ಜಮ್ಮು-ಕಾಶ್ಮೀರದಲ್ಲಿ ಯಾರನ್ನೂ ಗೃಹಬಂಧನದಲ್ಲಿಟ್ಟಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ ಎಂದು ಸ್ವತಃ ಗೃಹಬಂಧನದಲ್ಲಿದ್ದ ಮಾಜಿ ಕೇಂದ್ರ ಸಚಿವ ಪ್ರೊ.ಸೈಫುದ್ದೀನ್ ಸೋಜ್ ಶುಕ್ರವಾರ ಹೇಳಿದರು.
“2019 ರ ಆಗಸ್ಟ್ 5 ರಂದು, ಭಾರತ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ದಿನದಿಂದ ನಾನು ಗೃಹಬಂಧನದಲ್ಲಿದ್ದೇನೆ. ಜಮ್ಮು-ಕಾಶ್ಮೀರದಲ್ಲಿ ಇನ್ನೂ ಅನೇಕರು ಗೃಹಬಂಧನದಲ್ಲಿದ್ದಾರೆ” ಎಂಬುದಾಗಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.
ಇದನ್ನೂ ಓದಿ: ಕಾಶ್ಮೀರದ ಕತ್ತಲೆಗೆ ಒಂದು ವರ್ಷ: ಸಾಧಿಸಿದ್ದಾದರೂ ಏನು?
“ಈ ಅವಧಿಯಲ್ಲಿ, ನಾನು ವೈದ್ಯಕೀಯ ಸಲಹೆಗಾಗಿ ಎರಡು ದಿನಗಳ ಕಾಲ ದೆಹಲಿಗೆ ಭೇಟಿ ನೀಡಿದ್ದೆ. ಜಮ್ಮು ಕಾಶ್ಮೀರ ಪೊಲೀಸರ ಅನುಮತಿಯೊಂದಿಗೆ ನಾನು ಶ್ರೀನಗರದಲ್ಲಿರುವ ಅನಾರೋಗ್ಯಕ್ಕೆ ಒಳಗಾಗಿರುವ ನನ್ನ ಸಹೋದರಿಯನ್ನು ಎರಡು ಬಾರಿ ಭೇಟಿ ಮಾಡಿದ್ದೆ. ಪೊಲೀಸರು ತಮ್ಮ ವಾಹನದಲ್ಲಿ, ಬೆಂಗಾವಲಿನೊಂದಿಗೆ ನನ್ನನ್ನು ಕರೆದೊಯ್ದು, ಮತ್ತೆ ನನ್ನ ನಿವಾಸಕ್ಕೆ ತಂದು ಬಿಟ್ಟರು. ನಾನೂ ಸ್ವತಂತ್ರ ಮನುಷ್ಯ. ಅವರು ಹೇಳುತ್ತಿರುವುದು ಬಿಳಿ ಸುಳ್ಳು!” ಎಂದು ಅವರು ಹೇಳಿದರು.
“ಇದು, ಭಾರತದಲ್ಲಿ ನಾಗರಿಕ ಸ್ವಾತಂತ್ರ್ಯಗಳ ರಕ್ಷಣೆಗೆ ಅವಕಾಶ ಕಲ್ಪಿಸುವ ಸಂವಿಧಾನದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಗೌರವ ಇಲ್ಲ ಎಂಬುದನ್ನು ತೋರಿಸುತ್ತದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಅಘೋಷಿತ ತುರ್ತು ಪರಿಸ್ಥಿತಿ: ಕರಾಳ ಕಾಯಿದೆಗಳು ಮತ್ತು ರಾಜಕೀಯ ಕೈದಿಗಳು