Homeಮುಖಪುಟಸಹಕಾರ ಖಾತೆ ರಚನೆ: ಒಕ್ಕೂಟ ಸರ್ಕಾರದಿಂದ ರಾಜ್ಯದ ಹಕ್ಕುಗಳ ಮೇಲೆ ದಾಳಿ

ಸಹಕಾರ ಖಾತೆ ರಚನೆ: ಒಕ್ಕೂಟ ಸರ್ಕಾರದಿಂದ ರಾಜ್ಯದ ಹಕ್ಕುಗಳ ಮೇಲೆ ದಾಳಿ

ರಾಜ್ಯ ಸರ್ಕಾರಗಳು ಮತ್ತು ಅವುಗಳನ್ನು ಆರಿಸಿದ ಪ್ರಜಾಪ್ರಭುಗಳು ಪಂಕದಲ್ಲಿ ಬಿದ್ದ ಪಶುವಿನಂತೆ ಒದ್ದಾಡುತ್ತಿರುವುದು ಈಗಾಗಲೇ ಗೋಚರಿಸುತ್ತಿದೆ. ಭವಿಷ್ಯದಲ್ಲಿ ಇದರ ಪರಿಸ್ಥಿತಿ ಇನ್ನಷ್ಟು ಭೀಕರವಾಗುತ್ತದೆ

- Advertisement -
- Advertisement -

ಒಕ್ಕೂಟ ಸರ್ಕಾರ ‘ಸಹಕಾರ ಖಾತೆ’ ಹೆಸರಿನಲ್ಲಿ ಹೊಸ ಇಲಾಖೆಯನ್ನು ಆರಂಭಿಸಿದೆ. ಸಂವಿಧಾನದ ಪ್ರಕಾರ ಸಹಕಾರಿ ಕ್ಷೇತ್ರ ರಾಜ್ಯ ಪಟ್ಟಿಯಲ್ಲಿದೆ. ಇದರ ಪ್ರಕಾರ, ಒಕ್ಕೂಟ ಸರ್ಕಾರಕ್ಕೆ ರಾಜ್ಯದ ಹಕ್ಕಿನ ಮೇಲೆ ಸವಾರಿ ಮಾಡುವ ಅಧಿಕಾರವಿಲ್ಲ. ಸಂವಿಧಾನದ 7ನೇ ಪರಿಚ್ಛೇದದಲ್ಲಿ ಸಹಕಾರಿ ಕ್ಷೇತ್ರಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ. ರಾಜ್ಯದ ಹಕ್ಕಿನಲ್ಲಿ ಮಧ್ಯಪ್ರವೇಶಿಸುವುದು ಅಸಾಂವಿಧಾನಿಕ ನಡೆ ಎಂದು ಗೊತ್ತಿದ್ದೂ ಒಕ್ಕೂಟ ಸರ್ಕಾರ ಸಹಕಾರ ಇಲಾಖೆಯನ್ನು ಆರಂಭಿಸಿದೆ. ಇದರ ಹಿಂದೆ ರಾಜ್ಯಗಳ ಒಡೆತನದಲ್ಲಿರುವ ಸಹಕಾರಿ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯುವ ದೀರ್ಘಕಾಲೀನ ಹುನ್ನಾರವಿದೆ.

ವಿವಾದಾತ್ಮಕ ಕೃಷಿ ಮಸೂದೆಗಳಿಂದ ರಾಜ್ಯದ ಹಕ್ಕು ಮೊಟಕು

ವಿವಾದಾತ್ಮಕ ಮೂರು ಕೃಷಿ ಮಸೂದೆಗಳನ್ನು ರೂಪಿಸಿ ರಾಜ್ಯದ ಪಾಲಿನಲ್ಲಿದ್ದ ಕೃಷಿ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ಪಡೆಯಲು ಒಕ್ಕೂಟ ಸರ್ಕಾರ ಮುಂದಾಗಿತ್ತು. ಇದನ್ನು ವಿರೋಧಿಸಿ ದೇಶದ ಅನ್ನದಾತರು 7 ತಿಂಗಳಿಂದ ದೆಹಲಿ ಗಡಿಗಳಲ್ಲಿ ಮಳೆ, ಬಿಸಿಲು, ಚಳಿಗಳನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ, ಸಂಪುಟ ವಿಸ್ತರಣೆಯಲ್ಲಿ ಬಿಜಿಯಾಗುವ ಒಕ್ಕೂಟ ಸರ್ಕಾರ ಮತ್ತು ಪ್ರಧಾನಿ, ಸಚಿವರಿಗೆ ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ಅನ್ನದಾತರ ಅಳಲನ್ನು ಕೇಳುವ ವ್ಯವಧಾನವಿಲ್ಲ. ಸುಮಾರು 250ಕ್ಕೂ ಹೆಚ್ಚು ರೈತರು ಇಲ್ಲೇ ಬಲಿಯಾದರೂ ಅವರೆಡೆಗೆ ಎಳ್ಳಷ್ಟು ಕನಿಕರವೂ ದೇಶವನ್ನು ಆಳುತ್ತಿರುವ 56 ಎದೆಯಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ವ್ಯಕ್ತಿಗೆ ಇಲ್ಲ.

ಹೊಸ ಶಿಕ್ಷಣ ನೀತಿಯಿಂದ ರಾಜ್ಯಗಳ ಹಿಡಿತ ಕಳೆದುಕೊಳ್ಳದೆ ಶಿಕ್ಷಣ

ಇನ್ನು ರಾಜ್ಯಪಟ್ಟಿಯಲ್ಲೇ ಇರುವ ಶಿಕ್ಷಣವನ್ನು ಕೂಡ ಈಗಾಗಲೇ ಒಕ್ಕೂಟ ಸರ್ಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರ ಭಾಗವಾಗಿಯೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(NEP)ಯನ್ನು ಜಾರಿಗೆ ತರಲಾಗಿದೆ. ಇದರ ಹಿಂದಿರುವ ಹುನ್ನಾರವೆಂದರೆ ಭವಿಷ್ಯದಲ್ಲಿ ತಳಸಮುದಾಯದವರು, ದೀನದಲಿತರು, ಹಿಂದುಳಿದವರು, ಬಡವರು, ಅಸಂಘಟಿತ ವಲಯದವರು, ಮಹಿಳೆಯರು ಶಿಕ್ಷಣದಿಂದ ವಂಚಿತರನ್ನಾಗಿಸುವುದು.

ಇದನ್ನೂ ಓದಿ: ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾದ ಸಹಕಾರಿ ಬ್ಯಾಂಕುಗಳನ್ನು ರಕ್ಷಿಸಿ: ಶರದ್ ಪವಾರ್

ರಾಜ್ಯಪಟ್ಟಿಯಲ್ಲಿರುವ ಶಿಕ್ಷಣ ವ್ಯವಸ್ಥೆಯಿಂದಾಗಿ ಸೈಕಲ್, ಬಿಸಿಯೂಟ, ಬಟ್ಟೆ, ಕ್ಷೀರಭಾಗ್ಯ, ಉಚಿತಪಠ್ಯಪುಸ್ತಕ ವಿತರಣೆ ಮತ್ತಿತರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದರಿಂದಾಗಿ ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರನ್ನೂ ಒಳಗೊಂಡು ಶೇ. 97ರಷ್ಟು ಪ್ರಮಾಣದಲ್ಲಿರುವ ಹಿಂದುಳಿದ ವರ್ಗ ಮತ್ತು ಇತರ ಜಾತಿಯವರಿಗೆ ಶಿಕ್ಷಣ ಸಿಗುತ್ತಿದೆ. ಇದರಿಂದಾಗಿ ಶಿಕ್ಷಣ, ದುಡಿಮೆ, ವೈಜ್ಞಾನಿಕ ಮನೋಭಾವ, ಆರೋಗ್ಯ, ವಸತಿ ಇತ್ಯಾದಿಗಳು ಈ ವರ್ಗಗಳಲ್ಲಿ ಸುಧಾರಿಸುತ್ತಿವೆ. ಆದರೆ, ಇದನ್ನು ಹತ್ತಿಕ್ಕಲು ಹೊಸ ಶಿಕ್ಷಣ ನೀತಿಯನ್ನು ಒಕ್ಕೂಟ ಸರ್ಕಾರ ಕುತಂತ್ರದಿಂದ ಜಾರಿಗೆ ತಂದಿದೆ.

ಇದರಲ್ಲಿರುವ ನಿಯಮಗಳು ಇನ್ನು 10-15 ವರ್ಷಗಳಲ್ಲಿ ದೇಶದ ಶೈಕ್ಷಣಿಕ ವ್ಯವಸ್ಥೆಯನ್ನು ಉಳ್ಳವರಿಗೆ ಮಾತ್ರ ಮತ್ತು ಮೇಲ್ವರ್ಗದವರಿಗೆ ಸೀಮಿತಗೊಳಿಸುವ ದುಷ್ಟ ಚಿಂತನೆಯನ್ನು ಜಾರಿಗೆ ತರಲಿವೆ. ಇದರಿಂದ ಕೇವಲ ದೇಶದ ಶೈಕ್ಷಣಿಕ ವ್ಯವಸ್ಥೆ ಮಾತ್ರ ಹಾಳಾಗುವುದಿಲ್ಲ. ಆರ್ಥಿಕ ಪರಿಸ್ಥಿತಿ ಕೂಡ ಅಧೋಗತಿಗೆ ಇಳಿಯುತ್ತದೆ. ವೈಜ್ಞಾನಿಕ ಮನೋಭಾವ ನಷ್ಟವಾಗುತ್ತದೆ. ಇದು ಸಂವಿಧಾನದ ಪ್ರಕಾರ ಕೂಡ ದ್ರೋಹವೆಂದೇ ಹೇಳಬೇಕು. ಸಂವಿಧಾನದಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಒತ್ತು ನೀಡಲಾಗಿದೆ. ಆದರೆ, ಶಿಕ್ಷಣವನ್ನೇ ಕೊಡದೆ ಹೋದಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಧಕ್ಕೆಯಾಗುವುದು ನಿಶ್ಚಿತ.

ಜೂದಾಸ್ ಏಸು ಕ್ರಿಸ್ತನಿಗೆ ಮಾಡಿದಂತೆ ಕೇರಳ ಸರ್ಕಾರ ರಾಜ್ಯಕ್ಕೆ ಮೋಸ ಮಾಡಿದೆ: ಮೋದಿ| NaanuGauri

ವಿದ್ಯೆ ಕಲಿತವರಿಗೆ ಸೇವಾವಲಯ, ಸರ್ಕಾರಿ ಹುದ್ದೆಗಳು, ವಿದೇಶದಲ್ಲಿ ವಿವಿಧ ಹುದ್ದೆಗಳು ಸಿಗುತ್ತಿವೆ. ನಿರ್ದಿಷ್ಟ ವಿದ್ಯಾರ್ಹತೆಯ ಅಭ್ಯರ್ಥಿಗಳು ನೂತನ ಶಿಕ್ಷಣ ನೀತಿಯ ದುಷ್ಪರಿಣಾಮದಿಂದ ದೇಶದಲ್ಲೇ ಸಿಗದೆ ಇರುವ ಸಾಧ್ಯತೆಗಳು ಇವೆ. ಜೊತೆಗೆ, ಶಿಕ್ಷಣವನ್ನು ಸಂಪೂರ್ಣ ಖಾಸಗೀಕರಿಸುವ ಹುನ್ನಾರದ ಭಾಗವಾಗಿ ಶಿಕ್ಷಣ ನೀತಿಯಲ್ಲಿ ಅನೇಕ ವಿಷಯಗಳನ್ನು ಸೇರಿಸಲಾಗಿದೆ. ಸ್ಥಳೀಯ ಭಾಷೆ ಮತ್ತು ವಿಷಯ ಹಾಗೂ ಕೌಶಲಗಳನ್ನು ಕಡೆಗಣಿಸಲಾಗಿದೆ. ಇವೆಲ್ಲವುಗಳಿಂದಾಗಿ ಶಿಕ್ಷಣ ಕೇವಲ ಉಳ್ಳವರ ಪಾಲಾಗುತ್ತದೆ.

ಜಿ.ಎಸ್.ಟಿ. ಜಾರಿಯೆಂಬ ಮಧ್ಯರಾತ್ರಿ ನಾಟಕದಿಂದ ರಾಜ್ಯಗಳಿಗೆ ನಷ್ಟ

ಮಧ್ಯರಾತ್ರಿ ವಿಶೇಷ ಅಧಿವೇಶನ ನಡೆಸಿ ಅವೈಜ್ಞಾನಿಕ ಜಿ.ಎಸ್.ಟಿ.ಯನ್ನು ಒಕ್ಕೂಟ ಸರ್ಕಾರ ಜಾರಿಗೆ ತಂದಿತ್ತು. ದುರಂತವೆಂದರೆ, ಸರಳ, ಕನಿಷ್ಠ ಎಂದು ಹೇಳಿದ ತನ್ನ ಮಾತನ್ನು ಸರ್ಕಾರ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಜಗತ್ತಿನಲ್ಲೇ ಅತಿಹೆಚ್ಚು ತೆರಿಗೆ ವಸೂಲಿ ಮಾಡಿದ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಶೇ. 28ರಷ್ಟು ತೆರಿಗೆಯನ್ನು ಜನರಿಂದ ಸುಲಿದು, ರಾಜ್ಯಗಳಿಗೆ ಇದ್ದ ತೆರಿಗೆ ಸಂಗ್ರಹಿಸುವ ಅವಕಾಶವನ್ನು ಕಬಳಿಸಿತು. ಮತ್ತೆ ರಾಜ್ಯಗಳ ಪಾಲು ಕೊಡುತ್ತೇನೆ ಎಂದು, 5 ವರ್ಷಗಳ ಕಾಲ ರಾಜ್ಯಗಳಿಗೆ ಆಗುವ ನಷ್ಟವನ್ನು ಭರಿಸುವುದಾಗಿ ಕೊಟ್ಟ ಮಾತನ್ನು ಸರ್ಕಾರ ಮರೆತುಬಿಟ್ಟಿತು. ಕೊರೊನ ನಂತರ ಕರ್ನಾಟಕದ ಜಿ.ಎಸ್.ಟಿ. ಪಾಲನ್ನು ಕೇಳಿದರೆ, ಸಾಲ ಮಾಡಿ ಎಂದು ಹೇಳಿತು. ಈ ಮಾತನ್ನು ಶಿರಸಾವಹಿಸಿ ಪಾಲಿಸಿದ ರಾಜ್ಯ ಸರ್ಕಾರ ಬರೋಬ್ಬರಿ 35,000 ಕೋಟಿ ಸಾಲ ಮಾಡಿತು. ಹೀಗೆ ರಾಜ್ಯಗಳ ಸ್ವಾಯತ್ತತೆಯ ಮೇಲೆ ಒಕ್ಕೂಟ ಸರ್ಕಾರ ನಿರಂತರವಾಗಿ ದಾಳಿ ಮಾಡಿ ಅಶಕ್ತರನ್ನಾಗಿಸುತ್ತಲೇ ಇದೆ.

ಸಹಕಾರ ಖಾತೆಯಿಂದ ರಾಜ್ಯಗಳ ಸ್ಥಿತಿ ದಿವಾಳಿ

ಇನ್ನು ಸಹಕಾರ ಕ್ಷೇತ್ರಕ್ಕೆ ಒಕ್ಕೂಟ ಸರ್ಕಾರ ಬಾಯಿ ಹಾಕುತ್ತಿರುವುದೇಕೆ? ನೋಡೋಣ. ರಾಜ್ಯದ ಪಾಲಿನಲ್ಲಿದ್ದ ಕೃಷಿ, ಶಿಕ್ಷಣವನ್ನು ತನ್ನ ಕಪಿಮುಷ್ಠಿಯ ಬಿಗಿಹಿಡಿತಕ್ಕೆ ತೆಗೆದುಕೊಂಡಿರುವ ಒಕ್ಕೂಟ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಡಿರುವುದೇನು ಒಮ್ಮೆ ಆಲೋಚಿಸಿ. ಸಾಲ ಮತ್ತು ಬಡ್ಡಿ ಸೇರಿ 9000 ಕೋಟಿ ರೂಪಾಯಿಗಳನ್ನು ಕೊಡಬೇಕಿರುವ ವಿಜಯ್ ಮಲ್ಯ, 13,500 ಕೋಟಿ ರೂ. ಪಾವತಿಸಬೇಕಿರುವ ಮೇಹುಲ್ ಚೋಕ್ಸಿ ಮೊದಲಾದವರು ದೇಶಭಕ್ತರು ಎಂದು ಬಿಂಬಿಸುವ ಬಿಜೆಪಿಗರು ಅಧಿಕಾರ ನಡೆಸುತ್ತಿರುವ ಸಮಯದಲ್ಲಿ ದೇಶಬಿಟ್ಟು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಒಕ್ಕೂಟ ಸರ್ಕಾರದ ಹೊಸ ‘ಸಹಕಾರ ಸಚಿವಾಲಯ’ ಅಮಿತ್‌ ಶಾ ತೆಕ್ಕೆಗೆ!

ಇನ್ನು ದೇಶದ ಪ್ರಧಾನಿಗೆ ಪ್ರಿಯವಾದ ಅನಿಲ್ ಅಂಬಾನಿಯವರು ಡಿಸೆಂಬರ್ 31, 2019ರವರೆಗೆ ದೇಶದ ಬ್ಯಾಂಕುಗಳಿಗೆ ಒಟ್ಟು ಪಾವತಿಸಬೇಕಾದ ಮೊತ್ತ 43,800 ಕೋಟಿ ರೂಪಾಯಿಗಳು ಮಾತ್ರ! ಇವರನ್ನು ಬ್ಯಾಂಕುಗಳು ಈಗಾಗಲೇ ಡಿಫಾಲ್ಟರ್ ಪಟ್ಟಿಗೆ ಸೇರಿಸಿಯಾಗಿದೆ. ಎಚ್.ಡಿ.ಎಫ್.ಸಿ ಸೇರಿದಂತೆ ಇನ್ನಿತರ ಬ್ಯಾಂಕುಗಳಿಗೆ ಬರೋಬ್ಬರಿ 23,000 ಕೋಟಿ ರೂ.ಗಳನ್ನು ಅನಿಲ್ ಅಂಬಾನಿ ಪಾವತಿಸಬೇಕಿದೆ. ಎಸ್.ಬಿ.ಐ ನಲ್ಲಿ ರಾಜ್ಯ ಬ್ಯಾಂಕುಗಳ ವಿಲೀನ, ಸಿಂಡಿಕೇಟ್, ವಿಜಯ ಬ್ಯಾಂಕ್ ಗಳ ವಿಲೀನ ಇತ್ಯಾದಿ ಪ್ರಕ್ರಿಯೆಗಳ ಹಿಂದೆ ಕೇಂದ್ರ ಸರ್ಕಾರ 2.41 ಲಕ್ಷ ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತವನ್ನು ವಸೂಲಾಗದ ಸಾಲದ ಮೊತ್ತಕ್ಕೆ ಸೇರಿಸಿದ್ದೇ ಕಾರಣ.

ಬ್ಯಾಂಕುಗಳ ನಷ್ಟದ ಮೊತ್ತವನ್ನು ಕೇಳಿ ಗಣಿತ ಬರುವ ದೇಶದ ನಾಗರಿಕರು ಎದೆ ಹೊಡೆದು ಸತ್ತಾರು ಎಂದು ದೇಶವನ್ನು ಆಳುತ್ತಿರುವ ಮೋದಿ ಸರ್ಕಾರ ಬ್ಯಾಂಕುಗಳನ್ನು ವಿಲೀನಗೊಳಿಸುತ್ತಿದೆ. ಇಷ್ಟೆಲ್ಲ ಅವಘಡಗಳ ನಡುವೆ ಒಕ್ಕೂಟ ಸರ್ಕಾರ ಆರ್.ಬಿ.ಐ ಅನ್ನೂ ಬಿಡದೆ ಲಕ್ಷ ಕೋಟಿಗಟ್ಟಲೇ ಹಣವನ್ನು ಪಡೆದಿದೆ. ಕಳ್ಳ ಹೊಕ್ಕ ಮನೆಯಲ್ಲಿ ಏನಾದರೂ ಉಳಿದಿರಬಹುದು, ಕೊಳ್ಳಿ ಹೊಕ್ಕ ಮನೆಯಲ್ಲಿ ಉಳಿಯಲು ಸಾಧ್ಯವೇ? ಎಂಬ ಮಾತಿನಂತೆ ಒಕ್ಕೂಟ ಸರ್ಕಾರ ಆರ್.ಬಿ.ಐ ಅನ್ನೂ ಬಿಟ್ಟಿಲ್ಲ. ಇನ್ನು ಸಹಕಾರಿ ಬ್ಯಾಂಕುಗಳು ಯಾವ ಲೆಕ್ಕ? ಆಲೋಚಿಸಿ.

ಹಣ ವಂಚನೆ ಆರೋಪಿ ನೀರವ್‌ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿ - ಇಂಗ್ಲೇಂಡ್ ಕೋರ್ಟ್‌ ತೀರ್ಪು
ನೀರವ್‌ ಮೋದಿ

ಒಕ್ಕೂಟ ಸರ್ಕಾರ ರಾತ್ರೋರಾತ್ರಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ, ಜಿ.ಎಸ್.ಟಿಯನ್ನು ಅವೈಜ್ಞಾನಿಕವಾಗಿ ಜಾರಿಗೆ ತಂದ ಪರಿಣಾಮದಿಂದಾಗಿ ಬ್ಯಾಂಕುಗಳು, ದೇಶದ ಆರ್ಥಿಕತೆ, ಭಾರತೀಯ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಇವುಗಳನ್ನು ನಂಬಿಕೊಂಡಿದ್ದ 20 ಕೋಟಿ ನೌಕರರು ಬೀದಿಗೆ ಬಿದ್ದಿದ್ದಾರೆ. ಇದೀಗ ಒಕ್ಕೂಟ ಸರ್ಕಾರದ ಕಣ್ಣು ರಾಜ್ಯದ ಒಡೆತನದಲ್ಲಿರುವ ಸಹಕಾರಿ ಬ್ಯಾಂಕುಗಳ ಮೇಲೆ ಬಿದ್ದಿದೆ.

ಒಕ್ಕೂಟ ಸರ್ಕಾರ ಸಹಕಾರಿ ಖಾತೆಯನ್ನು ತೆರೆಯುವ ಹಿಂದೆ ರಾಜ್ಯ ಸರ್ಕಾರಗಳ ಕೈಯಲ್ಲಿರುವ ಅಧಿಕಾರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಏಕೆಂದರೆ, ಈಗ ಚೂರುಪಾರು ಜೀವ ಹಿಡಿದುಕೊಂಡು ತೆವಳುತ್ತಿರುವ ಸಹಕಾರಿ ಬ್ಯಾಂಕುಗಳು ದೇಶ ಆಳುತ್ತಿರುವ ಮೋದಿಯ ಕಣ್ಣಿಗೆ ಬಿದ್ದಿವೆ. ಏಕೆಂದರೆ, ಸಹಕಾರಿ ಬ್ಯಾಂಕುಗಳ ವಹಿವಾಟಿನಿಂದ ಮತ್ತದೆ ಮಹಿಳೆಯರು, ಶೂದ್ರರು, ದಲಿತರು, ಅಲ್ಪಸಂಖ್ಯಾತರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೀಗೆ ಜನ ನೆಮ್ಮದಿಯಿಂದ ಇದ್ದರೆ ಒಕ್ಕೂಟ ಸರ್ಕಾರಕ್ಕೆ ಅಸ್ತಿತ್ವವೆಲ್ಲಿಯದು? ಏಕೆಂದರೆ, ದೇಶ “ಜನ ಪಕೋಡ ಮಾರಿ ಇನ್ನೂರು ರೂ. ಗಳಿಸುತ್ತಿದ್ದಾರೆ. ಆಮೂಲಕ ಉದ್ಯೋಗ ಸೃಷ್ಟಿಯಾಗಿದೆ” ಎಂದವರ ಕೈಯಲ್ಲಿದೆಯಲ್ಲವೇ? ಅವರ ಪ್ರಕಾರ, ದೇಶದ ಶೇ. 97ರಷ್ಟು ಜನ ನೆಮ್ಮದಿಯಾಗಿರಬಾರದು.

ಇದನ್ನೂ ಓದಿ: ಸರ್ವಾಧಿಕಾರಿ ಹಿಟ್ಲರ್ ಮತ್ತು ಆತನ ಬಗೆಗಿನ ಗಮನ ಸೆಳೆದ ವ್ಯಂಗ್ಯಚಿತ್ರಗಳು

ಕೊರೊನಾ ಅವಧಿಯಲ್ಲಿ ಸರ್ಕಾರ ಕೊಡುವ ಅಕ್ಕಿ, ಗೋಧಿಗೆ ಭಿಕ್ಷೆಗೆ ನಿಲ್ಲುವಂತೆ ಮಾಡಲಿಲ್ಲವೇ? ಹಾಗೆ ಜನರನ್ನು ಖಾಯಂ ಆಗಿ ಭಿಕ್ಷುಕರನ್ನಾಗಿಸಬೇಕು. ಆ ಮಹೋದ್ದೇಶ ಸಾಧನೆಗಾಗಿ ಇದೀಗ ಸಹಕಾರಿ ಬ್ಯಾಂಕುಗಳ ಒಕ್ಕೂಟ ಸರ್ಕಾರಕ್ಕೆ ಸಹಕರಿಸಬೇಕು.

ಇದೀಗ ಸಂವಿಧಾನದತ್ತ ರಾಜ್ಯದ ಎಲ್ಲ ಅವಕಾಶ, ಅಧಿಕಾರಗಳನ್ನು ಕಟ್ಟಿಹಾಕಿ, ಭವಿಷ್ಯದಲ್ಲಿ ಎಲ್ಲವನ್ನೂ ಒಕ್ಕೂಟದ ಕಬಂಧಬಾಹುವಿನ ತೆಕ್ಕೆಗೆ ಎಳೆದುಕೊಳ್ಳಲು ಒಕ್ಕೂಟ ಸರ್ಕಾರ ಮುಂದಾಗಿದೆ. ಈ ಮೂಲಕ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವುದು, ರಾಜ್ಯದ ಆರ್ಥಿಕತೆಯನ್ನು ಹದಗೆಡಿಸುವುದು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಕ್ಕೂಟ ಸರ್ಕಾರದ ಬಳಿ ಭಿಕ್ಷೆಗೆ ಸರಿಯಲ್ಲಿ ನಿಲ್ಲುವ ವ್ಯವಸ್ಥೆ ಜಾರಿಯಾಗುತ್ತದೆ.

1,169 ಕೋಟಿಗೆ ಒಡಿಶಾ ಹೆದ್ದಾರಿ ಟೆಂಡರ್‌ ಯೋಜನೆ ಗೆದ್ದುಕೊಂಡ ಅದಾನಿ! | Naanu gauri
ಅದಾನಿ

ಈಗಾಗಲೇ ನೋಡಿರುವ ಪ್ರಕಾರ, ಚುನಾವಣೆಗಳಿರುವ ರಾಜ್ಯಕ್ಕೆ ಒಕ್ಕೂಟ ಸರ್ಕಾರ ಉದಾರವಾಗಿ ಹಣ ಹಂಚಿಕೆ ಮಾಡುವುದು, ತನ್ನ ಪಕ್ಷವೇ ಅಧಿಕಾರದಲ್ಲಿದ್ದ ರಾಜ್ಯಗಳಿಗೆ ಹೆಚ್ಚಿನ ಅನುದಾನ ಕೊಡುವುದು, ಕೇಂದ್ರದ ಮಾತು ಕೇಳದಿರುವ ನಾಯಕರಿರುವ ರಾಜ್ಯದ ಕಣ್ಣಿಗೆ ಸುಣ್ಣ ಬಳಿಯುವುದನ್ನೆಲ್ಲ ನೋಡಿಯಾಗಿದೆ. ಇವುಗಳ ನಡುವೆ ಕೂಡ ರಾಜ್ಯಗಳು ಹೇಗೋ ಉಸಿರಾಡುತ್ತಿವೆ. ರಾಜ್ಯಗಳ ಆರ್ಥಿಕತೆಯ ಉಸಿರು ನಿಲ್ಲಿಸಲು ಸಹಕಾರ ಖಾತೆ ಸಹಕರಿಸಲಿದೆ ಎಂಬ ದಟ್ಟ ಅನುಮಾನ ಇದೀಗೆ ಎದ್ದಿದೆ. ಈ ಮೂಲಕ ಸಹಕಾರ ಕ್ಷೇತ್ರದ ಮೇಲೆ ಕೂಡ ಒಕ್ಕೂಟ ಸರ್ಕಾರ ಹಿಡಿತ ಮತ್ತು ಕೇಂದ್ರೀಕೃತ ವ್ಯವಸ್ಥೆಗೆ ಅಳವಡಿಸುವ ಹುನ್ನಾರವನ್ನು ಜಾರಿಗೆ ತರಲಾಗುತ್ತದೆ.

ಇದಕ್ಕಿಂತ ಭೀಕರ ಪರಿಸ್ಥಿತಿಯೊಂದು ಉದ್ಭವಿಸುವ ಸಾಧ್ಯತೆ ಕೂಡ ಇದೆ. ಮೇಲೆ ಉದಾಹರಿಸಿರುವ ವಿಜಯ್ ಮಲ್ಯ, ಮೇಹುಲ್ ಚೋಕ್ಸಿ, ಅನಿಲ್ ಅಂಬಾನಿಯಂತವರಿಂದ ರಾಷ್ಟ್ರೀಕೃತ ಬ್ಯಾಂಕುಗಳು ಅಧೋಗತಿಗೆ ಇಳಿದಿವೆ. ಪ್ರಾಯಶಃ ಇನ್ನಷ್ಟು ಅವುಗಳನ್ನು ಪಾತಾಳಕ್ಕೆ ತುಳಿಯಲು ಅಸಾಧ್ಯವೆಂಬ ಸತ್ಯವನ್ನು ಅರಿತ ಒಕ್ಕೂಟ ಸರ್ಕಾರ ಇದೀಗ ಸಹಕಾರಿ ಬ್ಯಾಂಕುಗಳಿಗೆ ಬಾಯಿ ಹಾಕಲು ಸನ್ನದ್ಧವಾಗಿದೆ. ಜಿ.ಎಸ್.ಟಿ, ವಿವಾದಾತ್ಮಕ ಕೃಷಿ ಮಸೂದೆಗಳು, ಹೊಸ ಶಿಕ್ಷಣ ನೀತಿ, ಇದೀಗ ಸಹಕಾರ ಖಾತೆ ಸೃಷ್ಟಿಯ ಹಿಂದಿರುವುದು ರಾಜ್ಯಗಳ ಸಂವಿಧಾನದತ್ತ ಹಕ್ಕನ್ನು ಕೇಂದ್ರೀಕರಿಸುವುದು, ಮೊಟಕುಗೊಳಿಸುವುದು. ಇದನ್ನು ಅರಿಯದೆ ಒಕ್ಕೂಟ ಸರ್ಕಾರಕ್ಕೆ ಮತ ನೀಡಿದ ಮತದಾರರು, ರಾಜ್ಯ ಸರ್ಕಾರಗಳು ಮತ್ತು ಅವುಗಳನ್ನು ಆರಿಸಿದ ಪ್ರಜಾಪ್ರಭುಗಳು ಪಂಕದಲ್ಲಿ ಬಿದ್ದ ಪಶುವಿನಂತೆ ಒದ್ದಾಡುತ್ತಿರುವುದು ಈಗಾಗಲೇ ಗೋಚರಿಸುತ್ತಿದೆ. ಭವಿಷ್ಯದಲ್ಲಿ ಇದರ ಪರಿಸ್ಥಿತಿ ಇನ್ನಷ್ಟು ಭೀಕರವಾಗುತ್ತದೆ.

– ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ

ಇದನ್ನೂ ಓದಿ: ಮೋದಿ ಸರ್ಕಾರದ ’ಸರ್ವಾಧಿಕಾರಿ ಧೋರಣೆ’ ಖಂಡಿಸಿ ಬ್ರಿಟಿಷ್ ಸಂಸದರು, ತಜ್ಞರ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...

SIR: ಚುನಾವಣಾ ಆಯೋಗ ನೀಡಿದ ಅಂಕಿ ಅಂಶಕ್ಕೂ, ಬೆಂಗಳೂರು ಮತದಾರರ ಪಟ್ಟಿಗೂ ತಲೆಬುಡವಿಲ್ಲ, ಮತ ಕಾವಲು ಸಮಿತಿ ಆರೋಪ

ರಾಜ್ಯದಲ್ಲಿ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ಬೆಂಗಳೂರು ನಗರದ ಶೇಕಡಾ 48.41 ರಷ್ಟು—ಅಂದರೆ ಸುಮಾರು ಇಬ್ಬರಲ್ಲಿ ಒಬ್ಬ ಮತದಾರನನ್ನು—ಆಗಸ್ಟ್ 17ರ ಒಳಗಾಗಿ ಮತದಾರರ...

ಬೆಂಗಳೂರಿನಲ್ಲಿ ಮುಂದುವರೆದ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ: ಯುಬಿ ಸಿಟಿಯ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ ಪತ್ತೆ!

'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧಿ ಆಡಳಿತ ಇಲಾಖೆ'ಯ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ ಮುಂದುವರೆದಿದ್ದು, ಬೆಂಗಳೂರಿನ ಯುಬಿ ಸಿಟಿಯ ಐದು ಪ್ರಮುಖ ಹೋಟೆಲ್‌ಗಳ ಅಡುಗೆ ಮನೆಗಳ ಮೇಲೆ ಅಧಿಕಾರಿಗಳು ಇಂದು (ಆ.10)...

ಮತಗಳ್ಳತನದ ವಿರುದ್ಧ ‘ಕ್ವಿಟ್ ವೋಟ್ ಚೋರಿ’ ಆಂದೋಲನಕ್ಕೆ ಕರೆ ನೀಡಿದ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ 'ಮತ ಕಳ್ಳತನ'ವನ್ನು ತಡೆಗಟ್ಟಲು ಕ್ವಿಟ್ ಇಂಡಿಯಾ ಚಳವಳಿಯ ಮಾದರಿಯಲ್ಲೇ ದೇಶಾದ್ಯಂತ 'ಕ್ವಿಟ್ ವೋಟ್ ಚೋರಿ' (ಮತ ಬಿಟ್ಟು ತೊಲಗಿ) ಆಂದೋಲನವನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ....

SIR ಅವಾಂತರ : ಎನ್ಯುಮರೇಷನ್ ಫಾರಂ ಸರಿಯಾಗಿ ತುಂಬಿಕೊಟ್ಟರೂ ಕರಡು ಪಟ್ಟಿಯಲ್ಲಿ ಹೆಸರಿಲ್ಲ; ಆತಂಕಗೊಂಡು ಮತಗಟ್ಟೆಗಳತ್ತ ಧಾವಿಸಿದ ಜನರು-ವರದಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಆತಂಕಗೊಂಡ ಜಾರ್ಖಂಡ್‌ನ ರಾಂಚಿ ನಗರದ ಜನರು ಭಾನುವಾರ (ಆ.9) ಮತಗಟ್ಟೆಗಳಿಗೆ...

ನೇಮಕಾತಿ ಅಕ್ರಮ ಖಂಡಿಸಿ ಜಾರ್ಖಂಡ್‌ನಲ್ಲಿ ಧರಣಿ: ವಿದ್ಯಾರ್ಥಿಗಳ ಹೋರಾಟಕ್ಕೆ ತಲೆಬಾಗಿದ ಸಿಎಂ ಹೇಮಂತ್ ಸೊರೇನ್, ‘ನ್ಯಾಯದ ಭರವಸೆ’

ಜಾರ್ಖಂಡ್‌ನ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಹಾಗೂ ಯುವಜನತೆ ತಮ್ಮ ಭವಿಷ್ಯದ ಭದ್ರತೆಗಾಗಿ ಬೀದಿಗಿಳಿದು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು...

ಪ.ಬಂಗಾಳ : ಮಮತಾ ಬ್ಯಾನರ್ಜಿ ಕಾರಿನ ಮೇಲೆ ದಾಳಿ; ಕಲ್ಲು, ಚಪ್ಪಲಿ ತೂರಿದ ಗುಂಪು

ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಮನೆಗೆ ಹೋಗುತ್ತಿದ್ದಾಗ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದ ಕಾರಿನ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಭಾನುವಾರ...

SIR ನೆಪದಲ್ಲಿ 1 ಕೋಟಿ ಮತ ಡಿಲೀಟ್ ಮಾಡೋ ಸಂಚು: ಎಚ್ಚೆತ್ತುಕೊಳ್ಳುವಂತೆ ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಕರೆ

SIR ನೆಪದಲ್ಲಿ ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಹೆಚ್ಚು ಮತಗಳನ್ನು ಅಳಿಸುವ ಸಂಚು ನಡೆಯುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಕೆಪಿಸಿಸಿ ಕಚೇರಿಯ...

‘ಮೋದಿ ದೇಶದ ಯುವಕರನ್ನು ಸಬಲೀಕರಣಗೊಳಿಸಲು ಶ್ರಮಿಸುತ್ತಿದ್ದಾರೆ ’: ‘ಜೆನ್ ಝೀ’ಗಳನ್ನು ‘ಬಾಹ್ಯ ಶಕ್ತಿಗಳು ದಾರಿ ತಪ್ಪಿಸುತ್ತಿವೆ’: ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ

ಭುವನೇಶ್ವರ: ಜಾಗತಿಕ ವೇದಿಕೆಯಲ್ಲಿ "ತಮ್ಮನ್ನು ದಾರಿ ತಪ್ಪಿಸಲು ಮತ್ತು ಭಾರತವನ್ನು ದುರ್ಬಲಗೊಳಿಸಲು" ನಿರಂತರವಾಗಿ ಪ್ರಯತ್ನಿಸುತ್ತಿರುವ "ಬಾಹ್ಯ ಶಕ್ತಿಗಳಿಗೆ" ಬಲಿಯಾಗಬೇಡಿ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭಾನುವಾರ ಜೆನ್ ಝೀ (GEN-Z)...

ಪದವಿ ಪ್ರದಾನ ಸಮಾರಂಭಕ್ಕೆ CJI ಆಹ್ವಾನಿಸಲು ಹೈದರಾಬಾದ್ ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವಿರೋಧ

ಹೈದರಾಬಾದ್‌ನ ‘ನಾಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಾರದು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಂದು ಗುಂಪು ಆಡಳಿತ...