Homeಮುಖಪುಟಅಂಬೇಡ್ಕರ್ ನಗರ: ನಿವೃತ್ತ ಮುಸ್ಲಿಂ ಶಿಕ್ಷಕರ 3 ಅಂತಸ್ತಿನ ಮನೆ ನೆಲಸಮ - ಒಂದು...

ಅಂಬೇಡ್ಕರ್ ನಗರ: ನಿವೃತ್ತ ಮುಸ್ಲಿಂ ಶಿಕ್ಷಕರ 3 ಅಂತಸ್ತಿನ ಮನೆ ನೆಲಸಮ – ಒಂದು ಕುಟುಂಬದ ನೋವಿನ ಕಥೆ

- Advertisement -
- Advertisement -

ನವದೆಹಲಿ: ಉತ್ತರಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್‌ಪುರದಲ್ಲಿ ಗುರುವಾರ, 55 ವರ್ಷದ ನಿವೃತ್ತ ಶಿಕ್ಷಕ ನಬಿ ಅಹ್ಮದ್ ಅವರ ಮೂರು ಅಂತಸ್ತಿನ ಕನಸಿನ ಮನೆ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ನೆಲಸಮಗೊಳಿಸಲಾಯಿತು. ಬಸ್ಖಾರಿ ರಸ್ತೆಯಲ್ಲಿ ನಡೆದ ಈ ಘಟನೆ, ಜೀವನದುದ್ದಕ್ಕೂ ಕಟ್ಟಿಕೊಂಡ ಕನಸುಗಳು ಮತ್ತು ದುಡಿದ ಹಣದಿಂದ ನಿರ್ಮಿಸಿದ ಮನೆಯು ಕಣ್ಮುಂದೆಯೇ ಕೆಡವಲ್ಪಟ್ಟಿತ್ತು. “ಅಕ್ರಮ ಒತ್ತುವರಿ” ನೆಪದಲ್ಲಿ ಮುಸ್ಲಿಮರ ಮನೆಗಳನ್ನು ಗುರಿಯಾಗಿಸಿಕೊಂಡು ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ನಿರಂತರ ಅಭಿಯಾನಕ್ಕೆ ಮತ್ತೊಂದು ಉದಾಹರಣೆಯಾಗಿದೆ.

ಲೋಕೋಪಯೋಗಿ ಇಲಾಖೆಯು (PWD) ಈ ನೆಲಸಮ ಕಾರ್ಯವನ್ನು ಹೈಕೋರ್ಟ್ ಆದೇಶದಂತೆ ನಡೆಸಲಾಗಿದೆ ಎಂದು ಹೇಳಿದೆ. ಸರ್ಕಾರಿ ಭೂಮಿ ಎಂದು ಘೋಷಿಸಿದ ನಂತರವೇ ಈ ಮನೆಗೆ ಬುಲ್ಡೋಜರ್ ಹತ್ತಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ. ಜಲಾಲ್‌ಪುರ್ ಕೊತ್ವಾಲ್ ಸಂತೋಷ್ ಕುಮಾರ್ ಸಿಂಗ್ ಸಹ, “ಈ ಕಟ್ಟಡವು ಸರ್ಕಾರಿ ಭೂಮಿಯಲ್ಲಿದ್ದು, ಕಾನೂನುಬದ್ಧ ಅನುಮೋದನೆ ಇರಲಿಲ್ಲ. ನಾವು ಅಹ್ಮದ್‌ಗೆ ಪೂರ್ವ ಸೂಚನೆ ಸೇರಿದಂತೆ ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಿದ್ದೇವೆ,” ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

“ನನ್ನ ಇಡೀ ಜೀವನವನ್ನು ಈ ಮನೆಯನ್ನು ಕಟ್ಟಲು ಕಳೆದಿದ್ದೇನೆ. ಈಗ ನನ್ನ ಬ್ಯಾಗ್‌ನಲ್ಲಿರುವ ಬಟ್ಟೆಗಳನ್ನು ಹೊರತುಪಡಿಸಿ ನನಗೇನೂ ಇಲ್ಲ. ಇಲ್ಲಿ ಯಾವುದೇ ಹಿಂದೂ ಮನೆಗಳನ್ನು ಮುಟ್ಟಿಲ್ಲ; ನಮ್ಮನ್ನು ಮಾತ್ರ ಗುರಿಪಡಿಸಲಾಗುತ್ತಿದೆ,” ಎಂದು ನಬಿ ಅಹ್ಮದ್ ಅವರ ದನಿ ನೋವಿನಿಂದ ನಡುಗಿತು. ಇದು ಕೇವಲ ನಬಿ ಅಹ್ಮದ್ ಅವರೊಬ್ಬರ ಆರ್ತನಾದವಾಗಿರಲಿಲ್ಲ. ಸ್ಥಳೀಯ ಅಂಗಡಿ ಮಾಲೀಕ ಫೈಜಾನ್ ಅಲಿ ಇದೇ ಆತಂಕವನ್ನು ಪ್ರತಿಧ್ವನಿಸುತ್ತಾ, “ಈ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಮನೆಗಳು ಸರ್ಕಾರಿ ಜಾಗದಲ್ಲಿಯೇ ಇವೆ, ಆದರೆ ಮುಸ್ಲಿಮರ ಮನೆಗಳನ್ನು ಮಾತ್ರ ಏಕೆ ಕೆಡವಲಾಗುತ್ತಿದೆ?” ಎಂದು ಪ್ರಶ್ನಿಸಿದರು. ಲೋಕೋಪಯೋಗಿ ಇಲಾಖೆ (PWD) 53 ಇತರ ಕುಟುಂಬಗಳಿಗೆ ನೋಟಿಸ್ ನೀಡಿದ್ದು, ಈ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಕುಟುಂಬಗಳಿವೆ ಎಂದು ಅವರು ದೂರುತ್ತಾರೆ.

ಈ ಕ್ರಮಗಳ ಕುರಿತು ಲಕ್ನೋ ಮೂಲದ ಮಾನವ ಹಕ್ಕುಗಳ ವಕೀಲ ಅಡ್ವೊಕೇಟ್ ಫಿರೋಜ್ ಖಾನ್, “ನ್ಯಾಯಾಲಯಗಳು ಆದೇಶಗಳನ್ನು ನೀಡಬಹುದು, ಆದರೆ ಆಡಳಿತದ ಕೆಲಸ ನ್ಯಾಯಯುತವಾಗಿ ವರ್ತಿಸುವುದು. ಮುಸ್ಲಿಂ ಮನೆಗಳನ್ನು ಮಾತ್ರ ಗುರಿಪಡಿಸುವುದು ಏನನ್ನು ಸೂಚಿಸುತ್ತದೆ,” ಎಂದು ನೇರವಾಗಿ ಪ್ರಶ್ನಿಸುತ್ತಾರೆ.

ಬುಲ್ಡೋಜರ್ ಕ್ರಮಗಳನ್ನು ಹಲವರು ಮುಸ್ಲಿಂ ಸಮುದಾಯದ ಮೇಲಿನ ನೇರ ಆಕ್ರಮಣ ಎಂದು ಪರಿಗಣಿಸಿದ್ದಾರೆ. ನಬಿ ಅಹ್ಮದ್ ಅವರ ಪುತ್ರ ಇಮ್ರಾನ್ ಅವರ ನೋವಿನ ನುಡಿಗಳು ಇದಕ್ಕೆ ಸಾಕ್ಷಿಯಾಗಿವೆ: “ನನ್ನ ಮಗಳ ಮದುವೆ ಮುಂದಿನ ತಿಂಗಳು ಇದೆ. ಅವಳ ವರದಕ್ಷಿಣೆ ವಸ್ತುಗಳು ಮನೆಯಲ್ಲಿದ್ದವು – ಈಗ ಎಲ್ಲವೂ ನಾಶವಾಗಿವೆ. ನಮ್ಮ ವಸ್ತುಗಳನ್ನು ತೆಗೆದುಹಾಕಲು ಸಹ ಅವರು ನಮಗೆ ಅವಕಾಶ ನೀಡಲಿಲ್ಲ.ಸರ್ಕಾರ ನಮಗೆ ಏನು ಸಂದೇಶ ಕಳುಹಿಸುತ್ತಿದೆ? ನಾವು ನಮ್ಮ ಸ್ವಂತ ದೇಶಕ್ಕೆ ಸೇರಿಲ್ಲವೇ? ಎಂದು ಕೇಳುತ್ತಾರೆ.

ನಾಗರಿಕ ಸಮಾಜ ಗುಂಪುಗಳು ಮತ್ತು ಅಖಿಲ ಭಾರತ ಮುಸ್ಲಿಂ ಮಜ್ಲಿಸ್-ಎ-ಮುಶಾವರತ್‌ನಂತಹ ಸಂಘಟನೆಗಳು ಈ ಬುಲ್ಡೋಜರ್ ಕ್ರಮಗಳನ್ನು “ನ್ಯಾಯಯುತ ವಿಚಾರಣೆಗಳಿಲ್ಲದ ಸಾಮೂಹಿಕ ಶಿಕ್ಷೆ” ಎಂದು ಬಲವಾಗಿ ಖಂಡಿಸಿವೆ.

ಅಂಬೇಡ್ಕರ್ ನಗರದ ಮುಸ್ಲಿಂ ನಿವಾಸಿಗಳು ನಿರಂತರ ಭಯದಲ್ಲಿ ದಿನ ದೂಡುತ್ತಿದ್ದಾರೆ. ನಿವಾಸಿ ಶಂಶಾದ್ ಆಲಮ್ ಅವರ ಮಾತುಗಳಲ್ಲಿ ಈ ಆತಂಕ ಸ್ಪಷ್ಟವಾಗಿದೆ: “ನಮ್ಮ ಮಕ್ಕಳು ಕೂಡ ಈಗ ಬುಲ್ಡೋಜರ್‌ಗಳಿಗೆ ಹೆದರುತ್ತಾರೆ. ಅವರು ಇದನ್ನು ಮುಸ್ಲಿಮರನ್ನು ನಾಶಮಾಡಲು ತಯಾರಿಸಿದ ಯಂತ್ರ ಎಂದು ಭಾವಿಸುತ್ತಾರೆ’’ ಎಂದಿದ್ದಾರೆ.

ನಬಿ ಅಹ್ಮದ್ ಮತ್ತು ಅವರಂತೆಯೇ ಅನ್ಯಾಯಕ್ಕೊಳಗಾದವರು ಈಗ ನ್ಯಾಯಾಲಯದ ಮೊರೆ ಹೋಗಲು ಸಿದ್ಧರಾಗಿದ್ದಾರೆ. ಪರಿಹಾರ ಮತ್ತು ಮುಂದಿನ ನೆಲಸಮಗಳಿಗೆ ತಡೆಯಾಜ್ಞೆ ಕೋರಿ ಅವರು ಕಾನೂನು ಹೋರಾಟ ನಡೆಸಲಿದ್ದಾರೆ. ನಮ್ಮ ಸಂವಿಧಾನವು ನಮಗೆ ಆಶ್ರಯ, ಕೇಳುವ ಮತ್ತು ಘನತೆಯ ಹಕ್ಕನ್ನು ನೀಡುತ್ತದೆ. ನಮಗೆ ಇವೆಲ್ಲವನ್ನೂ ಏಕೆ ನಿರಾಕರಿಸಲಾಗುತ್ತಿದೆ?” ಎಂದು ಅಡ್ವೊಕೇಟ್ ಶಕೀಲ್ ಅಹ್ಮದ್ ಅವರ ನೋವಿನ ಪ್ರಶ್ನೆಯಾಗಿದೆ.

ಏರ್ ಇಂಡಿಯಾ ಅಪಘಾತದ ಕುರಿತು ವರದಿ: ವಾಲ್‌ ಸ್ಟ್ರೀಟ್ ಜರ್ನಲ್‌, ರಾಯಿಟರ್ಸ್‌ಗೆ ಲೀಗಲ್ ನೋಟಿಸ್ ನೀಡಿದ ಪೈಲಟ್‌ಗಳ ಒಕ್ಕೂಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...