Homeಅಂತರಾಷ್ಟ್ರೀಯಅನ್ನ ಹಳಸಿತ್ತು, ನಾಯಿ ಹಸಿದಿತ್ತು. ಹಸಿದ ಮೋದಿಗೆ ಜನ ಮತ ಹಾಕಿ ಗೆಲ್ಲಿಸಿದರು: ಎಚ್.ಎಸ್ ದೊರೆಸ್ವಾಮಿ

ಅನ್ನ ಹಳಸಿತ್ತು, ನಾಯಿ ಹಸಿದಿತ್ತು. ಹಸಿದ ಮೋದಿಗೆ ಜನ ಮತ ಹಾಕಿ ಗೆಲ್ಲಿಸಿದರು: ಎಚ್.ಎಸ್ ದೊರೆಸ್ವಾಮಿ

- Advertisement -
- Advertisement -

ಅಖಿಲ ಭಾರತದಲ್ಲಿ ಬಲಶಾಲಿಯಾಗಿದ್ದ ಏಕೈಕ ರಾಜಕೀಯ ಸಂಸ್ಥೆ ಕಾಂಗ್ರೆಸ್. ಹಳ್ಳಿಯವರೆಗೆ ವ್ಯಾಪಿಸಿದ್ದ ಸಂಸ್ಥೆ ಅದು ಪಂಡಿತ ಜವಾಹರಲಾಲ್ ನೆಹರೂ, ಲಾಲ್‍ಬಹದ್ದೂರ್ ಶಾಸ್ತ್ರಿ ಪ್ರಧಾನಿಗಳಾಗಿರುವವರೆಗೆ ಕಾಂಗ್ರೆಸ್ ಸಂಸ್ಥೆ ಉಚ್ಛ್ರಾಯಸ್ಥಿತಿಯಲ್ಲಿತ್ತು. ಬಿಹಾರದಲ್ಲಿ ಬಾಬು ರಾಜೇಂದ್ರಪ್ರಸಾದ್, ಬಾಬು ಜಗಜೀವನರಾಮ್, ಉತ್ತರ ಪ್ರದೇಶದಲ್ಲಿ ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಗೋವಿಂದ ವಲ್ಲಭಪಂತ್, ಜಿ.ಕೃಪಲಾನಿ, ಬಂಗಾಳದಲ್ಲಿ ಶರತ್‍ಚಂದ್ರ ಬೋಸ್, ಸುಭಾಷ್‍ಚಂದ್ರ ಬೋಸ್, ಮೌಲಾನ ಅಬ್ದುಲ್‍ಕಲಾಂ ಆಜಾದ್, ಡಾ.ಬಿಪಿನ್‍ಚಂದ್ರ ರಾಯ್, ಗುಜರಾತಿನಲ್ಲಿ ವಿಠ್ಠಲಭಾಯ್ ಪಟೇಲ್, ಸರ್ದಾರ್ ವಲ್ಲಭಭಾಯಿ ಪಟೇಲ್, ಮಹಾತ್ಮ ಗಾಂಧಿ, ಮಹಾರಾಷ್ಟ್ರದಲ್ಲಿ ಬಿಪಿನ್‍ಖೇರ್, ಶಂಕರರಾವ್ ದೇವ್, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್, ಆಂಧ್ರದಲ್ಲಿ ಟಿ.ಪ್ರಕಾಶಂ, ಡಾ.ಪಟ್ಟಾಭಿಸೀತಾರಾಮಯ್ಯ, ಬುಲುಸು ಸಾಂಬಮೂರ್ತಿ, ಕೇರಳದಲ್ಲಿ ಪಟ್ಟಂತಾಸು ಪಿಳ್ಳೈ, ಇಕ್ಕಂಡಿ ವಾರಿಯರ್, ತಮಿಳುನಾಡಿನಲ್ಲಿ ಸಿ.ರಾಜಗೋಪಾಲಾಚಾರಿ, ಸಂತಾನಂ, ಕಾಮರಾಜನಾಡಾರ್, ಕರ್ನಾಟಕದಲ್ಲಿ ದಿವಾಕರ ರಂಗರಾಯರು, ಗಂಗಾಧರ ರಾವ್ ದೇಶಪಾಂಡೆ, ಮುದುವೀಡು ಕೃಷ್ಣರಾಯರು- ಹೀಗೆ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ನಾಯಕರು ಇದ್ದರು. ಸಂಘಟನಾ ಚಾತುರ್ಯದಿಂದ ಜನರ ನೆಚ್ಚಿನ ನಾಯಕರಾಗಿದ್ದರು. ಇವರು ಕರೆ ಕೊಟ್ಟರೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ, ಜನಪರ ಚಳವಳಿಗೆ ಧುಮುಕುತ್ತಿದ್ದರು.

ಇಂದಿರಾಗಾಂಧಿ ಪ್ರಧಾನಿಯಾದ ಮೇಲೆ ಕಾಂಗ್ರೆಸ್ ಇಬ್ಭಾಗವಾಯಿತು. ಮೊದಲಿನ ರಾಷ್ಟ್ರೀಯ ಕಾಂಗ್ರೆಸ್ ಕಾಣೆಯಾಯಿತು. ಭ್ರಷ್ಟಾಚಾರಕ್ಕೆ ಎತ್ತಿದ ಕೈಯಾಗಿದ್ದ ಇಂದಿರಾ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂತು. ಅಂದಿನಿಂದ ಕಾಂಗ್ರೆಸ್ಸಿನ ಅವನತಿ ಆರಂಭವಾಯಿತು. ಕಮ್ಯುನಿಸ್ಟ್ ಪಕ್ಷ ಇಬ್ಭಾಗವಾಗಿ ಬಂಗಾಳದಲ್ಲಿ, ತ್ರಿಪುರಾದಲ್ಲಿ ಮತ್ತು ಕೇರಳದಲ್ಲಿ ಸಿಪಿಎಂ ಪಕ್ಷ ಅಧಿಕಾರಕ್ಕೂ ಬಂದಿತು. ಕಾಲಕ್ರಮೇಣ, ಬಂಗಾಳದಲ್ಲಿ ಸಿಪಿಐ ಪಕ್ಷ ಅಧಿಕಾರ ಕಳೆದುಕೊಂಡು ಮತ್ತೆ ಕಾಂಗ್ರೆಸ್ ಆಡಳಿತಕ್ಕೆ ಬಂದಿತು. ಕೇರಳದಲ್ಲಿ ಸಿಪಿಎಂ ಪಕ್ಷ ಇನ್ನೂ ಅಧಿಕಾರದಲ್ಲಿದೆ. ಕೇರಳದಲ್ಲಿ ಒಂದು ಅವಧಿಗೆ ಕಾಂಗ್ರೆಸ್, ಇನ್ನೊಂದು ಅವಧಿಗೆ ಸಿಪಿಎಂ ಅಧಿಕಾರ ಹಿಡಿಯುತ್ತಿವೆ.

ಮನಮೋಹನಸಿಂಗರು ಕಾಂಗ್ರೆಸ್ ಪಕ್ಷದ ಪ್ರಧಾನಿಯಾಗಿ ಆಯ್ಕೆಯಾದ ಮೇಲೆ ಕಾಂಗ್ರೆಸ್ಸಿನ ಅವನತಿ ಮತ್ತಷ್ಟು ಬಿರುಸಾಗಿ ಆಯಿತು. ಸ್ವತಃ ಕಳಂಕರಹಿತರಾದ ಮನಮೋಹನಸಿಂಗರ ಆಳ್ವಿಕೆಯಲ್ಲಿ, ಮಂತ್ರಿಮಂಡಲದ ಕೆಲ ಸದಸ್ಯರು ಕೋಟಿ ಕೋಟಿ ರೂ.ಗಳ ಭ್ರಷ್ಟಾಚಾರ ನಡೆಸಿದರೂ ಅದನ್ನು ತಡೆಹಿಡಿಯದೇ ಹೋದರು ಪ್ರಧಾನಿ ಮನಮೋಹನಸಿಂಗರು.

ಮತದಾರರು ಕ್ರುದ್ಧರಾದರು. ಚುನಾವಣೆಯಿಂದ ಚುನಾವಣೆಗೆ ಕಾಂಗ್ರೆಸ್ಸನ್ನು ಪರಾಭವಗೊಳಿಸುವ ಪ್ರಕ್ರಿಯೆ ಆರಂಭವಾಯಿತು. ಮೋದಿಯ ಅದೃಷ್ಟ ಖುಲಾಯಿಸಿತು. ಅನ್ನ ಹಳಸಿತ್ತು, ನಾಯಿ ಹಸಿದಿತ್ತು. ಹಸಿದ ಮೋದಿಗೆ ಜನ ಮತ ಹಾಕಿ ಗೆಲ್ಲಿಸಿದರು. ಇಂದು ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷ ಬ್ರೂಟ್ ಮೆಜಾರಿಟಿ ಪಡೆದಿದೆ. ಮೋದಿಗೆ ಚತುರ್ಭುಜ ಬಂದಂತಾಗಿದೆ.

ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷ ಗದ್ದುಗೆ ಏರಿದರು. ಮೋದಿ ಜವಾಹರಲಾಲ್ ನೆಹರೂ ಮನೆತನದ ಬಗ್ಗೆ ಅಪಮಾನಕರ ಹೇಳಿಕೆಗಳನ್ನು ಕೊಡಲು ಆರಂಭ ಮಾಡಿದರು. ಕಾಂಗ್ರೆಸ್ಸನ್ನು ನಾಶಗೊಳಿಸುವುದಾಗಿ ನೆಹರೂ ಸಂತಾನವನ್ನು ಹೇಳಹೆಸರಿಲ್ಲದಂತೆ ಮಾಡುವುದಾಗಿ ಹೇಳಿ ಪುಂಖಾನುಪುಂಖವಾಗಿ ಅಪಪ್ರಚಾರ ಮಾಡಲು ಸನ್ನದ್ಧರಾದರು.

ಎಲ್ಲಾ ಪಕ್ಷಗಳಲ್ಲಿದ್ದಂತೆ ಕ್ರಿಮಿನಲ್‍ಗಳು, ಸ್ವಾರ್ಥಿಗಳು, ಕಾರ್ಪೊರೇಟ್‍ಗಳ ಏಜೆಂಟರು, ಕೋಟ್ಯಾಧಿಪತಿಗಳು ಬಿಜೆಪಿ ಮತ್ತು ಕಾಂಗ್ರೆಸ್ ಸಂಸ್ಥೆಗಳಲ್ಲಿ ನುಸುಳಿದರು. ಇವರಿಗೆಲ್ಲ ದೇಶದ ಹಿತಕ್ಕಿಂತ ತಮ್ಮ ಅಭ್ಯುದಯವನ್ನು ಸಾಧಿಸುವ ದುರುದ್ದೇಶ ಇದೆಯಾಗಿ, ಈ ಕಳಂಕಿತರಿಂದ ಪಕ್ಷ ಕಟ್ಟುವ ಕೆಲಸ ಹಿಂಬಡ್ತಿ ಪಡೆಯಿತು. ನಾಯಕತ್ವ ಅಭಾವದಿಂದ ಕಾಂಗ್ರೆಸ್ ನೆಲ ಕಚ್ಚಿತು.

ಮನೆತನದ ರಾಜಕೀಯದ ಮೇಲೆ ಪ್ರಹಾರ ಮಾಡಿ ಮೋದಿ ತನ್ನ ಇಚ್ಛೆಯನ್ನು ಪೂರೈಸಿಕೊಂಡಿದ್ದನ್ನು ಮನಗಂಡ ರಾಹುಲ್ ಗಾಂಧಿ ನೆಹರೂ ಮನೆತನದವರ ಕೈಲಿದ್ದ ಅಧ್ಯಕ್ಷ ಪದವಿಯನ್ನು ಬೇರೆಯವರಿಗೆ ಹಸ್ತಾಂತರಿಸಲು ನಿರ್ಧರಿಸಿದರು. ಕಾಂಗ್ರೆಸ್ಸಿನಲ್ಲಿ ನಾಯಕತ್ವ ವಹಿಸಿ, ಮೋದಿಯವರ ಸರ್ವಾಧಿಕಾರವನ್ನು ಕಿತ್ತೆಸೆಯುವ ಮಹಾನುಭಾವರು ಯಾರು ಎಂದು ತಲಾಷೆ ಮಾಡಲಾಯಿತು. ಬೂದುಗನ್ನಡಿ ಹಾಕಿಕೊಂಡು ಭಾರತದಲ್ಲೆಲ್ಲ ಹುಡುಕಿದರೂ ಅಂತಹ ಒಬ್ಬ ಭೂಪ ದೊರೆಯದಷ್ಟು ಬಲಹೀನವಾಗಿದೆ ಕಾಂಗ್ರೆಸ್.

ಹಳೆ ಗಂಡನ ಪಾದವೇ ಸರಿ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸೋನಿಯಾ ಗಾಂಧಿಯವರನ್ನೇ ಮತ್ತೆ ಅಧ್ಯಕ್ಷರನ್ನಾಗಿ ಚುನಾಯಿಸಿದೆ. ಸೋನಿಯಾಗಾಂಧಿಯನ್ನು ಸುತ್ತುವರಿದು, ಕೆಲ ವಂದಿಮಾಗಧರಿದ್ದಾರೆ. ಅವರ ಹಿಡಿತದಿಂದ ತಪ್ಪಿಸಿಕೊಳ್ಳಲು ಸೋನಿಯಾಗಾಂಧಿಗೆ ಸಾಧ್ಯವೇ ಇಲ್ಲ. ಅಲ್ಲದೆ ಸೋನಿಯಾಗಾಂಧಿಗೆ ನಾಯಕತ್ವದ ಗುಣಗಳಿಲ್ಲ. ದೇಶವನ್ನು ಸುತ್ತಾಡಿ ಜನರನ್ನು ಸಂಘಟಿಸುವ ಶಕ್ತಿ ಅವರಿಗಿಲ್ಲ.
ದುರ್ಬಲಗೊಂಡಿರುವ ಕಾಂಗ್ರೆಸ್ ಮೊದಲ್ಗೊಂಡು ಭಾರತದಲ್ಲಿ ಎಲ್ಲ ಪಕ್ಷಗಳೂ ಸೊರಗಿನಿಂತಿವೆ. ಹೀಗಾಗಿ ಮೋದಿಯವರ ಏಕಚಕ್ರಾಧಿಪತ್ಯ ಅಡೆತಡೆಯಿಲ್ಲದೆ ನಡೆಯಲು ಸನ್ನಿವೇಶ ಅನುಕೂಲಕರವಾಗಿದೆ.

ರಾಜಕೀಯ ಪಕ್ಷಗಳೆಲ್ಲ ನಾಯಕರ ಅಭಾವದಿಂದ ಸೊರಗಿರುವಾಗ ಮೋದಿಯವರು ಪ್ರಜಾಪ್ರಭುತ್ವವನ್ನು ಉಳಿಸುವರೋ ಇಲ್ಲವೇ ಸರ್ವಾಧಿಕಾರಿ ನೀತಿಯನ್ನು ಅನುಸರಿಸುವರೋ ಎಂಬ ಆತಂಕ ಉಂಟಾಗಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಅದರಲ್ಲೂ ಅಖಿಲ ಭಾರತ ವ್ಯಾಪ್ತಿಯ ಕಾಂಗ್ರೆಸ್ ಸಂಸ್ಥೆ ನಾಯಕತ್ವದ ಕೊರತೆಯಿಂದಾಗಿ ತತ್ತರಿಸುತ್ತಿರುವಾಗ ಪ್ರಜಾಸತ್ತೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ಜನತೆ ವಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಪ್ರಜಾಪ್ರಭುತ್ವ ಮತ್ತು ರಾಜ್ಯಾಂಗವನ್ನು ರಕ್ಷಿಸುವ ಸಲುವಾಗಿ ಪ್ರಜೆಗಳು ಸಂಘಟಿತರಾಗಬೇಕಿದೆ. ದುರ್ಬಲ ರಾಜಕೀಯ ಪಕ್ಷಗಳು ಸೋತು ಸುಣ್ಣವಾಗಿರುವಾಗ ಪ್ರತಿಯೊಬ್ಬ ಪ್ರಜೆಯೂ ಪ್ರಜಾಪ್ರಭುತ್ವ ಉಳಿಸುವುದಕ್ಕೆ ನನ್ನ ಕಾಣಿಕೆ ಏನು ಎಂದು ವಿಚಾರ ಮಾಡಬೇಕಿದೆ.

ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಒಂದೊಂದೇ ರಾಷ್ಟ್ರವನ್ನು ಯುದ್ಧದಲ್ಲಿ ಸೋಲಿಸುತ್ತಾ, ಪರ್ಲ್ ಹಾರ್ಬರ್ ವಶಪಡಿಸಿಕೊಳ್ಳುತ್ತಾನೆ. ಮದ್ರಾಸ್ ಕಡೆಗೆ ಅವನ ಸೈನ್ಯ ಹೊರಟಿದೆ ಎಂಬ ಸುದ್ದಿ ಗಾಂಧೀಜಿಗೆ ತಿಳಿಯುತ್ತದೆ. ಒಂದುವೇಳೆ ಭಾರತವನ್ನು ವಶಪಡಿಸಿಕೊಳ್ಳಲು ಹಿಟ್ಲರ್ ಬರುವುದಾದರೆ ಭಾರತೀಯ ಪ್ರಜೆಯಾಗಿ ನನ್ನ ಕರ್ತವ್ಯವೇನು ಎಂದು ಚಿಂತಿಸುತ್ತಾರೆ. ‘ಹಿಟ್ಲರ್‍ನ ಸೈನ್ಯವನ್ನು ನಾನು ಒಬ್ಬನೇ ಆದರೂ ಪ್ರತಿಭಟಿಸಬೇಕು’ ಎಂದು ತೀರ್ಮಾನಿಸುತ್ತಾರೆ.

‘ನನ್ನ ಹೆಣದ ಮೇಲೆ ಹಿಟ್ಲರ್ ತನ್ನ ಬಾವುಟ ಹಾರಿಸಬೇಕು’ ಎಂದು ನಿರ್ಧಾರ ಕೈಗೊಂಡು ಆಶ್ರಮವಾಸಿಗಳಲ್ಲಿ ಕುರಿತು ಚರ್ಚಿಸುತ್ತಾರೆ. ಆಶ್ರಮವಾಸಿಗಳೆಲ್ಲರೂ ಗಾಂಧಿಯವರೊಡನೆ ಕೈಜೋಡಿಸಲು ನಿರ್ಧರಿಸುತ್ತಾರೆ. ಗಾಂಧೀಜಿ ಹೇಳುತ್ತಾರೆ ‘ನಾವು 58 ಜನ ಈ ತೀರ್ಮಾನ ತೆಗೆದುಕೊಳ್ಳುವುದಾದರೆ, ಕಾಂಗ್ರೆಸ್ಸಿನ ಹತ್ತು ಸಾವಿರ ಮಂದಿ ಹಿಟ್ಲರ್‍ನನ್ನು ಎದುರಿಸಲು ನಿಲ್ಲುತ್ತಾರೆ. ಭಾರತದ ಒಂದು ಲಕ್ಷ ಜನ ಈ ಬಗೆಯ ಬಲಿದಾನಕ್ಕೆ ತಯಾರಾಗುತ್ತಾರೆ!’.

ಮೋದಿ ಸರ್ಕಾರ ಸರ್ವಾಧಿಕಾರಿ ಮನೋವೃತ್ತಿ ಬೆಳೆಸಿಕೊಂಡರೆ, ಗಾಂಧೀಜಿ ಹೇಳಿದಂತೆ ಪ್ರಜಾಪ್ರಭುತ್ವದ ಉಳಿವಿಗಾಗಿ ಭಾರತದ ಜನತೆ ಸರ್ವಾಧಿಕಾರದ ವಿರುದ್ಧ ಹೋರಾಡಲು ಸಿದ್ಧರಾಗಬೇಕು.

Swaraj is Abandonment of fear of Death. A nation which allows itself to be influenced by the fear of death cannot attain Swaraj and cannot retain it even if somehow attained.

– Gandiji in ‘Young – India’

13-10-1921

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...