ಸಿನಿಮಾ ನಿರ್ದೇಶಕ ಎಸ್.ಪಿ. ಜನನಾಥನ್(61) ಭಾನುವಾರ ಬೆಳಿಗ್ಗೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ. ಹೃದಯಾಘಾತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೇ 7, 1959 ರಂದು ಜನಿಸಿರುವ ಜನನಾಥನ್ 2003 ರಲ್ಲಿ ‘ಇಯಾರ್ಕೈ’ ಸಿನಿಮಾದೊಂದಿಗೆ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಇದು ತಮಿಳು ಭಾಷೆಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ವಿಜಯ್ ಸೇತುಪತಿ ಮತ್ತು ಶ್ರುತಿ ಹಾಸನ್ ಅಭಿನಯದ ಲಾಬಮ್ ಅವರ ಕೊನೆಯ ಸಿನಿಮಾವಾಗಿದ್ದು, ಈ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಅವರು ಇದುವರೆಗೂ ಇಯಾರ್ಕೈ, ಇ, ಪೆರಾನ್ಮೈ, ಪುರಂಬೊಕ್ಕು ಮತ್ತು ಲಾಬಮ್ ಸೇರಿದಂತೆ ಒಟ್ಟು 5 ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಲಾಬಮ್ ಸಿನಿಮಾ ಏಪ್ರಿಲ್ 21 ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳಿಗೆ ವಿರೋಧ: ಟಿಕ್ರಿ ಗಡಿಯಲ್ಲಿ ಪ್ರಾಣಬಿಟ್ಟ ಮತ್ತೊಬ್ಬ ರೈತ!
ಸಂಗೀತ ಸಂಯೋಜಕ ಡಿ. ಇಮ್ಮನ್, “ಲಾಬಮ್ ನಿರ್ದೇಶಕ ಎಸ್.ಪಿ. ಜನನಾಥನ್ ಇನ್ನಿಲ್ಲ. ಕಾಕತಾಲಿಯವೆಂದರೆ, ಅವರ ಸ್ಪೂರ್ತಿಯಾಗಿರುವ ಸಾಮಾಜಿಕ ಕ್ರಾಂತಿಕಾರಿ ಕಾರ್ಲ್ಮಾರ್ಕ್ಸ್ ಮರಣಿಸಿದ ದಿನದಂದೆ ಅವರು ನಿಧನರಾಗಿದ್ದಾರೆ. ನಾವು ನಿಮ್ಮನ್ನು ಮಿಸ್ ಮಾಡುತ್ತಿದ್ದೇವೆ ಸರ್” ಎಂದು ಹೇಳಿದ್ದಾರೆ.
#Laabam director #SPJananathan , is no more… Incidentally he passed away on the death anniversary of social revolutionary #KarlMarx , who was his role model.We miss you sir.#RIP pic.twitter.com/Zl8qF0mokD
— D.IMMAN (@immancomposer) March 14, 2021
ನಿರ್ದೇಶಕ ಜನನಾಥನ್ ಅವರ ನಿಧನಕ್ಕೆ ಲಾಬಮ್ ನಟ ವಿಜಯ್ ಸೇತುಪತಿ ನಮನ ಸಲ್ಲಿಸಿದ್ದಾರೆ.
Love u sir pic.twitter.com/FTfNVsFZnT
— VijaySethupathi (@VijaySethuOffl) March 14, 2021
ನಟಿ ಶ್ರುತಿ ಹಾಸನ್, “ಭಾರವಾದ ಹೃದಯದಿಂದ ನಾವು ಎಸ್.ಪಿ. ಜನನಾಥನ್ ಸರ್ ಅವರಿಗೆ ವಿದಾಯ ಹೇಳುತ್ತೇವೆ. ನಿಮ್ಮೊಂದಿಗೆ ಕೆಲಸ ಮಾಡಿರುವುದರಲ್ಲಿ ಖುಷಿಯಿದೆ. ನಮ್ಮ ನೆನಪುಗಳಲ್ಲಿ ನೀವು ಯಾವಾಗಲೂ ಇರುತ್ತೀರಿ! ಅವರ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ಟ್ವೀಟ್ ಮಾಡಿದ್ದಾರೆ.
It is with the heaviest Heart that We say good bye to #SPJananathan sir – it was a pleasure working with you sir Thankyou for your wisdom and kind words you will always be in my thoughts ! My deepest condolences to his family ? pic.twitter.com/Ox1Ag0EEYE
— shruti haasan (@shrutihaasan) March 14, 2021
ನಟ ಹರೀಶ್ ಕಲ್ಯಾಣ್ ಕೂಡ ಟ್ವಿಟರ್ ಮೂಲಕ ಗೌರವ ಸಲ್ಲಿಸಿದ್ದು, “ಎಸ್.ಪಿ. ಜನನಾಥನ್ ಸರ್ ಅವರ ನಿಧನದ ಬಗ್ಗೆ ಕೇಳಿ ತುಂಬಾ ದುಃಖವಾಗಿದೆ. ಅವರು ಅತ್ಯಂತ ಸಂವೇದನಾಶೀಲ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ” ಎಂದು ಹೇಳಿದ್ದಾರೆ.
Extremely sad to hear about the demise of Dir #SPJananathan sir! One of the most sensible & socially responsible directors. My deepest condolences to his family & friends. May his soul RIP ?
— Harish Kalyan (@iamharishkalyan) March 14, 2021
#RIPSPJananathan sir ? He was 61#SPJananathan was famous for films like Iyarkai, Ee, Peraanmai, Purambokku and his upcoming #Laabam, which will be his final film!
A powerful, socially responsible filmmaker who connected with the common man. He will be missed!
— Kaushik LM (@LMKMovieManiac) March 14, 2021
ಇದನ್ನೂ ಓದಿ: ಪಿಕೆ ಟಾಕೀಸ್ 02: ಅರ್ಥಕ್ಕಿಂತಲೂ ಅನುಭವಕ್ಕೆ ಸಿಕ್ಕುವ – ಮಾನವೀಯತೆಯನ್ನು ಕಲಕುವ ಥಿಯೋಡೊರಸ್ ಸಿನಿಮಾಗಳು