Homeಎಕಾನಮಿಬಡತನ ನಿವಾರಣೆ: ವಾಸ್ತವಿಕ ಒಳನೋಟಗಳಿಗೆ ಸಂದ ನೊಬೆಲ್ - ಡಿ ಉಮಾಪತಿ

ಬಡತನ ನಿವಾರಣೆ: ವಾಸ್ತವಿಕ ಒಳನೋಟಗಳಿಗೆ ಸಂದ ನೊಬೆಲ್ – ಡಿ ಉಮಾಪತಿ

- Advertisement -
- Advertisement -

ಇಂದಿರಾಗಾಂಧೀ ಸರ್ಕಾರದ ನೀತಿ ನಿರ್ಧಾರಗಳ ವಿರುದ್ಧ ಟೀಕೆಗಳು ಪ್ರತಿಭಟನೆಗಳು ಜೆ.ಎನ್.ಯು.ವಿನಲ್ಲಿ ಅಂದು ಸರ್ವೇಸಾಧಾರಣವಾಗಿದ್ದವು. ಬ್ಯಾನರ್ಜಿ ಇವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ 1980ರಿಂದ 2016ರ ತನಕ ಪ್ರತಿಕೂಲಗಳ ನಡುವೆಯೂ ಎಲ್ಲ ಬಗೆಯ ಅಭಿವ್ಯಕ್ತಿಗಳನ್ನೂ ಆಲಿಸಿ ಅವುಗಳಿಗೆ ಅನುವು ಮಾಡಿಕೊಟ್ಟಿತ್ತು.

ತಾನು ಅಧಿಕಾರಕ್ಕೆ ಬಂದರೆ ದೇಶದ ಐದು ಕೋಟಿ ಅತಿ ಬಡ ಕುಟುಂಬಗಳಿಗೆ ವರ್ಷಕ್ಕೆ ತಲಾ 72 ಸಾವಿರ ರುಪಾಯಿಗಳಷ್ಟು ಕನಿಷ್ಠ ಆದಾಯವನ್ನು ವಿತರಿಸುವುದಾಗಿ ಕಾಂಗ್ರೆಸ್ ಪಕ್ಷ ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ಘೋಷಿಸಿತ್ತು.

`ನ್ಯಾಯ್’ ಎಂದು ಕರೆಯಲಾಗಿದ್ದ ಈ ಕನಿಷ್ಠ ಆದಾಯ ಯೋಜನೆಯ ಒಟ್ಟು ವೆಚ್ಚವನ್ನು 3.6 ಲಕ್ಷ ಕೋಟಿ ರುಪಾಯಿ ಎಂದು ಅಂದಾಜು ಮಾಡಲಾಗಿತ್ತು. ಅತಿ ಬಡ ಕುಟುಂಬಗಳ 25 ಕೋಟಿ ಮಂದಿಯನ್ನು ಈ ಯೋಜನೆಯ ಫಲಾನುಭವಿಗಳು ಎಂದು ಆ ಪಕ್ಷ ಹೇಳಿತ್ತು. ಚುನಾವಣೆಗಳ ಹೊಸ್ತಿಲಿನಲ್ಲಿ ರಾಜಕೀಯ ಪಕ್ಷಗಳು ಅಲ್ಲಿಯ ತನಕ ಇಂತಹ ಮಹತ್ವಾಕಾಂಕ್ಷೆಯ ಅತಿ ದೊಡ್ಡ ಯೋಜನೆಯ ಭರವಸೆ ನೀಡಿರಲಿಲ್ಲ.

ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನದ ಮೇಲೆ ನಡೆಸಿದ ‘ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್’, ದೇಶದ ಜನಮಾನಸವನ್ನು ಆವರಿಸಿದ ಹೊತ್ತಿನಲ್ಲಿ ಕಾಂಗ್ರೆಸ್ ಈ ಆಶ್ವಾಸನೆಯನ್ನು ಅನಾವರಣಗೊಳಿಸಿತ್ತು. ಬಡತನದ ಮೇಲೆ ತಮ್ಮ ಪಕ್ಷ ಸಾರಿದ ಅತಿ ದೊಡ್ಡ ‘ಸರ್ಜಿಕಲ್ ಸ್ಟ್ರೈಕ್’ ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದರು.

ಪುಲ್ವಾಮಾ- ಬಾಲಾಕೋಟ್ ದಾಳಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಚುನಾವಣೆ ಪ್ರಚಾರಕ್ಕೆ ಮಂಕು ಕವಿಸಿತ್ತು.

ಪಾಕಿಸ್ತಾನವೆಂಬ ವೈರಿಯ ಮನೆಗೆ ನುಗ್ಗಿ ಬಾಂಬ್ ಕೆಡವಿ ಪಾಠ ಕಲಿಸಿದೆವು ಎಂಬುದಾಗಿ ಆಕ್ರಮಣಕಾರಿ ಹಿಂದೂ ರಾಷ್ಟ್ರವಾದ ಮತ್ತು ಹುಸಿ ‘ದೇಶಭಕ್ತಿ’ಯ ಸುತ್ತ ‘ಮೋಶಾ’ ಸರ್ಕಾರ ಬಲಿಷ್ಠ ಕಥನ ಕಟ್ಟಿತ್ತು. ಆದರೆ ಈ ಬಲಿಷ್ಠ ಭಾವೋದ್ದೀಪಕ ಕಥನವನ್ನು ದೇಶದ ಬಹುಪಾಲು ಜನರ ನಿತ್ಯ ಬದುಕನ್ನು ಕಾಡಿರುವ ನಿಜ ಸಮಸ್ಯೆಗಳ ವಾಸ್ತವದತ್ತ ವಾಪಸು ಕರೆ ತರುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿತ್ತು.

ಕಾಂಗ್ರೆಸ್ ಪಕ್ಷದ ಈ ಯೋಜನೆ ಅಭಿವೃದ್ಧಿಯನ್ನೇನೋ ಚಿಗುರಿಸಬಲ್ಲದು. ಆದರೆ ಸದ್ಯದ ಆರ್ಥಿಕ ದುಸ್ಥಿತಿಯು ಈ ಯೋಜನೆಯ ಜಾರಿಗೆ ಪೂರಕ ಅಲ್ಲ ಎಂಬುದಾಗಿ ಭಾರತೀಯ ರಿಸರ್ವ್ ಬ್ಯಾಂಕ್‍ನ ನಿವೃತ್ತ ಗೌರ್ನರ್ ರಘುರಾಮ್ ರಾಜನ್ ವಿಮರ್ಶಿಸಿದ್ದರು. ಅಭಿವೃದ್ಧಿ- ಉದ್ಯೋಗಾವಕಾಶಗಳ ಸೃಷ್ಟಿಯೊಂದೇ ಬಡತನ ನಿವಾರಣೆಯ ನೇರ ದಾರಿ. ನೇರನಗದು ನೀಡಿಕೆ ದಿವ್ಯ ಔಷಧ ಅಲ್ಲ ಎಂಬ ಪ್ರತಿಕ್ರಿಯೆಗಳು ಕಾಂಗ್ರೆಸ್ ಯೋಜನೆ ಕುರಿತು ಕೇಳಿ ಬಂದಿದ್ದವು. ಚುನಾವಣೆಗಳಲ್ಲಿ ಮೋದಿ ಇನ್ನಷ್ಟು ಘನವಾಗಿ ಗೆದ್ದರು. ಕಾಂಗ್ರೆಸ್ ಮತ್ತಷ್ಟು ಶೋಚನೀಯವಾಗಿ ಸೋತಿತು.

ಆದರೆ ಈ ಯೋಜನೆಯ ಹಿಂದಿದ್ದ ಆಲೋಚನೆ ಅಭಿಜಿತ್ ಬ್ಯಾನರ್ಜಿ ಅವರದಾಗಿತ್ತು. ಬ್ಯಾನರ್ಜಿ ಮತ್ತು ಎಸ್ತರ್ ಡಫ್ಲೋ ಹಾಗೂ ಮೈಕೇಲ್ ಕ್ರೆಮರ್‍ರಿಗೆ 2019ರ ಅರ್ಥಶಾಸ್ತ್ರ ನೊಬೆಲ್ ಪಾರಿತೋಷಕ ಸಂದಿದೆ. ಈ ಪಾರಿತೋಷಕದ ನಗದು ಬಹುಮಾನದ ಮೊತ್ತ ಆರೂವರೆ ಕೋಟಿ ರುಪಾಯಿ. 46 ವರ್ಷ ವಯಸ್ಸಿನ ಡಫ್ಲೋ ಅವರು ಬ್ಯಾನರ್ಜಿ ಅವರ ಪತ್ನಿ ಕೂಡ. ಈವರೆಗೆ ಅರ್ಥಶಾಸ್ತ್ರ ನೊಬೆಲ್ ಪಡೆದವರ ಪೈಕಿ ಅತಿ ಕಿರಿಯ ವಯಸ್ಸಿನ ಮಹಿಳೆ. ಬಡತನ ನಿವಾರಣೆಯ ದಿಕ್ಕಿನಲ್ಲಿ ಈ ಮೂರು ಮಂದಿ ಭಾರತವೂ ಸೇರಿದಂತೆ 81 ದೇಶಗಳಲ್ಲಿ ನಡೆಸಿದ ವಿಸ್ತೃತ ಕ್ಷೇತ್ರ ಪ್ರಯೋಗಗಳ ಸಂಶೋಧನೆಗೆ ದೊರೆತಿರುವ ಮಾನ್ಯತೆಯಿದು.

ಯೋಜನೆ ಮತ್ತು ಅದರ ಅನುಷ್ಠಾನಗಳ ನಡುವೆ ಬಹಳಷ್ಟು ಕಳೆದು ಹೋಗುವ ಇಲ್ಲವೇ ಸೋರಿ ಹೋಗುವ ಸಂಕೀರ್ಣ ಅನುಭವ ಭಾರತದ ಸನ್ನಿವೇಶದ್ದು. ಹೀಗಾಗಿ ನೀತಿ ನಿರ್ಧಾರಗಳ ವಿನ್ಯಾಸ ಬಹು ಮಹತ್ವದ್ದು. ಯಶಸ್ಸು ಮತ್ತು ವೈಫಲ್ಯಗಳ ನಡುವಿನ ಅಂತರವನ್ನು ನಿರ್ಧರಿಸುವಂತಹುದು. ಜಗತ್ತಿನಲ್ಲಿ ಹೆಚ್ಚುತ್ತಲೇ ನಡೆದಿರುವ ಆದಾಯ ತಾರತಮ್ಯಗಳ ಹಿಂದಿನ ಕಾರಣಗಳ ಮೇಲೆ ಬೆಳಕು ಚೆಲ್ಲಿರುವ ಸಂಶೋಧನೆಯಿದು. ಶಿಕ್ಷಣ, ಆರೋಗ್ಯ ಹಾಗೂ ಇತರೆ ಯೋಜನೆಗಳಿಗೆ ಬಡವರ ಪ್ರತಿಕ್ರಿಯೆಗಳ ವಾಸ್ತವಿಕ ಒಳನೋಟಗಳನ್ನು ಕಟ್ಟಿ ಕೊಟ್ಟಿದೆ. ಜಗತ್ತಿನಾದ್ಯಂತ 70 ಕೋಟಿ ಜನ ಕಿತ್ತು ತಿನ್ನುವ ಬಡತನದಲ್ಲಿ ಉಸಿರಾಡಿದ್ದಾರೆ. ಇವರ ಉದ್ಧಾರದ ಹೆಸರಿನಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ಸುರಿಯುವ ಸರ್ಕಾರಗಳು, ಹೀಗೆ ಸುರಿದ ಹಣ ಗುರಿ ಮುಟ್ಟಿಸಿತೇ ಎಂದು ತಲೆ ಕೆಡಿಸಿಕೊಳ್ಳುತ್ತಿಲ್ಲ.

ಈ ವಿದ್ವಾಂಸರ ಸಂಶೋಧನೆಯು ಜಾಗತಿಕ ಬಡತನವನ್ನು ತೊಲಗಿಸುವ ನಮ್ಮ ಸಾಮಥ್ರ್ಯವನ್ನು ಗಣನೀಯವಾಗಿ ಸುಧಾರಿಸಿದೆ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರವನ್ನು ರೂಪಾಂತರಗೊಳಿಸಿದೆ ಎಂದು ನೊಬೆಲ್ ಪಾರಿತೋಷಕದ ಗುಣಕಥನವು ಬ್ಯಾನರ್ಜಿ-ಎಸ್ತರ್-ಕ್ರೇಮರ್ ಅವರ ಸಾಧನೆಯನ್ನು ಕೊಂಡಾಡಿದೆ. ನವ ಉದಾರವಾದಿ ಅರ್ಥನೀತಿಯು ಜಗತ್ತಿನಾದ್ಯಂತ ಬಡ ಜನಸಮುದಾಯಗಳ ಮೇಲೆ ಇತ್ತೀಚಿನ ದಶಕಗಳಲ್ಲಿ ನಡೆಸಿರುವ ಪ್ರಹಾರ ಅಮಾನವೀಯ. ಬ್ಯಾನರ್ಜಿ ಸಂಗಾತಿಗಳ ಸಂಶೋಧನೆಯು ಈ ಕ್ರೌರ್ಯದ ಕುರಿತು ಪರೋಕ್ಷವಾಗಿಯಾದರೂ ಜಗದ ಕಣ್ಣು ತೆರೆಸಿದೆ.

ತಮ್ಮನ್ನು ಸೆಳೆದದ್ದು ಜೆ.ಎನ್.ಯು.ವಿನ ಬೌದ್ಧಿಕ ವಾತಾವರಣ ಎಂದು ಬ್ಯಾನರ್ಜಿ ಹೇಳಿಕೊಂಡಿದ್ದಾರೆ. ಎಂಭತ್ತರ ಆರಂಭದ ದಶಕಗಳಲ್ಲಿ ಜೆ.ಎನ್.ಯು.ವಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದ ಅಭಿಜಿತ್, ವಿದ್ಯಾರ್ಥಿ ಆಂದೋಲನದಲ್ಲಿ ಭಾಗವಹಿಸಿದ್ದರು. ದಸ್ತಗಿರಿಯಾಗಿ ಹತ್ತು ದಿನ ತಿಹಾರದ ಜೈಲಿನಲ್ಲಿ ಬಡವರ ಊಟದ ರುಚಿ ನೋಡಿದ್ದುಂಟು. ಮರಾಠೀ ತಾಯಿ ಮತ್ತು ಬಂಗಾಳಿ ತಂದೆಯ ಈ ಮಗ ಅರ್ಥಶಾಸ್ತ್ರಜ್ಞ ಆಗಿದ್ದು ಆಕಸ್ಮಿಕ. ಆತ ಅತ್ಯುತ್ತಮ ಬಾಣಸಿಗ. ಬಂಗಾಳೀ ಮತ್ತು ಮರಾಠೀ ಅಡುಗೆಯಲ್ಲಿ ನಿಪುಣ. ಮುಂದಿನ ವಾರ ತನ್ನ ಎರಡನೆಯ ಪುಸ್ತಕದ ಬಿಡುಗಡೆಗೆಂದು ಭಾರತಕ್ಕೆ ಬರಲಿದ್ದಾನೆ ಎಂದು ಸಂತಸ ಹಂಚಿಕೊಂಡಿದ್ದಾರೆ ತಾಯಿ ನಿರ್ಮಲಾ ಬ್ಯಾನರ್ಜಿ.

ಇಂದಿರಾಗಾಂಧೀ ಸರ್ಕಾರದ ನೀತಿ ನಿರ್ಧಾರಗಳ ವಿರುದ್ಧ ಟೀಕೆಗಳು ಪ್ರತಿಭಟನೆಗಳು ಜೆ.ಎನ್.ಯು.ವಿನಲ್ಲಿ ಅಂದು ಸರ್ವೇಸಾಧಾರಣವಾಗಿದ್ದವು. ಬ್ಯಾನರ್ಜಿ ಇವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ 1980ರಿಂದ 2016ರ ತನಕ ಪ್ರತಿಕೂಲಗಳ ನಡುವೆಯೂ ಎಲ್ಲ ಬಗೆಯ ಅಭಿವ್ಯಕ್ತಿಗಳನ್ನೂ ಆಲಿಸಿ ಅವುಗಳಿಗೆ ಅನುವು ಮಾಡಿಕೊಟ್ಟಿತ್ತು. ಜೆ.ಎನ್.ಯು. ಒದಗಿಸಿದ್ದ ಚಿಂತನೆ-ಅಭಿವ್ಯಕ್ತಿ-ಸಂಸ್ಕೃತಿಯ ಸ್ವಾತಂತ್ರ್ಯವು ಅಭಿಜಿತ್ ಬ್ಯಾನರ್ಜಿಯವರಂತಹ ಮೇಧಾವಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. 2016ಕ್ಕೆ ಮುನ್ನ ಇದ್ದ ಶೈಕ್ಷಣಿಕ ಸ್ವಾತಂತ್ರ್ಯ ಇಲ್ಲಿ ಮರೆಯಾಗಿದೆ. ಕೇಂದ್ರ ಸರ್ಕಾರವು ಕೊಡಲಿ ಹಿಡಿದು ಈ ವಿಶ್ವವಿದ್ಯಾಲಯದ ಹೆಸರಿಗೆ ಮಸಿ ಬಳಿದು ಅದರ ಬುಡ ಕಡಿಯತೊಡಗಿರುವ ಇಂದಿನ ದಿನಗಳಲ್ಲಿ ಮತ್ತೊಬ್ಬ ಅಭಿಜಿತ್ ಬ್ಯಾನರ್ಜಿ ಇಲ್ಲಿ ರೂಪುಗೊಳ್ಳುವುದು ಅಸಾಧ್ಯ ಎನ್ನುತ್ತಾರೆ ಪ್ರೊ.ಅನುರಾಧಾ ಚಿನಾಯ್.

ಭಾರೀ ಮೊತ್ತದ ಬಹುಮಾನದ ಹಣವನ್ನು ಏನು ಮಾಡಲಿದ್ದೀರಿ ಎಂಬ ಪ್ರಶ್ನೆಗೆ ಎಸ್ತರ್ ಡಫ್ಲೋ ಉತ್ತರ- 1903ರಲ್ಲಿ ಮೇರಿ ಕ್ಯೂರಿ ಭೌತಶಾಸ್ತ್ರಕ್ಕೆ ನೊಬೆಲ್ ಬಹುಮಾನ ಪಡೆದಾಗ ಅದೇ ಹಣದಿಂದ ತನ್ನ ಭವಿಷ್ಯದ ಸಂಶೋಧನೆಗೆ ಅಗತ್ಯವಿರುವ ಒಂದು ಗ್ರಾಂ ರೇಡಿಯಂ ಖರೀದಿಸಿದ್ದಳು. ನಮ್ಮ ಆ ‘ಒಂದು ಗ್ರಾಂ ರೇಡಿಯಂ’ ಏನು ಎಂದು ನಾವು ಮೂರೂ ಮಂದಿ ಚರ್ಚಿಸಿ ತೀರ್ಮಾನಿಸಲಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...