ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಡಿಯಲ್ಲಿ ಮಹಾರಾಷ್ಟ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಎಂಜಿನಿಯರಿಂಗ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ ಮರಾಠ ಸಮುದಾಯದ 111 ಅಭ್ಯರ್ಥಿಗಳ ನೇಮಕಾತಿಗೆ ಬಾಂಬೆ ಹೈಕೋರ್ಟ್ ಗುರುವಾರ ತಡೆ ನೀಡಿದೆ.
‘ಮಹಾರಾಷ್ಟ್ರ ರಾಜ್ಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಾಯಿದೆ, 2018’ರ ಅಡಿಯಲ್ಲಿ ನೀಡಲಾದ ಮರಾಠಾ ಮೀಸಲಾತಿಯ ನಿಬಂಧನೆಗಳನ್ನು ಕಳೆದ ವರ್ಷ ಮೇನಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಇದಾದ ನಂತರ ಖಾಲಿ ಹುದ್ದೆಗಳನ್ನು ಇಡಬ್ಲ್ಯೂಎಸ್ (ಆರ್ಥಿಕವಾಗಿ ದುರ್ಬಲ ವಿಭಾಗ) ಅಡಿಯಲ್ಲಿ ಸೇರಿಸಲಾಯಿತು. 1992ರ ಇಂದ್ರ ಸಾಹ್ನಿ ಮಹತ್ವದ ತೀರ್ಪಿನಲ್ಲಿ ವಿಧಿಸಲಾದ 50% ಕೋಟಾ ಮಿತಿಯನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಚರ್ಚಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಮಹಾರಾಷ್ಟ್ರ ಸರ್ಕಾರವು 2018ರ ಕಾನೂನಿನ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಮರಾಠ ಸಮುದಾಯದ 111 ಅಭ್ಯರ್ಥಿಗಳಿಗೆ ಇಡಬ್ಲ್ಯೂಎಸ್ ಕೋಟಾವನ್ನು ವಿಸ್ತರಿಸಿದೆ.
ಮಹಾರಾಷ್ಟ್ರ ಲೋಕಸೇವಾ ಆಯೋಗವು ಒಟ್ಟು 1,143 ಅಭ್ಯರ್ಥಿಗಳನ್ನು ಆಯ್ಕೆ ಮಾಡಿತ್ತು. ಗುರುವಾರದ ತನ್ನ ಆದೇಶದಲ್ಲಿ 111 ಮರಾಠಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರ ಎಲ್ಲ ಅಭ್ಯರ್ಥಿಗಳನ್ನು ನೇಮಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.
ನವೆಂಬರ್ 29ರಂದು, ಮಹಾರಾಷ್ಟ್ರ ಆಡಳಿತಾತ್ಮಕ ನ್ಯಾಯಮಂಡಳಿಯು 111 ಅಭ್ಯರ್ಥಿಗಳಿಗೆ ಮಧ್ಯಂತರ ಪರಿಹಾರವನ್ನು ನೀಡಿತು. ರಾಜ್ಯ ಸರ್ಕಾರವು ನೇಮಕಾತಿಗಳನ್ನು ಮಾಡಬಹುದು, ಆದರೆ ಅಭ್ಯರ್ಥಿಗಳು ಪ್ರಕರಣದ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತಾರೆ ಎಂದು ಹೇಳಿತು. ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
“ನೇಮಕಾತಿಗಳನ್ನು ಮಾಡಿದರೆ ತೊಡಕುಗಳು ಉದ್ಭವಿಸುತ್ತವೆ” ಎಂದು ಹೈಕೋರ್ಟ್ ಗುರುವಾರ ಹೇಳಿದೆ.
“ನಾವು ಸಾಮಾನ್ಯವಾಗಿ ನ್ಯಾಯಮಂಡಳಿಗಳ ವ್ಯವಹಾರದಲ್ಲಿ ಅದರ ಮುಂದೆ ಬಾಕಿ ಇರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸುವುದನ್ನು ತಡೆಯುತ್ತೇವೆ, ಆದರೆ ಅದರ ಮುಂದಿರುವ ಸಮಸ್ಯೆಗಳ ಪ್ರಾಮುಖ್ಯತೆಯನ್ನು ಪರಿಗಣಿಸಿ, 2023ರ ಜನವರಿ ಅಂತ್ಯದ ಮೊದಲು ಅರ್ಜಿಯನ್ನು ಪರಿಗಣಿಸಲು ನಾವು ನ್ಯಾಯಮಂಡಳಿಯನ್ನು ಒತ್ತಾಯಿಸುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಅಭಯ್ ಅಹುಜಾ ಅವರ ಪೀಠ ಹೇಳಿದೆ.
ಇದನ್ನೂ ಓದಿರಿ: EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ
111 ಅಭ್ಯರ್ಥಿಗಳ ಪರವಾಗಿ ನ್ಯಾಯಮಂಡಳಿ ತೀರ್ಪು ನೀಡಿದರೆ, ಅಭ್ಯರ್ಥಿಗಳ ಹಿರಿತನವನ್ನು ಡಿಸೆಂಬರ್ 1ರ ನೇಮಕಾತಿ ದಿನಾಂಕದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಇಡಬ್ಲೂಎಸ್ ವರ್ಗಕ್ಕೆ ಸೇರಿದ ಎ.ಎಂ.ಹಾವಶೆಟ್ಟೆ ಎಂಬ ವ್ಯಕ್ತಿ ಮತ್ತು ಇತರ ಇಬ್ಬರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಇಡಬ್ಲ್ಯೂಎಸ್ಗೆ ಬದಲಾಯಿಸಲು ರಾಜ್ಯವು ಅವಕಾಶ ನೀಡುತ್ತಿರುವುದರಿಂದ ಅವರ ನೇಮಕಾತಿಯು ಪೂರ್ವಾಗ್ರಹ ಪೀಡಿತವಾಗಿದೆ ಎಂದು ಅರ್ಜಿದಾರರು ಹೈಕೋರ್ಟ್ಗೆ ತಿಳಿಸಿದ್ದರು.