿದ್ದಾರೆ. ಇದು ಪುಸ್ತಕ ಬಿಡುಗಡೆಯಲ್ಲಿ ನಡೆದ ಚರ್ಚೆಯ ಭಾಗವಾದರೂ, ಬಿಜೆಪಿ-ಆರ್‌ಎಸ್‌ಎಸ್‌ ಬೆಂಬಲಿಗ ಟ್ರೋಲ್‌ಗಳು ಇದನ್ನು ಹೆಚ್ಚು ವೈರಲ್ ಆಗುವಂತೆ ಮಾಡಿದ್ದು, ಆ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

ಚೌಹಾಣ್ ಅವರ ಹೇಳಿಕೆಯ ಒಂದು ಸಣ್ಣ ಕ್ಲಿಪ್ ಜಾತಿ, ತಂತ್ರಜ್ಞಾನ, ರಾಜಕಾರಣದ ಕುರಿತ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಅವರ ಬೆಂಬಲಿಗರು ಇದನ್ನು ‘ವ್ಯವಸ್ಥಿತ ದಮನದ ವಿರುದ್ಧದ ಹೋರಾಟ’ವಾಗಿ ನೋಡುತ್ತಿದ್ದಾರೆ. ಸಂಘಪರಿವಾರದ ಬೆಂಬಲಿಗ ಟ್ರೋಲ್ ಪಡೆಗಳು ಇದನ್ನು “ಅತಿಯಾದ ಜಾತಿವಾದ” ಎಂದು ಹೇಳುತ್ತಿವೆ.

ವರದಿಗಳ ಪ್ರಕಾರ, ಜನವರಿ 17ರಂದು ದೆಹಲಿಯಲ್ಲಿ ನಡೆದ ಸಾಹಿತ್ಯ ಸಮಾರಂಭದಲ್ಲಿ (ವರ್ಲ್ಡ್ ಬುಕ್ ಫೇರ್) ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಡಾ. ಲಕ್ಷ್ಮಣ್ ಯಾದವ್ ಅವರ ಹೊಸ ಪುಸ್ತಕ “ಜಾತಿ ಜನಗಣತಿ” ಬಿಡುಗಡೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ. ವಿಜೇಂದರ್ ಸಿಂಗ್ ಚೌಹಾಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ್ದರು. ಜಾತಿ ಜನಗಣತಿ ಪುಸ್ತಕವು ಭಾರತದಲ್ಲಿ ಜಾತಿ ಆಧಾರಿತ ಜನಗಣತಿ, ಮೀಸಲಾತಿ ನೀತಿಗಳು ಮತ್ತು ಸಾಮಾಜಿಕ ನ್ಯಾಯದ ಅಗತ್ಯತೆಯ ಮೇಲೆ ಕೇಂದ್ರೀಕರಿಸುತ್ತದೆ. ಇದು ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಅತ್ಯಂತ ಸೂಕ್ಷ್ಮ ವಿಷಯವಾಗಿದೆ.

ಡಾ. ವಿಜೇಂದರ್ ಸಿಂಗ್ ಚೌಹಾಣ್ ಅವರು ಸ್ವತಃ ಸವರ್ಣ (ಪ್ರಬಲ ಜಾತಿ) ಹಿನ್ನೆಲೆಯಿಂದ ಬಂದವರಾಗಿದ್ದರೂ, ಅವರ 14 ನಿಮಿಷಗಳ ಭಾಷಣದಲ್ಲಿ ಎಐ ತಂತ್ರಜ್ಞಾನವನ್ನು ಜಾತಿ ವ್ಯವಸ್ಥೆಗೆ ಸಂಯೋಜಿಸಿ ಮಾತನಾಡಿದ್ದಾರೆ. ಚಾಟ್‌ಜಿಪಿಟಿಯಂತಹ ಟೂಲ್‌ಗಳು ‘ಪಕ್ಷಪಾತಿ’ ಎಂದು ಹೇಳಿದ್ದಾರೆ. ಅದರ ಸೃಷ್ಟಿಕರ್ತರು ಮತ್ತು ತರಬೇತುದಾರರು ಹೆಚ್ಚಾಗಿ ಸವರ್ಣ (ಪ್ರಬಲ ಜಾತಿ) ಜನರೇ ಆಗಿರುವುದರಿಂದ, ದತ್ತಾಂಶ ಸವರ್ಣ ದೃಷ್ಟಿಕೋನದಿಂದ ತುಂಬಿರುತ್ತದೆ ಎಂದಿದ್ದಾರೆ.

ಅಂತರ್ಜಾಲದಲ್ಲಿ ಲಭ್ಯವಿರುವ ದತ್ತಾಂಶ ಅಥವಾ ಮಾಹಿತಿಗಳು (ಇತಿಹಾಸ, ಸಾಹಿತ್ಯ, ಸಾಮಾಜಿಕ ವಿಜ್ಞಾನಗಳು) ಹೆಚ್ಚಾಗಿ ಸವರ್ಣ ಗುಂಪುಗಳಿಂದ ಬಂದಿರುವುದರಿಂದ, ಎಐ ಉತ್ತರಗಳು ಅದೇ ರೀತಿ ಪಕ್ಷಪಾತ ತೋರುತ್ತವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದುವೇಳೆ ಜಾತಿ ಜನಗಣತಿ ನಡೆದರೆ, ತಟಸ್ಥ ತಂತ್ರಜ್ಞಾನ ಎಂಬ ಮಿಥ್ಯೆ ಒಡೆದುಬೀಳುತ್ತದೆ ಎಂದು ಹೇಳಿದ್ದಾರೆ.

ಇತಿಹಾಸ, ಸಾಹಿತ್ಯ ಮತ್ತು ಸಮಾಜ ವಿಜ್ಞಾನಗಳ ಹೆಚ್ಚಿನ ವಿಷಯವು ಪ್ರಬಲ ಜಾತಿಗಳ ಪ್ರಾಬಲ್ಯ ಹೊಂದಿರುವ ಇಂಟರ್ನೆಟ್ ದತ್ತಾಂಶದ ಮೇಲೆ ಎಐ ಮಾದರಿಗಳನ್ನು ಹೇಗೆ ತರಬೇತಿ ನೀಡಲಾಗುತ್ತದೆ ಎಂಬುವುದರ ಉದಾಹರಣೆಗಳನ್ನು ಚೌಹಾಣ್ ಅವರು ನೀಡಿದ್ದು, ಉದಾಹರಣೆಗೆ : ಮನುಸ್ಮೃತಿಯನ್ನು ‘ಪ್ರಾಚೀನ ಕಾನೂನು’ ಎಂದು ವೈಭವೀಕರಿಸುವುದು ಎಂದಿದ್ದಾರೆ. ಜಾತಿವಾದಿ ಚಿಂತನೆಯ ವಿರುದ್ಧದ ಹೋರಾಟವು ಉಪಕುಲಪತಿಗಳು, ಅಧಿಕಾರಿಗಳು, ಮುಖ್ಯಮಂತ್ರಿಗಳು ಮತ್ತು ಪ್ರಧಾನ ಮಂತ್ರಿಗಳ ವಿರುದ್ಧ ಮಾತ್ರವಲ್ಲ, ನಾವು ಅಲ್ಗಾರಿದಂ ಪಕ್ಷಪಾತದ ವಿರುದ್ಧವೂ ಯುದ್ಧ ಮಾಡಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಚೌಹಾಣ್ ಅವರ ಹೇಳಿಕೆಯು ಮೂಲತಃ ಹೊಸ ಪುಸ್ತಕವನ್ನು ಉದ್ದೇಶಿಯಾಗಿತ್ತು, ಏಕೆಂದರೆ, ಅಲ್ಲಿ ಲೇಖಕರು ಜಾತಿ ಜನಗಣತಿಯು ಸಾಮಾಜಿಕ ನ್ಯಾಯಕ್ಕೆ ಅತ್ಯಗತ್ಯ ಮಾತ್ರವಲ್ಲದೆ ಡಿಜಿಟಲ್ ಜಗತ್ತಿನಲ್ಲಿ ‘ಜಾತಿ ಪಕ್ಷಪಾತ’ವನ್ನು ಬಹಿರಂಗಪಡಿಸಲು ಒಂದು ಅಸ್ತ್ರವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ವಾದಿಸಿದ್ದಾರೆ. ಆದರೆ, ಟ್ರೋಲ್‌ ಪಡೆಗಳು ಅವರ ಹೇಳಿಕೆಯ ಕೇವಲ 5-6 ಸೆಕೆಂಡ್‌ನ ಕ್ಲಿಪ್ ಅನ್ನು ಮಾತ್ರ ವೈರಲ್ ಮಾಡಿವೆ. “ಚಾಟ್‌ಜಿಪಿಟಿ ಸವರ್ಣ” ಎಂಬ ಹೇಳಿಕೆಯನ್ನು ಎತ್ತಿ ತೋರಿಸಿವೆ. ಅದನ್ನು ‘ಅಸಂಬದ್ಧ’ ಅಥವಾ ‘ನರ್ಸರಿ ಮಟ್ಟದ ತರ್ಕ’ ಎಂದು ಲೇಬಲ್ ಮಾಡುವ ಮೂಲಕ ವೈರಲ್ ಮಾಡಿವೆ ಎಂದು en.themooknayak.com ವರದಿ ಮಾಡಿದೆ.

ಟ್ರೋಲ್ ಪೇಜ್‌ಗಳ ಹಿಂದೆ ಜಾತಿ ಜನಗಣತಿ ಮತ್ತು ಮೀಸಲಾತಿಯ ವಿರೋಧಿಗಳು ಎಂದು ಹೇಳಲಾಗುವ ಬಿಜೆಪಿ-ಆರ್‌ಎಸ್‌ಎಸ್‌ನ ಬೆಂಬಲಿಗರಿದ್ದಾರೆ. ಇವರು ಚೌಹಾಣ್ ಅವರ ಭಾಷಣದ ಸಣ್ಣ ಕ್ಲಿಪ್ ವೈರಲ್ ಮಾಡಿ ವ್ಯಾಪಕವಾಗಿ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಡಾ. ಲಕ್ಷ್ಮಣ್ ಯಾದವ್ ಅವರು ಈ ವಿಷಯದ ಬಗ್ಗೆ ವಿವರವಾದ ಪೋಸ್ಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಇದನ್ನು ರಾಜಕೀಯ ದುರುದ್ದೇಶ ಅಥವಾ ದುಷ್ಟ ರಾಜಕೀಯ ಉದ್ದೇಶ ಎಂದು ಕರೆದಿದ್ದಾರೆ. ಕ್ಲಿಪ್ ಕತ್ತರಿಸಿ ವೈರಲ್ ಮಾಡುವುದು ಕೇವಲ ಟ್ರೋಲ್ ಅಲ್ಲ, ಇದು ಒಂದು ರೀತಿಯ ದಮನಕಾರಿ ರಾಜಕೀಯದ ಆಯುಧವಾಗಿದೆ. ಇದರ ಮೂಲಕ ಭಯ ಹುಟ್ಟಿಸುವುದು, ಧಮ್ಕಿ ಹಾಕುವುದು ಮತ್ತು ಮೊಕದ್ದಮೆಗಳನ್ನು ದಾಖಲಿಸುವುದು ನಡೆಯುತ್ತದೆ ಎಂದಿದ್ದಾರೆ. ಅಲ್ಲದೆ, ಚೌಹಾಣ್ ಅವರೊಂದಿಗೆ 14 ವರ್ಷಗಳಿಂದ ಕೆಲಸ ಮಾಡಿದ್ದೇನೆ. ದೇಶಕ್ಕೆ ಇಂತಹ ಸವರ್ಣರು ಬೇಕು, ಅವರು ದೇಶವನ್ನು ವಿಶ್ವಗುರು ಮಾಡಬಹುದು” ಎಂದು ಹೇಳಿದ್ದಾರೆ.

ಡಾ. ಚೌಹಾಣ್ ಅವರನ್ನು ‘ಸವರ್ಣರಾಗಿದ್ದರೂ ಧೈರ್ಯಶಾಲಿ’ ಎಂದು ಬಣ್ಣಿಸಿದ ಯಾದವ್, ಇಂತಹ ವ್ಯಕ್ತಿಗಳು ಸಮಸ್ಯೆ ‘ಜಾತಿ’ಯಲ್ಲ, ಬದಲಿಗೆ ‘ಜಾತಿವಾದಿ ಶಕ್ತಿ’ ಎಂದು ಸಾಬೀತುಪಡಿಸುತ್ತಾರೆ ಎಂದಿದ್ದಾರೆ.

ಟ್ರೋಲ್‌ಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಎ.ಕೆ. ಸ್ಟಾಲಿನ್, ಇದನ್ನು ‘ಡಿಜಿಟಲ್ ಲಿಂಚಿಂಗ್’ ಎಂದು ಕರೆದಿದ್ದಾರೆ. “ಎಐನಲ್ಲಿ ಜಾತಿ ಪಕ್ಷಪಾತದ ಬಗ್ಗೆ ಡಜನ್‌ಗಟ್ಟಲೆ ವಿಮರ್ಶೆಗೆ ಒಳಪಟ್ಟ ಸಂಶೋಧನಾ ಪ್ರಬಂಧಗಳಿವೆ. ಅವುಗಳನ್ನು ಓದದೆ ವಿದ್ವಾಂಸರ ವಿರುದ್ಧ ಗುಂಪು ರಚಿಸುವುದು ಬೌದ್ಧಿಕ ದಿವಾಳಿತನ ಎಂದು ಅವರು ಹೇಳಿದ್ದಾರೆ. ಎಐ ಸಾಮಾಜಿಕ ಶ್ರೇಣಿಗಳನ್ನು ಪುನರಾವರ್ತಿಸುತ್ತದೆ ಎಂದು ಸಾಬೀತುಪಡಿಸಿದ ನೇಚರ್ ಜರ್ನಲ್‌ನಲ್ಲಿನ ಪ್ರಬಂಧ ಸೇರಿದಂತೆ ಅಂತಾರಾಷ್ಟ್ರೀಯ ಅಧ್ಯಯನಗಳನ್ನು ಸ್ಟಾಲಿನ್ ಉಲ್ಲೇಖಿಸಿದ್ದಾರೆ. ಅದೇ ರೀತಿ, ಲಖನ್ ಮೀನಾ ಅವರಂತಹ ಕಾರ್ಯಕರ್ತರು “ಡಾ. ಚೌಹಾಣ್ ಹೇಳಿರುವುದು ಶೇಕಡ 100ರಷ್ಟು ಸರಿ ಇದೆ. ಎಐ ದತ್ತಾಂಶ ಮನುವಾದಿಯಾಗಿದೆ, ಆದ್ದರಿಂದ ಅದರ ಪ್ರತಿಕ್ರಿಯೆಗಳು ಸಹ ಹಾಗೆಯೇ ಇವೆ ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡು: ಕ್ಷೇತ್ರ ಪುನರ್ವಿಂಗಡೆ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ: ಕೇಂದ್ರ ಸರ್ಕಾರಕ್ಕೆ ಎಂ.ಕೆ. ಸ್ಟಾಲಿನ್ ಎಚ್ಚರಿಕೆ

ಚೆನ್ನೈ: ಏಪ್ರಿಲ್ 16 ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿರುವ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗಳ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷರು ಮಂಗಳವಾರ ಬಿಜೆಪಿ...

ಪಶ್ಚಿಮ ಏಷ್ಯಾ ಸಂಘರ್ಷವು 25 ಲಕ್ಷ ಭಾರತೀಯರನ್ನು ಬಡತನಕ್ಕೆ ತಳ್ಳುವ ಅಪಾಯವಿದೆ : ವಿಶ್ವಸಂಸ್ಥೆ ವರದಿ

ಪಶ್ಚಿಮ ಏಷ್ಯಾ ಸಂಘರ್ಷವು 25 ಲಕ್ಷ ಭಾರತೀಯರನ್ನು ಬಡತನದ ಕೂಪಕ್ಕೆ ತಳ್ಳಬಹುದು ಮತ್ತು ದೇಶದ ಮಾನವ ಅಭಿವೃದ್ಧಿ ಪ್ರಗತಿಯಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯನ್ನುಂಟು ಮಾಡಬಹುದು ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ಹೊಸ...

ಗೋ-ರಕ್ಷಕರ ದಾಳಿಯ ನಂತರ ವ್ಯಕ್ತಿ ನಾಪತ್ತೆ: ಜಮ್ಮುವಿನ ರಾಂಬನ್‌ನಲ್ಲಿ ತೀವ್ರ ಪ್ರತಿಭಟನೆ; ಸಾಮಾಜಿಕ ಮಾಧ್ಯಮಗಳಲ್ಲೂ ಆಕ್ರೋಶ

ಗೋರಕ್ಷಕರ ದಾಳಿಗೆ ಸಂಬಂಧಿಸಿ ಸ್ಥಳೀಯ ನಿವಾಸಿ ತನ್ವೀರ್ ಅಹ್ಮದ್ ಚೋಪನ್ ನಾಪತ್ತೆಯಾದ ನಂತರ ಸೋಮವಾರ ರಾಂಬನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸಾವಿರಾರು ಜನರು ಸಂಚಾರ ತಡೆದು ಪ್ರತಿಭಟಿಸಿದ್ದಾರೆ. ಪೊಲೀಸರ ಪ್ರಕಾರ,...

ನಿತೀಶ್ ಕುಮಾರ್ ರಾಜೀನಾಮೆ : ಬಿಹಾರದ ಹೊಸ ಸಿಎಂ ಆಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಆಯ್ಕೆ

ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದು, ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ. ಪಾಟ್ನಾದ ಲೋಕ ಭವನದಲ್ಲಿ ಮಂಗಳವಾರ (ಏ.14) ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ)...

ಮುಂಬೈ ಸಂಗೀತ ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ ಸೇವನೆಯಿಂದ ಇಬ್ಬರು ವಿದ್ಯಾರ್ಥಿಗಳು ಸಾವು, ಐವರ ಬಂಧನ; ತನಿಖೆ

ಮಂಗಳವಾರ ಮುಂಬೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಮಾದಕ ದ್ರವ್ಯ ಸೇವಿಸಿದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ದಕ್ಷಿಣ ಮುಂಬೈನ ಪ್ರತಿಷ್ಠಿತ ಸಂಸ್ಥೆಯ ವಿದ್ಯಾರ್ಥಿಗಳು ಎಂಬಿಎ ಓದುತ್ತಿದ್ದರು ಎಂದು...

ನಸೀರ್ ಅಹ್ಮದ್‌ರನ್ನು ವಜಾಗೊಳಿಸಿದ್ದೇಕೆ… ಡಿಕೆಶಿ ಹೇಳಿದ್ದೇನು?  

ಮುಖ್ಯಮಂತ್ರಿಗಳು ತಮ್ಮದೇ ಆದ ವಿವಿಧ ಮೂಲಗಳಿಂದ ಮಾಹಿತಿ ಪಡೆದು, ಪಕ್ಷದ ಹಿತದೃಷ್ಟಿಯಿಂದ ನಸೀರ್ ಅಹ್ಮದ್ ವಿಚಾರದಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮಂಗಳವಾರ (ಏ.14)...

ಆಟೋ ಪರ್ಮಿಟ್‌ಗಳಿಗೆ ಮರಾಠಿ ಭಾಷೆ ಕಡ್ಡಾಯ ನಿಯಮ; ಆರ್‌ಟಿಒ ಅಧಿಕಾರಿಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ

ಕಳವಳಕಾರಿ ಬೆಳವಣಿಗೆಯಲ್ಲಿ, ಆಟೋ-ರಿಕ್ಷಾ ಪರ್ಮಿಟ್ ಪರಿಶೀಲನೆಗೆ ಮರಾಠಿ ಜ್ಞಾನವನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತವಾಗಿದ್ದು, ಇದರಲ್ಲಿ ಬಿಷ್ಣೋಯ್ ಗ್ಯಾಂಗ್ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅಧಿಕಾರಿ...

‘ನಾನು ಪ್ರೀತಿಯಲ್ಲಿ ನಂಬಿಕೆ ಇಡುತ್ತೇನೆ, ಬುಲ್ಡೋಜರ್‌ ರಾಜಕೀಯದಲ್ಲಿ ಅಲ್ಲ’: ಯುಪಿ ಮಾದರಿ ವಿವಾದದ ನಡುವೆ ಯೋಗಿ ವಿರುದ್ಧ ಮಮತಾ ದಾಳಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದಾಳಿ ನಡೆಸಿದ್ದಾರೆ. ಅವರು ಬುಲ್ಡೋಜರ್ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ ಎಂದು ಹೇಳಿದ್ದಾರೆ ಮತ್ತು ಉತ್ತರ ಪ್ರದೇಶದಲ್ಲಿ...

ಬಿಹಾರ| ಸಿಎಂ ಹುದ್ದೆಗೆ ರಾಜೀನಾಮೆ ನೀಡಲು ಅಣಿಯಾದ ನಿತೀಶ್ ಕುಮಾರ್ : ಸಂಪುಟ ವಿಸರ್ಜನೆಗೆ ಶಿಫಾರಸು

ಬಿಹಾರದಲ್ಲಿ ಹೊಸ ಸರ್ಕಾರ ರಚನೆ ಕಸರತ್ತು ತೀವ್ರಗೊಂಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಅಣಿಯಾಗಿದ್ದು, ಅದಕ್ಕೂ ಮೊದಲು ಸಚಿವ ಸಂಪುಟ ವಿಸರ್ಜಿಸಲು ಅವರು ಶಿಫಾರಸು ಮಾಡಿದ್ದಾರೆ....

‘ರಾತ್ರೋರಾತ್ರಿ ಒಪ್ಪಂದ ಸಾಧ್ಯವಿಲ್ಲ’: ಪಶ್ಚಿಮ ಏಷ್ಯಾ ಯುದ್ಧದ ಕುರಿತು ನಿರಂತರ ಮಾತುಕತೆಗೆ ವಿಶ್ವಸಂಸ್ಥೆ ಒತ್ತಾಯ

ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಅಮೆರಿಕ ಮತ್ತು ಇರಾನ್ ನಡುವೆ ನಿರಂತರ ರಾಜತಾಂತ್ರಿಕ ಮಾತುಕತೆಗೆ ಕರೆ ನೀಡಿದ್ದಾರೆ. "ಒಂದು ಒಪ್ಪಂದವನ್ನು ರಾತ್ರೋರಾತ್ರಿ ತಲುಪಲು ಸಾಧ್ಯವಿಲ್ಲ" ಎಂದು ಒತ್ತಿ ಹೇಳಿದ ಅವರು ಪಶ್ಚಿಮ...