Homeಮುಖಪುಟಬಹುಜನ ಭಾರತ : ಹಸಿವಿನ ಸಾವುಗಳು ಮತ್ತು ತುಂಬಿ ತುಳುಕಿರುವ ಗೋದಾಮುಗಳು

ಬಹುಜನ ಭಾರತ : ಹಸಿವಿನ ಸಾವುಗಳು ಮತ್ತು ತುಂಬಿ ತುಳುಕಿರುವ ಗೋದಾಮುಗಳು

ಕಂಗೆಟ್ಟ ಬಡಭಾರತದತ್ತ ಕಣ್ಣು ಮುಚ್ಚಿದ್ದಾರೆ ಮೋದಿ. ಹೆಚ್ಚುವರಿ ದಾಸ್ತಾನಿನ ಉಚಿತ ಹಂಚಿಕೆ ಮಾಡುತ್ತಿಲ್ಲ ಯಾಕೆ?

- Advertisement -
- Advertisement -

ಕೊರೊನಾ ಲಾಕ್ ಡೌನ್ 200ಕ್ಕೂ ಹೆಚ್ಚು ಬಡಜೀವಗಳನ್ನು ಬಲಿ ತೆಗೆದುಕೊಂಡಿದೆ. ಇವು ವರದಿಯಾಗಿರುವ ಪ್ರಕರಣಗಳು. ಮನೆಯ ಕದಗಳಷ್ಟೇ ಅಲ್ಲದೆ ಮನದ ಕದಗಳನ್ನೂ ಮುಚ್ಚಿಕೊಂಡಿರುವ ಭಾರತ ದೇಶದಲ್ಲಿ ಕಂಗೆಟ್ಟವರೆಡೆಗೆ ಕಣ್ಣುಮುಚ್ಚಿರುವವರೇ ಹೆಚ್ಚು. ಹೀಗಾಗಿ ಒಳನಾಡುಗಳಲ್ಲಿ, ದೂರದ ಸೀಮೆಗಳಲ್ಲಿ ವರದಿಯಾಗದಿರುವ ಪ್ರಕರಣಗಳ ಸಂಖ್ಯೆ ಕಡಿಮೆಯೇನೂ ಇರಲಿಕ್ಕಿಲ್ಲ. ದನಿ ಕಳೆದುಕೊಂಡ ಭಾರತವೊಂದಿದೆ. ಅದರ ಆಕ್ರಂದನ ಕೇಳುವವರಿಲ್ಲ. ಅಲ್ಲಿ ಹಿಂದು- ಮುಸ್ಲಿಂ ಕೋಮುವಾದಿ ಕೋನವಿದ್ದರೆ ಮಾತ್ರ ಮೀಡಿಯಾದ ಕಣ್ಣು ಕಿವಿಗಳು ಅರಳುತ್ತವೆ. ಯಾರೂ ಕೇಳದವರನ್ನು ಸರ್ಕಾರ ಯಾಕೆ ಕೇಳೀತು?

ಏಪ್ರಿಲ್ 11ರಂದು ಲಭ್ಯವಿದ್ದ ಅಂಕಿ ಅಂಶಗಳ ಪ್ರಕಾರ ಹಸಿವು, ದಣಿವು, ಪೊಲೀಸ್ ದೌರ್ಜನ್ಯ, ಹೆದ್ದಾರಿಗಳಲ್ಲಿ ಕಾಲುನಡಿಗೆಯಲ್ಲಿ ಊರು ಸೇರುವ ತವಕದಲ್ಲಿ ವೇಗದ ವಾಹನಗಳ ಚಕ್ರಗಳಿಗೆ ಸಿಕ್ಕವರು, ಮದ್ಯ ಸಿಗದೆ ಒದ್ದಾಡಿದವರು, ಸೋಂಕಿತರೆಂಬ ಸಂಶಯಕ್ಕೆ ಗುರಿಯಾಗಿ ಗುಂಪುಗಳಿಂದ ಜಜ್ಜಿಸಿಕೊಂಡವರು, ವರಮಾನವಿಲ್ಲದೆ ಆತ್ಮಹತ್ಯೆಯಂತಹ ಕಾರಣಗಳಿಂದಾಗಿ ಲಾಕ್ ಡೌನ್ ಅವಧಿಯಲ್ಲಿ ಸತ್ತವರ ಸಂಖ್ಯೆ 185. ತಮ್ಮದಲ್ಲದ ತಪ್ಪಿಗೆ ಬದುಕನ್ನು ಮುಗಿಸಿದ ಈ ಬಡಪಾಯಿಗಳಿಗಾಗಿ ದೀಪ ಮುಡಿಸಿದವರು, ಜಾಗಟೆ ಹೊಡೆದವರು ಯಾರೂ ಇಲ್ಲ. ಜನರನ್ನು ಉಳಿಸಲೆಂದು ಕೈಗೊಂಡ ಕ್ರಮಗಳೇ ಅವರಿಗೆ ಉರುಳಾಗಿವೆ. ಇದಕ್ಕಿಂತ ವ್ಯಂಗ್ಯ ಮತ್ತೊಂದು ಇದ್ದೀತೇ?

ದೇಶ ಅಳುವವರು ಹೆಚ್ಚು ವಿವೇಕಿಗಳೂ, ಬಡವರ ಬವಣೆಗಳ ಕುರಿತು ಹೆಚ್ಚು ಸಂವೇದನಾಶೀಲರೂ ಆಗಿದ್ದಲ್ಲಿ ಮಾನವೀಯವಾದ ಯೋಜಿತ ಮತ್ತು ಸುಸಜ್ಜಿತ ಲಾಕ್ ಡೌನ್ ಮಾಡುತ್ತಿದ್ದರು. ಆಗ ಸಾವುಗಳ ಸಂಖ್ಯೆಯೂ ತಗ್ಗುತ್ತಿತ್ತು.

ಅಂತಹ ಅಮೆರಿಕೆಯಲ್ಲೇ ಒಂದೂವರೆ ಕೋಟಿ ಮಂದಿ ಸರ್ಕಾರದ ಮುಂದೆ ನಿರುದ್ಯೋಗ ಪರಿಹಾರಗಳಿಗೆಂದು ಕೈ ಚಾಚಿ ನಿಂತಿದ್ದಾರೆ. ಇನ್ನು ಸಾಮಾಜಿಕ-ಆರ್ಥಿಕ ರಕ್ಷಣೆ ಇಲ್ಲದ ಜನಸಮುದಾಯಗಳ ಪಾಲಿಗೆ ಲಾಕ್ ಡೌನ್ ಎಂಬುದು ಹಸಿವು ಮತ್ತು ಮರಣದ ನಿಶ್ಚಿತ ದಾರಿ. ಬಡದೇಶಗಳ ಸುಮಾರು 200 ಕೋಟಿ ಮಂದಿಯ ಮುಂದೆ ನಿರುದ್ಯೋಗದ ಕತ್ತಲು ಕವಿದಿದೆ. ಸರ್ಕಾರಗಳು ಅವರ ನೆರವಿಗೆ ಧಾವಿಸುವ ಅವಕಾಶಗಳು ಕ್ಷೀಣ.

ದೇಶದಲ್ಲಿ ಅಸಂಘಟಿತ ಕಾರ್ಮಿಕ ವಲಯ ಮತ್ತು ವಲಸೆ ಕಾರ್ಮಿಕರ ಸಂಖ್ಯೆಯನ್ನು 39 ಕೋಟಿ ಎಂದು ಅಂದಾಜು ಮಾಡಲಾಗಿದೆ. ಸಾಮಾಜಿಕ-ಆರ್ಥಿಕ ಭದ್ರತೆಯ ನೆರಳಿನಿಂದ ವಂಚಿತರು ಇವರು. ತಮ್ಮ ಹಳ್ಳಿಗಳು ಊರುಗಳನ್ನು ಸೇರಿಕೊಂಡ ನಂತರವೂ ಹಸಿವು ಇವರನ್ನು ಕಾಡುವುದಿಲ್ಲ ಎಂಬ ಖಾತರಿ ಇಲ್ಲ. ಶ್ರಮದ ಮಾರುಕಟ್ಟೆಯಲ್ಲಿ ಇವರ ಬೆವರು ಈಗಾಗಲೆ ಬೆಲೆ ಕಳೆದುಕೊಳ್ಳತೊಡಗಿದೆ. ರೆಟ್ಟೆ ಮುರಿದರೂ ಹೊಟ್ಟೆ ತುಂಬುವ ಸೂಚನೆಗಳು ಕಾಣುತ್ತಿಲ್ಲ. ಬದುಕುಗಳು ಬಲು ದುರ್ಭರವಾಗಲಿವೆ. ಶಾಲೆಗೆ ಹೋಗುತ್ತಿರುವ ಇವರ ಮಕ್ಕಳು ಸಂಸಾರದ ನೊಗಕ್ಕೆ ಹೂಡುವ ಕರುಗಳಾಗಲಿದ್ದಾರೆ. ಈ ಜನವರ್ಗಗಳ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಹಿಂಸೆ ಮೇರೆ ಮೀರಲಿದೆ.

ವರ್ಷಾಂತ್ಯದ ಹೊತ್ತಿಗೆ ಕರೋನಾ ವೈರಸ್ ಮಹಾಮಾರಿಯು ಮಹಾಕ್ಷಾಮವೊಂದಕ್ಕೆ ದಾರಿ ಮಾಡಲಿದೆ ಎಂದು ವಿಶ್ವ ಆಹಾರ ತಜ್ಞರು ಭವಿಷ್ಯ ನುಡಿದಿದ್ದಾರೆ. 2020ರ ಅಂತ್ಯದ ವೇಳೆಗೆ ಹಸಿವಿನ ಅಂಚಿಗೆ ತಲುಪಲಿರುವ ವಿಶ್ವದ ಜನಸಂಖ್ಯೆ ಮೂವತ್ತು ಕೋಟಿಯನ್ನು ಸಮೀಪಿಸಲಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿದೆ.

ತಿಂಗಳ ಹಿಂದೆ ಮಾರ್ಚ್ ಒಂದರ ಅಂಕಿ ಅಂಶದ ಪ್ರಕಾರ ದೇಶದ ಸರ್ಕಾರೀ ಗೋದಾಮುಗಳು 77 ದಶಲಕ್ಷ ಮೆಟ್ರಿಕ್ ಟನ್ ಗಳಷ್ಟು ಅಕ್ಕಿ ಮತ್ತು ಗೋಧಿಯ ಧಾರಾಳ ದಾಸ್ತಾನು ಹೊಂದಿದ್ದವು. ನಮಗೆ ಅಗತ್ಯವಿರುವ ಕಾಪು ದಾಸ್ತಾನಿನ ಪ್ರಮಾಣ 21.4 ದಶಲಕ್ಷ ಮೆಟ್ರಿಕ್ ಟನ್ನುಗಳು ಮಾತ್ರ. ಉಳಿದದ್ದೆಲ್ಲ ಹೆಚ್ಚುವರಿ. ಹಿಂಗಾರು ಇಳುವರಿಯ ಖರೀದಿ ಕಾರ್ಯಾಚರಣೆಗಳು ಹತ್ತಿರದಲ್ಲಿವೆ.

ಮನೆಯಲ್ಲಿನ ಆಹಾರ ಕಣಜ ಕಂಠಮಟ್ಟ ಭರ್ತಿ, ಕುಟುಂಬದ ದುರ್ಬಲರು ಹಸಿವಿನಿಂದ ಸತ್ತರೂ ಕಣಜದಿಂದ ಆಹಾರ ಧಾನ್ಯ ಹೊರತೆಗೆಯುವುದಿಲ್ಲ ಎಂಬ ಧೋರಣೆ ಭಾರತ ಸರ್ಕಾರದ್ದು. ಕರೋನಾ ಮಹಾಮಾರಿಯ ತಾಂಡವದಲ್ಲಿ ಕಾಡತೊಡಗಿರುವ ಹಸಿವನ್ನು ಸರ್ಕಾರದ ಗೋದಾಮುಗಳಲ್ಲಿನ ಆಹಾರಧಾನ್ಯ ಹೊರತೆಗೆದರೆ ಅಡಗಿಸಬಹುದು. ಎಲ್ಲರೂ ಬಲ್ಲ ಸತ್ಯವಿದು. ಆದರೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಪರಿಸ್ಥಿತಿಯ ಘೋರ ಭೀಕರ ಸ್ವರೂಪ ಆಳುವವರಿಗೆ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞ ಮತ್ತು ಸಮಾಜವಿಜ್ಞಾನಿ ಜೀನ್ ಡ್ರೆಜ್.

ದೇಶದ ಆಹಾರ ದಾಸ್ತಾನನ್ನು ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಸಾರ್ವಜನಿಕ ಕಾಮಗಾರಿಗಳಿಗೆ ಬಳಸಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಪೀಪಲ್ಸ್ ಯೂನಿಯನ್ ಅಫ್ ಸಿವಿಲ್ ಲಿಬರ್ಟೀಸ್ (ಪಿ.ಯು.ಸಿ.ಎಲ್) ಇಪ್ಪತ್ತು ವರ್ಷಗಳ ಹಿಂದೆ ಸುಪ್ರೀಮ್ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತು. ಪರಿಣಾಮವಾಗಿ ಮಧ್ಯಾಹ್ನದ ಬಿಸಿಯೂಟ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಸುಧಾರಣೆಗಳು, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಜಾರಿಗೆ ಬಂದವು. ಈ ಯೋಜನೆಗಳಿಗಾಗಿ ಪ್ರತಿ ವರ್ಷ 50-60 ದಶಲಕ್ಷ ಟನ್ನುಗಳಷ್ಟು ಅಕ್ಕಿ ಗೋಧಿ ಹಂಚಿಕೆಯಾಗುತ್ತಿದೆ. ಆಹಾರ ದಾಸ್ತಾನಿನ ಪ್ರಮಾಣ ಕೂಡ ವರ್ಷದಿಂದ ವರ್ಷಕ್ಕೆ ಜಿಗಿಯುತ್ತಲೇ ಬಂದಿದೆ. ಈ ವರ್ಷದ ದಾಸ್ತಾನು 77 ದಶಲಕ್ಷ ಟನ್ನುಗಳು. ಹಿಂಗಾರಿನ ಫಸಲು ಸದ್ಯದಲ್ಲೇ ಕೈ ಸೇರಿದರೆ ಈ ದಾಸ್ತಾನು 97 ದಶಲಕ್ಷ ಟನ್ನುಗಳಿಗೆ ಏರಲಿದೆ. ಮುಂದಿನ ಮೂರು ತಿಂಗಳ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರವನ್ನು ದುಪ್ಪಟ್ಟು ಮಾಡಿರುವುದಾಗಿ ಕೇಂದ್ರ ಹಣಕಾಸು ಮಂತ್ರಿ ಇತ್ತೀಚೆಗೆ ಘೋಷಿಸಿದರು. ಅದು ದೊಡ್ಡ ಉಪಕಾರವೇನೂ ಅಲ್ಲ. ಹಿಂಗಾರು ಹಂಗಾಮಿನ ಖರೀದಿ ಹೊಸ್ತಿಲಲ್ಲಿ ನಿಂತಿತ್ತು. ಗೋದಾಮುಗಳಲ್ಲಿ ಸ್ಥಳಾವಕಾಶ ಇರಲಿಲ್ಲ.

ಕರೋನಾ ಕಾಲದ ಹಸಿವು ಭಾರತ ದೇಶದ ದೀನರ ನಡುವೆ ಹೊಂಚು ಹಾಕಿದೆ. ಕೇಂದ್ರ ಸರ್ಕಾರ ತನ್ನ ಗೋದಾಮುಗಳನ್ನು ತನ್ನದೇ ಬಡಜನರಿಗಾಗಿ ತೆರೆಯಬೇಕಿದೆ. ಆಹಾರ ಧಾನ್ಯಗಳನ್ನು ಅರ್ಹರಿಗೆ ಉಚಿತವಾಗಿ ಹಂಚಬೇಕಿದೆ. ಜನಧನ ಯೋಜನೆಯಡಿ ಹೆಣ್ಣುಮಕ್ಕಳ ಖಾತೆಗಳಿಗೆ ತಿಂಗಳಿಗೆ 500 ರುಪಾಯಿ ಹಾಕುವ ಕ್ರಮ ಯಾತಕ್ಕೂ ಸಾಲದು. ಬಡವರ ಪಾಲಿನ ಬ್ಯಾಂಕಿಂಗ್ ವ್ಯವಸ್ಥೆ ಈಗಲೂ ಅಸಮರ್ಪಕ.

ತಮ್ಮನ್ನು ಬಡವರ ಬಂಧು ಎಂದೇ ಘೋಷಿಸಿಕೊಂಡು ಅವರ ಮತಗಳನ್ನು ಕೊಳ್ಳೆ ಹೊಡೆದಿರುವ ಪ್ರಧಾನಮಂತ್ರಿ ನರೇಂದ್ರ ದಾಮೋದರದಾಸ ಮೋದಿಯವರು ದೊಡ್ಡ ಮನಸ್ಸು ಮಾಡಬೇಕು.


ಇದನ್ನೂ ಓದಿ: ಲಾಕ್‍ಡೌನ್ – ಮನೆಯಿಂದಲೇ ಕೆಲಸ, ಮನೆಕೆಲಸ ಮತ್ತು ಮಹಿಳೆ! – ಮಲ್ಲಿಗೆ ಸಿರಿಮನೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...