Homeಮುಖಪುಟಯಾಕ್ಸಾರ್ ಮೋದಿ ಖಾಲಿಬಾಟ್ಳಿ ಪ್ಲಾಸ್ಟಿಕ್ ಲೋಟ ಆಯ್ತಾಯಿದ್ರು! - ಬಿ.ಚಂದ್ರೇಗೌಡ

ಯಾಕ್ಸಾರ್ ಮೋದಿ ಖಾಲಿಬಾಟ್ಳಿ ಪ್ಲಾಸ್ಟಿಕ್ ಲೋಟ ಆಯ್ತಾಯಿದ್ರು! – ಬಿ.ಚಂದ್ರೇಗೌಡ

- Advertisement -
- Advertisement -

ಶಿವಮೊಗ್ಗದಿಂದ ಮೈಸೂರಿಗೆ ರೈಲಿನಲ್ಲಿ ಹೋಗುತ್ತಿರಬೇಕಾದರೆ, ಕೆ.ಆರ್.ನಗರದ ಬಳಿ ಮೂವರು ಮುಸ್ಲಿಂ ಯುವಕರು ಓಡಿಬಂದು ರೈಲತ್ತಿಕೊಂಡರು. ಅಲ್ಲದೆ ತಾವು ಕೂರುವುದಕ್ಕೆ ಮೊದಲು ತಮ್ಮ ಕೈಚೀಲಗಳನ್ನು ಸೀಟಿನ ಮೇಲೆ ಎಸೆದು, ಒಬ್ಬರ ಮೇಲೊಬ್ಬರು ಬಿದ್ದು ಓಡಿ ಬಂದು ದಣಿವಾರಿಸಿಕೊಳ್ಳತೊಡಗಿದರು. ಈ ಶ್ರಮಜೀವಿಗಳ ಜೀವನೋತ್ಸಾಹ ನೋಡುವಂತದ್ದು. ಅದೇ ಕಂಪನಿಗಳ, ಸರಕಾರದ ಕರ್ಮಾಚಾರಿಗಳ ನಿರುತ್ಸಾಹದ ಮುಖಗಳನ್ನ ನೋಡಿದರೆ ಅಯ್ಯೋ ಪಾಪ ಎನ್ನಿಸುತ್ತದೆ. ಆದ್ದರಿಂದ ನನ್ನೆದುರು ಕುಳಿತ ಹುಡುಗರನ್ನು ಮಾತನಾಡಬೇಕೆನಿಸಿತು.

“ಎಲ್ಲಿಂದ ಬರ್ತಾಯಿದ್ದೀರಿ” ಎಂದೆ.
“ಕೆ.ಆರ್.ನಗರದಿಂದ ಶಾರ್.”
“ಏನು ಮಾಡ್ತಿರಿ.”
“ಪೈಂಟಿಂಗ್ ಮಾಡ್ತಿವಿ ಶಾರ್.”
“ಊರ್ಯಾವುದು.”
“ಮೈಸೂರು” ಎಂದವನು ಸರಿಯಾಗಿ ಕುಳಿತು, ನನ್ನೊಡನೆ ಮಾತನಾಡುವ ಉತ್ಸಾಹ ತೋರಿದ. ಉಳಿದಿಬ್ಬರು ಬಾಗಿಲಲ್ಲಿ ನಿಂತು ಗಾಳಿಗೆ ಮೈವೊಡ್ಡಿದರು.
“ಈ ಹಾಳು ಬಿಜೆಪಿಗಳು ರೈಲಿನ ಬಣ್ಣನೂ ಬದ್ಲಾಸ್ತ ಅವೆ ಕಣಯ್ಯ” ಎಂದೆ.
“ಹೌದು ಶಾರ್, ಮದ್ಲಿಂದು ಬಣ್ಣ ಎಷ್ಟು ದೂಳು ಬಿದ್ರೂ ಕಾಣ್ತಿರಲಿಲ್ಲ. ಈಗ ರೈಲು ನೋಡಿದ್ರೆ ಮೈಮೇಲೆ ಮಣ್ಣು ಹುಯ್ಕಂಡು ಓಡಾಡ್ತವೆ.” ಎಂದ.
“ಬಿಜೆಪಿಗಳು ಬಣ್ಣ ಬದ್ಲಾಯಿಸ್ತವೆ ಅಷ್ಟೇ, ಇನ್ನೇನು ಆಗದಿಲ್ಲ ಅವುರ ಕೈಲಿ” ಎಂದೆ.
“ಈಗ ಯಾರ್ ಬರ್ತರೆ ಸಾರ್ ಸೀಟಿಗೆ.”
“ಯಾವ ಸೀಟಿಗೆ.”
“ಮೋದಿ ಸೀಟಿಗೆ ”
“ಯಾರು ಬರದಿಲ್ಲ.”
“ಮತ್ತೆ ಎಲೆಕ್ಷನ್ ಬಂದುಬಿಟ್ಟಿದೆ.”
“ಅದು ಉಪ ಚುನಾವಣೆ. ನಮ್ಮ ಸ್ಟೇಟಿಗೆ ಬಂದದೆ ಅಷ್ಟೇ.”
“ಓ ಎಡೂರಪ್ಪನ ಸೀಟಿಗೆ ಅನ್ನಿ.”
“ಹೌದು.”
“ಯಾಕ್ಸ ಮತ್ತೆ ರಿಟನ್ ಯಲಕ್ಷನ್ನು”
“ಅದೂ ನಿಮ್ಮ ಕೆ.ಆರ್.ನಗರದ ವಿಶ್ವನಾಥ್ ಗೊತ್ತ, ಅವುನಂತ ಹದಿನೇಳು ಜನನ ಬಿಜೆಪಿಗಳು ಕೊಂಡಕಂಡ್ರು.”
“ಅಂಗೆ ಮನುಸುರ್ನೆ ಕೊಳ್ಳಬವುದ ಶಾರ್.”
“ಮನುಷ್ಯರನ್ನ ಕೊಳ್ಳಕ್ಕಾಗಲ್ಲ. ಶಾಸಕರ ಕೊಳ್ಳಬವುದು.”
“ಒಳ್ಳೆ ಮಜಾ ಇದೆ ಶಾರ್ ಮ್ಯಾಟ್ರು.”
“ನಮಿಗೆ ಮಜಾ. ಸರಿ, ಅವುರ ಪಜೀತಿ ಯಾರಿಗೂ ಬ್ಯಾಡ ಅಂಗಾಗ್ಯದೆ.”
“ಯಾಕ್ ಶಾರ್ ಅಮೌಂಟು ಕೊಡ್ನಿಲ್ವಾ.”
“ಅದೇ ಡೌವುಟು.”
“ನಮ್ಗೂ ಅಂಗೆ ಆಗ್ತದೆ ಸಾ. ಪೈಂಟಿಂಗ್ ವರ್ಕು ಮಾಡಿಸಿಕ್ಯಂಡು ಕೈ ಎತ್ತಿಬಿಡ್ತರೆ. ಅದ್ಕೆ ನಾವು ಸರಿಯಾಗಿ ಅಡ್ವಾನ್ಸ್ ಕೇಳ್ತಿವಿ.”
“ಈ ಶಾಸಕರಿಗೆ ಅಡ್ವಾನ್ಸ್ ದುಡ್ಡು ಬಂದದೆ. ಆದ್ರೆ ಅಧಿಕಾರ ಬರಲಿಲ್ಲ.”
“ಯಾಕ್ಸಾ.”

“ಆಗಿನ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಈ ಖರೀದಿ ವ್ಯವಾರನೆ ರದ್ದು ಮಾಡಿಬುಟ್ರು. ಅದ್ಕೆ ಇವುರ್ಯಲ್ಲ ಎಂಎಲ್ಲೆಯೆ ಗಿರಿ ಕಳಕಂಡ್ರು.”
“ನಮಕ್ ಹರಾಮ್‍ಗಳಿಗೆ ಸರಿಯಾಗಿ ಆಗಿದೆ ಬುಡಿ ಶಾರ್.”
ಇದು ಒಟ್ಟರಾಶಿ ಅವನ ಅಭಿಪ್ರಾಯವಿದ್ದಂತೆ ಅನಿಸಿತು. ಶಾಸಕರ ಖರೀದಿ, ಸರಕಾರ ಬೀಳಿಸಿ ಅದರಿಂದಾದ ಅನಾಹುತಗಳು, ಈ ವಿವರವೆಲ್ಲಾ ಅವನ ಅಭಿಪ್ರಾಯದೊಳಗೆ ಸೇರಿರದೆ ಬಿಜೆಪಿಗೆ ಮಾರಾಟದ ವ್ಯವಹಾರದಲ್ಲಿ ಮೋಸಹೋದವರನ್ನ ಬೈದಂತೆ ಕಂಡಿತು.
“ಮೋದಿಗೆ ಏನೊ ಒಳ್ಳೆ ಎಜುಕೇಶನ್ ಇ¯ವಂತಲ್ಲ ಶಾರ್.”
“ಹೌದು.”
“ಎಗ್ಸಾಂಗೆ ಹೋಗಿಲವಂತೆ ಶಾರ್. ಪ್ರೈವೇಟ್ ಇಸ್ಕೂಲ್‍ಗೆ ಹೋಗಿ ಮಾರ್ಕ್ಸ್‌ ಕಾರ್ಡು ತಂದುಬಿಟ್ಟಿದ್ದಾರಂತೆ.”
“ಅವುರು ಪಡದಿರೋ ಶಿಕ್ಷಣದ ಬಗ್ಗೆ ಯಲ್ಲಾರಿಗೂ ಡೌಟಿದೆ.”
“ಮತ್ತೆ ಯಂಗೆ ಶಾರ್ ಪ್ರಧಾನಿ ಸೀಟು ಮ್ಯಾಲೆ ಕುಂತವುರೆ.”
“ಪ್ರಧಾನಿಯಾಗಕ್ಕೆ ತುಂಬ ಓದಿರಬೇಕು ಅಂತ ಇಲ್ಲ. ಅನುಭವ, ಹೃದಯವಂತಿಕೆ ಇರಬೇಕು. ಅಂಗೆ ನೋಡಿದ್ರೆ ನಮ್ಮ ದ್ಯಾವೇಗೌಡ್ರು ಡಿಪ್ಲಮೋ ಇಂಜಿನಿಯರ್. ಮುಖ್ಯಮಂತ್ರಿಯಾಗಿ ಎಷ್ಟು ಚನ್ನಾಗಿ ಆಡಳಿತ ಮಾಡಿದ್ರು, ಪ್ರಧಾನಿಯಾಗಿ ಕಾಶ್ಮೀರದ ಚುನಾವಣೆ ಮಾಡಿದ್ರು.”
“ಅವುರೆ ಇರಬೇಕಿತ್ತು ಶಾರ್. ಈ ಮೋದಿ ಬರ್ತಾನೆ ಇರಲಿಲ್ಲ.”
“ಬಂದುಬುಟ್ಟವುನಲ್ಲ ಸಯಿಸಗಬೇಕು.”
“ನಮ್ದು ರಫೀಕ್ ಮೊಬೈಲಿಗೆ ಒಂದು ಫಿಲಂ ಬಂದಿದೆ ಶಾರ್. ಮೋದಿ ನಮ್ಮ ಜುಬೇರ್ ಸಾಬರ ತರ ಹಳೆ ಸೀಸ, ಪ್ಲಾಸ್ಟಿಕ್ ಡಬ್ಬನೆಲ್ಲಾ ತಗ್ದಿ ತಗ್ದಿ ಚೀಲ್ದವಳಗೆ ತುಂಬಿಕಂಡು ಹೋಗ್ತಾಯಿದ್ರು. ಯಾಕ್ ಶಾರ್ ಅಂಗೆ ಮಾಡಿದಾರೆ.”
“ನೀನಾಗ್ಲೆ ಹೇಳಿದಲ್ಲಯ್ಯ ಎಜುಕೇಶನ್ ಇಲ್ಲ ಅಂತ, ಅದರ ಕೊರತೆ ಇದು. ಅಂತ ಕೆಲ್ಸ ಮಾಡಿ ಪೋಟೊ ವಡಿಸಿಗ್ಯಂಡು ಪೇಪರ್‍ಗಾಕ್ಸಿದ್ರೆ ಪ್ರಧಾನಿ ಎಷ್ಟು ಒಳ್ಳೆಯವರು, ಇಂತ ಮನ್ಸ ಹಿಂದೆ ಪ್ರಧಾನಿಯಾಗಿರಲಿಲ್ಲ ಅಂತ ತಿಳಕತಾರೆ ಅನ್ನಕಂಡು ಗಿಮಿಕ್ ಮಾಡ್ತ ಅವುರೆ.”
“ಅಂಗೆ ಮಾಡಬಾರ್ದು ಶಾರ್. ಆ ಸೀಟ್‍ಮೇಲೆ ಕುಂತಗಂಡಿ ಹಳೇ ಪೇಪರ್, ಖಾಲಿ ಸೀಸದ ಯವಾರ ಮಾಡಬಾರ್ದು.”

“ಇನ್ನೂ ನೋಡಿವಿರು. ಹೋಟ್ಳಿಗೆ ಬಂದು ಕಡಕ್ ಟೀ ಮಾಡಿ, ಯಲ್ಲಾರಿಗೂ ಕೊಟ್ಟು ಪೋಟೊ ವಡಿಸಿಗ್ಯಂಡು ಪೇಪರ್‍ಗಾಕುಸ್ತರೆ.”
“ಎಜುಕೇಶನ್ ಇಲ್ಲ ಅಂದ್ರೆ ಇಂಗೆ ಅಲವ ಶಾರ್. ಮೋದಿ ಹಿಂಗೆ ಮಾಡ್ತ ಹೋದ್ರೆ ಪುನ ಇಂಗ್ಲಿಸ್‍ನೋರು ಬಂದು ಸೀಟ್ ಮೇಲೆ ಕೂರ್ತರೆ ಅಷ್ಟೇ.”
“ಅವುರೀಗ ಬರಲ್ಲ.”
“ಯಾಕ್ ಬರಲ್ಲ ಶಾರ್. ನಮ್ ನಮ್ಗೆ ಜಗಳ ತಂದುಹಾಕಿ ನಾವೆಲ್ಲ ಹಿಂಗೆ ಜಗಳ ಮಾಡ್ತಯಿದ್ರೆ ಸೈಲೆಂಟಾಗಿ ಬಂದು ಬ್ರಿಟಿಷ್ ಜನ ಸೀಟ್ ಮೇಲೆ ಕೂರ್ತರೆ. ಆಗ ನಮ್ದು ಕತೆ ಹೋಗ್ಲಿ, ಮೋದಿಗೆ ಹಳೆ ಪೇಪರ್ ಪ್ಲಾಸ್ಟಿಕ್ ಸೀಸ ಬಾಟ್ಳಿನೆ ಗತಿ” ಎಂದು ನಕ್ಕ. ಈ ಮಾತಿಗೆ ಎಲ್ಲರೂ ನಕ್ಕರು.

ಚಿಕ್ಕಮಗಳೂರು ಕಡೆಯಿಂದ ದಸರಾ ನೋಡಲು ಹೋಗುತ್ತಿದ್ದ ಕೆಲವರಿಗೆ ಈ ಸಾಬರ ಹುಡುಗ ಮಾಡುತ್ತಿರುವ ಟೀಕೆ ಸಹಿಸಲಾಗದ್ದನ್ನು ಅವರ ಮುಖಗಳೇ ಹೇಳುತ್ತಿದ್ದವು. ಅಷ್ಟರಲ್ಲಿ ಸೀತಾಫಲ ಮಾರುವ ವ್ಯಕ್ತಿ ಬಂದ. ಹುಡುಗ ಸೀತಾಫಲ ತೆಗೆದುಕೊಂಡು ಅರ್ಧರ್ಧ ಹಿಸಿದು ಎದುರು ಕುಳಿತವರಿಗೆ ಕೊಟ್ಟ. ನಂತರ ಬಂದ ಸಪೋಟವನ್ನು ತೆಗೆದುಕೊಂಡು ಕೊಡಲು ಬಂದ “ಬ್ಯಾಡ ಕಣಪ್ಪ, ಅದು ತುಂಬ ಶುಗರು” ಎಂದೆ. “ತಿನ್ನಿ ಶಾರ್ ಹಣ್ಣು ತಿಂದ್ರೆ ವಳ್ಳೇದು.” ಎಂದು ಅರ್ಧ ಭಾಗಕೊಟ್ಟ. ಅವನ ಆಂತರ್ಯದಲ್ಲಿ ಬಿಜೆಪಿ ಜನ, ಜನಾಂಗೀಯ ದ್ವೇಷವನ್ನು ಹುಟ್ಟುಹಾಕುವುದಕ್ಕೆ ದಿಗಲುಗೊಂಡು ಸಾಮರಸ್ಯದಿಂದ ಬದುಕುವ ಮನಸ್ಸು, ಹಣ್ಣು ಹಂಚಿಕೆಯ ಹಿಂದೆ ಗೋಚರಿಸಿತು. ಅಷ್ಟರಲ್ಲಿ ಎಲ್ಲ ಜನಾಂಗವೂ ಸೇರಿ ಸಂಭ್ರಮದಿಂದ ಆಚರಿಸುವ ದಸರಾ ತಾಣ ಮೈಸೂರು ಬಂತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...