ಕಲ್ಲು ಹೊಡೆದ ಆರೋಪದ ಮೇಲೆ ಬೆಂಗಳೂರಿನ ಟ್ರಾಫಿಕ್ ಎಎಸ್ಐ ಒಬ್ಬರು ವಿಕಲಾಂಗ ಮಹಿಳೆಗೆ ಬೂಟು ಕಾಲಿನಿಂದ ಒದ್ದು ಥಳಿಸಿರುವ ಘಟನೆ ನಡೆದಿದೆ. ಈ ಸಂಬಂಧ ವಿಡಿಯೊ ಲಭ್ಯವಾಗಿದೆ.
ಟೋಯಿಂಗ್ ವಾಹನದಲ್ಲಿ ಕುಳಿತ್ತಿದ್ದ ಎಎಸ್ಐಗೆ ಕಲ್ಲಿನಿಂದ ಹೊಡೆದ ಆರೋಪದ ಮೇಲೆ ಮಹಿಳೆಯ ಮೇಲೆ ಪ್ರಕರಣವನ್ನೂ ದಾಖಲಿಸಲಾಗಿದೆ. ಅಲ್ಲದೆ ಎಎಸ್ಐ, ವಿಕಲಾಂಗ ಮಹಿಳೆಗೆ ಸಾರ್ವಜನಿಕವಾಗಿ ಬೂಟು ಕಾಲಿನಿಂದ ಒದ್ದು ಅವ್ಯಾಚ್ಯ ಪದಗಳಿಂದ ನಿಂದಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಎಎಸ್ಐ ನೀಡಿದ ದೂರಿನ ಆಧಾರದಲ್ಲಿ ಎಸ್.ಜೆ.ಪಾರ್ಕ್ ಪೊಲೀಸರು ವಿಕಲಾಂಗ ಮಹಿಳೆಯ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯ ಸಿಬ್ಬಂದಿ, “ಜನವರಿ 24ರಂದು ಪ್ರಕರಣ ದಾಖಲಾಗಿದೆ. ಟ್ರಾಫಿಕ್ ಎಎಸ್ಐ ನಾರಾಯಣ್ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ. ಟ್ರಾಫಿಕ್ ಎಎಸ್ಐ ನಾರಾಯಣ್ ಅವರು ಹಲಸೂರು ಗೇಟ್ ಟ್ರಾಫಿಕ್ ಪೊಲೀಸ್ ಠಾಣೆಯವರಾಗಿದ್ದಾರೆಂದು ತಿಳಿದುಬಂದಿದೆ.
ಮಹಿಳೆಯನ್ನು ಅವ್ಯಾಚ್ಯವಾಗಿ ನಿಂದಿಸಿ, ಅಮಾನವೀಯವಾಗಿ ಥಳಿಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಯಾವುದಾದರೂ ಕ್ರಮ ಜರುಗಿಸಲಾಗಿಯೇ ಎಂದು ಪರಿಶೀಲಿಸಲಾಗುತ್ತಿದೆ. ಮೇಲಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಲಾಗಿದೆ. ಅವರ ಗಮನಕ್ಕೂ ಪ್ರಕರಣವನ್ನು ತರಲಾಗಿದ್ದು, ಪ್ರತಿಕ್ರಿಯೆಗಳನ್ನು ನಿರೀಕ್ಷಿಸಲಾಗಿದೆ.
ಸೂಚನೆ: ಈ ವಿಡಿಯೊದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಲಾಗಿದೆ.
ಇದನ್ನೂ ಓದಿರಿ: ಪೊಲೀಸ್ ಇಲಾಖೆಯಿಂದ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ವರ್ಗಾವಣೆ
ವಿಕಲಾಂಗ ಮಹಿಳೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಈ ಪೊಲೀಸಪ್ಪನನ್ನು ಕೂಡಲೇ ಬಂದಿಸಿ ಜೈಲಿಗೆ ಕಳುಹಿಸಬೇಕು.
ಅಧಿಕಾರ ಇದೆ ಅಂತ ಏನು ಬೇಕಾದರೂ ಮಾಡಿದರೆ ನಡೆಯುತ್ತೆ ಅಂತ ಹುಚ್ಚು ಹುಚ್ಚು ಆಗಿ ದಬ್ಬಾಳಿಕೆ ಹಿಂಸೆ ಮಾಡಿ ಕ್ರೌರಿಯವನ್ನು ಮೆರೆಯುವ ಇಂಥ ಅಧಿಕಾರಿಗಳ ಮೇಲೆ ನೇರ ನಿಷ್ಟೂರ ಕ್ರಮಗಳನ್ನು ಮೇಲಾಧಿಕಾರಿಗಳು ತೆಗೆಯಬೇಕು ಹಾಗು ಮಹಿಳೆ ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಿ ಅದು ಬಿಟ್ಟು ಈ ರೀತಿ ಅಮಾನವೀಯವಾಗಿ ನಡೆಯುದಲ್ಲ
ಇಂಥ ದುಷ್ಟ ದರ್ಪಿಷ್ಟ ಅಧಿಕಾರಿಗೆ ಶಿಕ್ಷೆ ಆಗಲಿ. ಇದು ಅಮಾನವೀಯ ಘಟನೆ ಖಂಡನಾರ್ಹ
Police aa evnu sulemaga ….
E lofer berevrge bythanala nenu yaro lofer ge huterbeku….
ಮೇಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲು
ಈ ಮೂಲಕ ಒತ್ತಾಯಿಸುತ್ತೇನೆ
Traffic Police officers should have utmost patience while handling any critical cases on roads. When this type videos are made public, Concerned ACP and above officers should find out fact and resolve the issue to save the reputation of Police Department. Harassment to public should be brought to books without delay.
ಪೊಲೀಸ್ರಾ ಅಲ್ಲ ರಕ್ಷಸ ನಡೆ ಇದು ತುಂಬಾ ಅಮಾನವೀಯ ಅವರಿಗೆ ಕಠಿಣ ಶಿಕ್ಷೆ ಆಗಬೇಕು pension ಅನ್ನೋದು ಸಿಗಬಾರದು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ನನ್ನದು
ಇದು ಯಾವಾಗ ಮತ್ತು ಯಾವ ದಿನಾಂಕದಂದು ಆಗಿದೆ ಯಾವ ಪೊಲೀಸ್ ಸ್ಟೇಷನ್ ತಿಳಿಸಿ
If anything is happened he should brought to Senior officers anyway this ASI should be punished Should HomeMinister take action. It should be a lesson to others otherwise public will be giving a fitting reply in a near future
ಅವನಿಗೆ ಯಾವ ಶಿಕ್ಷೇನೂ ಆಗೋದಿಲ್ಲ.ಸ್ವಲ್ಪ ಸಮಯದ ನಂತರ ಎಲ್ಲವೂ ಮರೆತುಹೋಗುತ್ತದೆ.ನಮ್ಮಪ್ರಜಾಪ್ರಬುತ್ವ ಕೆಲಸ ಮಾಡೋದು ಹೀಗೆಯೇ