ಪ್ರಧಾನಿ ಮೋದಿಯ ‘ದಿಮಾಗಿ ನಕ್ಸಲ್ಸ್’ (ಮಾನಸಿಕ ನಕ್ಸಲರು) ಹೇಳಿಕೆಗೆ ಶನಿವಾರ (ಆ.15) ತಿರುಗೇಟು ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಇದು ‘ಹತಾಶೆಯ ಸ್ಪಷ್ಟ ಸಂಕೇತ’ ಎಂದು ತಿರುಗೇಟು ನೀಡಿದ್ದಾರೆ.
ಮೋದಿಯವರು ಈ ಹಿಂದೆ ತಮ್ಮ ವಿರೋಧಿಗಳನ್ನು ‘ಅರ್ಬನ್ ನಕ್ಸಲ್ಸ್’ (ನಗರ ನಕ್ಸಲರು) ಎಂದು ಕರೆದಿದ್ದರು. ಈಗ ಅವರನ್ನು ‘ದಿಮಾಗಿ ನಕ್ಸಲ್ಸ್’ (ಮಾನಸಿಕ ನಕ್ಸಲರು) ಎಂದು ಸಂಬೋಧಿಸುತ್ತಿದ್ದಾರೆ ಎಂದಿರುವ ಜೈರಾಮ್ ರಮೇಶ್, ಪ್ರಧಾನಿ ರಾಜ್ಯಶಾಸ್ತ್ರದಲ್ಲಿ ‘ನಿಂದನೆಯ ಮಹಾಗುರು’ ವಾಗ್ದಾಳಿ ನಡೆಸಿದ್ದಾರೆ.
ಮೊದಲು ಅವರು ತಮ್ಮ ವಿರೋಧಿಗಳನ್ನು ‘ಅರ್ಬನ್ ನಕ್ಸಲ್ಸ್’ ಎಂದು ಕರೆದರು. ಈಗ ಅವರನ್ನು ‘ದಿಮಾಗಿ ನಕ್ಸಲ್ಸ್’ ಎನ್ನುತ್ತಿದ್ದಾರೆ. ಇದು ಅವರ ಹತಾಶೆಯ ಸ್ಪಷ್ಟ ಸಂಕೇತವಾಗಿದೆ ಎಂದು ರಮೇಶ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಮಂತ್ರಿಯವರು ಅಂತಿಮವಾಗಿ ತಾವು ‘ಅರ್ಬನ್ ನಕ್ಸಲ್ಸ್’ ಅಥವಾ ‘ದಿಮಾಗಿ ನಕ್ಸಲ್ಸ್’ ಎಂದು ಕರೆದವರು ಯಾವುದಕ್ಕಾಗಿ ಒತ್ತಾಯಿಸಿದ್ದರೋ ಅಥವಾ ಪ್ರತಿಪಾದಿಸಿದ್ದರೋ ಅದನ್ನೇ ಮಾಡಿದರು ಎಂಬುವುದು ‘ಬೇರೆ ವಿಷಯ’ ಎಂದು ರಮೇಶ್ ಕುಟುಕಿದ್ಧಾರೆ.
ದೇಶವನ್ನುದ್ದೇಶಿಸಿ ಸತತ 13ನೇ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಿದ ಪ್ರಧಾನಿ ಮೋದಿ, “ದೇಶದಿಂದ ಸಶಸ್ತ್ರ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದು, ಆದರೆ ಎಚ್ಚರಿಕೆಯನ್ನು ಸಡಿಲಗೊಳಿಸದಂತೆ (ಜಾಗರೂಕರಾಗಿರಲು) ಎಚ್ಚರಿಸಿದ್ದಾರೆ.
“ಸಶಸ್ತ್ರ ನಕ್ಸಲರನ್ನು ಕಾಡುಗಳಿಂದ ಓಡಿಸಲಾಗಿದ್ದರೂ, ‘ದಿಮಾಗಿ ನಕ್ಸಲ್ಸ್’ (ಮಾನಸಿಕ ನಕ್ಸಲರು) ಇಂದಿಗೂ ಹಿಂಸಾಚಾರ ಮತ್ತು ಅಶಾಂತಿಯನ್ನು ಸೃಷ್ಟಿಸಲು ಹಾಗೂ ‘ಸಮಾಜವನ್ನು ತಪ್ಪು ಹಾದಿಗೆಳೆಯಲು’ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ ಎಂದು ಮೋದಿ ಹೇಳಿಕೆ ನೀಡಿದ್ದಾರೆ.
“ಇಂತಹ ‘ಬುದ್ಧಿಜೀವಿ ನಕ್ಸಲರನ್ನು’ ಗುರುತಿಸಿ ಪ್ರತ್ಯೇಕಿಸುವ ಅಗತ್ಯವಿದೆ ಎಂದಿದ್ದಾರೆ.


