Homeನೂರರ ನೋಟಅಯೋಧ್ಯೆ ತೀರ್ಪು ಹೊರಬಂದಿರುವ ಸಂದರ್ಭದಲ್ಲಿ... : ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯ

ಅಯೋಧ್ಯೆ ತೀರ್ಪು ಹೊರಬಂದಿರುವ ಸಂದರ್ಭದಲ್ಲಿ… : ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯ

- Advertisement -
- Advertisement -

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕೇಳಿದ ಅಡ್ವಾಣಿಯವರು, ನ್ಯಾಯಾಲಯ ತಮ್ಮ ತೀರ್ಮಾನವನ್ನು ಸಮರ್ಥಿಸಿದೆ ಎಂದು ಹೇಳಿದ್ದಾರೆ. ನ್ಯಾಯಾಲಯವು ಅಡ್ವಾಣಿಯವರ ಪ್ರಚೋದನೆಯ ಕೆಲಸವನ್ನು ಸಮರ್ಥಿಸಿಲ್ಲ. ಬಾಬ್ರಿ ಮಸೀದಿ ಒಡೆದದ್ದು ಅಪರಾಧ ಎಂದು ಸ್ಪಷ್ಟವಾಗಿ ಹೇಳಿದೆ; ಈ ಅಪರಾಧದ ಗಂಭೀರತೆಯನ್ನು ಯಾರೂ ಮರೆಯುವಂತಿಲ್ಲ.

ಭಾರತದಲ್ಲಿ ಎಲ್ಲವೂ ಜಾತಿ, ಧರ್ಮಗಳ ಮಯವಾಗಿದೆ. self-appointed ದೇಶಭಕ್ತರ ಹಾವಳಿ ಜಾಸ್ತಿಯಾಗಿದೆ. ಅವರ ಮನಸ್ಸೆಲ್ಲಾ ವಿಷಪೂರಿತವಾಗಿದೆ. ಇವರ ಅಭಿಪ್ರಾಯದಲ್ಲಿ ಭಾರತದಲ್ಲಿರುವ ಮುಸ್ಲಿಮರು ಕ್ರಿಶ್ಚಿಯನ್ನರು, ಪಾರ್ಸಿಗಳು, ನೀಗ್ರೋಗಳು ಎಲ್ಲರೂ ತಾವು ಹಿಂದುಗಳೆಂದು ಘೋಷಣೆ ಮಾಡಬೇಕು. ಈ ಸ್ವಯಂನೇಮಿತ ದೇಶಭಕ್ತರ ಹಿಂದುತ್ವವನ್ನು ಯಾವ ಕಾರಣಕ್ಕೂ ಪ್ರಶ್ನಿಸುವಂತಿಲ್ಲ. ಈ ಅಹಂಕಾರದಿಂದಲೇ ಅವರು ಬಾಬ್ರಿ ಮಸೀದಿ ಒಡೆದು ರಾಮಮಂದಿರವನ್ನು ನಿರ್ಮಿಸಲು ಹೊರಟಿದ್ದು.

ಮುಖ್ಯನ್ಯಾಯಾಧೀಶರಾದ ರಂಜನ್ ಗೊಗೊಯ್ ಅವರನ್ನು ಒಬ್ಬ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಪ್ರಶ್ನಿಸುತ್ತಾರೆ: ಬಾಬ್ರಿ ಮಸೀದಿ ಕಟ್ಟಡ ಇಂದಿಗೂ ಅಸ್ತಿತ್ವದಲ್ಲಿ ಇದ್ದಿದ್ದರೆ, ನೀವು ರಾಮಮಂದಿರವನ್ನು ಕಟ್ಟಲು ಅಲ್ಲಿ ಅವಕಾಶ ಕೊಡುವ ತೀರ್ಪನ್ನು ಕೊಡುತ್ತಿದ್ದಿರಾ? ಎಂದು. ಕಾನೂನು ವಿಚಾರಕ್ಕಿಂತ ಹೆಚ್ಚಿನ ಮಹತ್ವವನ್ನು ತೀರ್ಪಿನಲ್ಲಿ ಜನರ ನಂಬಿಕೆ ಭಕ್ತಿ ಶ್ರದ್ಧೆಗೆ ನೀಡಿ, ಹೆಚ್ಚಿನ ಮನ್ನಣೆ ನೀಡಲಾಗಿದೆ ಎಂದು ಅನೇಕರು ಹೇಳಿದ್ದಾರೆ.

ಮಸೀದಿಯನ್ನು ಕಟ್ಟಿದ ದಿನದಿಂದ ಇಂದಿನವರೆಗೂ ಅದು ವಿವಾದಾಸ್ಪದ ವಿಚಾರವೇ ಆಗಿತ್ತು. ಈಗ ನ್ಯಾಯಾಲಯ ಒಂದು ತೀರ್ಪಿತ್ತು ವಿವಾದವನ್ನು ಇತ್ಯರ್ಥಗೊಳಿಸಿದೆ. ಈ ತೀರ್ಮಾನವನ್ನು ಹಿಂದುತ್ವಕ್ಕೆ ದೊರೆತ ಜಯ ಎಂದು ಭಾವಿಸಿ ಹಿಂದು ಮತಾಂಧರು ಒಂದು ಯುದ್ಧ ಗೆದ್ದವರಂತೆ ರಂಪ ಮಾಡಿಲ್ಲ. ಸುನ್ನಿ ವಕ್ಫ್ ಬೋರ್ಡಿನ ಸದಸ್ಯರು ನ್ಯಾಯಾಲಯದ ತೀರ್ಪು ಸಮಾಧಾನ ತಂದಿಲ್ಲವಾದರೂ, ವಿರೋಧಿಸುವುದಿಲ್ಲ ಎಂದರು. ಆನಂತರ ಸಭೆ ಸೇರಿ ನಮಗೆ ನಿಮ್ಮ ಐದು ಎಕರೆ ಜಮೀನು ಬೇಡ ಎಂದು ತೀರ್ಮಾನ ತೆಗೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಈ ಚಾರಿತ್ರಿಕ ತೀರ್ಪು ಸಮರ್ಪಕವಿಲ್ಲವೆಂದು ಹೇಳುವ ಜನ ಎರಡೂ ಕಡೆ ಇದ್ದಾರೆ. ಆದರೆ ಅವರು ಪ್ರತಿಭಟನೆ ಮಾಡುವ ಮಟ್ಟಕ್ಕೆ ಇಳಿದಿಲ್ಲ. ಇದು ಒಂದು ಸಂತಸದ ಸಂಗತಿ.

ಅಯೋಧ್ಯೆಯಲ್ಲಿ ರಾಮಮಂದಿರ ಇದ್ದ ವಿವಾದವನ್ನು ನ್ಯಾಯಾಲಯ ಒಪ್ಪಿಕೊಂಡಿಲ್ಲ. ಮಸೀದಿ ಕಟ್ಟುವುದಕ್ಕೆ ಮೊದಲು ಅದರ ಅಡಿಯಲ್ಲಿ ಒಂದು ಕಟ್ಟಡ ಇತ್ತು. ಆದರೆ ಅದು ರಾಮರ ದೇವಾಲಯ ಎನ್ನುವುದಕ್ಕೆ ಪುರಾವೆ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ತೀರ್ಪಿನಲ್ಲಿ ನ್ಯಾಯಾಲಯ ಬಾಬ್ರಿ ಮಸೀದಿ ಕೆಡವಿದ್ದು ತಪ್ಪು ಎಂದು ಹೇಳಿದೆ. ಕಾನೂನನ್ನು ಯಾರೇ ಆಗಲಿ ತಮ್ಮ ಕೈಗೆ ತೆಗೆದುಕೊಳ್ಳುವುದು ಅಪರಾಧ ಎಂಬುದನ್ನು ಸ್ಪಷ್ಟಪಡಿಸಿದೆ. ಈ ಅಪರಾಧ ಮಾಡಿದವರಲ್ಲಿ ಎಲ್.ಕೆ.ಅಡ್ವಾನಿಯವರು ಒಬ್ಬರು. ಅವರು ಕಾನೂನನ್ನು ಉದ್ದೇಶಪೂರ್ವಕವಾಗಿ ಗಾಳಿಗೆ ತೂರಿದ್ದಾರೆ. ಅಡ್ವಾನಿಯವರ ರಥಯಾತ್ರೆ ಕರಸೇವಕರಿಗೆ ಪ್ರೇರಕಶಕ್ತಿಯಾಗಿತ್ತು. ಆ ಯಾತ್ರೆಯ ಮೂಲಕ ಅವರು ಕೋಮು ಉನ್ಮಾದಕ್ಕೆ ನಾಂದಿ ಹಾಡಿದರು. ಲಿಬರ್ಹಾನ್ ಕಮಿಷನ್ ಕೂಡ ಅಡ್ವಾನಿಯವರು ಹಾಗೂ ಆಗಿನ ಉತ್ತರಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್‍ಸಿಂಗ್ ಮತ್ತು ಇತರರು ಕೋಮುದ್ವೇಷ ಬೆಳೆಸಲು ಪ್ರೇರಕರು ಎಂದು ತಮ್ಮ ವಿಚಾರಣಾ ವರದಿಯಲ್ಲಿ ನಮೂದಿಸಿದ್ದಾರೆ.

ಎಲ್.ಕೆ.ಅಡ್ವಾಣಿ ಮುಂತಾದ ಬಿಜೆಪಿ ಮತ್ತು ಆರ್‍ಎಸ್‍ಎಸ್ ಮುಖಂಡರು, ಬಾಬ್ರಿ ಮಸೀದಿ ಆವರಣದಲ್ಲಿದ್ದುಕೊಂಡು ಕರಸೇವಕರನ್ನು ಮಸೀದಿ ಒಡೆಯುವ ಸಂದರ್ಭದಲ್ಲಿ ಹುರಿದುಂಬಿಸಿದ್ದಾರೆ. ಆಗಿನ ಪ್ರಧಾನಿಯಾಗಿದ್ದ ಪಿ.ವಿ ನರಸಿಂಹರಾಯರು ಅಯೋಧೈಗೆ ಸೈನಿಕರನ್ನು ಕಳಿಸಿ ತಾವೇ ನಿಂತು ಬಾಬ್ರಿ ಮಸೀದಿಯನ್ನು ಧ್ವಂಸಮಾಡುವುದನ್ನು ತಡೆಗಟ್ಟಬೇಕಾಗಿತ್ತು. ಅವರು ಆ ಕೆಲಸವನ್ನು ಮಾಡದೆ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್‍ಸಿಂಗ್‍ಗೆ ಈ ಜವಾಬ್ದಾರಿಯನ್ನು ವಹಿಸಿ ಸೈನ್ಯವನ್ನು ಅವರ ವಶಕ್ಕೆ ವಹಿಸಿದರು. ಇದು ಪ್ರಧಾನಿಯ ಕರ್ತವ್ಯಲೋಪದ ಪರಮಾವಧಿ. ಬಿಜೆಪಿಯ ಮುಖ್ಯಮಂತ್ರಿ ಕಲ್ಯಾಣ್‍ಸಿಂಗ್ ಸೈನ್ಯವನ್ನು ಬಳಸಿಕೊಂಡು ಮಸೀದಿ ಒಡೆಯುವನೇ ಎಂದು ಪಿ.ವಿ ನರಸಿಂಹರಾಯರು ಯೋಜಿಸದೆ ಇರಲಿಲ್ಲ. ಈ ಬಿಕ್ಕಟ್ಟಿನ ಸಮಸ್ಯೆಯಿಂದ ತಪ್ಪಿಸಿಕೊಳ್ಳುವ ದುರುದ್ದೇಶದಿಂದ ಅವರು ಈ ತಂತ್ರ ಮಾಡಿದರು. ಮುಖ್ಯಮಂತ್ರಿ ಕಲ್ಯಾಣ್‍ಸಿಂಗ್ ತಟಸ್ಥರಾಗಿದ್ದುಕೊಂಡು ಕರಸೇವಕರಿಗೆ ಕುಮ್ಮಕ್ಕು ಕೊಟ್ಟರು. ತಮ್ಮ ಸಾಂವಿಧಾನಿಕ ಜವಾಬ್ದಾರಿಯ ಕೆಲಸ ಮಾಡುವವರಲ್ಲ ಎಂದು ತಿಳಿಸಿದ್ದರೂ ಪಿ.ವಿ.ನರಸಿಂಹರಾಯರು ಆ ಕೆಲಸವನ್ನು ಕಲ್ಯಾಣ್‍ಸಿಂಗ್‍ಗೆ ವಹಿಸಿದ್ದು ಅಕ್ಷಮ್ಯ ಅಪರಾಧ.

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕೇಳಿದ ಅಡ್ವಾಣಿಯವರು, ನ್ಯಾಯಾಲಯ ತಮ್ಮ ತೀರ್ಮಾನವನ್ನು ಸಮರ್ಥಿಸಿದೆ ಎಂದು ಹೇಳಿದ್ದಾರೆ. ನ್ಯಾಯಾಲಯವು ಅಡ್ವಾಣಿಯವರ ಪ್ರಚೋದನೆಯ ಕೆಲಸವನ್ನು ಸಮರ್ಥಿಸಿಲ್ಲ. ಬಾಬ್ರಿ ಮಸೀದಿ ಒಡೆದದ್ದು ಅಪರಾಧ ಎಂದು ಸ್ಪಷ್ಟವಾಗಿ ಹೇಳಿದೆ; ಈ ಅಪರಾಧದ ಗಂಭೀರತೆಯನ್ನು ಯಾರೂ ಮರೆಯುವಂತಿಲ್ಲ. ಬಾಬ್ರಿ ಮಸೀದಿಯನ್ನು ಅಕ್ರಮವಾಗಿ ಒಡೆದ ಕಾರಣದಿಂದ ಭಾರತದ ಅನೇಕ ಕಡೆ ದಾಂಧಲೆಗಳಾದವು. ಅದರ ಪ್ರತಿಧ್ವನಿಯಾಗಿ ನೂರಾರು ಮಂದಿ ಕೊಲ್ಲಲ್ಪಟ್ಟರು.

ಈ ಎಲ್ಲ ಪ್ರಸಂಗಗಳೂ ಭಾರತದ ಜಾತ್ಯತೀತ ನಿಲುವಿಗೆ ಭಾರೀ ಪೆಟ್ಟು ಕೊಟ್ಟವು, ಅಡ್ವಾನಿಯವರ ಜೊತೆಗೆ ರಥಯಾತ್ರೆಯಲ್ಲಿ ಸಾಥ್ ಕೊಟ್ಟವರು ಇಂದಿನ ಪ್ರಧಾನಿಯಾಗಿರುವ ಮೋದಿಯವರು ಎಂಬುದನ್ನು ಮರೆಯದಿರೋಣ. ಅಡ್ವಾಣಿ ರಥಯಾತ್ರೆ ಮಾಡಿ ಕೋಮುಭಾವನೆ ಬೆಳೆಸಿದ್ದು ತಪ್ಪಾದರೆ ಅವರಿಗೆ ಸಾಥ್ ಕೊಟ್ಟವರೂ ತಪ್ಪಿತಸ್ಥರೇ!

ಹಿಂದೂ ರಾಷ್ಟ್ರದ ಕನಸು ಕಾಣುವ ಈ ರಾಜಕೀಯ ಹಿತಾಸಕ್ತಿಗಳಿಗೆ ಧರ್ಮ ಒಂದು ರಾಜಕೀಯ ಅಸ್ತ್ರ. ರಾಮನನ್ನು ಇವರು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಾರೆ. ಅಸಹಿಷ್ಣುತೆ ಮತ್ತು ಹಿಂಸೆಯನ್ನು ರಾಮನ ಹೆಸರಿನಲ್ಲಿ ಬಿತ್ತುವ ಈ ಧೂರ್ತರು ಹಿಂದುತ್ವದ ಮಾರಾಟಗಾರರು. ರಾಮನ ಹೆಸರಿನಲ್ಲಿ ಮತ ಕೇಳುವುದು ರಾಮನಿಗೆ ಕಳಂಕ ತರುವ ಗೆಯ್ಮೆ. ಆದರೆ ಅವರಿಗೆ ಹಾಗೆನಿಸುವುದಿಲ್ಲ. ಏಕೆಂದರೆ ಅವರಿಗೆ ರಾಮನ ಹೆಸರು ಬಳಸಿಕೊಂಡು ಮತ ಗಳಿಸುವುದೇ ಮುಖ್ಯ.

ಭಾರತ ಈಗ ಒಂದು ಮತೀಯ ರಾಷ್ಟ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದುತ್ವ ಪ್ರತಿಪಾದನೆಯ ಸನ್ನಿ ಹಿಡಿದವರಿಗೆ ಇದು ಒಂದು retrograde step ಎಂದು ಅನಿಸುತ್ತಿಲ್ಲದಿರುವುದು ಒಂದು ದುರ್ದೈವದ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...

ಎನ್ಯೂಮರೇಷನ್ ಫಾರಂ ಭರ್ತಿ ಮಾಡುವ ಮೂಲಕ SIR ಗೆ ಚಾಲನೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ಜೂನ್ 30) ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ದಾಖಲಾತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಭಿಯಾನಕ್ಕೆ ಅಧಿಕೃತವಾಗಿ...

‘ಆಪರೇಷನ್ ಸಿಂಧೂರ್‌’ ಕುರಿತು ಸಂಸತ್ತಿಗೆ ಸುಳ್ಳು ಮಾಹಿತಿ: ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದೆ. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದಿದ್ದು,...