2019ನೇ ಸಾಲಿನ ಅರ್ಥಶಾಸ್ತ್ರಜ್ಞ ಕ್ಷೇತ್ರದಲ್ಲಿನ ಸಾಧನೆಗೆ ಭಾರತೀಯ ಮೂಲದ ಅಮೆರಿಕ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸೇರಿ ಮೂವರು ಅರ್ಥಶಾಸ್ತ್ರಜ್ಞರು ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಭಾರತೀಯ ಮೂಲದ ಅಮೆರಿಕ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಫೆಂಚ್-ಅಮೆರಿಕನ್ ಅರ್ಥಶಾಸ್ತ್ರಜ್ಞ ಎಸ್ತಾರ್ ಡೂಪ್ಲೋ ಮತ್ತು Iಅಮೆರಿಕದ ಮೈಕೆಲ್ ಕ್ರೆಮರ್ ಅವರಿಗೆ ಪ್ರಶಸ್ತಿ ದೊರೆತಿದೆ. ಜಾಗತಿಕ ಬಡತನ ನಿವಾರಣೆಗೆ ಕೈಗೊಂಡ ಪ್ರಾಯೋಗಿಕ ಅಧ್ಯಯನ ಪರಿಗಣಿಸಿ, ಮೂವರಿಗೆ ಸ್ವಿಡೀಶ್ ಅಕಾಡೆಮಿ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇನ್ನು ನೊಬೆಲ್ ಪ್ರಶಸ್ತಿಯ ಮೊತ್ತವನ್ನು ಮೂವರು ಹಂಚಿಕೊಳ್ಳಲಿದ್ದಾರೆ.
58 ವರ್ಷದ ಅಭಿಜಿತ್ ಬ್ಯಾನರ್ಜಿ ಕೋಲ್ಕತ್ತಾ ಮೂಲದವರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಪಡೆದಿದ್ದರು. ನಂತರ ಅಮೆರಿಕದ ಎಂಐಟಿಯಲ್ಲಿ ಅರ್ಥಶಾಸ್ತ್ರಜ್ಞ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೊಬ್ಬ ಪ್ರಶಸ್ತಿ ಪುರಸ್ಕೃತ 57 ವರ್ಷದ ಎಸ್ತಾರ್ ಡೂಪ್ಲೋ ಎಂಐಟಿಯಲ್ಲಿ ಪಿ.ಎಚ್.ಡಿ ಪಡೆದಿದ್ದು, ಅರ್ಥಶಾಸ್ತ್ರ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು 55 ವರ್ಷದ ಮೈಕೆಲ್ ಕ್ರೆಮರ್ ಕೂಡ ಎಂಐಟಿಯಲ್ಲಿ ಪಿ.ಎಚ್.ಡಿ ಪಡೆದಿದ್ದು, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿಗೆ ಸಂದಿರುವ ನೊಬೆಲ್ ಪ್ರಶಸ್ತಿಗೆ ಹಲವು ಗಣ್ಯರು ಶುಭಾಶಯ ತಿಳಿಸಿದ್ದಾರೆ. ಯುವ ನೇತಾರ ಜಿಗ್ನೇಶ್ ಮೇವಾನಿ, ಅರವಿಂದ್ ಕೇಜ್ರಿವಾಲ್ ಕೂಡ ಟ್ವೀಟ್ ಮಾಡಿ, ಅಭಿಜಿತ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
Absolutely delighted to hear that Abhijeet Banerjee, Esther Duflo and Michael Kremer won this year's Nobel Prize for Economics! Their contributions in fighting poverty and in improving malnutrition of Indian children is outstanding. Many many congratulations!
— Jignesh Mevani (@jigneshmevani80) October 14, 2019
Abhijit Banerjee's pathbreaking work has also benefitted lakhs of children studying in Delhi govt schools
One of Delhi govt's most imp education reform 'Chunauti' has transformed govt school classroom teaching. It is based on the model developed by him. https://t.co/peHgYqXSHt
— Arvind Kejriwal (@ArvindKejriwal) October 14, 2019
ಇನ್ನು ರಾಜಾರಾಂ ತಲ್ಲೂರ್ ಅವರು, ‘ಇವರಿಗ್ಯಾರು ನೊಬೆಲ್ ಕೊಟ್ರು ಮಾರಾಯ್ರೆ’..?!!!
ಇವರು ಜೆ.ಎನ್.ಯು ಪ್ರಾಡಕ್ಟ್. ಜತೆಗೆ ಹಾರ್ವರ್ಡೂ ಹೌದು;ಹಾರ್ಡ್ ವರ್ಕೂ ಹೌದು. ಮೇಲಾಗಿ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನ NYAY ಯೋಜನೆ ಇವರದೇ ಸಲಹೆಯಂತೆ. ಡಿಮಾನಿಟೈಸೇಷನ್ ಲಾಜಿಕ್ಕೇ ಅವರಿಗೆ ಇನ್ನೂ ಅರ್ಥ ಆಗಿಲ್ಲವಂತೆ. ಎಂಥದು ಮಾರಾಯ್ರೆ, ಭಕ್ತರಿಗೆ ಅಷ್ಟು ಚೆನ್ನಾಗಿ ಅರ್ಥ ಆದದ್ದು, ಅರೆದು ಕುಡಿದದ್ದು – ತಜ್ಞರಾಗಿ ಇವರಿಗೆ ಅರ್ಥ ಆಗ್ಲಿಲ್ಲ ಅಂದ್ರೆ ಎಂಥಾ ತಜ್ಞರಿವರು..! ಎಂದು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.
ಇನ್ನು ಬಡವರ ಪರವಾಗಿ ಇವರ ಚಿಂತನೆಗಳಿರುವ ಇವರು ನರೇಗಾ ಯೋಜನೆ ಜಾರಿಯಲ್ಲಿಯೂ ಪ್ರಧಾನ ಪಾತ್ರವಹಿಸಿದ್ದರು. ಹಾಗಾಗಿ ಇವರನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ “ಅರ್ಬನ್ ನಕ್ಸಲ್” ಎಂದು ಹಲವರು ಕರೆದುದ್ದಲ್ಲದೇ ಅವರಿಗೆ ನೊಬೆಲ್ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಮನುವಾದಿಗಳಿಂದ ‘ನಗರದ ನಕ್ಸಲ್’ ಎಂದು ಬಿರುದಾಂಕಿತರಾಗಿದ್ದ, JNU ವಿದ್ಯಾರ್ಥಿಯಾಗಿದ್ದ ಅಭಿಜಿತ್ ಬ್ಯಾನರ್ಜಿ ಅವರಿಗೆ ನೊಬೆಲ್ ಪ್ರಶಸ್ತಿ ದೊರಕಿರುವುದು ಭಾರತದ ಜಾತ್ಯತೀತವಾದಿಗಳಿಗೆ ಹೆಮ್ಮೆಯ ಸಂಗತಿ.