Homeಕರ್ನಾಟಕಸುಷ್ಮಾ ಸ್ವರಾಜ್‍ ರಿಗೊಂದು ಕಂಬನಿ... : ಜೊತೆಗೆ ಸುಷ್ಮಾ ಸ್ವರಾಜ್ ಸುತ್ತ ಹೆಣೆಯಲ್ಪಟ್ಟ ಕತೆಗಳು

ಸುಷ್ಮಾ ಸ್ವರಾಜ್‍ ರಿಗೊಂದು ಕಂಬನಿ… : ಜೊತೆಗೆ ಸುಷ್ಮಾ ಸ್ವರಾಜ್ ಸುತ್ತ ಹೆಣೆಯಲ್ಪಟ್ಟ ಕತೆಗಳು

- Advertisement -
- Advertisement -

ಆರು ಸಲ ಸಂಸದರಾಗಿ, ನಾಲ್ಕು ಸಲ ಶಾಸಕಿಯಾಗಿ, ಎರಡು ಸಲ ಸಚಿವೆಯಾಗಿ ಕೆಲಸ ಮಾಡಿದ ಸುಷ್ಮಾ ಸ್ವರಾಜ್ ತೀರಿಕೊಂಡಿದ್ದಾರೆ. ಭಾರತದ ಪುರುಷಕೇಂದ್ರಿತ ರಾಜಕಾರಣದಲ್ಲಿ ಇಷ್ಟು ಸುದೀರ್ಘ ಕಾಲ ಮಹಿಳೆಯೊಬ್ಬರು ರಾಜಕೀಯ ಮಾಡಿದ್ದು ಪ್ರಶಂಸಾರ್ಹ. ವಿದೇಶಾಂಗ ಸಚಿವೆ ಆಗಿದ್ದಾಗ ಹಲವು ಜನರ ಚಿಕಿತ್ಸೆಗೆ ಅವರು ನೆರವಾದರು, ಅಪ್ಪಟ ದೇಶಪ್ರೇಮಿಯಾಗಿದ್ದರು ಇತ್ಯಾದಿ ವಿವರಗಳನ್ನು ನಮ್ಮ ಮಾಧ್ಯಮಗಳು ಕೊಂಚ ಉತ್ಪ್ರೇಕ್ಷೆಯಿಂದಲೇ ವರದಿ ಮಾಡುತ್ತಿವೆ ಅನಿಸುತ್ತಿದೆ.

ಅದರಲ್ಲೂ ಕರ್ನಾಟಕದ ಜೊತೆಗಿನ ಅವರ ಸಂಬಂಧದ ಕುರಿತು ‘ಅದೊಂದು ಆದರ್ಶದ ರಾಜಕೀಯ’ ಎಂಬಂತೆ ಬಿಂಬಿಸಲಾಗುತ್ತಿದೆ. ಇಂತಹ ಆತ್ಮವಂಚನೆಯ ವರದಿ, ಹೊಗಳಿಕೆಗಳು ನಾಡಿನ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಬಾರದು ಎಂಬ ಕಾರಣಕ್ಕೆ ಇಲ್ಲಿ ಕೆಲವು ವಾಸ್ತವಗಳನ್ನು ನಿಮ್ಮ ಮುಂದೆ ಇಡಲೇಬೇಕಾಗಿದೆ.

ಅವರ ‘ಅಪ್ಪಟ ದೇಶಪ್ರೇಮ’ ಆರೆಸ್ಸೆಸ್ ಮಾದರಿಯದ್ದಾಗಿತ್ತೇ ಹೊರತು ಅದೆಂದೂ ವಿಶಾಲ ಭಾರತದ ಸರ್ವಜನರನ್ನೂ ಒಳಗೊಳ್ಳುವ ಭಾರತದ ಬಗೆಗಿನ ಪ್ರೇಮವಾಗಿರಲಿಲ್ಲ; ಅದು ಹಿಂದೂ ರಾಷ್ಟ್ರವೆಂಬ ಮತಾಂಧ ಪರಿಕಲ್ಪನೆಯ ಭಾಗವಾಗಿ ಅರಳಿದ ‘ದೇಶಪ್ರೇಮ’ವಾಗಿತ್ತಷ್ಟೇ. ಇನ್ನು ಇಷ್ಟು ಸುದೀರ್ಘ ಕಾಲ ಮಹಿಳೆಯೊಬ್ಬರು ರಾಜಕೀಯ ಮಾಡುವುದು ಕಷ್ಟಸಾಧ್ಯ. ಆದರೆ ಇತರೆಲ್ಲಾ ಪಕ್ಷಗಳ ಮಹಿಳಾ ರಾಜಕಾರಣಿಗಳಂತೆ ಮಹಿಳೆಯರ ಮೇಲೆ ತಮ್ಮ ಪಕ್ಷದವರಿಂದಲೇ ದೌರ್ಜನ್ಯ, ದಬ್ಬಾಳಿಕೆ ನಡೆದಾಗ ಅದರು ವಿರುದ್ಧ ಇವರು ದನಿಯೆತ್ತಿದ್ದು ಕಂಡುಬಂದಿಲ್ಲ.

2004ರಲ್ಲಿ ಯುಪಿಎಗೆ ಬಹುಮತ ಬಂದು ಸೋನಿಯಾ ಗಾಂಧಿಯವರಿಗೆ ಪ್ರಧಾನಿ ಹುದ್ದೆ ಸಿಗುವ ಸಾಧ್ಯತೆಯಿದ್ದಾಗ ಬಿಜೆಪಿ ಮತ್ತು ಸಂಘ ಪರಿವಾರದಿಂದ ತೀವ್ರ ವಿರೋಧ ವ್ಯಕ್ತವಾಗಿತು. ಆಗ ಸಂಘ ಪರಿವಾರ ಬಳಸಿಕೊಂಡಿದ್ದು ಹಣೆ ತುಂಬ ಕುಂಕುಮ ಇಡುವ ‘ಮಾದರಿ’ ಹಿಂದೂ ಮಹಿಳೆ ಸುಷ್ಮಾರನ್ನು. ‘ಸೋನಿಯಾ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಳ್ಳುವೆ, ಜೀವನಪರ್ಯಂತ ಬಿಳಿ ಸೀರೆ ಉಡುವೆ’ ಹೀಗೆಲ್ಲ ಅಸಹ್ಯ ಮಾತಾಡಿದ ಸುಷ್ಮಾರನ್ನು ಧೀಮಂತ ನಾಯಕಿ ಎಂದು ಹೇಗೆ ಕರೆಯುವುದು? ಸೋನಿಯಾರನ್ನು ತಡೆಯುವ ಭರದಲ್ಲಿ ಅವರು ತಮಗೆ ತಾವೇ ಅವಮಾನ ಮಾಡಿಕೊಡಿದ್ದರು.

ಕರ್ನಾಟಕದ ಜೊತೆಗೆ ಅವರಿಗೆ ತುಂಬ ಆತ್ಮೀಯ ಸಂಬಂಧ ಇತ್ತು, ಕರ್ನಾಟಕದ ಬಗ್ಗೆ ಅಪಾರ ಕಾಳಜಿ ಇತ್ತು ಎಂದೆಲ್ಲ ನಮ್ಮ ಮಾಧ್ಯಮಗಳು ಹೇಳಿವೆ, ಹೇಳುತ್ತಲೇ ಇವೆ. ಹೌದು ಅವರಿಗೆ ಬಳ್ಳಾರಿಯೊಂದಿಗೆ ಅವರಿಗೆ ‘ಆತ್ಮೀಯ’ ಒಡನಾಟವಿತ್ತೇ ವಿನಃ ಇಡೀ ಕರ್ನಾಟಕದೊಂದಿಗೆ ಅಲ್ಲ. ಬಳ್ಳಾರಿಯ ಜೊತೆಗಿನ ಒಡನಾಟ ಬಳ್ಳಾರಿಯ ಕಾಳಜಿಯಿಂದ ಮೂಡಿದ್ದಲ್ಲ, ಅದು ಸ್ವಾರ್ಥದಿಂದ ಕೂಡಿದ್ದಾಗಿತ್ತು ಅಷ್ಟೇ…

1999ರಲ್ಲಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಿದಾಗ ಅವರ ವಿರುದ್ಧ ಸುಷ್ಮಾರನ್ನು ಕಣಕ್ಕಿಳಿಸಲಾಗಿತು. ‘ಸೋನಿಯಾ ವಿದೇಶಿ ಮಹಿಳೆ’ ಎಂದೆಲ್ಲ ಈ ‘ಅಪ್ಪಟ’ ದೇಶೀ ನಾರಿ ಕೂಗಾಡಿಕೊಂಡರೂ 56 ಸಾವಿರ ಮತಗಳಿಂದ ಸೋತರು. ಆಗಲೇ ಅವರಿಗೆ ಬಳ್ಳಾರಿಯ ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು ಥರದವರ ಸಂಪರ್ಕ ಪ್ರಾಪ್ತವಾಗಿತು. ಆಗಿನ್ನೂ ಗಣಿ ದಂಧೆ ತಾರಕಕ್ಕೆ ಏರಿರಲಿಲ್ಲ. ‘ಎನ್ನೋಬಲ್’ ಎಂಬ ಹಣಕಾಸಿನ ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಟೋಪಿ ಹಾಕಿದ್ದ ರೆಡ್ಡಿಗಳು ಬಿಜೆಪಿಯಲ್ಲಿ ನೆಲೆ ಕಂಡುಕೊಂಡಿದ್ದರು.

1999-2004ರ ವಾಜಪೇಯಿ ಸರ್ಕಾರದಲ್ಲಿ ಸುಷ್ಮಾ ಸಚಿವೆಯಾಗಿದ್ದರು. 2003ರ ವೇಳೆಗೆ ಕಬ್ಬಿಣ ಅದಿರಿಗೆ ಹೊರದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಚೀನಾದಲ್ಲಿ ದೊಡ್ಡ ಬೇಡಿಕೆ ಉಂಟಾಗಿತು. ಅಷ್ಟೊತ್ತಿಗೆ ಸುಷ್ಮಾ ಕೃಪೆಯಿಂದ ಗಣಿ ದಂಧೆಗಿಳಿದಿದ್ದ ರೆಡ್ಡಿಗಳು ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ಕರ್ನಾಟಕದ ಸಾರ್ವಜನಿಕ ಸಂಪತ್ತನ್ನೆಲ್ಲ ಲೂಟಿ ಮಾಡಿದ್ದರು.

1999ರಲ್ಲಿ ಬಳ್ಳಾರಿಯಲ್ಲಿ ಸೋತ ಮೇಲೆಯೂ 2010ರವರೆಗೂ ಸುಷ್ಮಾರವರು ಕರ್ನಾಟಕದ ನಂಟು ಬಿಡಲೇ ಇಲ್ಲ ಎಂದು ಬಹುಪಾಲು ಮಾಧ್ಯಮಗಳು ಹೇಳುತ್ತಿವೆ. ನಿಜ, ಅದು ನಂಟಲ್ಲ, ಗಂಟಿನ ಕತೆ… ಸುಷ್ಮಾರವರು 1999ರಲ್ಲಿ ಸೋತ ನಂತರ ಪ್ರತಿವರ್ಷವೂ ಬಳ್ಳಾರಿಗೆ ಬಂದು ವರ ಮಹಾಲಕ್ಷ್ಮೀ ಹಬ್ಬ ಆಚರಿಸುತ್ತಿದ್ದರು. ರೆಡ್ಡಿ-ಶ್ರೀರಾಮುಲುಗಳನ್ನು ಅವರು ಮಕ್ಕಳೆನ್ನುವುದು, ಈ ಗಣಿಗಳ್ಳರು ಅವರನ್ನು ‘ಅಮ್ಮ’ ಎನ್ನುವುದು ಕೆಲವು ತೆಲುಗು ಸಿನಿಮಾದ ವಿಲಕ್ಷಣ ನಡವಳಿಕೆಗಳಂತೆ ಕಾಣುತ್ತಿದ್ದವು.

ಬಳ್ಳಾರಿಗೆ ಬರುತ್ತಿದ್ದ ‘ಅಮ್ಮ’ ಮಕ್ಕಳ ಮನೆಯಲ್ಲಿ ವರ ಮಹಾಲಕ್ಷ್ಮಿ ಹಬ್ಬ ಮಾಡುತ್ತಿರಲಿಲ್ಲ! ಬದಲಿಗೆ ಬಳ್ಳಾರಿಯ ಬ್ರಾಹ್ಮಣ ಕುಟುಂಬವೊಂದರ ಮನೆಯಲ್ಲಿ ಈ ಡ್ರಾಮಾ ಜರುಗುತ್ತಿತ್ತು! ಇದರಿಂದ ಎಂತಹ ಜಾತಿ ಮನಸ್ಸು ಸುಷ್ಮಾ ಅವರದ್ದು ಎಂದು ವಿವರಿಸುವ ಅಗತ್ಯವಿಲ್ಲ ಅಲ್ಲವೇ? ಆದರೆ ಆ ಬ್ರಾಹ್ಮಣರ ಮನೆಯಲ್ಲಿ ಎಲೆ, ಅಡಿಕೆ, ಕುಂಕುಮ, ಅರಿಷಿಣ, ಸೀರೆಗಳ ಉಡಿ ತುಂಬಿಕೊಳ್ಳುತ್ತಿದ್ದ ನಂತರ ಅವರ ಸವಾರಿ ಸೀದಾ ರೆಡ್ಡಿಗಳ ಮನೆ ಕಡೆ ಹೊರಡುತ್ತಿತ್ತು. ಅಲ್ಲಿ ನಿಜವಾದ ಉಡಿ ತುಂಬುವ ಕಾರ್ಯ ನಡೆಯುತ್ತಿತ್ತು. ಈ ನಾಡಿನ ಸಂಪತ್ತಿನ ಲೂಟಿಯ ಒಂದು ಭಾಗ ಅದಿರಿನ ಧೂಳಿನ ಹಾಗೆ ದೆಹಲಿ ಕಡೆ ಹಾರಿ ಹೋಗುತ್ತಿತ್ತು.

2008ರಲ್ಲಿ ಯಡಿಯೂರಪ್ಪ ಸರ್ಕಾರವಿದ್ದಾಗಲಂತೂ ರೆಡ್ಡಿ-ಶ್ರೀರಾಮುಲುಗಳ ಕಾರುಬಾರು ಭಾರೀ ಜೋರಾಗಿತ್ತಲ್ಲ? ಒಮ್ಮೆ ಯಡಿಯೂರಪ್ಪರನ್ನೇ ಕೆಡವಲು ಈ ಅಡವಿ-ದೊಂಗುಲುಗಳು ಕೈ ಹಾಕಿದಾಗ ಉಡಿ ತುಂಬಿಸಿಕೊಂಡವರ ಸಪೋರ್ಟೂ ಅದಕ್ಕಿತ್ತು! ಮುಂದೆ ಅಡ್ವಾಣಿ ಸಮ್ಮುಖದಲ್ಲಿ ಯಡಿಯೂರಪ್ಪ ಮತ್ತು ರೆಡ್ಡಿ – ರಾಮುಲಗಳ ನಡುವೆ ರಾಜಿ ಮಾಡಿಸಿದ್ದು ಇದೇ ಸುಷ್ಮಾ ಮೇಡಮ್ಮು.

ಯಾವಾಗ ಜನಾರ್ಧನರೆಡ್ಡಿ ಜೈಲು ಪಾಲಾದರೋ ಆಗ ಯು ಟರ್ನ್ ತೆಗೆದುಕೊಂಡ ಸುಷ್ಮಾರವರು, ‘ರೆಡ್ಡಿ-ರಾಮುಲು ಇತ್ಯಾದಿ ಎಲ್ಲ ನನಗೆ ವಿಶೇಷವಾಗಿ ಗೊತ್ತಿಲ್ಲ. ಎಲ್ಲ ಬಿಜೆಪಿ ಕಾರ್ಯಕರ್ತರಂತೆ ಅವರೂ ಪರಿಚಯ ಅಷ್ಟೇ’ ಎಂದು ಕೈ ಎತ್ತಿಬಿಟ್ಟರು! ಈಗ ಹೇಳಿ, ಸುಷ್ಮಾ ಧೀಮಂತ ನಾಯಕಿ ಆಗಿದ್ದರೇ? ಆದರೆ ಅವರ ನಂತರದಲ್ಲಿ ಪ್ರವರ್ಧಮಾನಕ್ಕೆ ಬಂದ ನರೇಂದ್ರಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಥರಹದ ತೀವ್ರಗಾಮಿ ನಾಯಕರನ್ನು ನೋಡಿದಾಗ ಸುಷ್ಮಾರವರಂತವರು ಸಭ್ಯರಂತೆ ಕಂಡುಬರುವುದು ಈ ಕಾಲದ ದುರಂತಗಳಲ್ಲೊಂದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ವಸ್ತುನಿಷ್ಟ ವಿಶ್ಲೇಷಣೆ.
    ವ್ಯಕ್ತಿಯೋರ್ವ ಇಲ್ಲವಾದಾಗ ಔಪೋಚಾರಿಕ ಸ್ಮರಣೆ ನಾಗರೀಕ ಲಕ್ಷಣ ನಿಜ, ಆದರೆ ಅತಿಶಯ ಗುಣಗಾನ ಆತ್ಮವಂಚನೆ ಮತ್ತು ಸುಳ್ಳುಗಳ ಮಾದರಿ ಕಟ್ಟಿಕೊಡುವ ಕೆಲಸವೇ ಆಗಿರುತ್ತದೆ.
    ಚರಿತ್ರೆಯೇ ಅರಿವಿಲ್ಲದ ಮಾಧ್ಯಮಗಳು ಸಮೂಹ ಸನ್ನಿಯಂತೆ ಪರಾಕು ಹಾಕುತ್ತಿರುವುದು ಅಸಹ್ಯವಷ್ಟೆ.
    ಇದರ ನಡುವೆ ಮಲ್ಲನಗೌಡರು ಅಸಲಿ ಸುಷ್ಮಾ ಅವರನ್ನು ಮತ್ತೆ ಪರಿಚಯಿಸಿದ್ದಾರೆ.

  2. ತಲೆ ಬೋಲಸಕೋತಿನಿ ಅಂತ ಹೇಳಿದ್ದು ಉಮಾ ಭಾರತಿ ಇವರಲ್ಲ . ಉಳಿದೆರೋ ನಿಮ್ಮ ಮಾತು ನಿಜವಾಗಿದೆ .

LEAVE A REPLY

Please enter your comment!
Please enter your name here

- Advertisment -

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...