Homeಕರ್ನಾಟಕಸುಷ್ಮಾ ಸ್ವರಾಜ್‍ ರಿಗೊಂದು ಕಂಬನಿ... : ಜೊತೆಗೆ ಸುಷ್ಮಾ ಸ್ವರಾಜ್ ಸುತ್ತ ಹೆಣೆಯಲ್ಪಟ್ಟ ಕತೆಗಳು

ಸುಷ್ಮಾ ಸ್ವರಾಜ್‍ ರಿಗೊಂದು ಕಂಬನಿ… : ಜೊತೆಗೆ ಸುಷ್ಮಾ ಸ್ವರಾಜ್ ಸುತ್ತ ಹೆಣೆಯಲ್ಪಟ್ಟ ಕತೆಗಳು

- Advertisement -
- Advertisement -

ಆರು ಸಲ ಸಂಸದರಾಗಿ, ನಾಲ್ಕು ಸಲ ಶಾಸಕಿಯಾಗಿ, ಎರಡು ಸಲ ಸಚಿವೆಯಾಗಿ ಕೆಲಸ ಮಾಡಿದ ಸುಷ್ಮಾ ಸ್ವರಾಜ್ ತೀರಿಕೊಂಡಿದ್ದಾರೆ. ಭಾರತದ ಪುರುಷಕೇಂದ್ರಿತ ರಾಜಕಾರಣದಲ್ಲಿ ಇಷ್ಟು ಸುದೀರ್ಘ ಕಾಲ ಮಹಿಳೆಯೊಬ್ಬರು ರಾಜಕೀಯ ಮಾಡಿದ್ದು ಪ್ರಶಂಸಾರ್ಹ. ವಿದೇಶಾಂಗ ಸಚಿವೆ ಆಗಿದ್ದಾಗ ಹಲವು ಜನರ ಚಿಕಿತ್ಸೆಗೆ ಅವರು ನೆರವಾದರು, ಅಪ್ಪಟ ದೇಶಪ್ರೇಮಿಯಾಗಿದ್ದರು ಇತ್ಯಾದಿ ವಿವರಗಳನ್ನು ನಮ್ಮ ಮಾಧ್ಯಮಗಳು ಕೊಂಚ ಉತ್ಪ್ರೇಕ್ಷೆಯಿಂದಲೇ ವರದಿ ಮಾಡುತ್ತಿವೆ ಅನಿಸುತ್ತಿದೆ.

ಅದರಲ್ಲೂ ಕರ್ನಾಟಕದ ಜೊತೆಗಿನ ಅವರ ಸಂಬಂಧದ ಕುರಿತು ‘ಅದೊಂದು ಆದರ್ಶದ ರಾಜಕೀಯ’ ಎಂಬಂತೆ ಬಿಂಬಿಸಲಾಗುತ್ತಿದೆ. ಇಂತಹ ಆತ್ಮವಂಚನೆಯ ವರದಿ, ಹೊಗಳಿಕೆಗಳು ನಾಡಿನ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಬಾರದು ಎಂಬ ಕಾರಣಕ್ಕೆ ಇಲ್ಲಿ ಕೆಲವು ವಾಸ್ತವಗಳನ್ನು ನಿಮ್ಮ ಮುಂದೆ ಇಡಲೇಬೇಕಾಗಿದೆ.

ಅವರ ‘ಅಪ್ಪಟ ದೇಶಪ್ರೇಮ’ ಆರೆಸ್ಸೆಸ್ ಮಾದರಿಯದ್ದಾಗಿತ್ತೇ ಹೊರತು ಅದೆಂದೂ ವಿಶಾಲ ಭಾರತದ ಸರ್ವಜನರನ್ನೂ ಒಳಗೊಳ್ಳುವ ಭಾರತದ ಬಗೆಗಿನ ಪ್ರೇಮವಾಗಿರಲಿಲ್ಲ; ಅದು ಹಿಂದೂ ರಾಷ್ಟ್ರವೆಂಬ ಮತಾಂಧ ಪರಿಕಲ್ಪನೆಯ ಭಾಗವಾಗಿ ಅರಳಿದ ‘ದೇಶಪ್ರೇಮ’ವಾಗಿತ್ತಷ್ಟೇ. ಇನ್ನು ಇಷ್ಟು ಸುದೀರ್ಘ ಕಾಲ ಮಹಿಳೆಯೊಬ್ಬರು ರಾಜಕೀಯ ಮಾಡುವುದು ಕಷ್ಟಸಾಧ್ಯ. ಆದರೆ ಇತರೆಲ್ಲಾ ಪಕ್ಷಗಳ ಮಹಿಳಾ ರಾಜಕಾರಣಿಗಳಂತೆ ಮಹಿಳೆಯರ ಮೇಲೆ ತಮ್ಮ ಪಕ್ಷದವರಿಂದಲೇ ದೌರ್ಜನ್ಯ, ದಬ್ಬಾಳಿಕೆ ನಡೆದಾಗ ಅದರು ವಿರುದ್ಧ ಇವರು ದನಿಯೆತ್ತಿದ್ದು ಕಂಡುಬಂದಿಲ್ಲ.

2004ರಲ್ಲಿ ಯುಪಿಎಗೆ ಬಹುಮತ ಬಂದು ಸೋನಿಯಾ ಗಾಂಧಿಯವರಿಗೆ ಪ್ರಧಾನಿ ಹುದ್ದೆ ಸಿಗುವ ಸಾಧ್ಯತೆಯಿದ್ದಾಗ ಬಿಜೆಪಿ ಮತ್ತು ಸಂಘ ಪರಿವಾರದಿಂದ ತೀವ್ರ ವಿರೋಧ ವ್ಯಕ್ತವಾಗಿತು. ಆಗ ಸಂಘ ಪರಿವಾರ ಬಳಸಿಕೊಂಡಿದ್ದು ಹಣೆ ತುಂಬ ಕುಂಕುಮ ಇಡುವ ‘ಮಾದರಿ’ ಹಿಂದೂ ಮಹಿಳೆ ಸುಷ್ಮಾರನ್ನು. ‘ಸೋನಿಯಾ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಳ್ಳುವೆ, ಜೀವನಪರ್ಯಂತ ಬಿಳಿ ಸೀರೆ ಉಡುವೆ’ ಹೀಗೆಲ್ಲ ಅಸಹ್ಯ ಮಾತಾಡಿದ ಸುಷ್ಮಾರನ್ನು ಧೀಮಂತ ನಾಯಕಿ ಎಂದು ಹೇಗೆ ಕರೆಯುವುದು? ಸೋನಿಯಾರನ್ನು ತಡೆಯುವ ಭರದಲ್ಲಿ ಅವರು ತಮಗೆ ತಾವೇ ಅವಮಾನ ಮಾಡಿಕೊಡಿದ್ದರು.

ಕರ್ನಾಟಕದ ಜೊತೆಗೆ ಅವರಿಗೆ ತುಂಬ ಆತ್ಮೀಯ ಸಂಬಂಧ ಇತ್ತು, ಕರ್ನಾಟಕದ ಬಗ್ಗೆ ಅಪಾರ ಕಾಳಜಿ ಇತ್ತು ಎಂದೆಲ್ಲ ನಮ್ಮ ಮಾಧ್ಯಮಗಳು ಹೇಳಿವೆ, ಹೇಳುತ್ತಲೇ ಇವೆ. ಹೌದು ಅವರಿಗೆ ಬಳ್ಳಾರಿಯೊಂದಿಗೆ ಅವರಿಗೆ ‘ಆತ್ಮೀಯ’ ಒಡನಾಟವಿತ್ತೇ ವಿನಃ ಇಡೀ ಕರ್ನಾಟಕದೊಂದಿಗೆ ಅಲ್ಲ. ಬಳ್ಳಾರಿಯ ಜೊತೆಗಿನ ಒಡನಾಟ ಬಳ್ಳಾರಿಯ ಕಾಳಜಿಯಿಂದ ಮೂಡಿದ್ದಲ್ಲ, ಅದು ಸ್ವಾರ್ಥದಿಂದ ಕೂಡಿದ್ದಾಗಿತ್ತು ಅಷ್ಟೇ…

1999ರಲ್ಲಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಿದಾಗ ಅವರ ವಿರುದ್ಧ ಸುಷ್ಮಾರನ್ನು ಕಣಕ್ಕಿಳಿಸಲಾಗಿತು. ‘ಸೋನಿಯಾ ವಿದೇಶಿ ಮಹಿಳೆ’ ಎಂದೆಲ್ಲ ಈ ‘ಅಪ್ಪಟ’ ದೇಶೀ ನಾರಿ ಕೂಗಾಡಿಕೊಂಡರೂ 56 ಸಾವಿರ ಮತಗಳಿಂದ ಸೋತರು. ಆಗಲೇ ಅವರಿಗೆ ಬಳ್ಳಾರಿಯ ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು ಥರದವರ ಸಂಪರ್ಕ ಪ್ರಾಪ್ತವಾಗಿತು. ಆಗಿನ್ನೂ ಗಣಿ ದಂಧೆ ತಾರಕಕ್ಕೆ ಏರಿರಲಿಲ್ಲ. ‘ಎನ್ನೋಬಲ್’ ಎಂಬ ಹಣಕಾಸಿನ ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಟೋಪಿ ಹಾಕಿದ್ದ ರೆಡ್ಡಿಗಳು ಬಿಜೆಪಿಯಲ್ಲಿ ನೆಲೆ ಕಂಡುಕೊಂಡಿದ್ದರು.

1999-2004ರ ವಾಜಪೇಯಿ ಸರ್ಕಾರದಲ್ಲಿ ಸುಷ್ಮಾ ಸಚಿವೆಯಾಗಿದ್ದರು. 2003ರ ವೇಳೆಗೆ ಕಬ್ಬಿಣ ಅದಿರಿಗೆ ಹೊರದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಚೀನಾದಲ್ಲಿ ದೊಡ್ಡ ಬೇಡಿಕೆ ಉಂಟಾಗಿತು. ಅಷ್ಟೊತ್ತಿಗೆ ಸುಷ್ಮಾ ಕೃಪೆಯಿಂದ ಗಣಿ ದಂಧೆಗಿಳಿದಿದ್ದ ರೆಡ್ಡಿಗಳು ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ಕರ್ನಾಟಕದ ಸಾರ್ವಜನಿಕ ಸಂಪತ್ತನ್ನೆಲ್ಲ ಲೂಟಿ ಮಾಡಿದ್ದರು.

1999ರಲ್ಲಿ ಬಳ್ಳಾರಿಯಲ್ಲಿ ಸೋತ ಮೇಲೆಯೂ 2010ರವರೆಗೂ ಸುಷ್ಮಾರವರು ಕರ್ನಾಟಕದ ನಂಟು ಬಿಡಲೇ ಇಲ್ಲ ಎಂದು ಬಹುಪಾಲು ಮಾಧ್ಯಮಗಳು ಹೇಳುತ್ತಿವೆ. ನಿಜ, ಅದು ನಂಟಲ್ಲ, ಗಂಟಿನ ಕತೆ… ಸುಷ್ಮಾರವರು 1999ರಲ್ಲಿ ಸೋತ ನಂತರ ಪ್ರತಿವರ್ಷವೂ ಬಳ್ಳಾರಿಗೆ ಬಂದು ವರ ಮಹಾಲಕ್ಷ್ಮೀ ಹಬ್ಬ ಆಚರಿಸುತ್ತಿದ್ದರು. ರೆಡ್ಡಿ-ಶ್ರೀರಾಮುಲುಗಳನ್ನು ಅವರು ಮಕ್ಕಳೆನ್ನುವುದು, ಈ ಗಣಿಗಳ್ಳರು ಅವರನ್ನು ‘ಅಮ್ಮ’ ಎನ್ನುವುದು ಕೆಲವು ತೆಲುಗು ಸಿನಿಮಾದ ವಿಲಕ್ಷಣ ನಡವಳಿಕೆಗಳಂತೆ ಕಾಣುತ್ತಿದ್ದವು.

ಬಳ್ಳಾರಿಗೆ ಬರುತ್ತಿದ್ದ ‘ಅಮ್ಮ’ ಮಕ್ಕಳ ಮನೆಯಲ್ಲಿ ವರ ಮಹಾಲಕ್ಷ್ಮಿ ಹಬ್ಬ ಮಾಡುತ್ತಿರಲಿಲ್ಲ! ಬದಲಿಗೆ ಬಳ್ಳಾರಿಯ ಬ್ರಾಹ್ಮಣ ಕುಟುಂಬವೊಂದರ ಮನೆಯಲ್ಲಿ ಈ ಡ್ರಾಮಾ ಜರುಗುತ್ತಿತ್ತು! ಇದರಿಂದ ಎಂತಹ ಜಾತಿ ಮನಸ್ಸು ಸುಷ್ಮಾ ಅವರದ್ದು ಎಂದು ವಿವರಿಸುವ ಅಗತ್ಯವಿಲ್ಲ ಅಲ್ಲವೇ? ಆದರೆ ಆ ಬ್ರಾಹ್ಮಣರ ಮನೆಯಲ್ಲಿ ಎಲೆ, ಅಡಿಕೆ, ಕುಂಕುಮ, ಅರಿಷಿಣ, ಸೀರೆಗಳ ಉಡಿ ತುಂಬಿಕೊಳ್ಳುತ್ತಿದ್ದ ನಂತರ ಅವರ ಸವಾರಿ ಸೀದಾ ರೆಡ್ಡಿಗಳ ಮನೆ ಕಡೆ ಹೊರಡುತ್ತಿತ್ತು. ಅಲ್ಲಿ ನಿಜವಾದ ಉಡಿ ತುಂಬುವ ಕಾರ್ಯ ನಡೆಯುತ್ತಿತ್ತು. ಈ ನಾಡಿನ ಸಂಪತ್ತಿನ ಲೂಟಿಯ ಒಂದು ಭಾಗ ಅದಿರಿನ ಧೂಳಿನ ಹಾಗೆ ದೆಹಲಿ ಕಡೆ ಹಾರಿ ಹೋಗುತ್ತಿತ್ತು.

2008ರಲ್ಲಿ ಯಡಿಯೂರಪ್ಪ ಸರ್ಕಾರವಿದ್ದಾಗಲಂತೂ ರೆಡ್ಡಿ-ಶ್ರೀರಾಮುಲುಗಳ ಕಾರುಬಾರು ಭಾರೀ ಜೋರಾಗಿತ್ತಲ್ಲ? ಒಮ್ಮೆ ಯಡಿಯೂರಪ್ಪರನ್ನೇ ಕೆಡವಲು ಈ ಅಡವಿ-ದೊಂಗುಲುಗಳು ಕೈ ಹಾಕಿದಾಗ ಉಡಿ ತುಂಬಿಸಿಕೊಂಡವರ ಸಪೋರ್ಟೂ ಅದಕ್ಕಿತ್ತು! ಮುಂದೆ ಅಡ್ವಾಣಿ ಸಮ್ಮುಖದಲ್ಲಿ ಯಡಿಯೂರಪ್ಪ ಮತ್ತು ರೆಡ್ಡಿ – ರಾಮುಲಗಳ ನಡುವೆ ರಾಜಿ ಮಾಡಿಸಿದ್ದು ಇದೇ ಸುಷ್ಮಾ ಮೇಡಮ್ಮು.

ಯಾವಾಗ ಜನಾರ್ಧನರೆಡ್ಡಿ ಜೈಲು ಪಾಲಾದರೋ ಆಗ ಯು ಟರ್ನ್ ತೆಗೆದುಕೊಂಡ ಸುಷ್ಮಾರವರು, ‘ರೆಡ್ಡಿ-ರಾಮುಲು ಇತ್ಯಾದಿ ಎಲ್ಲ ನನಗೆ ವಿಶೇಷವಾಗಿ ಗೊತ್ತಿಲ್ಲ. ಎಲ್ಲ ಬಿಜೆಪಿ ಕಾರ್ಯಕರ್ತರಂತೆ ಅವರೂ ಪರಿಚಯ ಅಷ್ಟೇ’ ಎಂದು ಕೈ ಎತ್ತಿಬಿಟ್ಟರು! ಈಗ ಹೇಳಿ, ಸುಷ್ಮಾ ಧೀಮಂತ ನಾಯಕಿ ಆಗಿದ್ದರೇ? ಆದರೆ ಅವರ ನಂತರದಲ್ಲಿ ಪ್ರವರ್ಧಮಾನಕ್ಕೆ ಬಂದ ನರೇಂದ್ರಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಥರಹದ ತೀವ್ರಗಾಮಿ ನಾಯಕರನ್ನು ನೋಡಿದಾಗ ಸುಷ್ಮಾರವರಂತವರು ಸಭ್ಯರಂತೆ ಕಂಡುಬರುವುದು ಈ ಕಾಲದ ದುರಂತಗಳಲ್ಲೊಂದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ವಸ್ತುನಿಷ್ಟ ವಿಶ್ಲೇಷಣೆ.
    ವ್ಯಕ್ತಿಯೋರ್ವ ಇಲ್ಲವಾದಾಗ ಔಪೋಚಾರಿಕ ಸ್ಮರಣೆ ನಾಗರೀಕ ಲಕ್ಷಣ ನಿಜ, ಆದರೆ ಅತಿಶಯ ಗುಣಗಾನ ಆತ್ಮವಂಚನೆ ಮತ್ತು ಸುಳ್ಳುಗಳ ಮಾದರಿ ಕಟ್ಟಿಕೊಡುವ ಕೆಲಸವೇ ಆಗಿರುತ್ತದೆ.
    ಚರಿತ್ರೆಯೇ ಅರಿವಿಲ್ಲದ ಮಾಧ್ಯಮಗಳು ಸಮೂಹ ಸನ್ನಿಯಂತೆ ಪರಾಕು ಹಾಕುತ್ತಿರುವುದು ಅಸಹ್ಯವಷ್ಟೆ.
    ಇದರ ನಡುವೆ ಮಲ್ಲನಗೌಡರು ಅಸಲಿ ಸುಷ್ಮಾ ಅವರನ್ನು ಮತ್ತೆ ಪರಿಚಯಿಸಿದ್ದಾರೆ.

  2. ತಲೆ ಬೋಲಸಕೋತಿನಿ ಅಂತ ಹೇಳಿದ್ದು ಉಮಾ ಭಾರತಿ ಇವರಲ್ಲ . ಉಳಿದೆರೋ ನಿಮ್ಮ ಮಾತು ನಿಜವಾಗಿದೆ .

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...