Homeಕರ್ನಾಟಕಬಿಜೆಪಿ ಜತೆ ಜೆಡಿಎಸ್ ಮೈತ್ರಿಗೆ ದೇವೇಗೌಡರ ಮುದ್ರೆ!

ಬಿಜೆಪಿ ಜತೆ ಜೆಡಿಎಸ್ ಮೈತ್ರಿಗೆ ದೇವೇಗೌಡರ ಮುದ್ರೆ!

- Advertisement -
- Advertisement -

| ನೀಲಗಾರ |

ಕಳೆದ ವಾರ ‘ಆಗಿಯೇಬಿಟ್ಟಿತಾ ಜೆಡಿಎಸ್-ಬಿಜೆಪಿ ಮೈತ್ರಿ?’ ಎಂಬ ವರದಿ ನಮ್ಮಲ್ಲಿ ಪ್ರಕಟವಾಗಿತ್ತು. ಮೇಲ್ನೋಟಕ್ಕೆ ಕುಮಾರಸ್ವಾಮಿಯವರ ಸಿದ್ಧಾಂತಹೀನ ದುಡುಕಿನ ಹೇಳಿಕೆಯಂತೆ ಕಂಡಿದ್ದ ಬೆಂಬಲದ ಹೇಳಿಕೆಯ ಹಿಂದೆ ಸ್ಪಷ್ಟ ಲೆಕ್ಕಾಚಾರವಿತ್ತು. ಸಿದ್ಧಾಂತಕ್ಕೂ ಅವರಿಗೂ ಸಂಬಂಧ ಹೇಗೂ ಇರಲಿಲ್ಲ. ಆದರೆ ಜೆಡಿಎಸ್‌ನ ಅಸ್ತಿತ್ವವೇ ಅಲುಗಾಡುತ್ತಿದೆ ಎಂಬುದನ್ನು ವಿವರಿಸುವ ನಾಲ್ಕು ಅಂಶಗಳನ್ನು ಆ ವರದಿಯಲ್ಲಿ ಬರೆಯಲಾಗಿತ್ತು.

ಇದೀಗ ದೇವೇಗೌಡರು ಒಂದು ಹೆಜ್ಜೆ ಮುಂದೆ ಹೋಗಿ, ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ಅಭಯವನ್ನು ನೀಡಿದ್ದಾರೆ. ಬಹಳ ನಾಜೂಕಿನಿಂದ ಅದಕ್ಕೆ ಬೇಕಾದ ಸಮರ್ಥನೆಯನ್ನೂ ಕೊಡುವ ಪ್ರಯತ್ನ ಮಾಡಿದ್ದಾರೆ. ‘ಸಿದ್ದರಾಮಯ್ಯ ಅಹಿಂದ ನಾಯಕ. ನಾನು ಯಾವ ಹಿಂದ ನಾಯಕನೋ ಗೊತ್ತಿಲ್ಲ. ಅವರು ಬೇಕಾದರೆ ಇನ್ನೊಂದು ಚುನಾವಣೆ ಬರಲಿ ಎಂತಲೂ ಹೇಳಬಹುದು. ನಾನು ಅಷ್ಟು ಶಕ್ತನಲ್ಲ. ಹಾಗಾಗಿ ಚುನಾವಣೆ ಬರುವುದು ಬೇಡ’ ಎಂದಿದ್ದಾರೆ. ದೇವೇಗೌಡರು ಖುದ್ದಾಗಿ ಫೋನ್ ಮಾಡಿ ಯಡಿಯೂರಪ್ಪನವರ ಹತ್ತಿರ ಮಾತಾಡಿದ್ದಾರೆ ಎಂತಲೂ ಹೇಳಲಾಗುತ್ತಿದೆ.

ಕಳೆದ ವಾರವೇ ಹೇಳಿದ್ದಂತೆ ಹಲವು ಶಾಸಕರು ಬಿಜೆಪಿಯ ಕಡೆಗೆ ಒಲವು ತೋರಿಸಿರುವುದು ಸ್ಪಷ್ಟವಿತ್ತು ಮತ್ತು ಬಿಜೆಪಿಯು ಘಾತುಕತನದಿಂದ ಇನ್ನಷ್ಟು ಜನರನ್ನು ಸೆಳೆದುಕೊಳ್ಳುವುದೂ ಕಷ್ಟವಿರಲಿಲ್ಲ. ಈ ವಾರದ ಬೆಳವಣಿಗೆ ಎಂದರೆ ಜೆಡಿಎಸ್‌ನ ವಿಧಾನಪರಿಷತ್ತಿನ ಸದಸ್ಯರು ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ಸೇರಿದಂತೆ ಹಲವರು ಸಭೆಯೊಂದನ್ನು ನಡೆಸಿದರು ಮತ್ತು ರೆಸಾರ್ಟ್ವೊಂದಕ್ಕೆ ಜೊತೆಗೂಡಿ ಹೋಗುವ ಕುರಿತೂ ಚರ್ಚಿಸಿದರು. ಶಾಸಕರ ಅಸಮಾಧಾನ ತಣಿಸಲು ದೇವೇಗೌಡರು ಸಭೆ ಕರೆದರೆ, ಕುಮಾರಸ್ವಾಮಿ ಲಂಡನ್ ವಿಮಾನ ಹತ್ತಿದ್ದರು. ಇಂತಹ ಹಲವು ಸಂದರ್ಭಗಳಲ್ಲಿ ತಂದೆ, ಮಗ ಏನೋ ಭಿನ್ನ ನಿಲುವು ತಳೆದಂತೆ ಮಾಡುವುದು, ಸಭೆಯಲ್ಲಿ ತನ್ನ ಅಸಹಾಯಕತೆಯನ್ನು ತಂದೆ ಮಗನ ಮೇಲೆ ಅಥವಾ ಮಗ ತಂದೆಯ ಮೇಲೆ ಹಾಕುವುದು ಇವೆಲ್ಲವೂ ಸಂದಿಗ್ಧವನ್ನು ಮ್ಯಾನೇಜ್ ಮಾಡುವ ಗೌಡರ ಕುಟುಂಬದ ವಿಧಾನಗಳಲ್ಲಿ ಒಂದು. ಆದರೆ, ಅಂತಿಮವಾಗಿ ಇಬ್ಬರೂ ಒಂದೇ ನಿಲುವಿಗೆ ಬಂದಿರುತ್ತಾರೆ. ಇದರಲ್ಲಿ ನಿಜಕ್ಕೂ ದೊಡ್ಡಗೌಡರು ಮತ್ತು ಎಚ್‌ಡಿಕೆ ನಡುವಿನ ಅಭಿಪ್ರಾಯಬೇಧವೂ ಕೆಲಸ ಮಾಡದಿರುವುದಿಲ್ಲ. ಆದರೆ ಅದನ್ನೇ ಭಿನ್ನಮತ ನಿಭಾಯಿಸುವ ಅಸ್ತ್ರವಾಗಿ ಬಳಸುವ ಚಾಕಚಕ್ಯತೆ ಅವರಿಗೆ ಸಿದ್ಧಿಸಿದೆ.

ಈಗಲೂ ಅದೇ ಆಗಿದೆ. ಎಚ್‌ಡಿಕೆ ಹೇಳಿದ್ದನ್ನೇ ಗೌಡರೂ ಹೇಳಿದ್ದಾರೆ. ಕಾರಣಗಳನ್ನು ಅವರ ರೀತಿಯಲ್ಲಿ ಅವರೂ, ಇವರ ರೀತಿಯಲ್ಲಿ ಇವರೂ ಹೇಳಿದ್ದಾರಷ್ಟೇ. ‘ಸಿದ್ದರಾಮಯ್ಯರಿಂದಲೇ ಮೈತ್ರಿ ಸರ್ಕಾರ ಬಿದ್ದಿತು ಎಂದು ನನಗೆ ಈಗ ಮನವರಿಕೆಯಾಗಿದೆ’ ಎಂದು ದೊಡ್ಡ ಗೌಡರು ಇಂದು ಹೇಳಿದ್ದಾರೆ. ಅಂದರೆ ಇಡೀ ಕಾಂಗ್ರೆಸ್ ಪಕ್ಷಕ್ಕಿಂತ ಸಿದ್ದರಾಮಯ್ಯರನ್ನು ಗುರಿ ಮಾಡುವುದು, ಬಿಜೆಪಿಯ ಜೊತೆಗೆ ಕೈ ಜೋಡಿಸುವುದು ಮತ್ತು ಆ ಮೂಲಕ ಅಹಿಂದ ವರ್ಸಸ್ ಮೇಲ್ಜಾತಿ ಧ್ರುವೀಕರಣಕ್ಕೆ ಬೇಕಾದ ಕಥನ ಸಿದ್ಧ ಮಾಡುತ್ತಾ ಹೋಗುವುದು ಇದರ ಹಿಂದಿನ ಲೆಕ್ಕಾಚಾರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಅನ್ನು ಕೈ ಹಿಡಿದಿದ್ದು ಇದೇ ಆಗಿತ್ತು. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದ ಇದಕ್ಕೆ ಒಂದಷ್ಟು ಧಕ್ಕೆ ಬಂದಿತ್ತು. ಈಗ ಮತ್ತೆ ಧ್ರುವೀಕರಣಕ್ಕೆ ಪ್ರಯತ್ನಿಸಿ ತಮ್ಮ ನೆಲೆ ಉಳಿಸಿಕೊಳ್ಳುವ ಯತ್ನ ಮಾಡುತ್ತಿರುವುದನ್ನು ಗೌಡರು ಇಂದು ಲೆಕ್ಕಾಚಾರ ಹಾಕಿ ಆಡಿದ ಮಾತುಗಳಲ್ಲಿ ನೋಡಬಹುದು.

ಅತ್ತ ಶರದ್‌ಪವಾರ್ ಜೊತೆಗೂ ಆಪ್ತರಾಗಿರುವ ದೇವೇಗೌಡರು ಹರಿಯಾಣ ಹಾಗೂ ಮಹಾರಾಷ್ಟ್ರಗಳಲ್ಲಿ ಅತಂತ್ರ ಪರಿಸ್ಥಿತಿ ಉಂಟಾದ ನಂತರ ಬಿಜೆಪಿಯ ಜೊತೆಗೆ ಕೈ ಜೋಡಿಸಲಾರರು ಎಂಬ ಮಾತು ಜೆಡಿಎಸ್ ವಲಯಗಳಲ್ಲಿತ್ತು. ಆದರೆ ಕರ್ನಾಟಕದ ಮಟ್ಟಿಗೆ ಜೆಡಿಎಸ್ ಪರಿಸ್ಥಿತಿ ಕಷ್ಟವಿತ್ತು. ಈಗಲೇ ಚುನಾವಣೆ ನಡೆದರೆ ಬಹಳವೇ ಕಷ್ಟವಿದೆ ಎಂಬ ದೇವೇಗೌಡರ ಮಾತು ಸುಳ್ಳಲ್ಲ. ರಾಜ್ಯಗಳ ಮಟ್ಟಿಗೆ ಏನೇ ವ್ಯತ್ಯಾಸ ಉಂಟಾದರೂ, ಕೇಂದ್ರದಲ್ಲಿ ಮೋದಿ-ಶಾರನ್ನು ಅಲುಗಾಡಿಸುವ ಶಕ್ತಿ ಸದ್ಯಕ್ಕಂತೂ ಕಾಣುತ್ತಿಲ್ಲ. ಹೀಗಾಗಿ ಇಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎನ್ನುವಷ್ಟು ದೂರಾಲೋಚನೆ ಪಳಗಿದ ರಾಜಕಾರಣಿಗಳಿಗೆ ಇರುವುದಿಲ್ಲವೇ?

ಹೀಗಾಗಿ ಈ ಸಾರಿ ಗೌಡರು ಯಾವ ಹಿಂಜರಿಕೆಯನ್ನೂ ತೋರಿಲ್ಲ. ಹಿಂದಿನ ಸಾರಿ ಜೆಡಿಎಸ್ ಬಿಜೆಪಿ ಮೈತ್ರಿಯಾದಾಗಲಾದರೂ ‘ಕೋಮುವಾದ, ಜಾತ್ಯಾತೀತತೆ’ ಇತ್ಯಾದಿ ಮಾತುಗಳು ಅವರ ಬಾಯಿಂದ ಬಂದಿದ್ದವು. ಆದರೆ ಈ ಸಾರಿ ಕೇವಲ ಸಿದ್ದರಾಮಯ್ಯರಿಗೆ ವಿರೋಧ ಮಾತ್ರವಲ್ಲದೇ ಯಡಿಯೂರಪ್ಪನವರ ಸರ್ಕಾರಕ್ಕೆ ಅಭಯವನ್ನೂ ನೀಡುವ ಸ್ಪಷ್ಟತೆಯನ್ನೂ ಅವರು ನೀಡಿಬಿಟ್ಟಿದ್ದಾರೆ. ಅದರ ಜೊತೆ ಜೊತೆಗೇ ಮುಂದಿನ ಯೋಜನೆಯನ್ನೂ ಪ್ರಕಟಿಸಿದ್ದಾರೆ. ಅದು – ಪಕ್ಷವನ್ನು ಕಟ್ಟುವುದು. ಸೈದ್ಧಾಂತಿಕ ಅವಕಾಶವಾದಿತನದ ಬಗ್ಗೆ ಏನೇ ಟೀಕೆ ಇದ್ದರೂ ಮೆಚ್ಚಿಕೊಳ್ಳಬೇಕಾದ್ದು ಗೌಡರ ಈ ಗುಣವನ್ನು.

ಏನು ತಿಪ್ಪರಲಾಗ ಹಾಕಿದರೂ ಯಡಿಯೂರಪ್ಪನವರ ಸರ್ಕಾರವು ಪೂರ್ಣಾವಧಿ ಬಾಳಲಾರದು ಎಂಬುದು ಖಚಿತ. ಹಾಗಾಗಿ ಒಂದಷ್ಟು ಕಾಲ ಸರ್ಕಾರವನ್ನು ಉಳಿಸಿ, ಅಷ್ಟು ಅವಧಿಯನ್ನು ಮುಂದಿನ ಚುನಾವಣೆಗೆ ತಯಾರಿ ಮಾಡಿಕೊಂಡರೆ ಒಳ್ಳೆಯದು ಎಂಬ ಮುಂದಾಲೋಚನೆ ಅವರದ್ದು. ಹೇಗೂ ಮುಂದೆಯೂ ಎರಡರಲ್ಲೊಂದು ಪಕ್ಷಕ್ಕೆ ತಮ್ಮ ಜೊತೆಗೆ ಮೈತ್ರಿ ಮಾಡಿಕೊಳ್ಳಲೇಬೇಕಾದಷ್ಟು ಅನಿವಾರ್ಯತೆಯಿರುವ ಅತಂತ್ರತೆ ಉಂಟಾಗುವಷ್ಟು ಪಕ್ಷ ಬೆಳೆಸುವುದಷ್ಟೇ ಸಾಧ್ಯ. ಆ ಮಧ್ಯೆ ಮಾಡಬೇಕಿರುವುದು ಸಿದ್ದರಾಮಯ್ಯರನ್ನು ಹಣಿಯುವುದಷ್ಟೇ.

ಬಹುಶಃ ಸಿದ್ದರಾಮಯ್ಯನವರ ಬೆಳವಣಿಗೆ ಇರುವುದೂ ಯಡಿಯೂರಪ್ಪ, ದೇವೇಗೌಡ ರಾಜಕಾರಣವನ್ನು ವಿರೋಧಿಸುವುದರಲ್ಲೇ ಇರಬಹುದು. ಹಾಗಾಗಿ ಕರ್ನಾಟಕದ ರಾಜಕಾರಣವು ಮತ್ತೆ 2018ರ ಹೊತ್ತಿಗೇ ಬಂದು ನಿಂತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...