Homeಕರ್ನಾಟಕಸುಷ್ಮಾ ಸ್ವರಾಜ್‍ ರಿಗೊಂದು ಕಂಬನಿ... : ಜೊತೆಗೆ ಸುಷ್ಮಾ ಸ್ವರಾಜ್ ಸುತ್ತ ಹೆಣೆಯಲ್ಪಟ್ಟ ಕತೆಗಳು

ಸುಷ್ಮಾ ಸ್ವರಾಜ್‍ ರಿಗೊಂದು ಕಂಬನಿ… : ಜೊತೆಗೆ ಸುಷ್ಮಾ ಸ್ವರಾಜ್ ಸುತ್ತ ಹೆಣೆಯಲ್ಪಟ್ಟ ಕತೆಗಳು

- Advertisement -
- Advertisement -

ಆರು ಸಲ ಸಂಸದರಾಗಿ, ನಾಲ್ಕು ಸಲ ಶಾಸಕಿಯಾಗಿ, ಎರಡು ಸಲ ಸಚಿವೆಯಾಗಿ ಕೆಲಸ ಮಾಡಿದ ಸುಷ್ಮಾ ಸ್ವರಾಜ್ ತೀರಿಕೊಂಡಿದ್ದಾರೆ. ಭಾರತದ ಪುರುಷಕೇಂದ್ರಿತ ರಾಜಕಾರಣದಲ್ಲಿ ಇಷ್ಟು ಸುದೀರ್ಘ ಕಾಲ ಮಹಿಳೆಯೊಬ್ಬರು ರಾಜಕೀಯ ಮಾಡಿದ್ದು ಪ್ರಶಂಸಾರ್ಹ. ವಿದೇಶಾಂಗ ಸಚಿವೆ ಆಗಿದ್ದಾಗ ಹಲವು ಜನರ ಚಿಕಿತ್ಸೆಗೆ ಅವರು ನೆರವಾದರು, ಅಪ್ಪಟ ದೇಶಪ್ರೇಮಿಯಾಗಿದ್ದರು ಇತ್ಯಾದಿ ವಿವರಗಳನ್ನು ನಮ್ಮ ಮಾಧ್ಯಮಗಳು ಕೊಂಚ ಉತ್ಪ್ರೇಕ್ಷೆಯಿಂದಲೇ ವರದಿ ಮಾಡುತ್ತಿವೆ ಅನಿಸುತ್ತಿದೆ.

ಅದರಲ್ಲೂ ಕರ್ನಾಟಕದ ಜೊತೆಗಿನ ಅವರ ಸಂಬಂಧದ ಕುರಿತು ‘ಅದೊಂದು ಆದರ್ಶದ ರಾಜಕೀಯ’ ಎಂಬಂತೆ ಬಿಂಬಿಸಲಾಗುತ್ತಿದೆ. ಇಂತಹ ಆತ್ಮವಂಚನೆಯ ವರದಿ, ಹೊಗಳಿಕೆಗಳು ನಾಡಿನ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಬಾರದು ಎಂಬ ಕಾರಣಕ್ಕೆ ಇಲ್ಲಿ ಕೆಲವು ವಾಸ್ತವಗಳನ್ನು ನಿಮ್ಮ ಮುಂದೆ ಇಡಲೇಬೇಕಾಗಿದೆ.

ಅವರ ‘ಅಪ್ಪಟ ದೇಶಪ್ರೇಮ’ ಆರೆಸ್ಸೆಸ್ ಮಾದರಿಯದ್ದಾಗಿತ್ತೇ ಹೊರತು ಅದೆಂದೂ ವಿಶಾಲ ಭಾರತದ ಸರ್ವಜನರನ್ನೂ ಒಳಗೊಳ್ಳುವ ಭಾರತದ ಬಗೆಗಿನ ಪ್ರೇಮವಾಗಿರಲಿಲ್ಲ; ಅದು ಹಿಂದೂ ರಾಷ್ಟ್ರವೆಂಬ ಮತಾಂಧ ಪರಿಕಲ್ಪನೆಯ ಭಾಗವಾಗಿ ಅರಳಿದ ‘ದೇಶಪ್ರೇಮ’ವಾಗಿತ್ತಷ್ಟೇ. ಇನ್ನು ಇಷ್ಟು ಸುದೀರ್ಘ ಕಾಲ ಮಹಿಳೆಯೊಬ್ಬರು ರಾಜಕೀಯ ಮಾಡುವುದು ಕಷ್ಟಸಾಧ್ಯ. ಆದರೆ ಇತರೆಲ್ಲಾ ಪಕ್ಷಗಳ ಮಹಿಳಾ ರಾಜಕಾರಣಿಗಳಂತೆ ಮಹಿಳೆಯರ ಮೇಲೆ ತಮ್ಮ ಪಕ್ಷದವರಿಂದಲೇ ದೌರ್ಜನ್ಯ, ದಬ್ಬಾಳಿಕೆ ನಡೆದಾಗ ಅದರು ವಿರುದ್ಧ ಇವರು ದನಿಯೆತ್ತಿದ್ದು ಕಂಡುಬಂದಿಲ್ಲ.

2004ರಲ್ಲಿ ಯುಪಿಎಗೆ ಬಹುಮತ ಬಂದು ಸೋನಿಯಾ ಗಾಂಧಿಯವರಿಗೆ ಪ್ರಧಾನಿ ಹುದ್ದೆ ಸಿಗುವ ಸಾಧ್ಯತೆಯಿದ್ದಾಗ ಬಿಜೆಪಿ ಮತ್ತು ಸಂಘ ಪರಿವಾರದಿಂದ ತೀವ್ರ ವಿರೋಧ ವ್ಯಕ್ತವಾಗಿತು. ಆಗ ಸಂಘ ಪರಿವಾರ ಬಳಸಿಕೊಂಡಿದ್ದು ಹಣೆ ತುಂಬ ಕುಂಕುಮ ಇಡುವ ‘ಮಾದರಿ’ ಹಿಂದೂ ಮಹಿಳೆ ಸುಷ್ಮಾರನ್ನು. ‘ಸೋನಿಯಾ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಳ್ಳುವೆ, ಜೀವನಪರ್ಯಂತ ಬಿಳಿ ಸೀರೆ ಉಡುವೆ’ ಹೀಗೆಲ್ಲ ಅಸಹ್ಯ ಮಾತಾಡಿದ ಸುಷ್ಮಾರನ್ನು ಧೀಮಂತ ನಾಯಕಿ ಎಂದು ಹೇಗೆ ಕರೆಯುವುದು? ಸೋನಿಯಾರನ್ನು ತಡೆಯುವ ಭರದಲ್ಲಿ ಅವರು ತಮಗೆ ತಾವೇ ಅವಮಾನ ಮಾಡಿಕೊಡಿದ್ದರು.

ಕರ್ನಾಟಕದ ಜೊತೆಗೆ ಅವರಿಗೆ ತುಂಬ ಆತ್ಮೀಯ ಸಂಬಂಧ ಇತ್ತು, ಕರ್ನಾಟಕದ ಬಗ್ಗೆ ಅಪಾರ ಕಾಳಜಿ ಇತ್ತು ಎಂದೆಲ್ಲ ನಮ್ಮ ಮಾಧ್ಯಮಗಳು ಹೇಳಿವೆ, ಹೇಳುತ್ತಲೇ ಇವೆ. ಹೌದು ಅವರಿಗೆ ಬಳ್ಳಾರಿಯೊಂದಿಗೆ ಅವರಿಗೆ ‘ಆತ್ಮೀಯ’ ಒಡನಾಟವಿತ್ತೇ ವಿನಃ ಇಡೀ ಕರ್ನಾಟಕದೊಂದಿಗೆ ಅಲ್ಲ. ಬಳ್ಳಾರಿಯ ಜೊತೆಗಿನ ಒಡನಾಟ ಬಳ್ಳಾರಿಯ ಕಾಳಜಿಯಿಂದ ಮೂಡಿದ್ದಲ್ಲ, ಅದು ಸ್ವಾರ್ಥದಿಂದ ಕೂಡಿದ್ದಾಗಿತ್ತು ಅಷ್ಟೇ…

1999ರಲ್ಲಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಿದಾಗ ಅವರ ವಿರುದ್ಧ ಸುಷ್ಮಾರನ್ನು ಕಣಕ್ಕಿಳಿಸಲಾಗಿತು. ‘ಸೋನಿಯಾ ವಿದೇಶಿ ಮಹಿಳೆ’ ಎಂದೆಲ್ಲ ಈ ‘ಅಪ್ಪಟ’ ದೇಶೀ ನಾರಿ ಕೂಗಾಡಿಕೊಂಡರೂ 56 ಸಾವಿರ ಮತಗಳಿಂದ ಸೋತರು. ಆಗಲೇ ಅವರಿಗೆ ಬಳ್ಳಾರಿಯ ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು ಥರದವರ ಸಂಪರ್ಕ ಪ್ರಾಪ್ತವಾಗಿತು. ಆಗಿನ್ನೂ ಗಣಿ ದಂಧೆ ತಾರಕಕ್ಕೆ ಏರಿರಲಿಲ್ಲ. ‘ಎನ್ನೋಬಲ್’ ಎಂಬ ಹಣಕಾಸಿನ ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಟೋಪಿ ಹಾಕಿದ್ದ ರೆಡ್ಡಿಗಳು ಬಿಜೆಪಿಯಲ್ಲಿ ನೆಲೆ ಕಂಡುಕೊಂಡಿದ್ದರು.

1999-2004ರ ವಾಜಪೇಯಿ ಸರ್ಕಾರದಲ್ಲಿ ಸುಷ್ಮಾ ಸಚಿವೆಯಾಗಿದ್ದರು. 2003ರ ವೇಳೆಗೆ ಕಬ್ಬಿಣ ಅದಿರಿಗೆ ಹೊರದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಚೀನಾದಲ್ಲಿ ದೊಡ್ಡ ಬೇಡಿಕೆ ಉಂಟಾಗಿತು. ಅಷ್ಟೊತ್ತಿಗೆ ಸುಷ್ಮಾ ಕೃಪೆಯಿಂದ ಗಣಿ ದಂಧೆಗಿಳಿದಿದ್ದ ರೆಡ್ಡಿಗಳು ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ಕರ್ನಾಟಕದ ಸಾರ್ವಜನಿಕ ಸಂಪತ್ತನ್ನೆಲ್ಲ ಲೂಟಿ ಮಾಡಿದ್ದರು.

1999ರಲ್ಲಿ ಬಳ್ಳಾರಿಯಲ್ಲಿ ಸೋತ ಮೇಲೆಯೂ 2010ರವರೆಗೂ ಸುಷ್ಮಾರವರು ಕರ್ನಾಟಕದ ನಂಟು ಬಿಡಲೇ ಇಲ್ಲ ಎಂದು ಬಹುಪಾಲು ಮಾಧ್ಯಮಗಳು ಹೇಳುತ್ತಿವೆ. ನಿಜ, ಅದು ನಂಟಲ್ಲ, ಗಂಟಿನ ಕತೆ… ಸುಷ್ಮಾರವರು 1999ರಲ್ಲಿ ಸೋತ ನಂತರ ಪ್ರತಿವರ್ಷವೂ ಬಳ್ಳಾರಿಗೆ ಬಂದು ವರ ಮಹಾಲಕ್ಷ್ಮೀ ಹಬ್ಬ ಆಚರಿಸುತ್ತಿದ್ದರು. ರೆಡ್ಡಿ-ಶ್ರೀರಾಮುಲುಗಳನ್ನು ಅವರು ಮಕ್ಕಳೆನ್ನುವುದು, ಈ ಗಣಿಗಳ್ಳರು ಅವರನ್ನು ‘ಅಮ್ಮ’ ಎನ್ನುವುದು ಕೆಲವು ತೆಲುಗು ಸಿನಿಮಾದ ವಿಲಕ್ಷಣ ನಡವಳಿಕೆಗಳಂತೆ ಕಾಣುತ್ತಿದ್ದವು.

ಬಳ್ಳಾರಿಗೆ ಬರುತ್ತಿದ್ದ ‘ಅಮ್ಮ’ ಮಕ್ಕಳ ಮನೆಯಲ್ಲಿ ವರ ಮಹಾಲಕ್ಷ್ಮಿ ಹಬ್ಬ ಮಾಡುತ್ತಿರಲಿಲ್ಲ! ಬದಲಿಗೆ ಬಳ್ಳಾರಿಯ ಬ್ರಾಹ್ಮಣ ಕುಟುಂಬವೊಂದರ ಮನೆಯಲ್ಲಿ ಈ ಡ್ರಾಮಾ ಜರುಗುತ್ತಿತ್ತು! ಇದರಿಂದ ಎಂತಹ ಜಾತಿ ಮನಸ್ಸು ಸುಷ್ಮಾ ಅವರದ್ದು ಎಂದು ವಿವರಿಸುವ ಅಗತ್ಯವಿಲ್ಲ ಅಲ್ಲವೇ? ಆದರೆ ಆ ಬ್ರಾಹ್ಮಣರ ಮನೆಯಲ್ಲಿ ಎಲೆ, ಅಡಿಕೆ, ಕುಂಕುಮ, ಅರಿಷಿಣ, ಸೀರೆಗಳ ಉಡಿ ತುಂಬಿಕೊಳ್ಳುತ್ತಿದ್ದ ನಂತರ ಅವರ ಸವಾರಿ ಸೀದಾ ರೆಡ್ಡಿಗಳ ಮನೆ ಕಡೆ ಹೊರಡುತ್ತಿತ್ತು. ಅಲ್ಲಿ ನಿಜವಾದ ಉಡಿ ತುಂಬುವ ಕಾರ್ಯ ನಡೆಯುತ್ತಿತ್ತು. ಈ ನಾಡಿನ ಸಂಪತ್ತಿನ ಲೂಟಿಯ ಒಂದು ಭಾಗ ಅದಿರಿನ ಧೂಳಿನ ಹಾಗೆ ದೆಹಲಿ ಕಡೆ ಹಾರಿ ಹೋಗುತ್ತಿತ್ತು.

2008ರಲ್ಲಿ ಯಡಿಯೂರಪ್ಪ ಸರ್ಕಾರವಿದ್ದಾಗಲಂತೂ ರೆಡ್ಡಿ-ಶ್ರೀರಾಮುಲುಗಳ ಕಾರುಬಾರು ಭಾರೀ ಜೋರಾಗಿತ್ತಲ್ಲ? ಒಮ್ಮೆ ಯಡಿಯೂರಪ್ಪರನ್ನೇ ಕೆಡವಲು ಈ ಅಡವಿ-ದೊಂಗುಲುಗಳು ಕೈ ಹಾಕಿದಾಗ ಉಡಿ ತುಂಬಿಸಿಕೊಂಡವರ ಸಪೋರ್ಟೂ ಅದಕ್ಕಿತ್ತು! ಮುಂದೆ ಅಡ್ವಾಣಿ ಸಮ್ಮುಖದಲ್ಲಿ ಯಡಿಯೂರಪ್ಪ ಮತ್ತು ರೆಡ್ಡಿ – ರಾಮುಲಗಳ ನಡುವೆ ರಾಜಿ ಮಾಡಿಸಿದ್ದು ಇದೇ ಸುಷ್ಮಾ ಮೇಡಮ್ಮು.

ಯಾವಾಗ ಜನಾರ್ಧನರೆಡ್ಡಿ ಜೈಲು ಪಾಲಾದರೋ ಆಗ ಯು ಟರ್ನ್ ತೆಗೆದುಕೊಂಡ ಸುಷ್ಮಾರವರು, ‘ರೆಡ್ಡಿ-ರಾಮುಲು ಇತ್ಯಾದಿ ಎಲ್ಲ ನನಗೆ ವಿಶೇಷವಾಗಿ ಗೊತ್ತಿಲ್ಲ. ಎಲ್ಲ ಬಿಜೆಪಿ ಕಾರ್ಯಕರ್ತರಂತೆ ಅವರೂ ಪರಿಚಯ ಅಷ್ಟೇ’ ಎಂದು ಕೈ ಎತ್ತಿಬಿಟ್ಟರು! ಈಗ ಹೇಳಿ, ಸುಷ್ಮಾ ಧೀಮಂತ ನಾಯಕಿ ಆಗಿದ್ದರೇ? ಆದರೆ ಅವರ ನಂತರದಲ್ಲಿ ಪ್ರವರ್ಧಮಾನಕ್ಕೆ ಬಂದ ನರೇಂದ್ರಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಥರಹದ ತೀವ್ರಗಾಮಿ ನಾಯಕರನ್ನು ನೋಡಿದಾಗ ಸುಷ್ಮಾರವರಂತವರು ಸಭ್ಯರಂತೆ ಕಂಡುಬರುವುದು ಈ ಕಾಲದ ದುರಂತಗಳಲ್ಲೊಂದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ವಸ್ತುನಿಷ್ಟ ವಿಶ್ಲೇಷಣೆ.
    ವ್ಯಕ್ತಿಯೋರ್ವ ಇಲ್ಲವಾದಾಗ ಔಪೋಚಾರಿಕ ಸ್ಮರಣೆ ನಾಗರೀಕ ಲಕ್ಷಣ ನಿಜ, ಆದರೆ ಅತಿಶಯ ಗುಣಗಾನ ಆತ್ಮವಂಚನೆ ಮತ್ತು ಸುಳ್ಳುಗಳ ಮಾದರಿ ಕಟ್ಟಿಕೊಡುವ ಕೆಲಸವೇ ಆಗಿರುತ್ತದೆ.
    ಚರಿತ್ರೆಯೇ ಅರಿವಿಲ್ಲದ ಮಾಧ್ಯಮಗಳು ಸಮೂಹ ಸನ್ನಿಯಂತೆ ಪರಾಕು ಹಾಕುತ್ತಿರುವುದು ಅಸಹ್ಯವಷ್ಟೆ.
    ಇದರ ನಡುವೆ ಮಲ್ಲನಗೌಡರು ಅಸಲಿ ಸುಷ್ಮಾ ಅವರನ್ನು ಮತ್ತೆ ಪರಿಚಯಿಸಿದ್ದಾರೆ.

  2. ತಲೆ ಬೋಲಸಕೋತಿನಿ ಅಂತ ಹೇಳಿದ್ದು ಉಮಾ ಭಾರತಿ ಇವರಲ್ಲ . ಉಳಿದೆರೋ ನಿಮ್ಮ ಮಾತು ನಿಜವಾಗಿದೆ .

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...