ಮೂರನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಫೆಬ್ರವರಿ 16 ರಂದು ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಂದು ನೂತನವಾಗಿ ಆಯ್ಕೆಯಾದ ಸದಸ್ಯರು ಅರವಿಂದ್ ಕೇಜ್ರಿವಾಲ್ ಜೊತೆ ಸಭೆ ನಡೆಸಲಿದ್ದು, ತದನಂತರ ಕೇಜ್ರಿವಾಲ್ ಲೆಫ್ಟಿನೆಂಟ್ ಗೌರ್ವರ್ ಅನಿಲ್ ಬೈಜಾಲ್ರವರನ್ನು ಭೇಟಿಯಾಗಲಿದ್ದಾರೆ.
70 ಸದಸ್ಯರ ದೆಹಲಿ ವಿಧಾನಸಭೆಯಲ್ಲಿ ಎಎಪಿ 62 ಸ್ಥಾನಗಳನ್ನು ಗಳಿಸಿ ಅದ್ಭುತ ಗೆಲುವು ಸಾಧಿಸಿದೆ. ಬಿಜೆಪಿ ತನ್ನ ಸ್ಥಾನಗಳನ್ನು 3 ರಿಂದ 8 ಕ್ಕೆ ಹೆಚ್ಚಿಸಿತು. ಆದರೆ ಕಾಂಗ್ರೆಸ್ ಮತ್ತೊಮ್ಮೆ ಶೂನ್ಯ ಸಾಧನೆಯನ್ನು ಮಾಡಿದೆ.
ದೆಹಲಿ ಫಲಿತಾಂಶ ಬಂದ ನಂತರ ಕೇಜ್ರಿವಾಲ್ ದೆಹಲಿ ಜನರನ್ನು ಉದ್ದೇಶಿಸಿ “ಐ ಲವ್ ಯು” ಎಂದರಲ್ಲದೆ, ದೆಹಲಿ ತನ್ನ ಮಗನ ಮೇಲಿನ ನಂಬಿಕೆಯನ್ನು ಉಳಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಎಎಪಿಯ ಗೆಲುವು “ಕೆಲಸದ ಮೇಲಿನ ರಾಜಕೀಯ” ಎಂದು ಹೇಳಿದರು.
ಕೇಜ್ರಿವಾಲ್ ಚುನಾವಣಾ ಪ್ರಚಾರದ ಗಮನವನ್ನು ಸ್ಥಳೀಯ ಸಮಸ್ಯೆಯ ಬಗ್ಗೆ ಮಾತ್ರ ಇಟ್ಟುಕೊಂಡಿದ್ದರು. ಪಕ್ಷವು 53.6% ಮತಗಳನ್ನು ಪಡೆದುಕೊಂಡಿದೆ.