Homeಮುಖಪುಟಆಲ್ಗಾರಿದಂ ಪಕ್ಷಪಾತ, ಎಐನಲ್ಲೂ ಜಾತಿವಾದ-ತಾರತಮ್ಯ : ಹೊಸ ಚರ್ಚೆ ಹುಟ್ಟು ಹಾಕಿದ ಡಾ. ವಿಜೇಂದರ್ ಹೇಳಿಕೆ

ಆಲ್ಗಾರಿದಂ ಪಕ್ಷಪಾತ, ಎಐನಲ್ಲೂ ಜಾತಿವಾದ-ತಾರತಮ್ಯ : ಹೊಸ ಚರ್ಚೆ ಹುಟ್ಟು ಹಾಕಿದ ಡಾ. ವಿಜೇಂದರ್ ಹೇಳಿಕೆ

- Advertisement -
- Advertisement -

ಆಲ್ಗಾರಿದಂ ಪಕ್ಷಪಾತ (Algorithm bias) ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಚರ್ಚೆ ನಡೆಯುತ್ತಿದೆ. ಪ್ರಮುಖ ಸಾಮಾಜಿಕ ನ್ಯಾಯ ಹೋರಾಟಗಾರ ಮತ್ತು ವಿದ್ವಾಂಸ ಡಾ. ವಿಜೇಂದರ್ ಸಿಂಗ್ ಚೌಹಾಣ್ ಅವರು, ಚಾಟ್‌ಜಿಪಿಟಿ (ChatGPT)ಯಂತಹ ಎಐ (ಕೃತಕ ಬುದ್ದಿಮತ್ತೆ) ಉಪಕರಣಗಳಲ್ಲಿ ದತ್ತಾಂಶ ಪಕ್ಷಪಾತ (data bias) ಇರುವ ಬಗ್ಗೆ ಪ್ರಶ್ನೆ ಎತ್ತಿದ್ದು, ಅದನ್ನು ಅವರು “ಸವರ್ಣ” (ಪ್ರಬಲ ಜಾತಿ) ಎಂದು ಕರೆದಿದ್ದಾರೆ. ಆ ಬಳಿಕ 21ನೇ ಶತಮಾನದ ಅತ್ಯುನ್ನತ ಅನ್ವೇಷಣೆ ಎಂದು ಕರೆಯಲ್ಪಡುವ ಎಐನಲ್ಲೂ ಜಾತಿ ತಾರತಮ್ಯ ಇರುವ ಬಗ್ಗೆ ಚರ್ಚೆ ಶುರುವಾಗಿದೆ.

“ಪ್ರೊಫೆಸರ್ಸ್ ಡೈರಿ”ಯ ಲೇಖಕ ಪ್ರೊ. ಲಕ್ಷ್ಮಣ್ ಯಾದವ್ ಅವರ ಹೊಸ ಪುಸ್ತಕ “ಜಾತಿ ಜನಗಣತಿ” ಬಿಡುಗಡೆ ಸಮಾರಂಭದಲ್ಲಿ ನಡೆದ ಚರ್ಚೆಯಲ್ಲಿ ಡಾ. ವಿಜೇಂದರ್ ಸಿಂಗ್ ಚೌಹಾಣ್ ಅವರು ಎಐ ತಂತ್ರಜ್ಞಾನದಲ್ಲಿ ಜಾತಿ-ಆಧಾರಿತ ಪಕ್ಷಪಾತವಿದೆ ಎಂದು ಆರೋಪಿಸಿದ್ದಾರೆ. ಇದು ಪುಸ್ತಕ ಬಿಡುಗಡೆಯಲ್ಲಿ ನಡೆದ ಚರ್ಚೆಯ ಭಾಗವಾದರೂ, ಬಿಜೆಪಿ-ಆರ್‌ಎಸ್‌ಎಸ್‌ ಬೆಂಬಲಿಗ ಟ್ರೋಲ್‌ಗಳು ಇದನ್ನು ಹೆಚ್ಚು ವೈರಲ್ ಆಗುವಂತೆ ಮಾಡಿದ್ದು, ಆ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

ಚೌಹಾಣ್ ಅವರ ಹೇಳಿಕೆಯ ಒಂದು ಸಣ್ಣ ಕ್ಲಿಪ್ ಜಾತಿ, ತಂತ್ರಜ್ಞಾನ, ರಾಜಕಾರಣದ ಕುರಿತ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಅವರ ಬೆಂಬಲಿಗರು ಇದನ್ನು ‘ವ್ಯವಸ್ಥಿತ ದಮನದ ವಿರುದ್ಧದ ಹೋರಾಟ’ವಾಗಿ ನೋಡುತ್ತಿದ್ದಾರೆ. ಸಂಘಪರಿವಾರದ ಬೆಂಬಲಿಗ ಟ್ರೋಲ್ ಪಡೆಗಳು ಇದನ್ನು “ಅತಿಯಾದ ಜಾತಿವಾದ” ಎಂದು ಹೇಳುತ್ತಿವೆ.

ವರದಿಗಳ ಪ್ರಕಾರ, ಜನವರಿ 17ರಂದು ದೆಹಲಿಯಲ್ಲಿ ನಡೆದ ಸಾಹಿತ್ಯ ಸಮಾರಂಭದಲ್ಲಿ (ವರ್ಲ್ಡ್ ಬುಕ್ ಫೇರ್) ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಡಾ. ಲಕ್ಷ್ಮಣ್ ಯಾದವ್ ಅವರ ಹೊಸ ಪುಸ್ತಕ “ಜಾತಿ ಜನಗಣತಿ” ಬಿಡುಗಡೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ. ವಿಜೇಂದರ್ ಸಿಂಗ್ ಚೌಹಾಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ್ದರು. ಜಾತಿ ಜನಗಣತಿ ಪುಸ್ತಕವು ಭಾರತದಲ್ಲಿ ಜಾತಿ ಆಧಾರಿತ ಜನಗಣತಿ, ಮೀಸಲಾತಿ ನೀತಿಗಳು ಮತ್ತು ಸಾಮಾಜಿಕ ನ್ಯಾಯದ ಅಗತ್ಯತೆಯ ಮೇಲೆ ಕೇಂದ್ರೀಕರಿಸುತ್ತದೆ. ಇದು ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಅತ್ಯಂತ ಸೂಕ್ಷ್ಮ ವಿಷಯವಾಗಿದೆ.

ಡಾ. ವಿಜೇಂದರ್ ಸಿಂಗ್ ಚೌಹಾಣ್ ಅವರು ಸ್ವತಃ ಸವರ್ಣ (ಪ್ರಬಲ ಜಾತಿ) ಹಿನ್ನೆಲೆಯಿಂದ ಬಂದವರಾಗಿದ್ದರೂ, ಅವರ 14 ನಿಮಿಷಗಳ ಭಾಷಣದಲ್ಲಿ ಎಐ ತಂತ್ರಜ್ಞಾನವನ್ನು ಜಾತಿ ವ್ಯವಸ್ಥೆಗೆ ಸಂಯೋಜಿಸಿ ಮಾತನಾಡಿದ್ದಾರೆ. ಚಾಟ್‌ಜಿಪಿಟಿಯಂತಹ ಟೂಲ್‌ಗಳು ‘ಪಕ್ಷಪಾತಿ’ ಎಂದು ಹೇಳಿದ್ದಾರೆ. ಅದರ ಸೃಷ್ಟಿಕರ್ತರು ಮತ್ತು ತರಬೇತುದಾರರು ಹೆಚ್ಚಾಗಿ ಸವರ್ಣ (ಪ್ರಬಲ ಜಾತಿ) ಜನರೇ ಆಗಿರುವುದರಿಂದ, ದತ್ತಾಂಶ ಸವರ್ಣ ದೃಷ್ಟಿಕೋನದಿಂದ ತುಂಬಿರುತ್ತದೆ ಎಂದಿದ್ದಾರೆ.

ಅಂತರ್ಜಾಲದಲ್ಲಿ ಲಭ್ಯವಿರುವ ದತ್ತಾಂಶ ಅಥವಾ ಮಾಹಿತಿಗಳು (ಇತಿಹಾಸ, ಸಾಹಿತ್ಯ, ಸಾಮಾಜಿಕ ವಿಜ್ಞಾನಗಳು) ಹೆಚ್ಚಾಗಿ ಸವರ್ಣ ಗುಂಪುಗಳಿಂದ ಬಂದಿರುವುದರಿಂದ, ಎಐ ಉತ್ತರಗಳು ಅದೇ ರೀತಿ ಪಕ್ಷಪಾತ ತೋರುತ್ತವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದುವೇಳೆ ಜಾತಿ ಜನಗಣತಿ ನಡೆದರೆ, ತಟಸ್ಥ ತಂತ್ರಜ್ಞಾನ ಎಂಬ ಮಿಥ್ಯೆ ಒಡೆದುಬೀಳುತ್ತದೆ ಎಂದು ಹೇಳಿದ್ದಾರೆ.

ಇತಿಹಾಸ, ಸಾಹಿತ್ಯ ಮತ್ತು ಸಮಾಜ ವಿಜ್ಞಾನಗಳ ಹೆಚ್ಚಿನ ವಿಷಯವು ಪ್ರಬಲ ಜಾತಿಗಳ ಪ್ರಾಬಲ್ಯ ಹೊಂದಿರುವ ಇಂಟರ್ನೆಟ್ ದತ್ತಾಂಶದ ಮೇಲೆ ಎಐ ಮಾದರಿಗಳನ್ನು ಹೇಗೆ ತರಬೇತಿ ನೀಡಲಾಗುತ್ತದೆ ಎಂಬುವುದರ ಉದಾಹರಣೆಗಳನ್ನು ಚೌಹಾಣ್ ಅವರು ನೀಡಿದ್ದು, ಉದಾಹರಣೆಗೆ : ಮನುಸ್ಮೃತಿಯನ್ನು ‘ಪ್ರಾಚೀನ ಕಾನೂನು’ ಎಂದು ವೈಭವೀಕರಿಸುವುದು ಎಂದಿದ್ದಾರೆ. ಜಾತಿವಾದಿ ಚಿಂತನೆಯ ವಿರುದ್ಧದ ಹೋರಾಟವು ಉಪಕುಲಪತಿಗಳು, ಅಧಿಕಾರಿಗಳು, ಮುಖ್ಯಮಂತ್ರಿಗಳು ಮತ್ತು ಪ್ರಧಾನ ಮಂತ್ರಿಗಳ ವಿರುದ್ಧ ಮಾತ್ರವಲ್ಲ, ನಾವು ಅಲ್ಗಾರಿದಂ ಪಕ್ಷಪಾತದ ವಿರುದ್ಧವೂ ಯುದ್ಧ ಮಾಡಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಚೌಹಾಣ್ ಅವರ ಹೇಳಿಕೆಯು ಮೂಲತಃ ಹೊಸ ಪುಸ್ತಕವನ್ನು ಉದ್ದೇಶಿಯಾಗಿತ್ತು, ಏಕೆಂದರೆ, ಅಲ್ಲಿ ಲೇಖಕರು ಜಾತಿ ಜನಗಣತಿಯು ಸಾಮಾಜಿಕ ನ್ಯಾಯಕ್ಕೆ ಅತ್ಯಗತ್ಯ ಮಾತ್ರವಲ್ಲದೆ ಡಿಜಿಟಲ್ ಜಗತ್ತಿನಲ್ಲಿ ‘ಜಾತಿ ಪಕ್ಷಪಾತ’ವನ್ನು ಬಹಿರಂಗಪಡಿಸಲು ಒಂದು ಅಸ್ತ್ರವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ವಾದಿಸಿದ್ದಾರೆ. ಆದರೆ, ಟ್ರೋಲ್‌ ಪಡೆಗಳು ಅವರ ಹೇಳಿಕೆಯ ಕೇವಲ 5-6 ಸೆಕೆಂಡ್‌ನ ಕ್ಲಿಪ್ ಅನ್ನು ಮಾತ್ರ ವೈರಲ್ ಮಾಡಿವೆ. “ಚಾಟ್‌ಜಿಪಿಟಿ ಸವರ್ಣ” ಎಂಬ ಹೇಳಿಕೆಯನ್ನು ಎತ್ತಿ ತೋರಿಸಿವೆ. ಅದನ್ನು ‘ಅಸಂಬದ್ಧ’ ಅಥವಾ ‘ನರ್ಸರಿ ಮಟ್ಟದ ತರ್ಕ’ ಎಂದು ಲೇಬಲ್ ಮಾಡುವ ಮೂಲಕ ವೈರಲ್ ಮಾಡಿವೆ ಎಂದು en.themooknayak.com ವರದಿ ಮಾಡಿದೆ.

ಟ್ರೋಲ್ ಪೇಜ್‌ಗಳ ಹಿಂದೆ ಜಾತಿ ಜನಗಣತಿ ಮತ್ತು ಮೀಸಲಾತಿಯ ವಿರೋಧಿಗಳು ಎಂದು ಹೇಳಲಾಗುವ ಬಿಜೆಪಿ-ಆರ್‌ಎಸ್‌ಎಸ್‌ನ ಬೆಂಬಲಿಗರಿದ್ದಾರೆ. ಇವರು ಚೌಹಾಣ್ ಅವರ ಭಾಷಣದ ಸಣ್ಣ ಕ್ಲಿಪ್ ವೈರಲ್ ಮಾಡಿ ವ್ಯಾಪಕವಾಗಿ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಡಾ. ಲಕ್ಷ್ಮಣ್ ಯಾದವ್ ಅವರು ಈ ವಿಷಯದ ಬಗ್ಗೆ ವಿವರವಾದ ಪೋಸ್ಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಇದನ್ನು ರಾಜಕೀಯ ದುರುದ್ದೇಶ ಅಥವಾ ದುಷ್ಟ ರಾಜಕೀಯ ಉದ್ದೇಶ ಎಂದು ಕರೆದಿದ್ದಾರೆ. ಕ್ಲಿಪ್ ಕತ್ತರಿಸಿ ವೈರಲ್ ಮಾಡುವುದು ಕೇವಲ ಟ್ರೋಲ್ ಅಲ್ಲ, ಇದು ಒಂದು ರೀತಿಯ ದಮನಕಾರಿ ರಾಜಕೀಯದ ಆಯುಧವಾಗಿದೆ. ಇದರ ಮೂಲಕ ಭಯ ಹುಟ್ಟಿಸುವುದು, ಧಮ್ಕಿ ಹಾಕುವುದು ಮತ್ತು ಮೊಕದ್ದಮೆಗಳನ್ನು ದಾಖಲಿಸುವುದು ನಡೆಯುತ್ತದೆ ಎಂದಿದ್ದಾರೆ. ಅಲ್ಲದೆ, ಚೌಹಾಣ್ ಅವರೊಂದಿಗೆ 14 ವರ್ಷಗಳಿಂದ ಕೆಲಸ ಮಾಡಿದ್ದೇನೆ. ದೇಶಕ್ಕೆ ಇಂತಹ ಸವರ್ಣರು ಬೇಕು, ಅವರು ದೇಶವನ್ನು ವಿಶ್ವಗುರು ಮಾಡಬಹುದು” ಎಂದು ಹೇಳಿದ್ದಾರೆ.

ಡಾ. ಚೌಹಾಣ್ ಅವರನ್ನು ‘ಸವರ್ಣರಾಗಿದ್ದರೂ ಧೈರ್ಯಶಾಲಿ’ ಎಂದು ಬಣ್ಣಿಸಿದ ಯಾದವ್, ಇಂತಹ ವ್ಯಕ್ತಿಗಳು ಸಮಸ್ಯೆ ‘ಜಾತಿ’ಯಲ್ಲ, ಬದಲಿಗೆ ‘ಜಾತಿವಾದಿ ಶಕ್ತಿ’ ಎಂದು ಸಾಬೀತುಪಡಿಸುತ್ತಾರೆ ಎಂದಿದ್ದಾರೆ.

ಟ್ರೋಲ್‌ಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಎ.ಕೆ. ಸ್ಟಾಲಿನ್, ಇದನ್ನು ‘ಡಿಜಿಟಲ್ ಲಿಂಚಿಂಗ್’ ಎಂದು ಕರೆದಿದ್ದಾರೆ. “ಎಐನಲ್ಲಿ ಜಾತಿ ಪಕ್ಷಪಾತದ ಬಗ್ಗೆ ಡಜನ್‌ಗಟ್ಟಲೆ ವಿಮರ್ಶೆಗೆ ಒಳಪಟ್ಟ ಸಂಶೋಧನಾ ಪ್ರಬಂಧಗಳಿವೆ. ಅವುಗಳನ್ನು ಓದದೆ ವಿದ್ವಾಂಸರ ವಿರುದ್ಧ ಗುಂಪು ರಚಿಸುವುದು ಬೌದ್ಧಿಕ ದಿವಾಳಿತನ ಎಂದು ಅವರು ಹೇಳಿದ್ದಾರೆ. ಎಐ ಸಾಮಾಜಿಕ ಶ್ರೇಣಿಗಳನ್ನು ಪುನರಾವರ್ತಿಸುತ್ತದೆ ಎಂದು ಸಾಬೀತುಪಡಿಸಿದ ನೇಚರ್ ಜರ್ನಲ್‌ನಲ್ಲಿನ ಪ್ರಬಂಧ ಸೇರಿದಂತೆ ಅಂತಾರಾಷ್ಟ್ರೀಯ ಅಧ್ಯಯನಗಳನ್ನು ಸ್ಟಾಲಿನ್ ಉಲ್ಲೇಖಿಸಿದ್ದಾರೆ. ಅದೇ ರೀತಿ, ಲಖನ್ ಮೀನಾ ಅವರಂತಹ ಕಾರ್ಯಕರ್ತರು “ಡಾ. ಚೌಹಾಣ್ ಹೇಳಿರುವುದು ಶೇಕಡ 100ರಷ್ಟು ಸರಿ ಇದೆ. ಎಐ ದತ್ತಾಂಶ ಮನುವಾದಿಯಾಗಿದೆ, ಆದ್ದರಿಂದ ಅದರ ಪ್ರತಿಕ್ರಿಯೆಗಳು ಸಹ ಹಾಗೆಯೇ ಇವೆ ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...