Homeದಲಿತ್ ಫೈಲ್ಸ್ಕೋರೆಗಾಂವ್‌‌ ಕದನ: ದಲಿತ ಅಸ್ಮಿತೆ, ಸ್ವಾಭಿಮಾನದ ಮಹಾಕಥನ

ಕೋರೆಗಾಂವ್‌‌ ಕದನ: ದಲಿತ ಅಸ್ಮಿತೆ, ಸ್ವಾಭಿಮಾನದ ಮಹಾಕಥನ

ಪ್ರತಿವರ್ಷ ಜನವರಿ 1 ಜಗತ್ತಿಗೆ ಹೊಸವರ್ಷ, ಆದರೆ ದಲಿತರಿಗೆ ದಿಗ್ವಿಜಯದ ದಿವಸ.

- Advertisement -
- Advertisement -

ಡಾನ್ ಬ್ರಾನ್ ಬರೆದ ಡಾ ವಿಂಚಿ ಕೋಡ್ ಎಂಬ ಪುಸ್ತಕದಲ್ಲಿ ನೆಪೊಲೀಯನ್ ಬೊನಾಪಾರ್ಟೆ ಅಕಾಡೆಮಿಕ್ ಇತಿಹಾಸಕಾರರು ಯಾವಾಗಲೂ ಇತಿಹಾಸದ ಒಂದು ಮುಖವನ್ನು ಮಾತ್ರ ಬರೆಯುತ್ತಾರೆ ಎಂಬ ಹೇಳಿಕೆಯು ಇಂದಿಗೂ ಸತ್ಯವೇ ಆಗುತ್ತಿದೆ. ಈ ದೇಶದ ಬಹುಪಾಲು ಇತಿಹಾಸವನ್ನು ಮುಚ್ಚಿ ಹಾಕಲಾಗಿದೆ. ಅದರಲ್ಲಿಯೂ ಕೋರೆಂಗಾವ್ ನಲ್ಲಿ ನಡೆದ ದಲಿತರ ದಿಗ್ವಿಜಯವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರುವ ತನಕ ಯಾವ ಇತಿಹಾಸಕಾರರು ಉಲ್ಲೇಖಿಸಲು ಸಾಧ್ಯವೇ ಆಗಿರಲಿಲ್ಲ. ಇನ್ನು ಮುಂದಾದರೂ ಇತಿಹಾಸದತ್ತ ಗಮನ ಹರಿಸುವ ಮೂಲಕ ಹೊಸ ಬೆಳಕು ಚೆಲ್ಲಬೇಕಿದೆ.

ಬ್ರಿಟೀಷರು ಮತ್ತು ಶಿವಾಜಿ ಸೇರಿದಂತೆ ಹಲವು ರಾಜಮನೆತನಗಳಲ್ಲಿ ದಲಿತರು ಸೇನೆ ಮತ್ತು ಇನ್ನಿತರ ಅಧಿಕಾರಿ ಕೆಲಸಗಳಲ್ಲಿ ಇದ್ದರು. ಶಿವಾಜಿಯು ತನ್ನ ಕೋಟೆ ಕಾಯುವ ರಕ್ಷಣಾ ಪಡೆಗೆ ಮಹರ್ ಗಳನ್ನು ನೇಮಿಸಿಕೊಂಡಿದ್ದರು. ಮಹರ್ ಮತ್ತು ಮಾಂಗ್ ಎಂಬ ದಲಿತ ಸಮುದಾಯದವರನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಂಡಿದ್ದರು. ಅದಲ್ಲದೆ ಕಿಲ್ಲೆದಾರ ಎಂಬ ಜವಾಬ್ದಾರಿಯುತ ಅಧಿಕಾರಿ ಹುದ್ದೆಗೆ ಮಹರ್‌ಗಳನ್ನೇ ನೇಮಿಸಿಕೊಂಡಿದ್ದರು. ದುರಾದೃಷ್ಟವಶಾತ್ 1680ರಲ್ಲಿ ಶಿವಾಜಿ ಮಹಾರಾಜರು ಮರಣ ಹೊಂದಿದ ನಂತರ ಪೇಶ್ವೆಗಳು ಅಧಿಕಾರಕ್ಕೆ ಬಂದರು. ಪೇಶ್ವೆಗಳು ಮೂಲತಃ ಸುರಪಾನಿಗಳು, ಸ್ತ್ರೀ ಲೋಲುಪರು, ವ್ಯಭಿಚಾರಿಗಳು, ಎಲ್ಲಕ್ಕಿಂತ ಮಿಗಿಲಾಗಿ ಮನುಧರ್ಮ ಪರಿಪಾಲಕರು. ಇವರು ಅಧಿಕಾರಕ್ಕೆ ಬಂದ ನಂತರ ಮಾಡಿದ ಕೆಲಸವೆಂದರೆ ಶಿವಾಜಿ ಮಹರಾಜರು ಪ್ರತಿಯೊಂದು ಸಮುದಾಯಕ್ಕು ನೀಡಿದ ಪ್ರಾತಿನಿಧ್ಯವನ್ನು ತೆಗೆದು ಹಾಕಿ ಬಹುಭದ್ರವಾಗಿ ಕಟ್ಟಿದ್ದ ಶಿವಾಜಿ ಮಹಾರಾಜರ ರಾಜ್ಯವನ್ನು ದುರ್ಬಲಗೊಳಿಸಿದ್ದು.

ಮರಾಠರ ಇತಿಹಾಸದಲ್ಲಿ ಕ್ರಿ.ಶ,1713 ಕಾಲ ಒಂದು ಮಹತ್ವದ ಗಟ್ಟ. ಅಂದಿನ ಸಮಯದಲ್ಲಿ ಬ್ರಾಹ್ಮಣ ಮತ್ತು ಬ್ರಾಹ್ಮಣತ್ವದ ಪ್ರಭಾವ ತುಂಬಾ ಕಡಿಮೆ ಇತ್ತು. ಪೇಶ್ವೆಗಳು ಹಾಗೂ ಕೊಂಕಣಿ ಬ್ರಾಹ್ಮಣರು ಒಳನುಸುಳಿ ಆಡಳಿತ ಹಿಡಿದ ಮೇಲೆ ಅಲ್ಲಿಂದ ಪೇಶ್ವೆಗಳ ದರ್ಬಾರ್‌‌ ಪ್ರಾರಂಭವಾಯಿತು. ಮನುವಾದಿಗಳ ಯಥಾಸ್ಥಿತಿವಾದ ಮತ್ತೆ ಪುನರ್ ಉದಯವಾಯಿತು. ಪೇಶ್ವೆಗಳ 2ನೇ ಬಾಜಿರಾಯ ಯಾವ ಮಟ್ಟಕ್ಕೆ ಇಳಿಯುತ್ತಾರೆಂದರೆ ಸಿದನಾಕ ಎಂಬ ದಲಿತ ಅರಮನೆಯ ಹತ್ತಿರ ನಿಂತಿದ್ದ ಸ್ಥಳವನ್ನು ಮಂತ್ರ ಹಾಕಿಸಿ ಶುಚಿಗೊಳಿಸುತ್ತಾನೆ. ಇದೆಲ್ಲದಕ್ಕೂ ಹೊಸತಿರುವು ನೀಡಿದ್ದು ಕೋರೆಗಾಂವ್ ಎಂಬ ಐತಿಹಾಸಿಕ ಕದನ.

ಅಸ್ಪೃಶ್ಯತೆಯ ಕಾರಣದಿಂದ ಬಹುದೂರ ಉಳಿದುಕೊಂಡಿದ್ದ ಅನೇಕರನ್ನು ಬ್ರಿಟಿಷರು ಗುರುತಿಸಿ ತಮ್ಮ ಸೇನೆಯಲ್ಲಿ ಅವಕಾಶ ನೀಡಿದ್ದಲ್ಲದೆ ಶಿಕ್ಷಣವನ್ನೂ ನೀಡಿದರು. ಮಹರ್‌ಗಳ ಈ ಕಲಿತನದ ಕಾರಣದಿಂದಲೇ ಬ್ರಿಟೀಷರು ಪೇಶ್ವೆಗಳ ವಿರುದ್ದ ಜಯ ಸಾಧಿಸಲು ಕಾರಣವಾದದ್ದು. ಪೇಶ್ವೆಗಳಲ್ಲಿ 2ನೇ ಬಾಜಿರಾಯ ಅಧಿಕಾರಕ್ಕೆ ಬಂದ ಮೇಲೆ ಅವನ ಕಣ್ಣು ಬಿದ್ದಿದ್ದು ಪೂನಾದ ಮೇಲೆ. ಅದನ್ನು ಹೇಗಾದರು ಮಾಡಿ ವಶಪಡಿಸಿಕೊಳ್ಳಬೇಕೆಂಬ ಹಂಬಲದಿಂದ ಪೂನಾ ಬಳಿ ಇರುವ ಚಕನ್ ಎಂಬ ಸ್ಥಳದಲ್ಲಿ 2ನೇ ಬಾಜಿರಾಯನ ಸೇನೆ ಬಿಡು ಬಿಟ್ಟಿತ್ತು. ಇದನ್ನು ತಿಳಿದ ಬ್ರಿಟಿಷ್ ಜನರಲ್ ಸ್ಮಿತ್ ನೇತೃತ್ವದ ಸೇನೆ ಹಿಂಬಾಲಿಸಿತು. ಆ ಸಂದರ್ಭದಲ್ಲಿ 28 ಸಾವಿರರದವರೆವಿಗೆನ ಸೈನ್ಯದ ತುಕಡಿ ಅವಶ್ಯಕತೆ ಇತ್ತು. ಬ್ರಿಟಿಷರಿಗೆ ಮಾಡು ಇಲ್ಲವೆ ಮಡಿ ಎಂಬಂತಾಗಿತ್ತು. ತುಂಬಾ ಅರ್ಹತೆ ಮತ್ತು ಸಾಮರ್ಥ್ಯ ಇರುವ ಸೈನ್ಯದ ತುಕಡಿಯನ್ನು ಆಯ್ಕೆ ಮಾಡಬೇಕಿತ್ತು. ತಕ್ಷಣ ಬಾಂಬೆ ರೆಜೆಮೆಂಟ್ ತುಕಡಿಯನ್ನು ಆಯ್ಕೆಮಾಡಿಕೊಂಡರು. ಈ ರೆಜಿಮೆಂಟ್‌‌ನಲ್ಲಿ ಮಹರ್ ಸೈನಿಕರು ಇದ್ದರು. 250 ಕುದುರೆ ಸವಾರರು, 24 ಬ್ರಿಟಿಷ್ ಸೈನಿಕರಿದ್ದರು. ಅದರೊಟ್ಟಿಗೆ 205 ಸಣ್ಣ ತುಪಾಕಿಗಳಿದ್ದವು. ಇದರ ಕ್ಯಾಪ್ಟನ್ ಸಿಪ್ ಸ್ಟ್ಯಾಂಟಿನ್. ಕಮಾಂಡರ್ ಸಿದನಾಕ ಆಗಿದ್ದರು. ತಕ್ಷಣ ಫಿಲ್ಸ್ಮನ್ IInd battaalion of first regiment bombay native infantry ಎಂಬ ಸೈನ್ಯವನ್ನು ಪುಣೆಗೆ ಕಳುಹಿಸಿದರು. ಈ ಸೇನೆಯಲ್ಲಿ ಮರಾಠರು, ಮುಸ್ಲಿಂ ಯೋಧರು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಹರ್ ಸೈನಿಕರೇ ತುಂಬಿದ್ದರು. ಈ ಸೇನೆಗೆ ನಾಯಕತ್ವ ವಹಿಸಿದ್ದು ಸ್ಟಾಂಟನ್ ಮತ್ತು ಸಿದನಾಕ.

1817 ಡಿಸೆಂಬರ್ 31 ರಾತ್ರಿ 8 ಗಂಟೆಗೆ ಶಿರೂರಿನಿಂದ ಹೊರಟ ಸೇನೆಯಲ್ಲಿ 500 ಕಾಲ್ದಳ, 250 ಅಶ್ವದಳ, 24 ಗನ್ನಸರ್ಗಳಿಂದ ಕೂಡಿತ್ತು. 27 ಗಂಟೆಗಳ ಕಾಲ್ನಡಿಗೆಯಲ್ಲಿ 1 ಜನವರಿ 1818ರ ಬೆಳಗ್ಗೆ ಭೀಮಾನದಿ ತೀರದ ಕೋರೆಗಾಂವ್ ತಲುಪಿತು. ನಿರಂತರ ಕಾಲ್ನಡಿಗೆಯಿಂದ ಸೈನ್ಯ ಬಹಳ ಬಸವಳಿದಿತ್ತು. ಮಾರ್ಗ ಮಧ್ಯದಲ್ಲಿ ಬಾಯಾರಿದರೆ ನೀರು ಕುಡಿಯಲು ಸಹ ನದಿ ನೀರು ಕೂಡ ಅಲ್ಲಿ ಸಿಕ್ಕಿರಲಿಲ್ಲ. ಇಂತಹ ಸಂದರ್ಭದಲ್ಲಿ ಪೇಶ್ವೆಗಳ ಸೈನ್ಯ ದಾಳಿಗಿಳಿಯಿತು. ಪೇಶ್ವೆಗಳೊಡನೆ 1000 ಅರಬ್ ಸೈನ್ಯವಿತ್ತು. ಖಡ್ಗಬಲ ಮತ್ತು ಗುಂಡಿನ ತೋಪುಗಳಿಂದ ಪ್ರಾರಂಭವಾದ ಯುದ್ದ ಲೆಪ್ಟಿನೆಂಟ್ ಚಿಶೋಲಮ್ ನನ್ನು ಸೆರೆಹಿಡಿದು ಆತನ ರುಂಡ ಮುಂಡಗಳನ್ನು ಬೇರ್ಪಡಿಸಿದರು. ಇದನ್ನು ನೋಡಿ ಬ್ರಿಟಿಷ್ ಸೈನ್ಯ ಹತಾಶವಾಯಿತು. ರುಂಡ ಹಿಡಿದುಕೊಂಡು ಪೇಶ್ವೆಗಳು ಯುದ್ದ ಭೂಮಿಯಲ್ಲಿ ತಿರುಗಾಡಿದರು. ಶೌರ್ಯದ ಶಿಖರ ಏರಿ ಕುಳಿತಿದ್ದ ಪೇಶ್ವೆಗಳನ್ನು ಕಂಡು ಸ್ಟಾಂಟನ್ ಸೋಲು ಖಚಿತ ಎಂದುಕೊಂಡಿದ್ದರು. ಆದರೆ ಮಹರ್ ಸೈನಿಕರಿಗೆ ಮಾತ್ರ ಯಾವ ಭಯವೂ ಇರಲಿಲ್ಲ.

ಮಹರ್ ಸೈನಿಕರಿಗೆ ಇದ್ದ ಬದ್ಧತೆ, ಆ ಅಂಜದೆ ನುಗ್ಗುವ ಗುಣ. ಈ ಯುದ್ಧವು ಒಂದು ಹಗಲು, ಒಂದು ರಾತ್ರಿಯುದ್ದಕ್ಕೂ ನಿರಂತರವಾಗಿ ನಡೆದಿದೆ. ಒಬ್ಬ ಮಹರ್ ಸೈನಿಕ 40 ಜನ ಪೇಶ್ವೆ ಸೈನಿಕರನ್ನು ಎದುರಿಸಬೇಕಿತ್ತು. ಆ ಸಂದರ್ಭದ ಬೀಕರತೆಯನ್ನು ಕಂಡ ಸ್ಟಾಂಟನ್ ನಾವು ಶರಣಾಗುವುದೇ ಲೇಸು ಎಂದು ಆದೇಶಿಸಿದರು. ಇದನ್ನು ಕೇಳಿದ ತಕ್ಷಣವೇ ಕುಪಿತರಾದ ಮಹರ್ ಸೈನಿಕರು ಬಹಳ ಧೈರ್ಯದಿಂದ ಪೇಶ್ವೆಗಳನ್ನು ಎದುರಿಸಿದರು. ಕ್ಯಾಪ್ಟನ್ ಸ್ಟಾಂಟನ್ ಮೇಲೆ ಆಕ್ರೋಶಗೊಂಡು, “ನಾವು ಯಾವುದೇ ಸನ್ನಿವೇಶದಲ್ಲಿಯೂ ಕೂಡ ಯುದ್ಧ ಭೂಮಿಯಿಂದ ಹಿಂದಿರುಗುವುದಿಲ್ಲ. ಹೆದರಬೇಡಿ, ಧೈರ್ಯವಾಗಿರಿ, ಈ ಮಹರ್ ಸೈನಿಕರು ಕೊನೆಯ ಬುಲೆಟ್, ಕೊನೆಯ ಶತ್ರು ಉಳಿದಿರುವವರೆವಿಗೂ ಹೋರಾಡುತ್ತೇವೆ” ಎಂದರು. ಇದನ್ನು ಕೇಳಿದ ಸ್ಟಾಂಟನ್ ಖುಷಿಯಾದರು. ತಕ್ಷಣ ಮಹರ್ ಸೈನಿಕರಿಗೆ ಕೊನೆಯ ಬುಲೆಟ್, ಕೊನೆಯ ಶತ್ರು ಉಳಿದಿರುವ ತನಕ ಹೋರಾಡಲು ಸೂಚಿಸಿದರು.

ಸಾವು ಎದುರಿಗಿದ್ದರೂ ಮಹರ್ ಸೈನಿಕರು ದಿಟ್ಟತನದಿಂದ ಹೋರಾಡುತ್ತಲೇ ಇದ್ದರು. ಯುದ್ದದ ಸಂದರ್ಭದಲ್ಲಿ ಪೇಶ್ವೆಯ ನಾಯಕ ಬಾಪು ಗೊಖಲೆಯ ಮಗ ಗೋವಿಂದ ಬಾಬಾನು ಸತ್ತು ಹೋದನು. ತಕ್ಷಣ ಕುಸಿದು ಬಿದ್ದು ಯುದ್ಧ ಭೂಮಿಯಲ್ಲೇ ಒದ್ದಾಡ ತೊಡಗಿದನು. ಬೆರಳೆಣಿಕೆಯಷ್ಟಿದ್ದ ಮಹರ್ ಸೈನಿಕರು ಶಿಸ್ತು ಬದ್ದವಾದ ಆಕ್ರಮಣದ ಮೂಲಕ ಪೇಶ್ವೆ ಸೈನ್ಯವನ್ನು ದಿಕ್ಕಾಪಾಲಾಗಿಸಿದರು. ಬಂದೂಕು ಗುಂಡುಗಳು ತೀರುತ್ತ ಬಂದಾಗ ಖಡ್ಗಗಳ ಮೂಲಕ ವೈರಿ ಪಡೆಯನ್ನು ಸೈನಿಕರ ರುಂಡಗಳನ್ನು ಚಂಡಾಡತೊಡಗಿದರು. ರಾತ್ರಿಯ ವೇಳೆ ಕುಡಿಯಲು ನೀರು ಸಿಕ್ಕಿದ್ದೇ ತಡ ಮತ್ತಷ್ಟು ಉತ್ಸುಕರಾಗಿ ಮಹರ್ ಯೋಧರು ಮರುದಿನದ ಕದನದಲ್ಲಿ ನಿರತರಾದರು. ಮತ್ತು ಪೇಶ್ವೆಯ ಸೈನ್ಯದ ಮೇಲೆ ಮತ್ತೆ ದಾಳಿ ಇಟ್ಟರು. ಈ ಮಹರ್ ವೀರರ ಬಲಿಷ್ಠ ಹಾಗೂ ಬ್ರಿಟಿಷರ ನೆರವಿಗೆ ಇನ್ನೊಂದು ಸೇನೆ ಬರುತ್ತಿದೆ ಎಂಬ ವದಂತಿಯಿಂದ ಪೇಶ್ವೆ ಸೇನೆ ಅವಘಡಕ್ಕೀಡಾಯಿತು. 1818 ಜನವರಿ 1 ರಾತ್ರಿ 9 ಗಂಟೆಗೆ ಪೇಶ್ವೆ ಸೈನಿಕರು ಯುದ್ದ ಭೂಮಿಯಿಂದ ಪಲಾಯನ ಮಾಡಲು ಪ್ರಾರಂಭಿಸಿದರು.

ಯುದ್ದದಿಂದ ದಣಿದಿದ್ದ ಮಹರ್ ಸೈನಿಕರು ಭೀಮಾ ನದಿಯ ನೀರನ್ನು ಕುಡಿದು ದಣಿವಾರಿಸಿಕೊಂಡರು. ಈ ವಿಜಯವನ್ನೇ ಇಂದಿಗೂ ಇತಿಹಾಸದಲ್ಲಿ ಮಹರ್‌ಗಳ ಕೋರೆಗಾಂವ್ ದಿಗ್ವಿಜಯ ಎಂದು ಕರೆಯುತ್ತಾರೆ. ಇದರ ನೆನಪಿನಾರ್ತಕವಾಗಿ ಇಂದಿಗೂ ಸೈನ್ಯದಲ್ಲಿ ಮಹರ್ ರೆಜಿಮೆಂಟ್ ಇದೆ. ಸ್ವತಂತ್ರ ಮಹರ್ ರೆಜಿಮೆಂಟ್ ಯೋಧರು 1941-46 ವಿಜಯಸ್ಥಂಭದ ಚಿಹ್ನೆಯ ಬ್ಯಾಡ್ಜ್‌‌ ಇರುವ ಕ್ಯಾಪ್ ಧರಿಸುತ್ತಿದ್ದರು.

ಕೋರೆಗಾಂವ್ ವಿಜಯಸ್ತಂಭದ ಮೇಲೆ one of the proudest triumphs of the british army in the east ಎಂದು ಬರೆಯಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ತಮಗೆಷ್ಟೇ ತುರ್ತು ಕೆಲಸ ಕಾರ್ಯಗಳಿದ್ದರೂ ಅವುಗಳೆಲ್ಲವನ್ನು ಬದಿಗಿರಿಸಿ ಈ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಅಲ್ಲಿಂದ ಹೊರಟು ಜನವರಿ 1ರಂದು ಕೋರೆಗಾಂವ್‌ಗೆ ತಮ್ಮ ಕುಟುಂಬ ಸಮೇತರಾಗಿ ಭೇಟಿನೀಡಿ ಅಲ್ಲಿರುವ ಹುತಾತ್ಮ ಅಸ್ಪೃಶ್ಯ ಯೋಧರ ಸ್ಮಾರಕಕ್ಕೆ (ವಿಜಯಸ್ತಂಭ) ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರು. ಅವರು ಬದುಕಿರುವ ತನಕವೂ ಒಂದೇ ಒಂದು ವರ್ಷವೂ ಜನವರಿ 1ನೇ ತಾರೀಖಿನಂದು ಇಲ್ಲಿಗೆ ಬರುವುದನ್ನು ತಪ್ಪಿಸುತ್ತಿರಲಿಲ್ಲ. ಪ್ರತಿವರ್ಷ ಜನವರಿ 1 ಜಗತ್ತಿಗೆ ಹೊಸವರ್ಷ, ಆದರೆ ದಲಿತರಿಗೆ ದಿಗ್ವಿಜಯದ ದಿವಸ.


ಇದನ್ನೂ ಓದಿರಿ: ಜಮ್ಮು ಕಾಶ್ಮೀರದ ವೈಷ್ಣೋ ದೇವಿ ದೇವಾಲಯದಲ್ಲಿ ಕಾಳ್ತುಳಿತ: 12 ಯಾತ್ರಾರ್ಥಿಗಳು ಮರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...