Homeಮುಖಪುಟಯಾಕ್ಸಾರ್ ಮೋದಿ ಖಾಲಿಬಾಟ್ಳಿ ಪ್ಲಾಸ್ಟಿಕ್ ಲೋಟ ಆಯ್ತಾಯಿದ್ರು! - ಬಿ.ಚಂದ್ರೇಗೌಡ

ಯಾಕ್ಸಾರ್ ಮೋದಿ ಖಾಲಿಬಾಟ್ಳಿ ಪ್ಲಾಸ್ಟಿಕ್ ಲೋಟ ಆಯ್ತಾಯಿದ್ರು! – ಬಿ.ಚಂದ್ರೇಗೌಡ

- Advertisement -
- Advertisement -

ಶಿವಮೊಗ್ಗದಿಂದ ಮೈಸೂರಿಗೆ ರೈಲಿನಲ್ಲಿ ಹೋಗುತ್ತಿರಬೇಕಾದರೆ, ಕೆ.ಆರ್.ನಗರದ ಬಳಿ ಮೂವರು ಮುಸ್ಲಿಂ ಯುವಕರು ಓಡಿಬಂದು ರೈಲತ್ತಿಕೊಂಡರು. ಅಲ್ಲದೆ ತಾವು ಕೂರುವುದಕ್ಕೆ ಮೊದಲು ತಮ್ಮ ಕೈಚೀಲಗಳನ್ನು ಸೀಟಿನ ಮೇಲೆ ಎಸೆದು, ಒಬ್ಬರ ಮೇಲೊಬ್ಬರು ಬಿದ್ದು ಓಡಿ ಬಂದು ದಣಿವಾರಿಸಿಕೊಳ್ಳತೊಡಗಿದರು. ಈ ಶ್ರಮಜೀವಿಗಳ ಜೀವನೋತ್ಸಾಹ ನೋಡುವಂತದ್ದು. ಅದೇ ಕಂಪನಿಗಳ, ಸರಕಾರದ ಕರ್ಮಾಚಾರಿಗಳ ನಿರುತ್ಸಾಹದ ಮುಖಗಳನ್ನ ನೋಡಿದರೆ ಅಯ್ಯೋ ಪಾಪ ಎನ್ನಿಸುತ್ತದೆ. ಆದ್ದರಿಂದ ನನ್ನೆದುರು ಕುಳಿತ ಹುಡುಗರನ್ನು ಮಾತನಾಡಬೇಕೆನಿಸಿತು.

“ಎಲ್ಲಿಂದ ಬರ್ತಾಯಿದ್ದೀರಿ” ಎಂದೆ.
“ಕೆ.ಆರ್.ನಗರದಿಂದ ಶಾರ್.”
“ಏನು ಮಾಡ್ತಿರಿ.”
“ಪೈಂಟಿಂಗ್ ಮಾಡ್ತಿವಿ ಶಾರ್.”
“ಊರ್ಯಾವುದು.”
“ಮೈಸೂರು” ಎಂದವನು ಸರಿಯಾಗಿ ಕುಳಿತು, ನನ್ನೊಡನೆ ಮಾತನಾಡುವ ಉತ್ಸಾಹ ತೋರಿದ. ಉಳಿದಿಬ್ಬರು ಬಾಗಿಲಲ್ಲಿ ನಿಂತು ಗಾಳಿಗೆ ಮೈವೊಡ್ಡಿದರು.
“ಈ ಹಾಳು ಬಿಜೆಪಿಗಳು ರೈಲಿನ ಬಣ್ಣನೂ ಬದ್ಲಾಸ್ತ ಅವೆ ಕಣಯ್ಯ” ಎಂದೆ.
“ಹೌದು ಶಾರ್, ಮದ್ಲಿಂದು ಬಣ್ಣ ಎಷ್ಟು ದೂಳು ಬಿದ್ರೂ ಕಾಣ್ತಿರಲಿಲ್ಲ. ಈಗ ರೈಲು ನೋಡಿದ್ರೆ ಮೈಮೇಲೆ ಮಣ್ಣು ಹುಯ್ಕಂಡು ಓಡಾಡ್ತವೆ.” ಎಂದ.
“ಬಿಜೆಪಿಗಳು ಬಣ್ಣ ಬದ್ಲಾಯಿಸ್ತವೆ ಅಷ್ಟೇ, ಇನ್ನೇನು ಆಗದಿಲ್ಲ ಅವುರ ಕೈಲಿ” ಎಂದೆ.
“ಈಗ ಯಾರ್ ಬರ್ತರೆ ಸಾರ್ ಸೀಟಿಗೆ.”
“ಯಾವ ಸೀಟಿಗೆ.”
“ಮೋದಿ ಸೀಟಿಗೆ ”
“ಯಾರು ಬರದಿಲ್ಲ.”
“ಮತ್ತೆ ಎಲೆಕ್ಷನ್ ಬಂದುಬಿಟ್ಟಿದೆ.”
“ಅದು ಉಪ ಚುನಾವಣೆ. ನಮ್ಮ ಸ್ಟೇಟಿಗೆ ಬಂದದೆ ಅಷ್ಟೇ.”
“ಓ ಎಡೂರಪ್ಪನ ಸೀಟಿಗೆ ಅನ್ನಿ.”
“ಹೌದು.”
“ಯಾಕ್ಸ ಮತ್ತೆ ರಿಟನ್ ಯಲಕ್ಷನ್ನು”
“ಅದೂ ನಿಮ್ಮ ಕೆ.ಆರ್.ನಗರದ ವಿಶ್ವನಾಥ್ ಗೊತ್ತ, ಅವುನಂತ ಹದಿನೇಳು ಜನನ ಬಿಜೆಪಿಗಳು ಕೊಂಡಕಂಡ್ರು.”
“ಅಂಗೆ ಮನುಸುರ್ನೆ ಕೊಳ್ಳಬವುದ ಶಾರ್.”
“ಮನುಷ್ಯರನ್ನ ಕೊಳ್ಳಕ್ಕಾಗಲ್ಲ. ಶಾಸಕರ ಕೊಳ್ಳಬವುದು.”
“ಒಳ್ಳೆ ಮಜಾ ಇದೆ ಶಾರ್ ಮ್ಯಾಟ್ರು.”
“ನಮಿಗೆ ಮಜಾ. ಸರಿ, ಅವುರ ಪಜೀತಿ ಯಾರಿಗೂ ಬ್ಯಾಡ ಅಂಗಾಗ್ಯದೆ.”
“ಯಾಕ್ ಶಾರ್ ಅಮೌಂಟು ಕೊಡ್ನಿಲ್ವಾ.”
“ಅದೇ ಡೌವುಟು.”
“ನಮ್ಗೂ ಅಂಗೆ ಆಗ್ತದೆ ಸಾ. ಪೈಂಟಿಂಗ್ ವರ್ಕು ಮಾಡಿಸಿಕ್ಯಂಡು ಕೈ ಎತ್ತಿಬಿಡ್ತರೆ. ಅದ್ಕೆ ನಾವು ಸರಿಯಾಗಿ ಅಡ್ವಾನ್ಸ್ ಕೇಳ್ತಿವಿ.”
“ಈ ಶಾಸಕರಿಗೆ ಅಡ್ವಾನ್ಸ್ ದುಡ್ಡು ಬಂದದೆ. ಆದ್ರೆ ಅಧಿಕಾರ ಬರಲಿಲ್ಲ.”
“ಯಾಕ್ಸಾ.”

“ಆಗಿನ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಈ ಖರೀದಿ ವ್ಯವಾರನೆ ರದ್ದು ಮಾಡಿಬುಟ್ರು. ಅದ್ಕೆ ಇವುರ್ಯಲ್ಲ ಎಂಎಲ್ಲೆಯೆ ಗಿರಿ ಕಳಕಂಡ್ರು.”
“ನಮಕ್ ಹರಾಮ್‍ಗಳಿಗೆ ಸರಿಯಾಗಿ ಆಗಿದೆ ಬುಡಿ ಶಾರ್.”
ಇದು ಒಟ್ಟರಾಶಿ ಅವನ ಅಭಿಪ್ರಾಯವಿದ್ದಂತೆ ಅನಿಸಿತು. ಶಾಸಕರ ಖರೀದಿ, ಸರಕಾರ ಬೀಳಿಸಿ ಅದರಿಂದಾದ ಅನಾಹುತಗಳು, ಈ ವಿವರವೆಲ್ಲಾ ಅವನ ಅಭಿಪ್ರಾಯದೊಳಗೆ ಸೇರಿರದೆ ಬಿಜೆಪಿಗೆ ಮಾರಾಟದ ವ್ಯವಹಾರದಲ್ಲಿ ಮೋಸಹೋದವರನ್ನ ಬೈದಂತೆ ಕಂಡಿತು.
“ಮೋದಿಗೆ ಏನೊ ಒಳ್ಳೆ ಎಜುಕೇಶನ್ ಇ¯ವಂತಲ್ಲ ಶಾರ್.”
“ಹೌದು.”
“ಎಗ್ಸಾಂಗೆ ಹೋಗಿಲವಂತೆ ಶಾರ್. ಪ್ರೈವೇಟ್ ಇಸ್ಕೂಲ್‍ಗೆ ಹೋಗಿ ಮಾರ್ಕ್ಸ್‌ ಕಾರ್ಡು ತಂದುಬಿಟ್ಟಿದ್ದಾರಂತೆ.”
“ಅವುರು ಪಡದಿರೋ ಶಿಕ್ಷಣದ ಬಗ್ಗೆ ಯಲ್ಲಾರಿಗೂ ಡೌಟಿದೆ.”
“ಮತ್ತೆ ಯಂಗೆ ಶಾರ್ ಪ್ರಧಾನಿ ಸೀಟು ಮ್ಯಾಲೆ ಕುಂತವುರೆ.”
“ಪ್ರಧಾನಿಯಾಗಕ್ಕೆ ತುಂಬ ಓದಿರಬೇಕು ಅಂತ ಇಲ್ಲ. ಅನುಭವ, ಹೃದಯವಂತಿಕೆ ಇರಬೇಕು. ಅಂಗೆ ನೋಡಿದ್ರೆ ನಮ್ಮ ದ್ಯಾವೇಗೌಡ್ರು ಡಿಪ್ಲಮೋ ಇಂಜಿನಿಯರ್. ಮುಖ್ಯಮಂತ್ರಿಯಾಗಿ ಎಷ್ಟು ಚನ್ನಾಗಿ ಆಡಳಿತ ಮಾಡಿದ್ರು, ಪ್ರಧಾನಿಯಾಗಿ ಕಾಶ್ಮೀರದ ಚುನಾವಣೆ ಮಾಡಿದ್ರು.”
“ಅವುರೆ ಇರಬೇಕಿತ್ತು ಶಾರ್. ಈ ಮೋದಿ ಬರ್ತಾನೆ ಇರಲಿಲ್ಲ.”
“ಬಂದುಬುಟ್ಟವುನಲ್ಲ ಸಯಿಸಗಬೇಕು.”
“ನಮ್ದು ರಫೀಕ್ ಮೊಬೈಲಿಗೆ ಒಂದು ಫಿಲಂ ಬಂದಿದೆ ಶಾರ್. ಮೋದಿ ನಮ್ಮ ಜುಬೇರ್ ಸಾಬರ ತರ ಹಳೆ ಸೀಸ, ಪ್ಲಾಸ್ಟಿಕ್ ಡಬ್ಬನೆಲ್ಲಾ ತಗ್ದಿ ತಗ್ದಿ ಚೀಲ್ದವಳಗೆ ತುಂಬಿಕಂಡು ಹೋಗ್ತಾಯಿದ್ರು. ಯಾಕ್ ಶಾರ್ ಅಂಗೆ ಮಾಡಿದಾರೆ.”
“ನೀನಾಗ್ಲೆ ಹೇಳಿದಲ್ಲಯ್ಯ ಎಜುಕೇಶನ್ ಇಲ್ಲ ಅಂತ, ಅದರ ಕೊರತೆ ಇದು. ಅಂತ ಕೆಲ್ಸ ಮಾಡಿ ಪೋಟೊ ವಡಿಸಿಗ್ಯಂಡು ಪೇಪರ್‍ಗಾಕ್ಸಿದ್ರೆ ಪ್ರಧಾನಿ ಎಷ್ಟು ಒಳ್ಳೆಯವರು, ಇಂತ ಮನ್ಸ ಹಿಂದೆ ಪ್ರಧಾನಿಯಾಗಿರಲಿಲ್ಲ ಅಂತ ತಿಳಕತಾರೆ ಅನ್ನಕಂಡು ಗಿಮಿಕ್ ಮಾಡ್ತ ಅವುರೆ.”
“ಅಂಗೆ ಮಾಡಬಾರ್ದು ಶಾರ್. ಆ ಸೀಟ್‍ಮೇಲೆ ಕುಂತಗಂಡಿ ಹಳೇ ಪೇಪರ್, ಖಾಲಿ ಸೀಸದ ಯವಾರ ಮಾಡಬಾರ್ದು.”

“ಇನ್ನೂ ನೋಡಿವಿರು. ಹೋಟ್ಳಿಗೆ ಬಂದು ಕಡಕ್ ಟೀ ಮಾಡಿ, ಯಲ್ಲಾರಿಗೂ ಕೊಟ್ಟು ಪೋಟೊ ವಡಿಸಿಗ್ಯಂಡು ಪೇಪರ್‍ಗಾಕುಸ್ತರೆ.”
“ಎಜುಕೇಶನ್ ಇಲ್ಲ ಅಂದ್ರೆ ಇಂಗೆ ಅಲವ ಶಾರ್. ಮೋದಿ ಹಿಂಗೆ ಮಾಡ್ತ ಹೋದ್ರೆ ಪುನ ಇಂಗ್ಲಿಸ್‍ನೋರು ಬಂದು ಸೀಟ್ ಮೇಲೆ ಕೂರ್ತರೆ ಅಷ್ಟೇ.”
“ಅವುರೀಗ ಬರಲ್ಲ.”
“ಯಾಕ್ ಬರಲ್ಲ ಶಾರ್. ನಮ್ ನಮ್ಗೆ ಜಗಳ ತಂದುಹಾಕಿ ನಾವೆಲ್ಲ ಹಿಂಗೆ ಜಗಳ ಮಾಡ್ತಯಿದ್ರೆ ಸೈಲೆಂಟಾಗಿ ಬಂದು ಬ್ರಿಟಿಷ್ ಜನ ಸೀಟ್ ಮೇಲೆ ಕೂರ್ತರೆ. ಆಗ ನಮ್ದು ಕತೆ ಹೋಗ್ಲಿ, ಮೋದಿಗೆ ಹಳೆ ಪೇಪರ್ ಪ್ಲಾಸ್ಟಿಕ್ ಸೀಸ ಬಾಟ್ಳಿನೆ ಗತಿ” ಎಂದು ನಕ್ಕ. ಈ ಮಾತಿಗೆ ಎಲ್ಲರೂ ನಕ್ಕರು.

ಚಿಕ್ಕಮಗಳೂರು ಕಡೆಯಿಂದ ದಸರಾ ನೋಡಲು ಹೋಗುತ್ತಿದ್ದ ಕೆಲವರಿಗೆ ಈ ಸಾಬರ ಹುಡುಗ ಮಾಡುತ್ತಿರುವ ಟೀಕೆ ಸಹಿಸಲಾಗದ್ದನ್ನು ಅವರ ಮುಖಗಳೇ ಹೇಳುತ್ತಿದ್ದವು. ಅಷ್ಟರಲ್ಲಿ ಸೀತಾಫಲ ಮಾರುವ ವ್ಯಕ್ತಿ ಬಂದ. ಹುಡುಗ ಸೀತಾಫಲ ತೆಗೆದುಕೊಂಡು ಅರ್ಧರ್ಧ ಹಿಸಿದು ಎದುರು ಕುಳಿತವರಿಗೆ ಕೊಟ್ಟ. ನಂತರ ಬಂದ ಸಪೋಟವನ್ನು ತೆಗೆದುಕೊಂಡು ಕೊಡಲು ಬಂದ “ಬ್ಯಾಡ ಕಣಪ್ಪ, ಅದು ತುಂಬ ಶುಗರು” ಎಂದೆ. “ತಿನ್ನಿ ಶಾರ್ ಹಣ್ಣು ತಿಂದ್ರೆ ವಳ್ಳೇದು.” ಎಂದು ಅರ್ಧ ಭಾಗಕೊಟ್ಟ. ಅವನ ಆಂತರ್ಯದಲ್ಲಿ ಬಿಜೆಪಿ ಜನ, ಜನಾಂಗೀಯ ದ್ವೇಷವನ್ನು ಹುಟ್ಟುಹಾಕುವುದಕ್ಕೆ ದಿಗಲುಗೊಂಡು ಸಾಮರಸ್ಯದಿಂದ ಬದುಕುವ ಮನಸ್ಸು, ಹಣ್ಣು ಹಂಚಿಕೆಯ ಹಿಂದೆ ಗೋಚರಿಸಿತು. ಅಷ್ಟರಲ್ಲಿ ಎಲ್ಲ ಜನಾಂಗವೂ ಸೇರಿ ಸಂಭ್ರಮದಿಂದ ಆಚರಿಸುವ ದಸರಾ ತಾಣ ಮೈಸೂರು ಬಂತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....

‘ಗೋಮಾಂಸ’ ತಂದ ನೆಪ: ಅಸ್ಸಾಂನಲ್ಲಿ ಐವರು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಕ್ರಮ; ಸುಳ್ಳು ಪ್ರಕರಣದಡಿ ಒಂಟಿ ತಾಯಿ ಮತ್ತು ಅಪ್ರಾಪ್ತ ಮಗನ ಬಂಧನ

ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಹೆಸರಿನಲ್ಲಿ ಶಾಲಾ ಆವರಣಗಳೂ ಸಹ ಕೋಮು ರಾಜಕಾರಣದ ಪ್ರಯೋಗಶಾಲೆಗಳಾಗುತ್ತಿರುವುದಕ್ಕೆ ಅಸ್ಸಾಂನಿಂದ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರಲ್ಲಿ ಮುಸ್ಲಿಂ...

ಪ್ರಧಾನಿ ನರೇಂದ್ರ ಮೋದಿಯ 12 ವರ್ಷದ ಸಾಧನೆ ಏನು? ಅವರು ಮುರಿದ ದಾಖಲೆಯಾದರೂ ಯಾವುದು?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ ಸತತ 12ವರ್ಷಗಳು (4,399 ದಿನಗಳು) ಪ್ರಧಾನಿ ಹುದ್ದೆ ಅಲಂಕರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷ ತುಂಬಿದ ಹಿನ್ನೆಲೆ ಬಿಜೆಪಿ...