Homeಮುಖಪುಟಅಂಬೇಡ್ಕರ್ ನಗರ: ನಿವೃತ್ತ ಮುಸ್ಲಿಂ ಶಿಕ್ಷಕರ 3 ಅಂತಸ್ತಿನ ಮನೆ ನೆಲಸಮ - ಒಂದು...

ಅಂಬೇಡ್ಕರ್ ನಗರ: ನಿವೃತ್ತ ಮುಸ್ಲಿಂ ಶಿಕ್ಷಕರ 3 ಅಂತಸ್ತಿನ ಮನೆ ನೆಲಸಮ – ಒಂದು ಕುಟುಂಬದ ನೋವಿನ ಕಥೆ

- Advertisement -
- Advertisement -

ನವದೆಹಲಿ: ಉತ್ತರಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್‌ಪುರದಲ್ಲಿ ಗುರುವಾರ, 55 ವರ್ಷದ ನಿವೃತ್ತ ಶಿಕ್ಷಕ ನಬಿ ಅಹ್ಮದ್ ಅವರ ಮೂರು ಅಂತಸ್ತಿನ ಕನಸಿನ ಮನೆ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ನೆಲಸಮಗೊಳಿಸಲಾಯಿತು. ಬಸ್ಖಾರಿ ರಸ್ತೆಯಲ್ಲಿ ನಡೆದ ಈ ಘಟನೆ, ಜೀವನದುದ್ದಕ್ಕೂ ಕಟ್ಟಿಕೊಂಡ ಕನಸುಗಳು ಮತ್ತು ದುಡಿದ ಹಣದಿಂದ ನಿರ್ಮಿಸಿದ ಮನೆಯು ಕಣ್ಮುಂದೆಯೇ ಕೆಡವಲ್ಪಟ್ಟಿತ್ತು. “ಅಕ್ರಮ ಒತ್ತುವರಿ” ನೆಪದಲ್ಲಿ ಮುಸ್ಲಿಮರ ಮನೆಗಳನ್ನು ಗುರಿಯಾಗಿಸಿಕೊಂಡು ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ನಿರಂತರ ಅಭಿಯಾನಕ್ಕೆ ಮತ್ತೊಂದು ಉದಾಹರಣೆಯಾಗಿದೆ.

ಲೋಕೋಪಯೋಗಿ ಇಲಾಖೆಯು (PWD) ಈ ನೆಲಸಮ ಕಾರ್ಯವನ್ನು ಹೈಕೋರ್ಟ್ ಆದೇಶದಂತೆ ನಡೆಸಲಾಗಿದೆ ಎಂದು ಹೇಳಿದೆ. ಸರ್ಕಾರಿ ಭೂಮಿ ಎಂದು ಘೋಷಿಸಿದ ನಂತರವೇ ಈ ಮನೆಗೆ ಬುಲ್ಡೋಜರ್ ಹತ್ತಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ. ಜಲಾಲ್‌ಪುರ್ ಕೊತ್ವಾಲ್ ಸಂತೋಷ್ ಕುಮಾರ್ ಸಿಂಗ್ ಸಹ, “ಈ ಕಟ್ಟಡವು ಸರ್ಕಾರಿ ಭೂಮಿಯಲ್ಲಿದ್ದು, ಕಾನೂನುಬದ್ಧ ಅನುಮೋದನೆ ಇರಲಿಲ್ಲ. ನಾವು ಅಹ್ಮದ್‌ಗೆ ಪೂರ್ವ ಸೂಚನೆ ಸೇರಿದಂತೆ ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಿದ್ದೇವೆ,” ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

“ನನ್ನ ಇಡೀ ಜೀವನವನ್ನು ಈ ಮನೆಯನ್ನು ಕಟ್ಟಲು ಕಳೆದಿದ್ದೇನೆ. ಈಗ ನನ್ನ ಬ್ಯಾಗ್‌ನಲ್ಲಿರುವ ಬಟ್ಟೆಗಳನ್ನು ಹೊರತುಪಡಿಸಿ ನನಗೇನೂ ಇಲ್ಲ. ಇಲ್ಲಿ ಯಾವುದೇ ಹಿಂದೂ ಮನೆಗಳನ್ನು ಮುಟ್ಟಿಲ್ಲ; ನಮ್ಮನ್ನು ಮಾತ್ರ ಗುರಿಪಡಿಸಲಾಗುತ್ತಿದೆ,” ಎಂದು ನಬಿ ಅಹ್ಮದ್ ಅವರ ದನಿ ನೋವಿನಿಂದ ನಡುಗಿತು. ಇದು ಕೇವಲ ನಬಿ ಅಹ್ಮದ್ ಅವರೊಬ್ಬರ ಆರ್ತನಾದವಾಗಿರಲಿಲ್ಲ. ಸ್ಥಳೀಯ ಅಂಗಡಿ ಮಾಲೀಕ ಫೈಜಾನ್ ಅಲಿ ಇದೇ ಆತಂಕವನ್ನು ಪ್ರತಿಧ್ವನಿಸುತ್ತಾ, “ಈ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಮನೆಗಳು ಸರ್ಕಾರಿ ಜಾಗದಲ್ಲಿಯೇ ಇವೆ, ಆದರೆ ಮುಸ್ಲಿಮರ ಮನೆಗಳನ್ನು ಮಾತ್ರ ಏಕೆ ಕೆಡವಲಾಗುತ್ತಿದೆ?” ಎಂದು ಪ್ರಶ್ನಿಸಿದರು. ಲೋಕೋಪಯೋಗಿ ಇಲಾಖೆ (PWD) 53 ಇತರ ಕುಟುಂಬಗಳಿಗೆ ನೋಟಿಸ್ ನೀಡಿದ್ದು, ಈ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಕುಟುಂಬಗಳಿವೆ ಎಂದು ಅವರು ದೂರುತ್ತಾರೆ.

ಈ ಕ್ರಮಗಳ ಕುರಿತು ಲಕ್ನೋ ಮೂಲದ ಮಾನವ ಹಕ್ಕುಗಳ ವಕೀಲ ಅಡ್ವೊಕೇಟ್ ಫಿರೋಜ್ ಖಾನ್, “ನ್ಯಾಯಾಲಯಗಳು ಆದೇಶಗಳನ್ನು ನೀಡಬಹುದು, ಆದರೆ ಆಡಳಿತದ ಕೆಲಸ ನ್ಯಾಯಯುತವಾಗಿ ವರ್ತಿಸುವುದು. ಮುಸ್ಲಿಂ ಮನೆಗಳನ್ನು ಮಾತ್ರ ಗುರಿಪಡಿಸುವುದು ಏನನ್ನು ಸೂಚಿಸುತ್ತದೆ,” ಎಂದು ನೇರವಾಗಿ ಪ್ರಶ್ನಿಸುತ್ತಾರೆ.

ಬುಲ್ಡೋಜರ್ ಕ್ರಮಗಳನ್ನು ಹಲವರು ಮುಸ್ಲಿಂ ಸಮುದಾಯದ ಮೇಲಿನ ನೇರ ಆಕ್ರಮಣ ಎಂದು ಪರಿಗಣಿಸಿದ್ದಾರೆ. ನಬಿ ಅಹ್ಮದ್ ಅವರ ಪುತ್ರ ಇಮ್ರಾನ್ ಅವರ ನೋವಿನ ನುಡಿಗಳು ಇದಕ್ಕೆ ಸಾಕ್ಷಿಯಾಗಿವೆ: “ನನ್ನ ಮಗಳ ಮದುವೆ ಮುಂದಿನ ತಿಂಗಳು ಇದೆ. ಅವಳ ವರದಕ್ಷಿಣೆ ವಸ್ತುಗಳು ಮನೆಯಲ್ಲಿದ್ದವು – ಈಗ ಎಲ್ಲವೂ ನಾಶವಾಗಿವೆ. ನಮ್ಮ ವಸ್ತುಗಳನ್ನು ತೆಗೆದುಹಾಕಲು ಸಹ ಅವರು ನಮಗೆ ಅವಕಾಶ ನೀಡಲಿಲ್ಲ.ಸರ್ಕಾರ ನಮಗೆ ಏನು ಸಂದೇಶ ಕಳುಹಿಸುತ್ತಿದೆ? ನಾವು ನಮ್ಮ ಸ್ವಂತ ದೇಶಕ್ಕೆ ಸೇರಿಲ್ಲವೇ? ಎಂದು ಕೇಳುತ್ತಾರೆ.

ನಾಗರಿಕ ಸಮಾಜ ಗುಂಪುಗಳು ಮತ್ತು ಅಖಿಲ ಭಾರತ ಮುಸ್ಲಿಂ ಮಜ್ಲಿಸ್-ಎ-ಮುಶಾವರತ್‌ನಂತಹ ಸಂಘಟನೆಗಳು ಈ ಬುಲ್ಡೋಜರ್ ಕ್ರಮಗಳನ್ನು “ನ್ಯಾಯಯುತ ವಿಚಾರಣೆಗಳಿಲ್ಲದ ಸಾಮೂಹಿಕ ಶಿಕ್ಷೆ” ಎಂದು ಬಲವಾಗಿ ಖಂಡಿಸಿವೆ.

ಅಂಬೇಡ್ಕರ್ ನಗರದ ಮುಸ್ಲಿಂ ನಿವಾಸಿಗಳು ನಿರಂತರ ಭಯದಲ್ಲಿ ದಿನ ದೂಡುತ್ತಿದ್ದಾರೆ. ನಿವಾಸಿ ಶಂಶಾದ್ ಆಲಮ್ ಅವರ ಮಾತುಗಳಲ್ಲಿ ಈ ಆತಂಕ ಸ್ಪಷ್ಟವಾಗಿದೆ: “ನಮ್ಮ ಮಕ್ಕಳು ಕೂಡ ಈಗ ಬುಲ್ಡೋಜರ್‌ಗಳಿಗೆ ಹೆದರುತ್ತಾರೆ. ಅವರು ಇದನ್ನು ಮುಸ್ಲಿಮರನ್ನು ನಾಶಮಾಡಲು ತಯಾರಿಸಿದ ಯಂತ್ರ ಎಂದು ಭಾವಿಸುತ್ತಾರೆ’’ ಎಂದಿದ್ದಾರೆ.

ನಬಿ ಅಹ್ಮದ್ ಮತ್ತು ಅವರಂತೆಯೇ ಅನ್ಯಾಯಕ್ಕೊಳಗಾದವರು ಈಗ ನ್ಯಾಯಾಲಯದ ಮೊರೆ ಹೋಗಲು ಸಿದ್ಧರಾಗಿದ್ದಾರೆ. ಪರಿಹಾರ ಮತ್ತು ಮುಂದಿನ ನೆಲಸಮಗಳಿಗೆ ತಡೆಯಾಜ್ಞೆ ಕೋರಿ ಅವರು ಕಾನೂನು ಹೋರಾಟ ನಡೆಸಲಿದ್ದಾರೆ. ನಮ್ಮ ಸಂವಿಧಾನವು ನಮಗೆ ಆಶ್ರಯ, ಕೇಳುವ ಮತ್ತು ಘನತೆಯ ಹಕ್ಕನ್ನು ನೀಡುತ್ತದೆ. ನಮಗೆ ಇವೆಲ್ಲವನ್ನೂ ಏಕೆ ನಿರಾಕರಿಸಲಾಗುತ್ತಿದೆ?” ಎಂದು ಅಡ್ವೊಕೇಟ್ ಶಕೀಲ್ ಅಹ್ಮದ್ ಅವರ ನೋವಿನ ಪ್ರಶ್ನೆಯಾಗಿದೆ.

ಏರ್ ಇಂಡಿಯಾ ಅಪಘಾತದ ಕುರಿತು ವರದಿ: ವಾಲ್‌ ಸ್ಟ್ರೀಟ್ ಜರ್ನಲ್‌, ರಾಯಿಟರ್ಸ್‌ಗೆ ಲೀಗಲ್ ನೋಟಿಸ್ ನೀಡಿದ ಪೈಲಟ್‌ಗಳ ಒಕ್ಕೂಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...