Homeಅಂತರಾಷ್ಟ್ರೀಯಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

- Advertisement -
- Advertisement -

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ.

ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ ಕುಸಿತ, ಹಣದುಬ್ಬರ, ಬೆಲೆ ಏರಿಕೆ) ಶುರುವಾದ ಪ್ರತಿಭಟನೆ, ಈಗ ಸರ್ಕಾರ ವಿರೋಧಿ ಕ್ರಾಂತಿಯಾಗಿ ಬದಲಾಗಿದೆ. ಪ್ರತಿಭಟನಕಾರರು ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿಯನ್ನು ಅಧಿಕಾರದಿಂದ ಕೆಳಗಿಳಿಸುವ ಘೋಷಣೆಗಳನ್ನು ಕೂಗುತ್ತಿದ್ದಾರೆ.

“ಸರ್ವಾಧಿಕಾರಿಗೆ ಮರಣ!”, “ಈ ವರ್ಷ ರಕ್ತದ ವರ್ಷ, ಸೈಯದ್ ಅಲಿ ಉರುಳುತ್ತಾನೆ/ಕೆಳಗಿಳಿಯುತ್ತಾನೆ” ಇತ್ಯಾದಿ ಘೋಷಣೆಗಳನ್ನು ಖಮೇನಿ ವಿರುದ್ದ ಪ್ರತಿಭಟನಕಾರರು ಕೂಗುತ್ತಿದ್ದಾರೆ. ಇದೇ ವೇಳೆ ಹಳೆಯ ಪಹ್ಲವಿ ರಾಜವಂಶದ ರಾಜಕುಮಾರ ರೆಝಾ ಪಹ್ಲವಿಯನ್ನು ಬೆಂಬಲಿಸುತ್ತಿದ್ದಾರೆ. “ಶಾಹ್ ದೀರ್ಘಾಯುಷ್ಯ!”, “ರೆಝಾ ಪಹ್ಲವಿ ಬರುತ್ತಿದ್ದಾರೆ!” ಈ ಘೋಷಣೆಗಳೂ ಕೂಡ ಪ್ರತಿಭಟನಾಕಾರರಿಂದ ಕೇಳಿ ಬರುತ್ತಿವೆ.

ಇರಾನ್‌ನ ಎಲ್ಲ 31 ಪ್ರಾಂತ್ಯಗಳ 100ಕ್ಕೂ ಹೆಚ್ಚು ನಗರಗಳಲ್ಲಿ (ತೆಹ್ರಾನ್, ಇಸ್ಫಹಾನ್, ಕೊಮ್, ಶಿರಾಜ್, ಕರ್ಮಾನ್‌ಶಾಹ್, ಮಶ್ಹದ್ ಸೇರಿದಂತೆ) ಪ್ರತಿಭಟನೆಗಳು ನಡೆಯುತ್ತಿವೆ. ಖಮೇನಿಯ ಪ್ರಭಾವ ಹೆಚ್ಚಿರುವ ಕೇಂದ್ರಗಳಲ್ಲೂ (ಕೊಮ್, ಮಶ್ಹದ್) ಪ್ರತಿಭಟನೆಗಳು ಹರಡಿವೆ.

ಪೊಲೀಸ್, ಬಸಿಜ್ ಪ್ಯಾರಾ ಮಿಲಿಟರಿ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಸೈನಿಕರು ಲೈವ್ ಬುಲೆಟ್, ಟಿಯರ್ ಗ್ಯಾಸ್, ಶಾಟ್‌ಗನ್‌ನಿಂದ ಮೆಟಲ್ ಪೆಲೆಟ್‌ಗಳನ್ನು ಬಳಸಿ ಪ್ರತಿಭಟನಾಕಾರರ ಮೇಲೆ ದಾಳಿ ಮಾಡುತ್ತಿದ್ದಾರೆ. ಪ್ರತಿಭಟನಕಾರರು ಬಸಿಜ್ ಕಚೇರಿಗಳು, ಸರ್ಕಾರಿ ಕಟ್ಟಡಗಳು, ಪೊಲೀಸ್ ವಾಹನಗಳನ್ನು ಸುಟ್ಟಿದ್ದಾರೆ. ಕೆಲವು ಸ್ಥಳಗಳಲ್ಲಿ ತೀವ್ರ ಘರ್ಷಣೆಗಳು ನಡೆದಿವೆ ಎಂದು ವರದಿಯಾಗಿದೆ.

ಮಾನವ ಹಕ್ಕು ಸಂಘಟನೆಗಳ ಪ್ರಕಾರ (HRANA, Hengaw, Amnesty)ಕನಿಷ್ಠ 51 ರಿಂದ 65ಕ್ಕೂ ಹೆಚ್ಚು ಪ್ರತಿಭಟನಕಾರರು ಸತ್ತಿದ್ದಾರೆ (ಮಕ್ಕಳು ಸೇರಿದಂತೆ). ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಐಆರ್‌ಜಿಸಿ ಸೈನಿಕರು ಕೂಡ ಬಲಿಯಾಗಿದ್ದಾರೆ.

2000ಕ್ಕಿಂತ ಹೆಚ್ಚು ಜನರನ್ನು ಬಂಧಿಸಲಾಗಿದೆ. ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ಬಂಧಿಸುವ ಪ್ರಕ್ರಿಯೆಗಳೂ ನಡೆದಿವೆ.

ದೇಶವ್ಯಾಪಿ ಇಂಟರ್ನೆಟ್ ಮತ್ತು ಫೋನ್ ಸೇವೆಗಳನ್ನು ಸರ್ಕಾರ ಕಡಿತಗೊಳಿಸಿದೆ. ಇದರಿಂದ ಮಾಹಿತಿ ಹರಿವು ತಡೆಯಲಾಗಿದೆ, ಆದರೆ ವಿಪಿಎನ್‌ ಮತ್ತು ಸ್ಟಾರ್‌ಲಿಂಕ್ ಮೂಲಕ ಕೆಲವು ವೀಡಿಯೊಗಳು ಹೊರಬರುತ್ತಿವೆ.

ರಸ್ತೆಗಳನ್ನು ತಡೆಯುವುದು, ಬೆಂಕಿ ಹಚ್ಚುವುದು, ಖಮೇನಿ ಪೋಸ್ಟರ್‌ಗಳನ್ನು ಸುಡುವುದು (ಮಹಿಳೆಯರು ಸಿಗರೇಟ್ ಉರಿಸಲು ಬಳಸುವುದು), ಹಳೆಯ ಲಯನ್ ಅಂಡ್ ಸನ್ ಧ್ವಜವನ್ನು (ಪಹ್ಲವಿ ಕಾಲದ ರಾಜಧ್ವಜ) ತೋರಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಖಮೇನಿ ಆಡಳಿತದ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಂತಾರಾಷ್ಟ್ರಿಯ ಪ್ರತಿಕ್ರಿಯೆ

ಅಮೆರಿಕ ಅಧ್ಯಕ್ಷ ಟ್ರಂಪ್ “ಇರಾನ್ ದೊಡ್ಡ ಸಮಸ್ಯೆಯಲ್ಲಿದೆ” ಎಂದಿದ್ದು, ಪ್ರತಿಭಟನಕಾರರನ್ನು “ಧೈರ್ಯಶಾಲಿಗಳು” ಎಂದು ಹೊಗಳಿದ್ದಾರೆ. ಹೆಚ್ಚಿನ ಸಾವುಗಳಾದರೆ ತೀವ್ರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಯುರೋಪಿಯನ್ ದೇಶಗಳು (ಫ್ರಾನ್ಸ್, ಯುಕೆ, ಜರ್ಮನಿ) ಹತ್ಯೆಗಳನ್ನು ಖಂಡಿಸಿದ್ದು, ಸಂಯಮ ಕಾಯ್ದುಕೊಳ್ಳಲು ಒತ್ತಾಯಿಸಿವೆ. ಎಕ್ಸ್‌ (ಟ್ವಿಟರ್) ಪ್ರತಿಭಟನಾಕಾರರನ್ನು ಬೆಂಬಲಿಸಿ ಇರಾನ್ ಧ್ವಜದ ಇಮೋಜಿಯನ್ನು ಹಳೆಯ ಲಯನ್ ಅಂಡ್ ಸನ್‌ಗೆ ಬದಲಾಯಿಸಿದೆ.

ಈ ಪ್ರತಿಭಟನೆಗಳು ಇರಾನ್‌ನ ಇಸ್ಲಾಮಿಕ್ ರಿಪಬ್ಲಿಕ್‌ಗೆ ಇತ್ತೀಚಿನ ವರ್ಷಗಳಲ್ಲಿ ಎದುರಾಗಿರುವ ಅತಿ ದೊಡ್ಡ ಆಂತರಿಕ ಸವಾಲುಗಳಲ್ಲಿ ಒಂದು. ಆರ್ಥಿಕ ದುಸ್ಥಿತಿ, ರಾಜಕೀಯ ಆಡಳಿತದ ವಿರುದ್ದ ಆಕ್ರೋಶ ಮತ್ತು 2025ರ ಇಸ್ರೇಲ್-ಇರಾನ್ ಸಂಘರ್ಷದ ನಂತರ ಖಮೇನಿ ಆಡಳಿತಕ್ಕೆ ದೊಡ್ಡ ಸವಾಲು ಎದುರಾಗಿದೆ. ಸ್ಥಿತಿ ಬಹಳ ತ್ವರಿತವಾಗಿ ಬದಲಾಗುತ್ತಿದೆ, ದಮನ ತೀವ್ರವಾಗುತ್ತಿದ್ದರೂ ಪ್ರತಿಭಟನೆಗಳು ಮುಂದುವರೆಯುತ್ತಿವೆ ಎಂದು ವರದಿಗಳು ಹೇಳಿವೆ.

ಟ್ರಂಪ್ ಮಧ್ಯಪ್ರವೇಶ ಕೋರಿದ ಪಹ್ಲವಿ

ಹೊರಗಟ್ಟಲ್ಪಟ್ಟ ಇರಾನ್‌ನ ಮಾಜಿ ರಾಜಕುಮಾರ ರೆಝಾ ಪಹ್ಲವಿ (ಪಹ್ಲವಿ ವಂಶದ ಕೊನೆಯ ಶಾಹ್‌ನ ಮಗ) ಜನವರಿ 9, 2026ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸಾಮಾಜಿಕ ಜಾಲತಾಣ ಪೋಸ್ಟ್ ಮೂಲಕ ತುರ್ತು ಮನವಿಯೊಂದನ್ನು ಮಾಡಿದ್ದು, ಇರಾನ್‌ನ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಮತ್ತು ಪ್ರತಿಭಟನಾಕಾರರನ್ನು ಬೆಂಬಲಿಸುವಂತೆ ಕೋರಿದ್ದಾರೆ.

“ಮಿಸ್ಟರ್ ಪ್ರೆಸಿಡೆಂಟ್, ಇದು ನಿಮ್ಮ ಗಮನ, ಬೆಂಬಲ ಮತ್ತು ಕ್ರಮಕ್ಕಾಗಿ ತುರ್ತು ಮತ್ತು ತಕ್ಷಣದ ಕೋರಿಕೆಯಾಗಿದೆ. ಪ್ರತಿಭಟನಕಾರರು ರಸ್ತೆಗಳಲ್ಲಿ ಲೈವ್ ಬುಲೆಟ್‌ಗಳನ್ನು ಎದುರಿಸುತ್ತಿದ್ದಾರೆ. ಈಗ ದೇಶವ್ಯಾಪಿ ಇಂಟರ್ನೆಟ್ ಮತ್ತು ಫೋನ್ ಸೇವೆಗಳ ನಿರ್ಬಂಧದಿಂದ ಸಂಪರ್ಕ ಕಡಿತಗೊಂಡಿದೆ. ಸುಪ್ರೀಂ ಲೀಡರ್ ಅಲಿ ಖಮೇನಿ ಇಂಟರ್‌ನೆಟ್‌, ಫೋನ್‌ ಸೇವೆಗಳನ್ನು ನಿರ್ಬಂಧಿಸಿ ‘ಯುವ ನಾಯಕರನ್ನು ಕೊಲ್ಲಲು’ ಯೋಜಿಸುತ್ತಿದ್ದಾರೆ” ಎಂದು ಪಹ್ಲವಿ ಟ್ರಂಪ್‌ ಅನ್ನು ಉದ್ದೇಶಿಸಿ ಮಾಡಿದ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.

“ಟ್ರಂಪ್ ಶಾಂತಿ ಬಯಸುವ ಮತ್ತು ಮಾತಿನ ಮೇಲೆ ನಿಲ್ಲುವ ಮನುಷ್ಯ” ಎಂದು ಕೊಂಡಾಡಿರುವ ಪಹ್ಲವಿ, ಇರಾನ್ ಜನರಿಗೆ ಸಹಾಯ ಮಾಡಲು ಸಿದ್ಧರಾಗಿರಿ ಎಂದು ಕೋರಿದ್ದಾರೆ.

ಖಮೇನಿ ಹೇಳಿದ್ದೇನು?

ಜನವರಿ 9, 2026ರಂದು ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿ ಪ್ರತಿಭಟನೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ರತಿಭಟನಕಾರರನ್ನು “ವಾಂಡಲ್ಸ್” (ವಿನಾಶಕಾರಿ), “ಸಬೋಟರ್ಸ್” (ವಿನಾಶಕಾರಿ ಏಜೆಂಟ್‌ಗಳು) ಮತ್ತು ವಿದೇಶಿ ಶಕ್ತಿಗಳ (ವಿಶೇಷವಾಗಿ ಅಮೆರಿಕ) ಬೆಂಬಲಿಗರು ಎಂದು ಕರೆದಿದ್ದಾರೆ.

“ಅಮೆರಿಕಾ ಅಧ್ಯಕ್ಷನನ್ನು ಸಂತೋಷಪಡಿಸಲು ಪ್ರತಿಭಟನಾಕಾರರು ತಮ್ಮ ರಸ್ತೆಗಳನ್ನು ಹಾಳುಗೆಡವುತ್ತಿದ್ದಾರೆ. ಟ್ರಂಪ್ ಕೈಗಳಲ್ಲಿ ಇರಾನ್ ಜನರ ರಕ್ತ ಮೆತ್ತಿಕೊಂಡಿವೆ. ಅವರು ತಮ್ಮ ದೇಶದ ಸಮಸ್ಯೆಗಳತ್ತ ಗಮನ ಹರಿಸಬೇಕು” ಎಂದು ಹೇಳಿದ್ದಾರೆ.

ಆಡಳಿತ “ಹಿಂದಕ್ಕೆ ಸರಿಯುವುದಿಲ್ಲ” ಎಂದು ದೃಢವಾಗಿ ಹೇಳಿ, ಹೆಚ್ಚಿನ ದಮನದ ಸಂಕೇತ ನೀಡಿದೆ.
ಪ್ರತಿಭಟನೆಗಳನ್ನು “ಟೆರರಿಸ್ಟ್ ಆಕ್ಷನ್‌” ಎಂದು ಕರೆದು, ಏಕತೆಗೆ ಕರೆ ಕೊಟ್ಟಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...