Homeಮುಖಪುಟಯಾಕ್ಸಾರ್ ಮೋದಿ ಖಾಲಿಬಾಟ್ಳಿ ಪ್ಲಾಸ್ಟಿಕ್ ಲೋಟ ಆಯ್ತಾಯಿದ್ರು! - ಬಿ.ಚಂದ್ರೇಗೌಡ

ಯಾಕ್ಸಾರ್ ಮೋದಿ ಖಾಲಿಬಾಟ್ಳಿ ಪ್ಲಾಸ್ಟಿಕ್ ಲೋಟ ಆಯ್ತಾಯಿದ್ರು! – ಬಿ.ಚಂದ್ರೇಗೌಡ

- Advertisement -
- Advertisement -

ಶಿವಮೊಗ್ಗದಿಂದ ಮೈಸೂರಿಗೆ ರೈಲಿನಲ್ಲಿ ಹೋಗುತ್ತಿರಬೇಕಾದರೆ, ಕೆ.ಆರ್.ನಗರದ ಬಳಿ ಮೂವರು ಮುಸ್ಲಿಂ ಯುವಕರು ಓಡಿಬಂದು ರೈಲತ್ತಿಕೊಂಡರು. ಅಲ್ಲದೆ ತಾವು ಕೂರುವುದಕ್ಕೆ ಮೊದಲು ತಮ್ಮ ಕೈಚೀಲಗಳನ್ನು ಸೀಟಿನ ಮೇಲೆ ಎಸೆದು, ಒಬ್ಬರ ಮೇಲೊಬ್ಬರು ಬಿದ್ದು ಓಡಿ ಬಂದು ದಣಿವಾರಿಸಿಕೊಳ್ಳತೊಡಗಿದರು. ಈ ಶ್ರಮಜೀವಿಗಳ ಜೀವನೋತ್ಸಾಹ ನೋಡುವಂತದ್ದು. ಅದೇ ಕಂಪನಿಗಳ, ಸರಕಾರದ ಕರ್ಮಾಚಾರಿಗಳ ನಿರುತ್ಸಾಹದ ಮುಖಗಳನ್ನ ನೋಡಿದರೆ ಅಯ್ಯೋ ಪಾಪ ಎನ್ನಿಸುತ್ತದೆ. ಆದ್ದರಿಂದ ನನ್ನೆದುರು ಕುಳಿತ ಹುಡುಗರನ್ನು ಮಾತನಾಡಬೇಕೆನಿಸಿತು.

“ಎಲ್ಲಿಂದ ಬರ್ತಾಯಿದ್ದೀರಿ” ಎಂದೆ.
“ಕೆ.ಆರ್.ನಗರದಿಂದ ಶಾರ್.”
“ಏನು ಮಾಡ್ತಿರಿ.”
“ಪೈಂಟಿಂಗ್ ಮಾಡ್ತಿವಿ ಶಾರ್.”
“ಊರ್ಯಾವುದು.”
“ಮೈಸೂರು” ಎಂದವನು ಸರಿಯಾಗಿ ಕುಳಿತು, ನನ್ನೊಡನೆ ಮಾತನಾಡುವ ಉತ್ಸಾಹ ತೋರಿದ. ಉಳಿದಿಬ್ಬರು ಬಾಗಿಲಲ್ಲಿ ನಿಂತು ಗಾಳಿಗೆ ಮೈವೊಡ್ಡಿದರು.
“ಈ ಹಾಳು ಬಿಜೆಪಿಗಳು ರೈಲಿನ ಬಣ್ಣನೂ ಬದ್ಲಾಸ್ತ ಅವೆ ಕಣಯ್ಯ” ಎಂದೆ.
“ಹೌದು ಶಾರ್, ಮದ್ಲಿಂದು ಬಣ್ಣ ಎಷ್ಟು ದೂಳು ಬಿದ್ರೂ ಕಾಣ್ತಿರಲಿಲ್ಲ. ಈಗ ರೈಲು ನೋಡಿದ್ರೆ ಮೈಮೇಲೆ ಮಣ್ಣು ಹುಯ್ಕಂಡು ಓಡಾಡ್ತವೆ.” ಎಂದ.
“ಬಿಜೆಪಿಗಳು ಬಣ್ಣ ಬದ್ಲಾಯಿಸ್ತವೆ ಅಷ್ಟೇ, ಇನ್ನೇನು ಆಗದಿಲ್ಲ ಅವುರ ಕೈಲಿ” ಎಂದೆ.
“ಈಗ ಯಾರ್ ಬರ್ತರೆ ಸಾರ್ ಸೀಟಿಗೆ.”
“ಯಾವ ಸೀಟಿಗೆ.”
“ಮೋದಿ ಸೀಟಿಗೆ ”
“ಯಾರು ಬರದಿಲ್ಲ.”
“ಮತ್ತೆ ಎಲೆಕ್ಷನ್ ಬಂದುಬಿಟ್ಟಿದೆ.”
“ಅದು ಉಪ ಚುನಾವಣೆ. ನಮ್ಮ ಸ್ಟೇಟಿಗೆ ಬಂದದೆ ಅಷ್ಟೇ.”
“ಓ ಎಡೂರಪ್ಪನ ಸೀಟಿಗೆ ಅನ್ನಿ.”
“ಹೌದು.”
“ಯಾಕ್ಸ ಮತ್ತೆ ರಿಟನ್ ಯಲಕ್ಷನ್ನು”
“ಅದೂ ನಿಮ್ಮ ಕೆ.ಆರ್.ನಗರದ ವಿಶ್ವನಾಥ್ ಗೊತ್ತ, ಅವುನಂತ ಹದಿನೇಳು ಜನನ ಬಿಜೆಪಿಗಳು ಕೊಂಡಕಂಡ್ರು.”
“ಅಂಗೆ ಮನುಸುರ್ನೆ ಕೊಳ್ಳಬವುದ ಶಾರ್.”
“ಮನುಷ್ಯರನ್ನ ಕೊಳ್ಳಕ್ಕಾಗಲ್ಲ. ಶಾಸಕರ ಕೊಳ್ಳಬವುದು.”
“ಒಳ್ಳೆ ಮಜಾ ಇದೆ ಶಾರ್ ಮ್ಯಾಟ್ರು.”
“ನಮಿಗೆ ಮಜಾ. ಸರಿ, ಅವುರ ಪಜೀತಿ ಯಾರಿಗೂ ಬ್ಯಾಡ ಅಂಗಾಗ್ಯದೆ.”
“ಯಾಕ್ ಶಾರ್ ಅಮೌಂಟು ಕೊಡ್ನಿಲ್ವಾ.”
“ಅದೇ ಡೌವುಟು.”
“ನಮ್ಗೂ ಅಂಗೆ ಆಗ್ತದೆ ಸಾ. ಪೈಂಟಿಂಗ್ ವರ್ಕು ಮಾಡಿಸಿಕ್ಯಂಡು ಕೈ ಎತ್ತಿಬಿಡ್ತರೆ. ಅದ್ಕೆ ನಾವು ಸರಿಯಾಗಿ ಅಡ್ವಾನ್ಸ್ ಕೇಳ್ತಿವಿ.”
“ಈ ಶಾಸಕರಿಗೆ ಅಡ್ವಾನ್ಸ್ ದುಡ್ಡು ಬಂದದೆ. ಆದ್ರೆ ಅಧಿಕಾರ ಬರಲಿಲ್ಲ.”
“ಯಾಕ್ಸಾ.”

“ಆಗಿನ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಈ ಖರೀದಿ ವ್ಯವಾರನೆ ರದ್ದು ಮಾಡಿಬುಟ್ರು. ಅದ್ಕೆ ಇವುರ್ಯಲ್ಲ ಎಂಎಲ್ಲೆಯೆ ಗಿರಿ ಕಳಕಂಡ್ರು.”
“ನಮಕ್ ಹರಾಮ್‍ಗಳಿಗೆ ಸರಿಯಾಗಿ ಆಗಿದೆ ಬುಡಿ ಶಾರ್.”
ಇದು ಒಟ್ಟರಾಶಿ ಅವನ ಅಭಿಪ್ರಾಯವಿದ್ದಂತೆ ಅನಿಸಿತು. ಶಾಸಕರ ಖರೀದಿ, ಸರಕಾರ ಬೀಳಿಸಿ ಅದರಿಂದಾದ ಅನಾಹುತಗಳು, ಈ ವಿವರವೆಲ್ಲಾ ಅವನ ಅಭಿಪ್ರಾಯದೊಳಗೆ ಸೇರಿರದೆ ಬಿಜೆಪಿಗೆ ಮಾರಾಟದ ವ್ಯವಹಾರದಲ್ಲಿ ಮೋಸಹೋದವರನ್ನ ಬೈದಂತೆ ಕಂಡಿತು.
“ಮೋದಿಗೆ ಏನೊ ಒಳ್ಳೆ ಎಜುಕೇಶನ್ ಇ¯ವಂತಲ್ಲ ಶಾರ್.”
“ಹೌದು.”
“ಎಗ್ಸಾಂಗೆ ಹೋಗಿಲವಂತೆ ಶಾರ್. ಪ್ರೈವೇಟ್ ಇಸ್ಕೂಲ್‍ಗೆ ಹೋಗಿ ಮಾರ್ಕ್ಸ್‌ ಕಾರ್ಡು ತಂದುಬಿಟ್ಟಿದ್ದಾರಂತೆ.”
“ಅವುರು ಪಡದಿರೋ ಶಿಕ್ಷಣದ ಬಗ್ಗೆ ಯಲ್ಲಾರಿಗೂ ಡೌಟಿದೆ.”
“ಮತ್ತೆ ಯಂಗೆ ಶಾರ್ ಪ್ರಧಾನಿ ಸೀಟು ಮ್ಯಾಲೆ ಕುಂತವುರೆ.”
“ಪ್ರಧಾನಿಯಾಗಕ್ಕೆ ತುಂಬ ಓದಿರಬೇಕು ಅಂತ ಇಲ್ಲ. ಅನುಭವ, ಹೃದಯವಂತಿಕೆ ಇರಬೇಕು. ಅಂಗೆ ನೋಡಿದ್ರೆ ನಮ್ಮ ದ್ಯಾವೇಗೌಡ್ರು ಡಿಪ್ಲಮೋ ಇಂಜಿನಿಯರ್. ಮುಖ್ಯಮಂತ್ರಿಯಾಗಿ ಎಷ್ಟು ಚನ್ನಾಗಿ ಆಡಳಿತ ಮಾಡಿದ್ರು, ಪ್ರಧಾನಿಯಾಗಿ ಕಾಶ್ಮೀರದ ಚುನಾವಣೆ ಮಾಡಿದ್ರು.”
“ಅವುರೆ ಇರಬೇಕಿತ್ತು ಶಾರ್. ಈ ಮೋದಿ ಬರ್ತಾನೆ ಇರಲಿಲ್ಲ.”
“ಬಂದುಬುಟ್ಟವುನಲ್ಲ ಸಯಿಸಗಬೇಕು.”
“ನಮ್ದು ರಫೀಕ್ ಮೊಬೈಲಿಗೆ ಒಂದು ಫಿಲಂ ಬಂದಿದೆ ಶಾರ್. ಮೋದಿ ನಮ್ಮ ಜುಬೇರ್ ಸಾಬರ ತರ ಹಳೆ ಸೀಸ, ಪ್ಲಾಸ್ಟಿಕ್ ಡಬ್ಬನೆಲ್ಲಾ ತಗ್ದಿ ತಗ್ದಿ ಚೀಲ್ದವಳಗೆ ತುಂಬಿಕಂಡು ಹೋಗ್ತಾಯಿದ್ರು. ಯಾಕ್ ಶಾರ್ ಅಂಗೆ ಮಾಡಿದಾರೆ.”
“ನೀನಾಗ್ಲೆ ಹೇಳಿದಲ್ಲಯ್ಯ ಎಜುಕೇಶನ್ ಇಲ್ಲ ಅಂತ, ಅದರ ಕೊರತೆ ಇದು. ಅಂತ ಕೆಲ್ಸ ಮಾಡಿ ಪೋಟೊ ವಡಿಸಿಗ್ಯಂಡು ಪೇಪರ್‍ಗಾಕ್ಸಿದ್ರೆ ಪ್ರಧಾನಿ ಎಷ್ಟು ಒಳ್ಳೆಯವರು, ಇಂತ ಮನ್ಸ ಹಿಂದೆ ಪ್ರಧಾನಿಯಾಗಿರಲಿಲ್ಲ ಅಂತ ತಿಳಕತಾರೆ ಅನ್ನಕಂಡು ಗಿಮಿಕ್ ಮಾಡ್ತ ಅವುರೆ.”
“ಅಂಗೆ ಮಾಡಬಾರ್ದು ಶಾರ್. ಆ ಸೀಟ್‍ಮೇಲೆ ಕುಂತಗಂಡಿ ಹಳೇ ಪೇಪರ್, ಖಾಲಿ ಸೀಸದ ಯವಾರ ಮಾಡಬಾರ್ದು.”

“ಇನ್ನೂ ನೋಡಿವಿರು. ಹೋಟ್ಳಿಗೆ ಬಂದು ಕಡಕ್ ಟೀ ಮಾಡಿ, ಯಲ್ಲಾರಿಗೂ ಕೊಟ್ಟು ಪೋಟೊ ವಡಿಸಿಗ್ಯಂಡು ಪೇಪರ್‍ಗಾಕುಸ್ತರೆ.”
“ಎಜುಕೇಶನ್ ಇಲ್ಲ ಅಂದ್ರೆ ಇಂಗೆ ಅಲವ ಶಾರ್. ಮೋದಿ ಹಿಂಗೆ ಮಾಡ್ತ ಹೋದ್ರೆ ಪುನ ಇಂಗ್ಲಿಸ್‍ನೋರು ಬಂದು ಸೀಟ್ ಮೇಲೆ ಕೂರ್ತರೆ ಅಷ್ಟೇ.”
“ಅವುರೀಗ ಬರಲ್ಲ.”
“ಯಾಕ್ ಬರಲ್ಲ ಶಾರ್. ನಮ್ ನಮ್ಗೆ ಜಗಳ ತಂದುಹಾಕಿ ನಾವೆಲ್ಲ ಹಿಂಗೆ ಜಗಳ ಮಾಡ್ತಯಿದ್ರೆ ಸೈಲೆಂಟಾಗಿ ಬಂದು ಬ್ರಿಟಿಷ್ ಜನ ಸೀಟ್ ಮೇಲೆ ಕೂರ್ತರೆ. ಆಗ ನಮ್ದು ಕತೆ ಹೋಗ್ಲಿ, ಮೋದಿಗೆ ಹಳೆ ಪೇಪರ್ ಪ್ಲಾಸ್ಟಿಕ್ ಸೀಸ ಬಾಟ್ಳಿನೆ ಗತಿ” ಎಂದು ನಕ್ಕ. ಈ ಮಾತಿಗೆ ಎಲ್ಲರೂ ನಕ್ಕರು.

ಚಿಕ್ಕಮಗಳೂರು ಕಡೆಯಿಂದ ದಸರಾ ನೋಡಲು ಹೋಗುತ್ತಿದ್ದ ಕೆಲವರಿಗೆ ಈ ಸಾಬರ ಹುಡುಗ ಮಾಡುತ್ತಿರುವ ಟೀಕೆ ಸಹಿಸಲಾಗದ್ದನ್ನು ಅವರ ಮುಖಗಳೇ ಹೇಳುತ್ತಿದ್ದವು. ಅಷ್ಟರಲ್ಲಿ ಸೀತಾಫಲ ಮಾರುವ ವ್ಯಕ್ತಿ ಬಂದ. ಹುಡುಗ ಸೀತಾಫಲ ತೆಗೆದುಕೊಂಡು ಅರ್ಧರ್ಧ ಹಿಸಿದು ಎದುರು ಕುಳಿತವರಿಗೆ ಕೊಟ್ಟ. ನಂತರ ಬಂದ ಸಪೋಟವನ್ನು ತೆಗೆದುಕೊಂಡು ಕೊಡಲು ಬಂದ “ಬ್ಯಾಡ ಕಣಪ್ಪ, ಅದು ತುಂಬ ಶುಗರು” ಎಂದೆ. “ತಿನ್ನಿ ಶಾರ್ ಹಣ್ಣು ತಿಂದ್ರೆ ವಳ್ಳೇದು.” ಎಂದು ಅರ್ಧ ಭಾಗಕೊಟ್ಟ. ಅವನ ಆಂತರ್ಯದಲ್ಲಿ ಬಿಜೆಪಿ ಜನ, ಜನಾಂಗೀಯ ದ್ವೇಷವನ್ನು ಹುಟ್ಟುಹಾಕುವುದಕ್ಕೆ ದಿಗಲುಗೊಂಡು ಸಾಮರಸ್ಯದಿಂದ ಬದುಕುವ ಮನಸ್ಸು, ಹಣ್ಣು ಹಂಚಿಕೆಯ ಹಿಂದೆ ಗೋಚರಿಸಿತು. ಅಷ್ಟರಲ್ಲಿ ಎಲ್ಲ ಜನಾಂಗವೂ ಸೇರಿ ಸಂಭ್ರಮದಿಂದ ಆಚರಿಸುವ ದಸರಾ ತಾಣ ಮೈಸೂರು ಬಂತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು...

ಹರಿಯಾಣದ ಕಾರ್ಮಿಕ ನಾಯಕ ಅಜಿತ್ ಸಿಂಗ್ ಬಂಧನ ‘ಅಕ್ರಮ’ ಎಂದ ಕೋರ್ಟ್; ಜಾಮೀನು ಮಂಜೂರು

ಬೆಲ್ಸೋನಿಕಾ ಆಟೋ ಕಾಂಪೊನೆಂಟ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಸಿಂಗ್ ಅವರಿಗೆ ಗುರುಗ್ರಾಮ್ ಜಿಲ್ಲಾ ನ್ಯಾಯಾಲಯವು (ಮೇ 18) ಜಾಮೀನು ನೀಡಿದೆ. ಅವರು ಮಾನೇಸರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪ್ರತಿಭಟನೆಗಳ...

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಫಲವತ್ತಾದ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು...

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

"ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ". ಇದು ಸರ್ಕಾರ ಮನೆ ಧ್ವಂಸ...

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...