Homeಮುಖಪುಟಇದು ಕಾಶ್ಮೀರದ ಸಮಸ್ಯೆಯಲ್ಲ; ಭಾರತ ಒಕ್ಕೂಟದ ಸಮಸ್ಯೆ

ಇದು ಕಾಶ್ಮೀರದ ಸಮಸ್ಯೆಯಲ್ಲ; ಭಾರತ ಒಕ್ಕೂಟದ ಸಮಸ್ಯೆ

- Advertisement -
- Advertisement -

ಕಾಶ್ಮೀರವು ನಿಸ್ಸಂದೇಹವಾಗಿ ಭಾರತದ ಭಾಗ. ಈ ಮಾತನ್ನು ಹೇಳದೇ ಮುಂದುವರೆದರೆ ಕೆಲವರ ದಾಳಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಹೇಳುತ್ತಲೇ ಇಲ್ಲ. ಏಕೆಂದರೆ, ಇಡೀ ಲೇಖನ ಅಂಥವರ ನಿಲುವನ್ನು ಬಯಲುಗೊಳಿಸಲಿದೆ. ಆದರೆ, ಬಹುಮುಖಿ ಸಂಸ್ಕೃತಿಯನ್ನು ಒಳಗೊಂಡ ಅಪೂರ್ವವಾದ ಸಂಕರ ಸಂಸ್ಕೃತಿಯನ್ನು ಒಳಗೊಂಡಿದ್ದ ಕಾಶ್ಮೀರವು ಭಾರತಕ್ಕೆ ಶಿಖರಪ್ರಾಯವಾದ ಬದುಕನ್ನು ಹೊಂದಿತ್ತು. ಆ ದೃಷ್ಟಿಯಿಂದ ಅದಿಲ್ಲದೇ ಭಾರತವು ಅಪೂರ್ಣ ಎಂದು ಯಾರಾದರೂ ಹೇಳಿದರೆ ಅದಕ್ಕೆ ಅರ್ಥವಿದೆ.

ಎರಡನೆಯ ಸಂಗತಿ, ಕಾಶ್ಮೀರವನ್ನು ಒಂದು ಸಮಸ್ಯೆಯನ್ನಾಗಿ ಮಾಡುವುದರಲ್ಲಿ ನೆಹರೂ, ಇಂದಿರಾಗಾಂಧಿ ಮತ್ತು ರಾಜೀವ್‍ಗಾಂಧಿಯವರ ಪಾತ್ರ ದೊಡ್ಡದು. ಅದನ್ನು ಸೂಕ್ತವಾಗಿ ಬಗೆಹರಿಸಿದ್ದರೆ ಬಿಜೆಪಿ ಆರೆಸ್ಸೆಸ್‍ಗಾಗಲೀ, ಪಾಕಿಸ್ತಾನಕ್ಕಾಗಲೀ ಅದರಲ್ಲಿ ತಾವು ಇರುತ್ತಲೇ ಇರಲಿಲ್ಲ. ಈ ವಿವರಗಳು ಈ ಸಂಚಿಕೆಯ ಉಳಿದ ಲೇಖನಗಳಲ್ಲೂ ದೊರೆಯುವುದರಿಂದ ಅದರ ಬಗ್ಗೆ ಇಲ್ಲಿ ಹೇಳುವ ಅಗತ್ಯವಿಲ್ಲ.

ಆದರೆ, ಎರಡು ಸಂಗತಿಗಳನ್ನು ಇಲ್ಲಿ ಚರ್ಚಿಸಲೇಬೇಕಿದೆ. ಒಂದು ‘ಸ್ವಾಯತ್ತ’ ರಾಜ್ಯವಾಗಿದ್ದ ಕಾಶ್ಮೀರವನ್ನು ವಿಭಜಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಪ್ರಕ್ರಿಯೆಯನ್ನು ಆಗಗೊಳಿಸಲು ಒಕ್ಕೂಟ ಸರ್ಕಾರವು ಅನುಸರಿಸಿದ ವಿಧಾನ ಯಾವುದು? ಆ ವಿಧಾನವು ನಮಗೆ ಯಾವ ಸೂಚನೆಗಳನ್ನು ನೀಡುತ್ತದೆ? ತನ್ನ ಅವಿಭಾಜ್ಯ ಅಂಗವೆಂದು ವಿವಿಧ ಪಕ್ಷಗಳ ನೇತೃತ್ವದ ಎಲ್ಲಾ ಸರ್ಕಾರಗಳು ಹೇಳುತ್ತಾ ಬಂದ ಒಂದು ಭೂಭಾಗದ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ, ಆ ಭೂಭಾಗದಲ್ಲಿ ವಾಸಿಸುತ್ತಿರುವ ಜನರ ಅಭಿಪ್ರಾಯ ಕೇಳುವ ಪ್ರಜಾತಾಂತ್ರಿಕ ಪ್ರಜ್ಞೆಯನ್ನು ತೋರಲಿಲ್ಲ ಎಂಬುದಷ್ಟೇ ಅಲ್ಲ. ಅವರನ್ನು ಕೇಳಿದರೆ ಆ ಭೂಭಾಗ ನಮ್ಮ ಜೊತೆಗೇ ಇರುವುದಿಲ್ಲ ಎಂಬ ಭಯ ಭಾರತದ ಆಳುವವರಿಗೆ ಇತ್ತೇ ಎಂಬುದು ಮುಖ್ಯವಾದ ಪ್ರಶ್ನೆ.

ಅಂತಹ ಭಯ ಇದ್ದುದರಿಂದಲೇ, ಈಗಾಗಲೇ ಅಲ್ಲಿದ್ದ ಅಸಂಖ್ಯಾತ ಸೇನೆ, ಅರೆಸೇನಾ ಪಡೆಗಳ ಜೊತೆಗೆ, ಸುಮಾರು 45 ಸಾವಿರ ಪಡೆಗಳನ್ನು ಒಂದು ವಾರದ ಮೊದಲು ಜಮಾವಣೆ ಮಾಡಲಾಯಿತು. ಕಾಶ್ಮೀರದ ಕುರಿತು ಸಂಸತ್ತಿನಲ್ಲಿ ಘೋಷಣೆ ಮಾಡುವ ದಿನ ಮತ್ತೆ 8 ಸಾವಿರ ಸೈನಿಕರನ್ನು ದೇಶದ ವಿವಿಧ ಭಾಗಗಳಿಂದ ವಿಮಾನಗಳಲ್ಲಿ ಕೊಂಡೊಯ್ದು ಇಳಿಸಲಾಯಿತು. ಆ ದಿನ ಕಾಶ್ಮೀರದಲ್ಲಿ ಇಂಟರ್‍ನೆಟ್, ಫೋನ್ ಇತ್ಯಾದಿ ಸಂಪರ್ಕ ಸಾಧನಗಳು ಇರಲಿಲ್ಲ. ಅಲ್ಲೇನು ನಡೆಯುತ್ತಿದೆ ಎಂಬ ಸುಳಿವು ಹೊರಜಗತ್ತಿಗೆ ಗೊತ್ತಾಗಲಿಲ್ಲ. ಆದರೆ, ಸೈನ್ಯದ ಸಂಪರ್ಕಕ್ಕೆ ಸೆಟಲೈಟ್ ಫೋನ್‍ಗಳನ್ನು ಒದಗಿಸಲಾಗಿತ್ತು.

ಅದಕ್ಕೆ ಹಿಂದಿನ ದಿನಗಳಲ್ಲಿ ಕಾಶ್ಮೀರದ ಕಣಿವೆಯಲ್ಲಿ ಭಯಗ್ರಸ್ತ ವಾತಾವರಣ ನಿರ್ಮಾಣವಾಗಿತ್ತು. ಕಳೆದ ಮೂರು ದಶಕಗಳಲ್ಲಿ ಕಫ್ರ್ಯೂ ವಾತಾವರಣವನ್ನು ಸಾಕಷ್ಟು ಅನುಭವಿಸಿ ಗೊತ್ತಿರುವ ಅವರು, ದಿನಗಟ್ಟಲೇ ಮನೆಯಿಂದ ಹೊರಗೆ ಬರದಿದ್ದರೂ ಬದುಕಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಪರದಾಡಿದರು. ದಿನ ತುಂಬಿದ ಗರ್ಭಿಣಿಯರ ಹೆರಿಗೆಗೆ ಏನು ಮಾಡಬೇಕೆಂದು ಕುಟುಂಬದವರು ಚಿಂತಾಕ್ರಾಂತರಾಗಿದ್ದರು.

ಆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಮತ್ತು ಇಂದು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷದ ಜೊತೆಗೇ ಹಿಂದೆ ಅಧಿಕಾರ ಹಂಚಿಕೊಂಡಿದ್ದ ಇಬ್ಬರನ್ನು ಗೃಹಬಂಧನದಲ್ಲಿರಿಸಲಾಗಿತ್ತು ಮತ್ತು ಘೋಷಣೆಯ ನಂತರ ಬಂಧಿಸಲಾಗಿತ್ತು. ಅವರಲ್ಲಿ ಒಬ್ಬರ ತಂದೆ (ಮುಫ್ತಿ ಮಹಮದ್ ಸಯೀದ್) ಈ ದೇಶದ ಗೃಹ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಭಯೋತ್ಪಾದಕರು ಅವರ ಮಗಳನ್ನು ಅಪಹರಿಸಿದ್ದರು. ಇನ್ನೊಬ್ಬರ ತಾತ (ಷೇಕ್ ಅಬ್ದುಲ್ಲಾ) ಒಬ್ಬ ಸೆಕ್ಯುಲರ್ ವ್ಯಕ್ತಿಯಾಗಿದ್ದು, ಕಾಶ್ಮೀರವು ಭಾರತದೊಂದಿಗೆ ಸೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಹೊತ್ತಿನ ಕಾಶ್ಮೀರದ ಅತ್ಯಂತ ಜನಪ್ರಿಯ ನಾಯಕರಾಗಿದ್ದ ಅವರು ಶ್ರೀನಗರ ಲಾಲ್‍ಚೌಕ್‍ನಲ್ಲಿ ನೆಹರು ಪಕ್ಕ ನಿಂತು ತನ್ನ ಜನರಿಗೆ ಜನಮತಗಣನೆಯ ಭರವಸೆಯನ್ನು ಕೊಟ್ಟಿದ್ದರು. ಆ ಭರವಸೆಯನ್ನು ಸ್ವತಃ ನೆಹರೂ ಉಳಿಸಿಕೊಳ್ಳದೇ, ತನ್ನೀ ಸ್ನೇಹಿತನನ್ನು ಬಂಧಿಸಿ ದೂರದ ಊಟಿಯಲ್ಲಿಟ್ಟಿದ್ದರು.
ಇಂತಹ ಮೋಸಗಳನ್ನು ಅನುಭವಿಸಿದ ಕಾಶ್ಮೀರಿಗಳು ದಿನೇ ದಿನೇ ಭಾರತ ಸರ್ಕಾರದಿಂದ ದೂರ ಸರಿದಿದ್ದರು. ಆದರೆ, ಭಾರತದಿಂದ ಅಲ್ಲ.

ಕೆಲವೇ ತಿಂಗಳು ನಡೆಯುವ ಅಮರನಾಥ ಯಾತ್ರೆಯೊಂದರಿಂದಲೇ 50,000 ಕಾಶ್ಮೀರಿಗಳು ತಮ್ಮ ಇಡೀ ವರ್ಷದ ಬದುಕನ್ನು ನಡೆಸುತ್ತಾರೆ. ಭಾರತದ ಜೊತೆಗೆ ಅವರದ್ದು ಶತಮಾನಗಳ ಸಂಬಂಧ. ಅದನ್ನು ಮತ್ತಷ್ಟು ಬೆಸೆದುಕೊಂಡು ಪ್ರೀತಿಯಿಂದ ಅವರನ್ನು ಗೆಲ್ಲುವ ಪ್ರಯತ್ನವನ್ನು ಕಾಂಗ್ರೆಸ್ಸೂ ಮಾಡಲಿಲ್ಲ, ಬಿಜೆಪಿಯೂ ಮಾಡಲಿಲ್ಲ. ಇದ್ದುದರಲ್ಲಿ ವಿ.ಪಿ.ಸಿಂಗ್, ದೇವೇಗೌಡರು ಮತ್ತು ಬಿಜೆಪಿಯ ವಾಜಪೇಯಿ ಆ ಪ್ರಯತ್ನವನ್ನು ಒಂದು ಮಟ್ಟಿಗಾದರೂ ಮಾಡಿದ್ದರು.

ಅಳಿದುಳಿದಿದ್ದ ವಿಶ್ವಾಸವನ್ನು ಕಿತ್ತುಹಾಕುವ ಹಾಗೆ ಮೋದಿ – ಅಮಿತ್‍ಷಾ ಸರ್ಕಾರ ಕಾರ್ಯಾಚರಣೆ ನಡೆಸಿದೆ. ಆ ಕಾರ್ಯಾಚರಣೆಯ ರೀತಿಯು ಇಡೀ ದೇಶಕ್ಕೆ ಒಂದು ಸಂದೇಶ ನೀಡಿದೆ. ದೇಶದ ಯಾವ ಭೂಭಾಗವನ್ನು ಬೇಕಾದರೂ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ತಮ್ಮ ಅಧೀನಕ್ಕೆ ಒಳಪಡಿಸಿಕೊಳ್ಳಲು ತಾವು ಶಕ್ತರಾಗಿದ್ದೇವೆ ಎಂಬುದೇ ಆ ಸಂದೇಶ. ಅದಕ್ಕೆ ಬೇಕಿರುವುದು, ಆ ಭೂಭಾಗದ ಜನರನ್ನು ಉಳಿದವರ ಕಣ್ಣಿನಲ್ಲಿ ದುಷ್ಟರನ್ನಾಗಿಸುವುದು. ಅದಕ್ಕೆ ಪೂರಕವಾಗಿ ದುಡಿಯಲು ಭಾರೀ ದೊಡ್ಡ ಮಾಧ್ಯಮ ಶಕ್ತಿ ಅವರೊಂದಿಗಿರುವುದರಿಂದ ಸೈನ್ಯದ ಬಲ ಎರಡನೆಯ ಸುತ್ತಿನಲ್ಲಷ್ಟೇ ಬೇಕಾಗುತ್ತದೆ. ಭಾರತ ಒಕ್ಕೂಟದ ಮೂಲಭೂತ ಆಶಯಕ್ಕೆ ವಿರುದ್ಧವಾಗಿ ಈ ಕೆಲಸ ನಡೆಯುತ್ತಿದೆ ಎಂಬುದನ್ನು ದೇಶದ ಪ್ರತಿಯೊಂದು ರಾಜ್ಯದ ಜನರೂ ಅರಿಯಬೇಕಿದೆ.

ಕಾಶ್ಮೀರದ ಜನರನ್ನು ಪ್ರೀತಿಯಿಂದ ಗೆದ್ದು ಅವರನ್ನು ಭಾರತದ ಅವಿಭಾಜ್ಯ ಅಂಗವಾಗಿಸಿಕೊಳ್ಳುವ ಹೊಣೆ ಈಗ ಸಂಪೂರ್ಣ ಭಾರತದ ಜನರದ್ದೇ ಆಗಿದೆ.

  • ಡಾ. ವಾಸು ಎಚ್.ವಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...