HomeUncategorizedಆತ್ಮನಿರ್ಭರ ಭಾರತ ಯೋಜನೆ: ಎರಡನೇ ಹಂತದ ವಿವರಣೆಯ ಮುಖ್ಯಾಂಶಗಳು

ಆತ್ಮನಿರ್ಭರ ಭಾರತ ಯೋಜನೆ: ಎರಡನೇ ಹಂತದ ವಿವರಣೆಯ ಮುಖ್ಯಾಂಶಗಳು

ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ಸ್ವಯಂ ಉದ್ಯೋಗಿ ಮತ್ತು ಸಣ್ಣ ರೈತರ ಮೇಲೆ ಇಂದಿನ ಉಪಕ್ರಮಗಳು ಕೇಂದ್ರೀಕರಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

- Advertisement -
- Advertisement -

ಪ್ರಧಾನಿ ಮೋದಿ ಘೋಷಿಸಿದ್ದ ಕೊರೊನಾ ವಿಶೇಷ ಪ್ಯಾಕೇಜ್ ಇದರ ಇನ್ನಷ್ಟು ವಿವರಗಳನ್ನು ಕೇಂದ್ರ ಹಣಕಾಸು ಮಂತ್ರಿ ನಿರ್ಮಲ ಸೀತಾರಾಮನ್ ನೀಡಿದ್ದಾರೆ. ಅವರು ನಿನ್ನೆಯಷ್ಟೇ ವಿವಿಧ ವಿಭಾಗಗಳಿಗೆ ಎಷ್ಟು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದರಾದರೂ, ಮುಂದಿನ ದಿನಗಳಲ್ಲೂ ಇದರ ಬಗೆಗಿನ ಮಾಹಿತಿಯನ್ನು ನೀಡಲು ನಮ್ಮ ತಂಡ ಪತ್ರಿಕಾಗೋಷ್ಠಿ ನಡೆಸಲಿದೆ ಎಂದು ಹೇಳಿದ್ದರು.

ಪತ್ರಿಕಾಗೋಷ್ಟಿಯ ಆರಂಭದಲ್ಲಿಯೆ ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ಸ್ವಯಂ ಉದ್ಯೋಗಿ ಮತ್ತು ಸಣ್ಣ ರೈತರ ಮೇಲೆ ಇಂದಿನ ಉಪಕ್ರಮಗಳು ಕೇಂದ್ರೀಕರಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಭಾಷಣದ ಮುಖ್ಯಾಂಶಗಳು:

ಬೆಲೆಯ ಮೇಲಿನ ಸಾಲದ ಬಡ್ಡಿ ಪಾವತಿ ಹಾಗೂ ತ್ವರಿತ ಮರುಪಾವತಿಯನ್ನು ಮೇ 31 ಕ್ಕೆ ವಿಸ್ತರಣೆ.

ವಲಸಿಗ ಕಾರ್ಮಿಕರಿಗೆ ಆಶ್ರಯ ಕಲ್ಪಿಸಲು ಹಾಗೂ ಅವರಿಗೆ ಆಹಾರ ಮತ್ತು ನೀರು ಇತ್ಯಾದಿಗಳನ್ನು ಒದಗಿಸಲು ’ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ’ ಬಳಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಅನುಮತಿ.

ಕೊರೊನಾ ಅವಧಿಯಲ್ಲಿ 12,000 ಸ್ವ-ಸಹಾಯ ಗುಂಪುಗಳು 3 ಕೋಟಿಗೂ ಹೆಚ್ಚು ಮಾಸ್ಕ್‌ಗಳನ್ನು ಮತ್ತು 1.2 ಲಕ್ಷ ಲೀಟರ್ ಸ್ಯಾನಿಟೈಜರ್‌ಗಳನ್ನು ಉತ್ಪಾದಿಸಿವೆ. ಕಳೆದ ಎರಡು ತಿಂಗಳಲ್ಲಿ ನಗರ ಬಡವರಿಗಾಗಿ 7,200 ಹೊಸ ಸ್ವಸಹಾಯ ಸಂಘಗಳನ್ನು ರಚನೆ.

ಮುಂದಿನ 2 ತಿಂಗಳವರೆಗೆ ಎಲ್ಲಾ ವಲಸಿಗರಿಗೆ ಉಚಿತ ಆಹಾರ ಧಾನ್ಯಗಳು ಸರಬರಾಜು. ಇದರ ಉಪಯೋಗ ಕಾರ್ಡ್ ರಹಿತರಿಗೂ ಸಿಗಲಿದ್ದು, ಒಬ್ಬ ವ್ಯಕ್ತಿಗೆ 5 ಕೆಜಿ ಗೋಧಿ / ಅಕ್ಕಿ ಮತ್ತು ಕುಟುಂಬಕ್ಕೆ 1 ಕೆಜಿ ಬೇಳೆಯನ್ನು 2 ತಿಂಗಳವರೆಗೆ ನೀಡಲಾಗುತ್ತದೆ. ಇದಕ್ಕಾಗಿ 3500 ಕೋಟಿ ರೂ. ಖರ್ಚು ಆಗಲಿದ್ದು, ಇದರಿಂದ 8 ಕೋಟಿ ವಲಸಿಗರಿಗೆ ಲಾಭ.

ಒನ್ ನೇಷನ್ ಒನ್ ರೇಷನ್ ಕಾರ್ಡ್ ಜಾರಿಗೆ ಬರಲಿದ್ದು, 23 ರಾಜ್ಯಗಳಲ್ಲಿ 67 ಕೋಟಿ ಫಲಾನುಭವಿಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯ 83% ಜನಸಂಖ್ಯೆಯಷ್ಟನ್ನು ಒಳಗೊಂಡಿದೆ. ಇದು ಆಗಸ್ಟ್ 2020 ರ ವೇಳೆಗೆ ಜಾರಿಯಾಗಲಿದೆ.

ನಗರಗಳಲ್ಲಿ ಸರಕಾರದ ಅನುದಾನಿತ ವಸತಿಗಳನ್ನು ರಿಯಾಯಿತಿ ದರದಲ್ಲಿ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳಾಗಿ ಪರಿವರ್ತನೆ. ಈ ಮೂಲಕ ವಲಸೆ ಕಾರ್ಮಿಕರು ಹಾಗೂ ನಗರ ಬಡವರಿಗೆ ಕೈಗೆಟುಕುವ ಬಾಡಿಗೆ ದರದಲ್ಲಿ ವಸತಿ ಯೋಜನೆ ಪ್ರಾರಂಭ.

ಮುದ್ರಾ-ಶಿಶು ಯೋಜನೆಯ ಸಾಲ ಪಾವತಿಸುವವರಿಗೆ 12 ತಿಂಗಳ ಅವಧಿಗೆ 2% ಬಡ್ಡಿ ಸಬ್ವೆನ್ಷನ್. ಇದಕ್ಕಾಗಿ 1500 ಕೋಟಿ ರೂ.

50 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ವಿಶೇಷ ಸಾಲ ಸೌಲಭ್ಯ, ಇದಕ್ಕಾಗಿ 5000 ಕೋಟಿ ರೂ.

ವಾರ್ಷಿಕ 6-18 ಲಕ್ಷ ರೂ ಆದಾಯ ಗಳಿಸುವ ಮಧ್ಯಮ ಆದಾಯದ ಗುಂಪುಗಳಿಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮನ್ನು ಮಾರ್ಚ್ 2021 ರವರೆಗೆ ವಿಸ್ತರಣೆ. ಇದರಿಂದ 2020-21ರ ಅವಧಿಯಲ್ಲಿ 2.5 ಲಕ್ಷ ಮಧ್ಯಮ ಆದಾಯದ ಕುಟುಂಬಗಳಿಗೆ ಲಾಭ.

ಗ್ರಾಮೀಣ ಸಹಕಾರ ಬ್ಯಾಂಕುಗಳು ಮತ್ತು ಆರ್‌ಆರ್‌ಬಿಗಳ ಬೆಳೆ ಸಾಲದ ಅವಶ್ಯಕತೆಗಾಗಿ ನಬಾರ್ಡ್‌ನಿಂದ 30,000 ಕೋಟಿ ರೂ.ಗಳ ಹೆಚ್ಚುವರಿ ಮರು ಹಣಕಾಸು ಬೆಂಬಲ.

ನಬಾರ್ಡ್ ಮೂಲಕ 30,000 ಕೋಟಿ ರೂ. ಹೆಚ್ಚುವರಿ ತುರ್ತು ಕಾರ್ಯ ಬಂಡವಾಳ ನಿಧಿ. ಇದರಿಂದಾಗಿ 3 ಕೋಟಿ ರೈತರಿಗೆ ಲಾಭ.

ಕಾಂಪೆನ್ಸೇಟರಿ ಅರಣ್ಯೀಕರಣ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ಕ್ಯಾಂಪಾ) ನಿಧಿಯಡಿ ಬುಡಕಟ್ಟು ಹಾಗೂ ಆದಿವಾಸಿಗಳಿಗೆ 6000 ಕೋಟಿ ರೂ.ಗಳ ಮೌಲ್ಯದ ಉದ್ಯೋಗಾವಕಾಶ.

ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ 2.5 ಕೋಟಿ ರೈತರಿಗೆ 2 ಲಕ್ಷ ಕೋಟಿ ರೂ.ಗಳ ರಿಯಾಯಿತಿ ಸಾಲ ಹೆಚ್ಚಳ.


ಓದಿ: ಪ್ರಧಾನಿಯ 20 ಲಕ್ಷ ಕೋಟಿ ಪ್ಯಾಕೇಜ್: ಮೊದಲ ಕಂತಲ್ಲಿ ಕೊಡ್ತಿರೋದು ಕೇವಲ 2500 ಕೋಟಿ ಅಷ್ಟೆ!


ಬಿಜೆಪಿಯೇನೋ ದ್ರೋಹ ಮಾಡಿತು; ಆದರೆ ಕಾಂಗ್ರೆಸ್ಸೇಕೆ ಕೈ ಬಿಟ್ಟಿತು? ಸದ್ದು…. ಈ ಸುದ್ದಿಗಳೇನಾದವು? – 09 ನೇ ಸಂಚಿಕೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...