Homeಮುಖಪುಟನಕ್ಕು ನಗಿಸುವ ಕಲೆ ಬಗ್ಗೆ ನಿಮಗೆ ಗೊತ್ತಾ? ಇದರಿಂದಾಗುವ ಪ್ರಯೋಜನಗಳು ಬಹಳ

ನಕ್ಕು ನಗಿಸುವ ಕಲೆ ಬಗ್ಗೆ ನಿಮಗೆ ಗೊತ್ತಾ? ಇದರಿಂದಾಗುವ ಪ್ರಯೋಜನಗಳು ಬಹಳ

- Advertisement -
- Advertisement -

ಜೀವನ ಕಲೆಗಳು: ಅಂಕಣ -30

ನಕ್ಕು ನಗಿಸುವ ಕಲೆ

ಇದೂ ಕಲಿಯುವಂತಹ ಕಲೆಯೇ ಎಂದು ನೀವು ಆಶ್ಚರ್ಯದಿಂದ ಕೇಳಬಹುದು. ಹೌದು, ಇದೂ ಸಹ ಕಲಿಯಬಹುದಾದಂತಹ ಜೀವನಾವಶ್ಯಕ ಕಲೆ. ನಕ್ಕು ನಗಿಸುವ ಕಲೆ (ಸೆನ್ಸ್ ಆಫ್ ಹ್ಯೂಮರ್) ಇಲ್ಲದ ಮಾನವ ರಸ ಹಿಂಡಿದ ಕಬ್ಬಿನ ಜಲ್ಲೆಯಂತೆ, ಹೆಚ್ಚು ಪ್ರಯೋಜನವಿಲ್ಲ. ಆದರೆ ನಾವು ಹೇಗೆ, ಏಕೆ ನಗುತ್ತೇವೆ ಮತ್ತು ಇತರರನ್ನು ನಗಿಸುತ್ತೇವೆ ಅದರ ಮೇಲೆ ನಮ್ಮ ವ್ಯಕ್ತಿತ್ವದ ಪರೀಕ್ಷೆಯೂ ಆಗುತ್ತದೆ. ನಗುವುದರಿಂದ ಹಲವು ರೋಗಗಳೂ ಸಹ ತಾವಾಗಿಯೇ ಗುಣವಾಗುತ್ತವೆ ಎಂಬುದು ಹಲವರ ಅಭಿಪ್ರಾಯ.

ಇಂದಿನ ಜೀವನದಲ್ಲಿ ಹಾಸ್ಯರಸವನ್ನು ಆಸ್ವಾದಿಸುವ ಮುನ್ನ ನಿಮ್ಮ ಹಾಸ್ಯದಿಂದ ಅಥವಾ ಆಸ್ವಾದನೆಯಿಂದ ಇನ್ನೊಬ್ಬರಿಗೆ ಕಷ್ಟವಾಗುತ್ತಿದೆಯೇ ಇಲ್ಲವೇ ಎಂಬುದನ್ನು ಮೊದಲು ಅರಿಯಿರಿ.

·         ಮೊದಲು ನಿಮ್ಮ ಮುಖದಲ್ಲಿ ನಗುವಿರಲಿ, ಆದರೆ ನಿಮ್ಮ ಹಾಸ್ಯವನ್ನು ಹಂಚಿಕೊಳ್ಳುವಾಗ ಮಿಕ್ಕವರಿಗಿಂತ ನೀವೇ ಹೆಚ್ಚಾಗಿ/ಜೋರಾಗಿ ನಗಬೇಡಿ.

·         ಹಾಸ್ಯವನ್ನು ಹುಡುಕುವ ಪ್ರಯತ್ನ ಸತತವಾಗಿ ಮಾಡುತ್ತಿರಿ. ಹಾಸ್ಯ ಸಾಹಿತ್ಯ ಓದಿ, ಕಾಮೆಡಿ ಶೋ ನೋಡಿ.

·         ಯಾರಾದರೂ ನಿಮ್ಮನ್ನು ಕೋಪ ಬರುವಂತೆ ಮಾಡಿದಲ್ಲಿ, ಅವರಿಗೆ ನಿಮ್ಮ ಕೋಪದ ಶಕ್ತಿ ತೋರಿಸದೆ, ನಿಮ್ಮ ಹಾಸ್ಯದ ರುಚಿ ತೋರಿಸಿ.

·         ನಿಮ್ಮ ಜೀವನದ ಅತ್ಯಂತ ಹೀನಾಯಕರ (embarassing) ಕ್ಷಣದ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ಇದರಿಂದ ನಿಮ್ಮ ಮೇಲೆ ನೀವೇ ನಗುವುದನ್ನು ಕಲಿಯಬಹುದು.

·         ಇತರರು ನಿಮಗೆ ಹಾಸ್ಯ ಪ್ರಸಂಗ ತಿಳಿಸಿದಾಗ ಸಕ್ರಿಯವಾಗಿ ಕೇಳಿಸಿಕೊಳ್ಳುವುದನ್ನು ಮತ್ತು ನಗುವುದನ್ನು ಕಲಿಯಿರಿ.

ಹಾಸ್ಯ ಒಂದು ರೀತಿಯ ಸಮಾನತೆ ತರುವ ವ್ಯವಸ್ಥೆ. ನಮ್ಮನ್ನು ನಗಿಸುತ್ತಿರುವ ವ್ಯಕ್ತಿಯ ಮೇಲೆ ನಾವು ಸಹಜವಾಗಿ ಕೋಪ ಮಾಡಿಕೊಳ್ಳುವುದು ಕಷ್ಟ, ತನ್ನ ಚೇಷ್ಟೆಯಿಂದ ಅವಾಂತರ ಮಾಡಿದ ಮಗು ನಿಮ್ಮದೇ ಆಗಿರಬಹುದು. ಒಮ್ಮೆ ಅದರ ಹಿಂದಿರುವ ಹಾಸ್ಯವನ್ನು ಅರ್ಥ ಮಾಡಿಕೊಂಡರೆ, ನಾವೂ ಅವರೊಂದಿಗೆ ನಗಲು ಪ್ರಾರಂಭಿಸಬಹುದು. ಹೀಗೆ ಹಾಸ್ಯವನ್ನು ಹಂಚಿಕೊಳ್ಳುವುದರಿಂದ ಸ್ನೇಹವೂ, ಸೌಹಾರ್ದವೂ ಬೆಳೆಯುತ್ತದೆ.

ಹಾಸ್ಯ ಯಾರಿಗೆ ತಾನೇ ಇಷ್ಟವಾಗುದಿಲ್ಲ, ಚಿಕ್ಕ ಮಕ್ಕಳು ಕಾರ್ಟೂನ್ ಟಿವಿ ಮುಂದೆ ಮೈಮರೆತು ನೋಡುತ್ತ ಕುಳಿತಿರುವುದನ್ನು, ಮತ್ತೆ ಅದೇ ಸಮಯದಲ್ಲಿ, ತಾಯಿ ಅವರಿಗೆ ತಿಳಿಯದಂತೆಯೇ ಅವರಿಗೆ ಇಷ್ಟವಾಗದ ತಿನಿಸುಗಳನ್ನು ತಿನ್ನಿಸಿದರೂ, ತಿನ್ನುವ ದೃಶ್ಯವನ್ನು ಬಹುತೇಕ ಮನೆಗಳಲ್ಲಿ ಕಂಡಿದ್ದೇವೆ. ಆಗ ಅವರಿಗೆ ಇಷ್ಟವಾಗುವುದು ದೈಹಿಕ ಹಾಸ್ಯ, ಅಂದರೆ ಯಾರೋ ಜಾರಿ ಬೀಳುವುದು, ಬೀಳಿಸುವುದು, ಸೊಟ್ಟ ಮೂತಿಗಳನ್ನು ಮಾಡುವುದು, ಬೇರೆಯವರನ್ನು ಅಣಕಿಸುವುದು ಇತ್ಯಾದಿ. ಶಾಲೆಯ ಮಕ್ಕಳೂ ಸಹ ಸ್ವಲ್ಪ ದೊಡ್ಡವರಾದ ಮೇಲೆ, ಭಾಷೆಯ ಅಂಗವಾಗಿ, ನಗೆಹನಿ ಮುಂತಾದುದನ್ನು ಸಂಗ್ರಹಿಸುವ ಮತ್ತು ಸ್ನೇಹಿತರ ಜೊತೆ ಅದನ್ನು ಹಂಚಿಕೊಳ್ಳುವ ಕೆಲಸ ಪ್ರಾರಂಭಿಸುತ್ತಾರೆ. ಆದರೆ ಯಾವುದು ಚಿಕ್ಕಂದಿನಲ್ಲಿ ಹಾಸ್ಯ ಎಂದು ಅನಿಸುತ್ತಿತ್ತೋ ಅದು ದೊಡ್ಡವರಾದಂತೆ ಹಾಸ್ಯ ಎಂದು ಅನಿಸುವುದಿಲ್ಲ. ಹಾಗಾಗಿ ಭಾಷೆಯಲ್ಲಿ, ಸಾಹಿತ್ಯದಲ್ಲಿ, ಸನ್ನಿವೇಶದಲ್ಲಿ, ಸಿನಿಮಾ, ನಾಟಕ, ಟಿವಿ ಸೀರಿಯಲ್ ಇವುಗಳಲ್ಲಿ ಹಾಸ್ಯ ಹುಡುಕುವ ಕೆಲಸ ಮುಂದುವರೆಯುತ್ತದೆ.

ಹಾಸ್ಯ ಹೇಗಿರಬೇಕು? ಎಲ್ಲರೂ ಒಟ್ಟಾಗಿ ಕೂತು ಅದನ್ನು ಆಸ್ವಾದಿಸುವಂತಿರಬೇಕು. ಒಬ್ಬರಿಗೆ ಅಥವಾ ಕೆಲವರಿಗೆ ಹಿಂಸೆ ಕೊಡುವಂತಹ ಪ್ರಯತ್ನ ಹಾಸ್ಯವಲ್ಲ. ಒಬ್ಬರನ್ನು ಅಥವಾ ಒಂದು ಗುಂಪು/ಸಮುದಾಯವನ್ನು ಹೀಯಾಳಿಸುವುದು ಹಾಸ್ಯವಲ್ಲ. ಇನ್ನೊಬ್ಬರ ದೈಹಿಕ ನ್ಯೂನತೆಯನ್ನು ಅಣಕಿಸುವುದು, ಅದರ ಮೇಲೆ ಟೀಕೆ ಟಿಪ್ಪಣಿ ಮಾಡುವುದು ಹಾಸ್ಯವಲ್ಲ.ಅದರ ಸೃಷ್ಟಿ ಹೇಗೆ ಮತ್ತು ಏಕೆ ಆಗಿದೆ ಎಂಬುದರ ಮೇಲೆಯೂ ಹಾಸ್ಯದ ಗುಣಮಟ್ಟ ನಿರ್ಧಾರವಾಗುತ್ತದೆ. ಎಲ್ಲಾ ಹಾಸ್ಯವೂ ಜನರು ಗಹಗಹಿಸಿ ನಗುವಂತಹ ರೀತಿಯದ್ದಾಗಿರಬೇಕಿಲ್ಲ. ಬಿಗುಪಿನ ವಾತಾವರಣವನ್ನು ತಿಳಿಗೊಳಿಸುವ ಮಂದಹಾಸ್ಯವೂ ಪ್ರಯೋಜನಕಾರಿ. ಒಬ್ಬರ ಅಥವಾ ಒಂದು ವ್ಯವಸ್ಥೆಯ ದೌರ್ಬಲ್ಯವನ್ನು ಹಾಸ್ಯದ ಮೂಲಕ ತೋರಿಸಿ, ಅದನ್ನು ಸರಿಪಡಿಸುವ ಅಥವಾ ಇತರರಿಗೆ ತಿಳಿಸುವ ಪ್ರಯತ್ನದಲ್ಲಿ ಹಾಸ್ಯ ಮಾಧ್ಯಮವಾದಲ್ಲಿ ಅದಕ್ಕೆ ಬೆಲೆ ಇರುತ್ತದೆ.

ಸಿಟ್ಟಿನಿಂದ ಅಥವಾ ಗಂಭೀರವಾಗಿ ಮಾಡಿದ ವಿಮರ್ಶಾತ್ಮಕ ಟೀಕೆಗಿಂತಲೂ ಹಾಸ್ಯದಿಂದ ಮಾಡಿದ ಟೀಕೆ ಎದುರಾಳಿಯ ಗಂಟಲಿಗೆ ಸಿಕ್ಕಿಕೊಳ್ಳದೆ ಸಲೀಸಾಗಿ ಮನಸ್ಸಿಗೆ ಇಳಿಯುತ್ತದೆ. ಸಂವಹನದಲ್ಲಿ ಕಷ್ಟಕರ ಸಂದೇಶವನ್ನು ಸಮರ್ಪಕವಾಗಿ  ತಲುಪಿಸಲು ಹಾಸ್ಯ ಸಹಕಾರಿಯಾಗುತ್ತದೆ. ಹಾಸ್ಯ ಅವಮಾನ ಅಥವಾ ಅವಹೇಳನಕಾರಿಯಾಗಿರಬಾರದು.

ಹಾಸ್ಯದಲ್ಲಿ ಸನ್ನಿವೇಶ ಮುಖ್ಯ ಪಾತ್ರ ವಹಿಸುತ್ತದೆ. ಒಂದೇ ತರಹದ ಹಾಸ್ಯ ಎಲ್ಲಾ ಸನ್ನಿವೇಶದಲ್ಲೂ ಸರಿಹೊಂದುವುದಿಲ್ಲ. ನಿಮ್ಮ ಹಾಸ್ಯದ ಗುರಿ ಯಾರು? ಇದರಿಂದ ಕೇಳುವವರಲ್ಲಿ ಯಾವ ಭಾವನೆ ಜಾಗೃತವಾಗುತ್ತದೆ ಮತ್ತು ಅದು ಇಲ್ಲಿ ಕೇಳಿಸಿಕೊಳ್ಳುತ್ತಿರುವ ಗುಂಪಿಗೆ ಸೂಕ್ತವೇ? ಇದೇ ಹಾಸ್ಯ ಮುಂದೆ ಬೇರೆಯವರಿಗೆ ತಲುಪಿದರೆ ಅದರ ಪರಿಣಾಮ ಏನು? ಹಾಸ್ಯಕ್ಕೆ ಇದು ಸರಿಯಾದ ಸಮಯವೇ? ಇವುಗಳನ್ನು ಪರಿಗಣಿಸಿನಿಮ್ಮ ಹಾಸ್ಯದ ಬತ್ತಳಿಕೆಯನ್ನು ಬಿಚ್ಚಿ. ಅಕಸ್ಮಾತ್ ನಿಮ್ಮ ಹಾಸ್ಯದ ಪ್ರಯತ್ನ ಸರಿಹೋಗಲಿಲ್ಲವೆಂದರೆ ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಿಸಿ. ಯಾರಿಗೆ ಅದರಿಂದ ನೋವಾಗಿದೆಯೋ ಅವರ ಕ್ಷಮೆ ಕೋರಿ.

ನಮ್ಮ ಸೋದರಮಾವ ಅರವತ್ತರ ದಶಕದಲ್ಲಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾರತ-ಚೀನ ಯುದ್ಧದ ನಂತರದ ರೇಷನ್ ಕಾಲ. ಇನ್ನೂ ಮದುವೆಯಾಗದ ಮಾವನ ರೇಷನ್ ಕಾರ್ಡಿನಲ್ಲಿದ್ದುದು ಒಂದೇ ಹೆಸರು. ಕಾಫಿ ಮಾತ್ರ ಮನೆಯಲ್ಲಿ ಮಾಡಿಕೊಂಡು ಊಟಕ್ಕೆ ಖಾನಾವಳಿ ಆಶ್ರಯಿಸಿದ್ದರು. ಸಕ್ಕರೆ ಹೊರಗೆ ಮಾರುಕಟ್ಟೆಯಲ್ಲಿ ಸಿಗುವ ವಸ್ತುವಾಗಿರಲಿಲ್ಲ. ಒಬ್ಬರಿಗೆ ಒಂದು ತಿಂಗಳಿಗೆ ಕೇವಲ ಒಂದು ಪೌಂಡ್ (454 ಗ್ರಾಂ) ಸಕ್ಕರೆ ಸಿಗುತ್ತಿತ್ತು. ಅದನ್ನು ಪ್ರತಿ ವಾರ ಪಡಿತರ ಅಂಗಡಿಯ ಸರದಿಯಲ್ಲಿ ನಿಂತು, ಕಾಯ್ದು ತರಬೇಕಿತ್ತು. ಇವರ ಸರದಿ ಬಂದಾಗ ಕೇವಲ ಸಕ್ಕರೆ ಎಂದಿದ್ದು ನೋಡಿ, ಅಂಗಡಿಯವನು ಲೆಕ್ಕ ಹಾಕಿ ಇವರ ಪಾಲಿನ ಸಕ್ಕರೆಯನ್ನು ಕಾಗದದ ಪೊಟ್ಟಣದಲ್ಲಿ ಕಟ್ಟುವ ಮುನ್ನ ಕೇಳಿದ “ಇದನ್ನು ಇಲ್ಲೇ ತಿನ್ನುತ್ತೀರೋ ಅಥವಾ ಮನೆಗೆ ಒಯ್ಯುತ್ತೀರೋ” ಎಂದು ಕೇಳಿದನಂತೆ. ಏಕೆಂದರೆ ಅವರಿಗೆ ಸಿಗುತ್ತಿದ್ದದ್ದು ಕೇವಲ 113 ಗ್ರಾಂ ಸಕ್ಕರೆ. ಅದನ್ನು ಮಾವ ಒಂದು ವಾರಕ್ಕೆ ಸಾಕಾಗುವಂತೆ ನಿರ್ವಹಣೆ ಮಾಡಿಕೊಳ್ಳಬೇಕಾಗಿತ್ತು. ಇದರಲ್ಲಿ ಹಾಸ್ಯ ಎಲ್ಲಿದೆ ಎಂದು ಕೆಲವರಿಗೆ ಅನಿಸಬಹುದು.

ಹಾಸ್ಯ ಎಲ್ಲೆಡೆ ಹರಡಿರುತ್ತದೆ. ಅದನ್ನು ಸರಿಯಾಗಿ ಹೆಕ್ಕಿ, ತೊಳೆದು, ಸರಿಯಾದ ಸ್ಥಳದಲ್ಲಿ ಮಿಂಚುವಂತೆ ಪ್ರದರ್ಶಿಸಿದರೆ ಅದು ನಗೆ ಹನಿಯಾಗುತ್ತದೆ. ಹೆಚ್ಚಿನ ಅಳತೆಯಲ್ಲಿದ್ದರೆ ನಗೆಯ ಹೊಳೆಯಾಗುತ್ತದೆ. ನಮ್ಮ ದಿನನಿತ್ಯದ ಜೀವನದಲ್ಲಿ ಅನೇಕ ಸ್ವಾರಸ್ಯಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವನ್ನು ಅಷ್ಟೇ ರೋಚಕವಾಗಿ ಇನ್ನೊಬ್ಬರಿಗೆ ಬಣ್ಣಿಸುವುದೇ ಓರ್ವ ಹಾಸ್ಯ ಕಲಾವಿದನ ಸಾಮರ್ಥ್ಯ. ಎಲ್ಲರೂ ಹಾಸ್ಯ ಕಲಾವಿದರಾಗಬೇಕಿಲ್ಲ, ಹಾಸ್ಯವನ್ನು ಗುರುತಿಸಿ, ಸವಿದು ಇತರರೊಂದಿಗೆ ಹಂಚಿಕೊಂಡರೆ ಸಾಕು.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...