Homeಕರ್ನಾಟಕಚುಚ್ಚಿದರೆ ತೀವ್ರ ನೋವು, ಬಡವರ ಪಾಲಿಗೆ ಹೂವು... ನೀರಿಲ್ಲದಿದ್ದರೂ ಜಾಲಿಯಾಗಿ ಬೆಳೆಯುವ ಜಾಲಿ...

ಚುಚ್ಚಿದರೆ ತೀವ್ರ ನೋವು, ಬಡವರ ಪಾಲಿಗೆ ಹೂವು… ನೀರಿಲ್ಲದಿದ್ದರೂ ಜಾಲಿಯಾಗಿ ಬೆಳೆಯುವ ಜಾಲಿ…

- Advertisement -
- Advertisement -

| ಶಿವಾ |

ಕರ್ನಾಟಕ ಪ್ರಗತಿರಂಗದ ಸಭೆಗಳಲ್ಲಿ ಪಾಲ್ಗೊಳ್ಳಲು ಬಳ್ಳಾರಿ ಜಿಲ್ಲೆಯ ವಿವಿಧ ಪಟ್ಟಣ, ಹಳ್ಳಿಗಳನ್ನು ಸುತ್ತಿ ಬಂದಿದ್ದ ಪಿ. ಲಂಕೇಶರು, ‘ಮರೆಯುವ ಮುನ್ನ’ದಲ್ಲಿ ಬಳ್ಳಾರಿಯ ಜಾಲಿಮುಳ್ಳುಗಳ ಕುರಿತೇ ಒಂದು ಆಹ್ಲಾದಕರ ಟಿಪ್ಪಣಿ ಬರೆದಿದ್ದರು. ಈ ಮುಳ್ಳು ಜಾಲಿ ಗಿಡವೇ ಇಲ್ಲಿನ ಬಡವರಿಗೆ ಉರುವಲು, ದೇಹಭಾಧೆ ತೀರಿಸಿಕೊಳ್ಳಲು ಮರೆ… ಎಂಬರ್ಥದಲ್ಲಿ ಬರೆದು, ಜನರು ಸ್ಥಳೀಯ ವಾತಾವರಣದಲ್ಲಿ ಬದುಕು ಕಟ್ಟಿಗೊಳ್ಳುವ ಹಿಂದಿನ ವಾಸ್ತವವನ್ನು ತೆರದಿದಿಟ್ಟಿದ್ದರು. ಉತ್ತರ ಕರ್ನಾಟಕದ ತುಂಬ ಹರಡಿರುವ ಈ ಮುಳ್ಳು ಜಾಲಿಯ ‘ಜೀವಪರತೆ’ಯನ್ನು ಇಲ್ಲಿ ನೀಡಲಾಗಿದೆ…

ಇದು ಜಾಲಿ ! ಎಲ್ಲೆಂದರಲ್ಲಿ ಜಾಲಿಯಾಗಿ ಬೆಳೆಯುವ ಜಾತಿಯ ಮುಳ್ಳು ಪೊದೆಯಿದು.
ಉತ್ತರ ಕರ್ನಾಟಕ ಬಹುತೇಕ ಭಾಗಗಳಲ್ಲಿ ಇದು ಬೇರು ಬಿಟ್ಟು, ತನ್ನದೆಯಾದ ದಟ್ಟ ಪೊದೆಯಾಕಾರದ ಕಾಡನ್ನು ಬೆಳೆಯುವ ಛಾತಿಯನ್ನು ಹೊಂದಿದೆ. ಬಯಲು ಪ್ರದೇಶದಲ್ಲಿ ಹಾಗೂ ನದಿದಡ, ಹಳ್ಳಕೊಳ್ಳ, ಕೋಟೆ, ಕಂದಕ ಸೇರಿದಂತೆ ಖಾಲಿ ಪ್ರದೇಶದಲ್ಲಿ ನೀರಿಲ್ಲದೆ, ಸಂರಕ್ಷಣೆಯಿಲ್ಲದೆ ಬೆಳೆಯುವ ಜಾಲಿ, ಬಹುಪಯೋಗಿ ಮುಳ್ಳಿನ ಕಂಟಿಯಾಗಿದೆ.

ಜಾಲಿ ಜಾತಕ:
ಸ್ವತಂತ್ರ ಪೂರ್ವದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಅಧಿಕಾರಿಗಳು ಭಾರತಕ್ಕೆ ಬರುವಾಗ ತಮ್ಮ ಹಡಗುಗಳಿಗೆ ಇಂಧನ ಪೂರೈಸಲು ಮತ್ತು ಅಗ್ಗಿಷ್ಟಿಕೆಯನ್ನು ಉರಿಸಿಕೊಳ್ಳಲು ಈ ಜಾಲಿಯ ಮರವನ್ನು ಆಶ್ರಯಿಸುತ್ತಿದ್ದರು. ಮೂಲತಃ ಇದು ದಕ್ಷಿಣ ಆಫ್ರಿಕಾದ ಅಮೇಜಾನ್ ಕಾಡುಗಳಲ್ಲಿ ಕಂಡು ಬರುವ, ಕ್ಯಾಕ್ಟಸ್ ಮುಳ್ಳು ಜಾತಿಯ ಸಸ್ಯ ಸಂಕುಲವಿದು.

ರಾಜ್ಯದ ಬಳ್ಳಾರಿ ಭಾಗದಲ್ಲಿ ಈ ಜಾಲಿ ಮರವು ಮೊದಲ ಬಾರಿಗೆ ಬೇರು ಬಿಟ್ಟ ಉದಾಹರಣೆಯಿದೆ. ಈಗಲೂ ಈ ಮುಳ್ಳು ಪೊದೆಯನ್ನು ಬಳ್ಳಾರಿ ಜಾಲಿಯಂದು ಉತ್ತರ ಕರ್ನಾಟಕದ ರೈತರು ಗುರುತಿಸುತ್ತಾರೆ. ಬಳ್ಳಾರಿ ಜಾಲಿ, ಇದು ಮೂಲತಃ ಹಂದಿ ಸಾಕಾಣಿಕೆಗೆ ಬಳಕೆಯಾಗುವ ಪೊದೆಯಾಗಿದೆ. ಜಾಲಿಗಿಡದ ಹೊಂಬಣ್ಣದ ಹಣ್ಣಾದ ಕಾಯಿಗಳು ಬೆಲ್ಲದ ರುಚಿಯನ್ನು ಹೊಂದಿರುತ್ತವೆ. ಅದರೊಳಗಿರುವ ಬೀಜಗಳು ವಿಷಕಾರಿಯಾಗಿರುತ್ತವೆ. ಇದರ ಕಾಯಿಗಳನ್ನು ಹಂದಿಗಳಿಗೆ ಆಹಾರವಾಗಿ ಬಳಸಲಾಗುತ್ತದೆ. ಇದರೊಂದಿಗೆ ಜಾಲಿಗಿಡ, ರೈತರ ಪಾಲಿಗೆ ಹೊಲದ ಬದುಗಳಲ್ಲಿ ಜೀವಂತ ಬೇಲಿಯಾಗಿದೆ. ಗ್ರಾಮೀಣ ಪ್ರದೇಶದ ಬಡವರು ಇದನ್ನು ಉರುವಲಾಗಿ ಬಳಸುತ್ತಾರೆ.

ಬಹುಪಯೋಗಿ ಜಾಲಿ ಜಾಲ:
ಜಾಲಿ ಅನೇಕ ಪ್ರಭೇದಗಳನ್ನು ಒಳಗೊಂಡಿದೆ. ದೊಡ್ಡ ಜಾಲಿ, ಸಣ್ಣ ಜಾಲಿ, ರಾಮಜಾಲಿ, ಕರಿಜಾಲಿ, ಹಿಕ್‍ಜಾಲಿ, ಜೀನಿಕಂಟಿ ಎಂದು ಕರೆಯಲ್ಪಡುತ್ತದೆ. ಬಿದರಿನಂತೆ ಇದು ಮೆದುವಾಗಿ ಬಾಗುವ ಗುಣವನ್ನು ಹೊಂದಿದೆ. ಹಸಿ ಕಟ್ಟಿಗೆಯನ್ನು ಬಿಲ್ಲಿನಂತೆ ಬಾಗಿಸಬಹುದು. ಬಲಿತ ಕಟ್ಟಿಗೆಯನ್ನು ಉರುವಲು ಇದ್ದಿಲನ್ನಾಗಿ ಪರಿವರ್ತಿಸುತ್ತಾರೆ.

ಉತ್ತರ ಕರ್ನಾಟಕ ಸೇರಿದಂತೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ, ತೆಲಗಿ, ಜಾಯವಾಡಗಿ ಹಾಗೂ ಇಂಡಿ ತಾಲೂಕಿನ ಭತಗುಣಕಿ, ನಂದ್ರಾಳ, ಹಲಸಂಗಿ, ಅಜನಾಳ, ಹೊರ್ತಿ, ಬುದಿಹಾಳ, ಬೇನೂರ ಆಸು ಪಾಸಿನ ಗ್ರಾಮಗಳಲ್ಲಿ ಜಾಲಿಕಟ್ಟಿಗೆಯಿಂದ ಇದ್ದಿಲು ತಯಾರಿಸಲಾಗುತ್ತದೆ.

ಕಾಶ್ಮೀರದಿಂದ ಕನ್ಯಾಕುಮಾರಿಗೆ:
ಬರದ ಭೂಮಿಯಲ್ಲಿ ಬರಬರನೇ ಮೇಲೆದ್ದು, ದಟ್ಟ ಪೊದೆಯಾಗಿ ಬೆಳೆಯುವ ಈ ಜಾಲಿ ಗಿಡಗಳು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಹರಡಿಕೊಂಡಿವೆ. ನೀರು ಹಾಗೂ ಸಂರಕ್ಷಣೆಯ ಅವಶ್ಯಕತೆ ಇಲ್ಲದೆ, ಬಯಲು ಪ್ರದೇಶದ ಸಿಕ್ಕ ಸಿಕ್ಕಲ್ಲಿ ಬೆಳೆದು ನಿಲ್ಲುವ ಜಾಲಿಗಿಡ, ತನ್ನದೆ ಆದ ವಿಶೇಷತೆಯನ್ನು ಹೊಂದಿ, ಭಾರತೀಯರ ಮನೆ, ಮನದಲ್ಲಿ ಅಚ್ಚಾಗಿ ಉಳಿದುಕೊಂಡಿದೆ.

ವರ್ಷದ ಹನ್ನೆರಡು ತಿಂಗಳು ಬೆಳೆದು ನಿಲ್ಲುವ ಈ ಜಾಲಿ ಗಿಡ, ಜಮ್ಮು- ಕಾಶ್ಮೀರದ ಬಾರಾಮುಲ್ಲಾ, ಅನಂತನಾಗ, ನೇಪಾಳ ಗಡಿಭಾಗದ ಗೋರಕಪುರ, ಗೌರಿಪಾಂಟಾ ಹಾಗೂ ಪಾಕಿಸ್ತಾನ, ಬಾಂಗ್ಲಾ ದೇಶಗಳಲ್ಲೂ ಕಂಡು ಬರುತ್ತದೆ.
ಅಲ್ಲದೆ ಶ್ರೀಲಂಕಾ, ಮಾಲ್‍ಡ್ವೀಸ್ ದ್ವೀಪಗಳು ಸೇರಿದಂತೆ ದಕ್ಷಿಣ ಆಫ್ರಿಕಾದ ಅಮೇಜಾನ್ ತಪ್ಪಲು ಪ್ರದೇಶಗಳಲ್ಲೂ ವ್ಯಾಪಿಸಿಕೊಂಡಿದೆ.

ವಿಷಕಾರಿ ನಂಜು ಮುಳ್ಳು:
ಈ ಜಾಲಿಗಿಡ ತನ್ನ ಮೈತುಂಬಾ ಮುಳ್ಳುಗಳನ್ನು ತುಂಬಿಕೊಂಡರೂ ಎಲೆಗಳು ಮಾತ್ರ ಚಿಕ್ಕದಾಗಿರುತ್ತವೆ. ಕಾಯಿಗಳಂತೂ ಗೇಣುದ್ದ ಸಪೂರವಾಗಿ ಬೆಳೆದಿರುತ್ತವೆ. ಜಾಲಿ ಮುಳ್ಳು ಮನುಷ್ಯನ ಕೈ, ಕಾಲಿಗೆ ಚುಚ್ಚಿದರೆ, ನಂಜಾಗಿ ತೀವ್ರ ನೋವುಂಟು ಮಾಡುತ್ತದೆ.
ಈ ಸಸ್ಯ ಗಿಡವಾಗಿ, ಮರವಾಗಿ ಬೆಳೆದರೂ ಕೂಡ, ತಂಪಾದ ನೆರಳು ನೀಡುವುದಿಲ್ಲ. ಈ ಗಿಡಗಳ ಸುತ್ತಮುತ್ತ ವಾತಾವರಣ ಬಿಸಿಯಾಗಿರುವುದು ಸಾಮಾನ್ಯ. ಆದರೂ ಈ ಜಾಲಿಗಿಡ ದೇಶದ ತುಂಬಾ ಕಂಡು ಬರುವುದು ವಿಶೇಷ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...