ಅಸ್ಸಾಂನ ಸೋನಿತ್ಪುರ ಜಿಲ್ಲೆಯಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ವೇಳೆ ಭಾರತೀಯ ಜನತಾ ಪಕ್ಷ (ಬಿಜೆಪಿ) ದ ‘ಗೂಂಡಾಗಳು’ ನಡೆಸಿದ ದಾಳಿಯಲ್ಲಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಗಾಯಗೊಂಡಿದ್ದಾರೆ ಎಂದು ಪಕ್ಷ ಭಾನುವಾರ ಆರೋಪಿಸಿದೆ.
ಈ ಕುರಿತ ವಿಡಿಯೋವೊಂದನ್ನು ಕಾಂಗ್ರೆಸ್ ಎಕ್ಸ್ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಭೂಪೇನ್ ಬೋರಾ ಅವರಿಗೆ ವ್ಯಕ್ತಿಯೊಬ್ಬ ತಲೆಯಿಂದ ಗುದ್ದಿರುವುದನ್ನು ಕಾಣಬಹುದು.
आज असम में 'भारत जोड़ो न्याय यात्रा' के दौरान BJP के गुंडों ने यात्रा पर हमला कर दिया।
जब असम कांग्रेस अध्यक्ष @BhupenKBorah जी उन्हें समझाने गए तो उनके साथ मारपीट की। इस घटना में भूपेन बोरा जी को चोट आई है।
यह वीडियो BJP की नफरत की मानसिकता और बौखलाहट का सबूत है।
लेकिन इन… pic.twitter.com/HGED8Sit6G
— Congress (@INCIndia) January 21, 2024
ಬಿಜೆಪಿ ಕಾರ್ಯಕರ್ತರು ಭಾರತ್ ಜೋಡೊ ಯಾತ್ರೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಪುಷ್ಠಿ ನೀಡುವಂತೆ ಅವರ ಕೈಯಲ್ಲಿ ಕೇಸರಿ ಮತ್ತು ಬಿಜೆಪಿ ಧ್ವಜ ಕಾಣಬಹುದು. ರಾಹುಲ್ ಗಾಂಧಿಯವರ ಯಾತ್ರೆ ಜಮುಗುರಿಹತ್ ಪಟ್ಟಣದ ಮೂಲಕ ಹಾದು ಹೋಗುವಾಗ ಬಿಜೆಪಿಯವರು ತಡೆಯೊಡ್ಡಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ದಾಳಿ ಘಟನೆಯನ್ನು ರೆಕಾರ್ಡ್ ಮಾಡಲು ಯತ್ನಿಸುತ್ತಿದ್ದ ತಮ್ಮ ವರದಿಗಾರನ ಕ್ಯಾಮರಾವನ್ನೂ ಆರೋಪಿಗಳು ಕಿತ್ತುಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ತಿಳಿಸಿದೆ.
ಘಟನೆಗೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿಯವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಬಸ್ನಲ್ಲಿ ತೆರಳುತ್ತಿದ್ದಾಗ ಬಿಜೆಪಿ ಧ್ವಜಗಳನ್ನು ಹಿಡಿದ ಗುಂಪು ‘ಮೋದಿ ಮೋದಿ’ ಎಂದು ಕೂಗಿದೆ. ಈ ವೇಳೆ ಅವರೊಂದಿಗೆ ಮಾತನಾಡಲು ರಾಹುಲ್ ಗಾಂಧಿ ಬಸ್ನಿಂದ ಕೆಳಗಿಳಿದಿದ್ದು, ಆಗ ಗುಂಪು ಅಲ್ಲಿಂದ ಚದುರಿದೆ.
सबके लिए खुली है मोहब्बत की दुकान,
जुड़ेगा भारत, जीतेगा हिंदुस्तान।🇮🇳 pic.twitter.com/Bqae0HCB8f— Rahul Gandhi (@RahulGandhi) January 21, 2024
ಬಿಜೆಪಿಯ 20 ರಿಂದ 25 ಕಾರ್ಯಕರ್ತರು “ಧ್ವಜದೊಂದಿಗೆ ನನ್ನ ಬಸ್ನ ಮುಂದೆ ಬಂದಿದ್ದರು” ಎಂದು ರಾಹುಲ್ ಗಾಂಧಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ನಾನು ಬಸ್ನಿಂದ ಕೆಳಗಿಳಿದಾಗ ಅವರು ಓಡಿ ಹೋದರು. ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರಿಗೆ ನಾವು ಹೆದರುತ್ತೀವಿ ಅಂದುಕೊಂಡಿದ್ದಾರೆ. ನಮ್ಮ ಪೋಸ್ಟರ್ಗಳನ್ನು ಅವರು ಹರಿದು ಹಾಕಿದ್ದಾರೆ. ಅವರು ಎಷ್ಟೇ ಪೋಸ್ಟರ್ ಹರಿದರೂ ನಮಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಯಾರಿಗೂ ನಾವು ಹೆದರುವುದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
आज BJP के कुछ कार्यकर्ता झंडा लेकर हमारी बस के सामने आ गए। मैं बस से निकला, वो भाग गए।
हमारे जितने पोस्टर फाड़ने हैं, फाड़ दो.. हमें कोई फर्क नहीं पड़ता।
हमारी विचारधारा की लड़ाई है, हम किसी से नहीं डरते हैं।
न ही नरेंद्र मोदी से, न असम के मुख्यमंत्री से..
: @RahulGandhi जी… pic.twitter.com/syS7BGCBqO
— Congress (@INCIndia) January 21, 2024
ಅಸ್ಸಾಂನ ಬಿಜೆಪಿ ಸರ್ಕಾರವು ಭಾರತ್ ಜೋಡೋ ಯಾತ್ರೆಯಲ್ಲಿ ಜನರು ಸೇರದಂತೆ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದೆ. ಯಾತ್ರೆಯ ಮಾರ್ಗದಲ್ಲಿ ಕಾಂಗ್ರೆಸ್ನ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಜನರ ಅಭೂತಪೂರ್ವ ಬೆಂಬಲ ದೊರೆಯುತ್ತಿರುವುದನ್ನು ಕಂಡು ಸಿಎಂ ಹಿಮಂತ ಬಿಸ್ವಾ ಶರ್ಮಾ ಗಲಿಬಿಲಿಗೊಂಡಿದ್ದಾರೆ. ಹಾಗಾಗಿ, ಅವರು ನಮ್ಮ ಯಾತ್ರೆ ತಡೆದು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಕಾರ್ಯಕರ್ತರು ನಮ್ಮ ಪೋಸ್ಟರ್ಗಳನ್ನು ಹರಿಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಅಸ್ಸಾಂನ ದೇವಸ್ಥಾನದ ಆಡಳಿತವೊಂದು ಅಯೋಧ್ಯೆ ರಾಮಮಂದಿರದ ಉದ್ಘಾಟನಾ ಸಮಾರಂಭ ಮುಗಿಯುವವರೆಗೆ ದೇವಾಲಯಕ್ಕೆ ಭೆಟಿ ನೀಡದಂತೆ ರಾಹುಲ್ ಗಾಂಧಿಯವರಿಗೆ ಭಾನುವಾರ ಮನವಿ ಮಾಡಿದೆ ಎಂದು ವರದಿಗಳು ಹೇಳಿವೆ.
ಈ ವರದಿ ಬೆನ್ನಲ್ಲೇ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಫೋಟೋ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಕಾಂಗ್ರೆಸ್, “ಅಸ್ಸಾಂ ಮುಖ್ಯಮಂತ್ರಿ ಒಬ್ಬ ಹೇಡಿ” ಎಂದು ಬರೆದುಕೊಂಡಿತ್ತು.
ಇದನ್ನೂ ಓದಿ: ಭಾರತ್ ಜೋಡೋ ನ್ಯಾಯ ಯಾತ್ರೆ: ಅಸ್ಸಾಂನಲ್ಲಿ ಜೈರಾಮ್ ರಮೇಶ್ ಕಾರಿನ ಮೇಲೆ ದಾಳಿ