Homeಚಳವಳಿಕನ್ನಡಿಗರು ನಿಮ್ಮ ಗುಲಾಮರಲ್ಲ, ನಾವು ಸ್ವಾಭಿಮಾನಿಗಳು: ಹಿಂದಿ ಬ್ಯಾನರ್‌ಗೆ ಮಸಿ ಬಳಿದ ರೂಪೇಶ್ ರಾಜಣ್ಣ

ಕನ್ನಡಿಗರು ನಿಮ್ಮ ಗುಲಾಮರಲ್ಲ, ನಾವು ಸ್ವಾಭಿಮಾನಿಗಳು: ಹಿಂದಿ ಬ್ಯಾನರ್‌ಗೆ ಮಸಿ ಬಳಿದ ರೂಪೇಶ್ ರಾಜಣ್ಣ

ಕರ್ನಾಟಕಕ್ಕೆ ಯಾವುದೇ ಸಂಬಂಧವಿಲ್ಲದ ಯೋಗಿ ಆದಿತ್ಯನಾಥ್ ಫೋಟೊ ಏಕೆ ಹಾಕಬೇಕು ಎಂದು ಕಿಡಿಕಾರಿದ್ದಾರೆ.

- Advertisement -
- Advertisement -

ಬೆಂಗಳೂರಿನ ಲಾಲ್‌ಬಾಗ್‌ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಸಂಪೂರ್ಣ ಹಿಂದಿಮಯ ಬ್ಯಾನರ್‌ ಹಾಕಿದ್ದಕ್ಕೆ ಮತ್ತು ಒಂದು ಕಡೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇನ್ನೊಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹಾಕಿದ್ದಕ್ಕೆ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಕಿಡಿಕಾರಿದ್ದಾರೆ. ಬ್ಯಾನರ್‌ಗೆ ಮಸಿ ಬಳಿದು ‘ಕನ್ನಡಿಗರು ನಿಮ್ಮ ಗುಲಾಮರಲ್ಲ, ಸ್ವಾಭಿಮಾನಿಗಳು. ಕನ್ನಡ ಬಳಸಿ’ ಎಂದು ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾನರ್‌ನಲ್ಲಿ ಉಜ್ವಲ 2.0 ಯೋಜನೆಯ ಮಾಹಿತಿಯನ್ನು ಸಂಪೂರ್ಣ ಹಿಂದಿಯಲ್ಲಿ ನೀಡಲಾಗಿದೆ. ಕರ್ನಾಟಕಕ್ಕೆ ಯಾವುದೇ ಸಂಬಂಧವಿಲ್ಲದ ಯೋಗಿ ಆದಿತ್ಯನಾಥ್ ಫೋಟೊ ಏಕೆ ಹಾಕಬೇಕು? ನಾವು ಹಿಂದಿಗೆ ವಿರುದ್ಧವಲ್ಲ, ಆದರೆ ಹಿಂದಿ ಹೇರಿಕೆಗೆ ವಿರುದ್ಧವಿದ್ದೇವೆ. ಕನ್ನಡನಾಡಿನಲ್ಲಿ ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಕನ್ನಡದಲ್ಲಿ ಮಾಹಿತಿ ನೀಡಬೇಕು, ಕನ್ನಡ ನಾಡಿನ ಮುಖಂಡರುಗಳಾದ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅಥವಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಫೋಟೊ ಬೇಕಾದರೆ ಹಾಕಿ. ಆದರೆ ಯೋಗಿ ಆದಿತ್ಯನಾಥ್‌ ಫೋಟೊ ಏಕೆ? ನಿನ್ನೆ ನಡೆದ ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಪೂರ್ಣ ಇಂಗ್ಲಿಷ್ ಬ್ಯಾನರ್ ಬಳಸಲಾಗಿದೆ. ಹೀಗೆ ಆದರೆ ಕನ್ನಡ ನಶಿಸಿ ಮುಂದೊಂದು ದಿನ ನಮ್ಮ ಮೊಮ್ಮಕ್ಕಳು ಕನ್ನಡ ಅಂದರೆ ಏನು ಎಂದು ಕೇಳುವ ಪರಿಸ್ಥಿತಿ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಿವಮೊಗ್ಗದ ಕಾರ್ಯಕ್ರಮದಿಂದ ಆರಂಭವಾಗಿ ಎಲ್ಲಡೆ ಹಿಂದಿ ಪ್ರಚಾರ ಮಾಡುತ್ತಿದೆ. ಏಕೆ ಪ್ರಾದೇಶಿಕ ಭಾಷೆಗಳನ್ನು  ಹತ್ತಿಕ್ಕಲಾಗುತ್ತಿದೆ? ಇದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪೆಟ್ರೋಲ್ ಬಂಕ್‌ನ ಮಾಲೀಕರನ್ನು ಸಹ ಏಕೆ ಇಂತಹ ಬ್ಯಾನರ್ ಹಾಕಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ರೂಪೇಶ್ ರಾಜಣ್ಣ, “ಇಂದು ನಮ್ಮ ರಾಜ್ಯದಲ್ಲಿ ರಸ್ತೆಗಳು ಸೇರಿದಂತೆ ಎಲ್ಲೆಡೆ ಹಿಂದಿ ರಾರಾಜಿಸುತ್ತಿದೆ, ಕನ್ನಡ ನಶಿಸುತ್ತಿದೆ. ಏಕೆ ಹೀಗೆ? ರಾಜಾರೋಷವಾಗಿ ಬೆಂಗಳೂರಿನ ಮಧ್ಯಭಾಗದಲ್ಲಿ ಹಿಂದಿಯಲ್ಲಿ ಬ್ಯಾನರ್ ಹಾಕಲು ಇವರಿಗೆ ಎಷ್ಟು ಧೈರ್ಯ? ಯೋಗಿ ಆದಿತ್ಯನಾಥ್‌ಗೂ ಕರ್ನಾಟಕಕ್ಕೂ ಏನು ಸಂಬಂಧ? ಹಾಗಾಗಿ ಮಸಿ ಬಳಿದೆ” ಎಂದರು.

ಇಂದು ಜಾತಿ, ಧರ್ಮದ ಬೇಧಭಾವವಿಲ್ಲದೆ ನಮ್ಮೆಲ್ಲರನ್ನು ಒಂದು ಮಾಡುವುದು ನಮ್ಮ ಕನ್ನಡ ಭಾಷೆಯಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಅದು ಕೇವಲ ಭಾಷೆಯಲ್ಲ ದೈತ್ಯ ಶಕ್ತಿಯಾಗಿದೆ. ನಾವು ಕನ್ನಡಕ್ಕಾಗಿ ಹೋರಾಡದಿದ್ದರೆ ನಮ್ಮ ಅಸ್ತಿತ್ವ, ಅಸ್ಮಿತೆ ನಾಶವಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅವರು ತಿಳಿಸಿದರು.


ಇದನ್ನೂ ಓದಿ; ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಹೊಸ ಚಿತ್ರಕ್ಕೆ ಕನ್ನಡಿಗರ ಸ್ವಾಗತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. Correct aagi heliddeeri Adithyanathana abhimanigalidre anthavaru Utthara Pradeshakke hogi alli Banner haakli….. Kannadada Banner mathu kannadada Rajakaranigalu taare aagli bembalisona…. Adithyanathanige kannadadalli soppu haakiru yaaru illa.

  2. ಕರ್ನಾಟಕ್ಕೆ ಸಂಭಂದ ಇರದ ಫಾರೂಕ್ ಅಬ್ದುಲ್/ಮಮತಾ ದಿದಿ/ ಮಾಜಿ ಸಿಎಂ ಚಂದ್ರ ಬಾಬು ನಾಯಿಡು ಇವರೆಲ್ಲರ ಫೋಟೋ ಕರ್ನಾಟಕದಲ್ಲಿ ರಾರಾಜಿಸಿದಾಗ ರೂಪಾಯಿ ರಾಜಣ್ಣ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ಕೊಂಡಿದ್ದ…!!
    ಅದು ಹೋಗ್ಲಿ ಕನ್ಶಯ್ಯ/ ಶರ್ಜಿಲ್ ಇಮಾಮ್ /ಶೇಹ್ಲಾ ರಶೀದ್ ಬೆಂಗಳೂರ್ ಬಂದಾಗ ಅವರ ಫೋಟೋ ಗೆ ಈ ರೂಪಿಯಿ ರಾಜಣ್ಣ ಏಕೆ ಪ್ರತಿಭಟನೆ ಮಾಡಲಿಲ್ಲ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...