Homeಮುಖಪುಟಇದು ಕಾಶ್ಮೀರದ ಸಮಸ್ಯೆಯಲ್ಲ; ಭಾರತ ಒಕ್ಕೂಟದ ಸಮಸ್ಯೆ

ಇದು ಕಾಶ್ಮೀರದ ಸಮಸ್ಯೆಯಲ್ಲ; ಭಾರತ ಒಕ್ಕೂಟದ ಸಮಸ್ಯೆ

- Advertisement -
- Advertisement -

ಕಾಶ್ಮೀರವು ನಿಸ್ಸಂದೇಹವಾಗಿ ಭಾರತದ ಭಾಗ. ಈ ಮಾತನ್ನು ಹೇಳದೇ ಮುಂದುವರೆದರೆ ಕೆಲವರ ದಾಳಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಹೇಳುತ್ತಲೇ ಇಲ್ಲ. ಏಕೆಂದರೆ, ಇಡೀ ಲೇಖನ ಅಂಥವರ ನಿಲುವನ್ನು ಬಯಲುಗೊಳಿಸಲಿದೆ. ಆದರೆ, ಬಹುಮುಖಿ ಸಂಸ್ಕೃತಿಯನ್ನು ಒಳಗೊಂಡ ಅಪೂರ್ವವಾದ ಸಂಕರ ಸಂಸ್ಕೃತಿಯನ್ನು ಒಳಗೊಂಡಿದ್ದ ಕಾಶ್ಮೀರವು ಭಾರತಕ್ಕೆ ಶಿಖರಪ್ರಾಯವಾದ ಬದುಕನ್ನು ಹೊಂದಿತ್ತು. ಆ ದೃಷ್ಟಿಯಿಂದ ಅದಿಲ್ಲದೇ ಭಾರತವು ಅಪೂರ್ಣ ಎಂದು ಯಾರಾದರೂ ಹೇಳಿದರೆ ಅದಕ್ಕೆ ಅರ್ಥವಿದೆ.

ಎರಡನೆಯ ಸಂಗತಿ, ಕಾಶ್ಮೀರವನ್ನು ಒಂದು ಸಮಸ್ಯೆಯನ್ನಾಗಿ ಮಾಡುವುದರಲ್ಲಿ ನೆಹರೂ, ಇಂದಿರಾಗಾಂಧಿ ಮತ್ತು ರಾಜೀವ್‍ಗಾಂಧಿಯವರ ಪಾತ್ರ ದೊಡ್ಡದು. ಅದನ್ನು ಸೂಕ್ತವಾಗಿ ಬಗೆಹರಿಸಿದ್ದರೆ ಬಿಜೆಪಿ ಆರೆಸ್ಸೆಸ್‍ಗಾಗಲೀ, ಪಾಕಿಸ್ತಾನಕ್ಕಾಗಲೀ ಅದರಲ್ಲಿ ತಾವು ಇರುತ್ತಲೇ ಇರಲಿಲ್ಲ. ಈ ವಿವರಗಳು ಈ ಸಂಚಿಕೆಯ ಉಳಿದ ಲೇಖನಗಳಲ್ಲೂ ದೊರೆಯುವುದರಿಂದ ಅದರ ಬಗ್ಗೆ ಇಲ್ಲಿ ಹೇಳುವ ಅಗತ್ಯವಿಲ್ಲ.

ಆದರೆ, ಎರಡು ಸಂಗತಿಗಳನ್ನು ಇಲ್ಲಿ ಚರ್ಚಿಸಲೇಬೇಕಿದೆ. ಒಂದು ‘ಸ್ವಾಯತ್ತ’ ರಾಜ್ಯವಾಗಿದ್ದ ಕಾಶ್ಮೀರವನ್ನು ವಿಭಜಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಪ್ರಕ್ರಿಯೆಯನ್ನು ಆಗಗೊಳಿಸಲು ಒಕ್ಕೂಟ ಸರ್ಕಾರವು ಅನುಸರಿಸಿದ ವಿಧಾನ ಯಾವುದು? ಆ ವಿಧಾನವು ನಮಗೆ ಯಾವ ಸೂಚನೆಗಳನ್ನು ನೀಡುತ್ತದೆ? ತನ್ನ ಅವಿಭಾಜ್ಯ ಅಂಗವೆಂದು ವಿವಿಧ ಪಕ್ಷಗಳ ನೇತೃತ್ವದ ಎಲ್ಲಾ ಸರ್ಕಾರಗಳು ಹೇಳುತ್ತಾ ಬಂದ ಒಂದು ಭೂಭಾಗದ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ, ಆ ಭೂಭಾಗದಲ್ಲಿ ವಾಸಿಸುತ್ತಿರುವ ಜನರ ಅಭಿಪ್ರಾಯ ಕೇಳುವ ಪ್ರಜಾತಾಂತ್ರಿಕ ಪ್ರಜ್ಞೆಯನ್ನು ತೋರಲಿಲ್ಲ ಎಂಬುದಷ್ಟೇ ಅಲ್ಲ. ಅವರನ್ನು ಕೇಳಿದರೆ ಆ ಭೂಭಾಗ ನಮ್ಮ ಜೊತೆಗೇ ಇರುವುದಿಲ್ಲ ಎಂಬ ಭಯ ಭಾರತದ ಆಳುವವರಿಗೆ ಇತ್ತೇ ಎಂಬುದು ಮುಖ್ಯವಾದ ಪ್ರಶ್ನೆ.

ಅಂತಹ ಭಯ ಇದ್ದುದರಿಂದಲೇ, ಈಗಾಗಲೇ ಅಲ್ಲಿದ್ದ ಅಸಂಖ್ಯಾತ ಸೇನೆ, ಅರೆಸೇನಾ ಪಡೆಗಳ ಜೊತೆಗೆ, ಸುಮಾರು 45 ಸಾವಿರ ಪಡೆಗಳನ್ನು ಒಂದು ವಾರದ ಮೊದಲು ಜಮಾವಣೆ ಮಾಡಲಾಯಿತು. ಕಾಶ್ಮೀರದ ಕುರಿತು ಸಂಸತ್ತಿನಲ್ಲಿ ಘೋಷಣೆ ಮಾಡುವ ದಿನ ಮತ್ತೆ 8 ಸಾವಿರ ಸೈನಿಕರನ್ನು ದೇಶದ ವಿವಿಧ ಭಾಗಗಳಿಂದ ವಿಮಾನಗಳಲ್ಲಿ ಕೊಂಡೊಯ್ದು ಇಳಿಸಲಾಯಿತು. ಆ ದಿನ ಕಾಶ್ಮೀರದಲ್ಲಿ ಇಂಟರ್‍ನೆಟ್, ಫೋನ್ ಇತ್ಯಾದಿ ಸಂಪರ್ಕ ಸಾಧನಗಳು ಇರಲಿಲ್ಲ. ಅಲ್ಲೇನು ನಡೆಯುತ್ತಿದೆ ಎಂಬ ಸುಳಿವು ಹೊರಜಗತ್ತಿಗೆ ಗೊತ್ತಾಗಲಿಲ್ಲ. ಆದರೆ, ಸೈನ್ಯದ ಸಂಪರ್ಕಕ್ಕೆ ಸೆಟಲೈಟ್ ಫೋನ್‍ಗಳನ್ನು ಒದಗಿಸಲಾಗಿತ್ತು.

ಅದಕ್ಕೆ ಹಿಂದಿನ ದಿನಗಳಲ್ಲಿ ಕಾಶ್ಮೀರದ ಕಣಿವೆಯಲ್ಲಿ ಭಯಗ್ರಸ್ತ ವಾತಾವರಣ ನಿರ್ಮಾಣವಾಗಿತ್ತು. ಕಳೆದ ಮೂರು ದಶಕಗಳಲ್ಲಿ ಕಫ್ರ್ಯೂ ವಾತಾವರಣವನ್ನು ಸಾಕಷ್ಟು ಅನುಭವಿಸಿ ಗೊತ್ತಿರುವ ಅವರು, ದಿನಗಟ್ಟಲೇ ಮನೆಯಿಂದ ಹೊರಗೆ ಬರದಿದ್ದರೂ ಬದುಕಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಪರದಾಡಿದರು. ದಿನ ತುಂಬಿದ ಗರ್ಭಿಣಿಯರ ಹೆರಿಗೆಗೆ ಏನು ಮಾಡಬೇಕೆಂದು ಕುಟುಂಬದವರು ಚಿಂತಾಕ್ರಾಂತರಾಗಿದ್ದರು.

ಆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಮತ್ತು ಇಂದು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷದ ಜೊತೆಗೇ ಹಿಂದೆ ಅಧಿಕಾರ ಹಂಚಿಕೊಂಡಿದ್ದ ಇಬ್ಬರನ್ನು ಗೃಹಬಂಧನದಲ್ಲಿರಿಸಲಾಗಿತ್ತು ಮತ್ತು ಘೋಷಣೆಯ ನಂತರ ಬಂಧಿಸಲಾಗಿತ್ತು. ಅವರಲ್ಲಿ ಒಬ್ಬರ ತಂದೆ (ಮುಫ್ತಿ ಮಹಮದ್ ಸಯೀದ್) ಈ ದೇಶದ ಗೃಹ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಭಯೋತ್ಪಾದಕರು ಅವರ ಮಗಳನ್ನು ಅಪಹರಿಸಿದ್ದರು. ಇನ್ನೊಬ್ಬರ ತಾತ (ಷೇಕ್ ಅಬ್ದುಲ್ಲಾ) ಒಬ್ಬ ಸೆಕ್ಯುಲರ್ ವ್ಯಕ್ತಿಯಾಗಿದ್ದು, ಕಾಶ್ಮೀರವು ಭಾರತದೊಂದಿಗೆ ಸೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಹೊತ್ತಿನ ಕಾಶ್ಮೀರದ ಅತ್ಯಂತ ಜನಪ್ರಿಯ ನಾಯಕರಾಗಿದ್ದ ಅವರು ಶ್ರೀನಗರ ಲಾಲ್‍ಚೌಕ್‍ನಲ್ಲಿ ನೆಹರು ಪಕ್ಕ ನಿಂತು ತನ್ನ ಜನರಿಗೆ ಜನಮತಗಣನೆಯ ಭರವಸೆಯನ್ನು ಕೊಟ್ಟಿದ್ದರು. ಆ ಭರವಸೆಯನ್ನು ಸ್ವತಃ ನೆಹರೂ ಉಳಿಸಿಕೊಳ್ಳದೇ, ತನ್ನೀ ಸ್ನೇಹಿತನನ್ನು ಬಂಧಿಸಿ ದೂರದ ಊಟಿಯಲ್ಲಿಟ್ಟಿದ್ದರು.
ಇಂತಹ ಮೋಸಗಳನ್ನು ಅನುಭವಿಸಿದ ಕಾಶ್ಮೀರಿಗಳು ದಿನೇ ದಿನೇ ಭಾರತ ಸರ್ಕಾರದಿಂದ ದೂರ ಸರಿದಿದ್ದರು. ಆದರೆ, ಭಾರತದಿಂದ ಅಲ್ಲ.

ಕೆಲವೇ ತಿಂಗಳು ನಡೆಯುವ ಅಮರನಾಥ ಯಾತ್ರೆಯೊಂದರಿಂದಲೇ 50,000 ಕಾಶ್ಮೀರಿಗಳು ತಮ್ಮ ಇಡೀ ವರ್ಷದ ಬದುಕನ್ನು ನಡೆಸುತ್ತಾರೆ. ಭಾರತದ ಜೊತೆಗೆ ಅವರದ್ದು ಶತಮಾನಗಳ ಸಂಬಂಧ. ಅದನ್ನು ಮತ್ತಷ್ಟು ಬೆಸೆದುಕೊಂಡು ಪ್ರೀತಿಯಿಂದ ಅವರನ್ನು ಗೆಲ್ಲುವ ಪ್ರಯತ್ನವನ್ನು ಕಾಂಗ್ರೆಸ್ಸೂ ಮಾಡಲಿಲ್ಲ, ಬಿಜೆಪಿಯೂ ಮಾಡಲಿಲ್ಲ. ಇದ್ದುದರಲ್ಲಿ ವಿ.ಪಿ.ಸಿಂಗ್, ದೇವೇಗೌಡರು ಮತ್ತು ಬಿಜೆಪಿಯ ವಾಜಪೇಯಿ ಆ ಪ್ರಯತ್ನವನ್ನು ಒಂದು ಮಟ್ಟಿಗಾದರೂ ಮಾಡಿದ್ದರು.

ಅಳಿದುಳಿದಿದ್ದ ವಿಶ್ವಾಸವನ್ನು ಕಿತ್ತುಹಾಕುವ ಹಾಗೆ ಮೋದಿ – ಅಮಿತ್‍ಷಾ ಸರ್ಕಾರ ಕಾರ್ಯಾಚರಣೆ ನಡೆಸಿದೆ. ಆ ಕಾರ್ಯಾಚರಣೆಯ ರೀತಿಯು ಇಡೀ ದೇಶಕ್ಕೆ ಒಂದು ಸಂದೇಶ ನೀಡಿದೆ. ದೇಶದ ಯಾವ ಭೂಭಾಗವನ್ನು ಬೇಕಾದರೂ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ತಮ್ಮ ಅಧೀನಕ್ಕೆ ಒಳಪಡಿಸಿಕೊಳ್ಳಲು ತಾವು ಶಕ್ತರಾಗಿದ್ದೇವೆ ಎಂಬುದೇ ಆ ಸಂದೇಶ. ಅದಕ್ಕೆ ಬೇಕಿರುವುದು, ಆ ಭೂಭಾಗದ ಜನರನ್ನು ಉಳಿದವರ ಕಣ್ಣಿನಲ್ಲಿ ದುಷ್ಟರನ್ನಾಗಿಸುವುದು. ಅದಕ್ಕೆ ಪೂರಕವಾಗಿ ದುಡಿಯಲು ಭಾರೀ ದೊಡ್ಡ ಮಾಧ್ಯಮ ಶಕ್ತಿ ಅವರೊಂದಿಗಿರುವುದರಿಂದ ಸೈನ್ಯದ ಬಲ ಎರಡನೆಯ ಸುತ್ತಿನಲ್ಲಷ್ಟೇ ಬೇಕಾಗುತ್ತದೆ. ಭಾರತ ಒಕ್ಕೂಟದ ಮೂಲಭೂತ ಆಶಯಕ್ಕೆ ವಿರುದ್ಧವಾಗಿ ಈ ಕೆಲಸ ನಡೆಯುತ್ತಿದೆ ಎಂಬುದನ್ನು ದೇಶದ ಪ್ರತಿಯೊಂದು ರಾಜ್ಯದ ಜನರೂ ಅರಿಯಬೇಕಿದೆ.

ಕಾಶ್ಮೀರದ ಜನರನ್ನು ಪ್ರೀತಿಯಿಂದ ಗೆದ್ದು ಅವರನ್ನು ಭಾರತದ ಅವಿಭಾಜ್ಯ ಅಂಗವಾಗಿಸಿಕೊಳ್ಳುವ ಹೊಣೆ ಈಗ ಸಂಪೂರ್ಣ ಭಾರತದ ಜನರದ್ದೇ ಆಗಿದೆ.

  • ಡಾ. ವಾಸು ಎಚ್.ವಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...