“ನಿಮಗೆ ಜಾಮೀನು ಬೇಕೆ ಅಥವಾ ಜೈಲು ಬೇಕೆ? ಇಂದು ಶ್ರೀಕೃಷ್ಣ ಜೈಲಿನಲ್ಲಿ ಜನಿಸಿದ ದಿನ. ನೀವು ಜೈಲಿನಿಂದ ಹೊರಹೋಗಲು ಬಯಸುವಿರಾ?” ಇದೇನು ಸಿನೆಮಾ ಡೈಲಾಗ್ ಅಲ್ಲ. ಅಥವಾ ಹೇಳಿದವರು ಸಿನಿಮಾ ತಾರೆಯು ಅಲ್ಲ. ಹೀಗೇಳಿದವರು ಸಾಕ್ಷಾತ್ ನಮ್ಮ ದೇಶದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ!
ಆಗಸ್ಟ್ 11 ರಂದು ದೇಶದಾದ್ಯಂತ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದ್ದು ಅಂದು ಭಾರತದ ಮುಖ್ಯ ನ್ಯಾಯಮೂರ್ತಿ ಪ್ರಕರಣವೊಂದನ್ನು ಆಲಿಸುವಾಗ ಅರ್ಜಿದಾರರಿಗೆ ಈ ಪ್ರಶ್ನೆಯನ್ನು ಕೇಳಿದ್ದಾರೆ.
ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾದ ಅಪರಾಧಿ ಧರ್ಮೇಂದ್ರ ವಾಲ್ವಿ ಎಂಬವರಿಂದ ಜಾಮೀನು ಅರ್ಜಿ ಸಲ್ಲಿಸಲಾಗಿದ್ದು, ಸಿಜೆಐ ಬಾಬ್ಡೆ ತಮ್ಮ ನ್ಯಾಯಾಲಯದ ವಿಚಾರಣೆಯ ಜಾಮೀನು ನೀಡುವ ಸಮಯದಲ್ಲಿ ಕೃಷ್ಣನ ಜನ್ಮದಿನದ ಕುರಿತು ಪ್ರಶ್ನೆ ಕೇಳಿದ್ದಾರೆ.
ಓದಿ: ಸಿಜೆಐ ಅಂದ್ರೆ ಸುಪ್ರೀಂ ಕೋರ್ಟ್ ಅಲ್ಲ: ನ್ಯಾಯಾಧೀಶರಿಗಿಂತ ನ್ಯಾಯಾಲಯ ದೊಡ್ಡದು – ಪ್ರಶಾಂತ್ ಭೂಷಣ್
ನನ್ನ ಕಕ್ಷಿದಾರನಿಗೆ ಜಾಮೀನು ಕೋರುತ್ತೇನೆ ಎಂದು ವಕೀಲರು ಉತ್ತರಿಸಿದಾಗ, ಮುಖ್ಯ ನ್ಯಾಯಮೂರ್ತಿ ಉತ್ತರಿಸುತ್ತಾ, “ಒಳ್ಳೆಯದು. ನೀವು ಧರ್ಮಕ್ಕೆ ಹೆಚ್ಚಾಗಿ ಅಂಟಿಕೊಂಡಿಲ್ಲ ಎಂದಿದ್ದಾರೆ.”
CJI SA Bobde: You want bail. Today Lord Krishna was born in jail. Do you want to leave jail?
Counsel: Yes.
CJI: Good. You are not extremely attached to religion.
— Murali Krishnan (@legaljournalist) August 11, 2020
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಧರ್ಮೇಂದ್ರ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು, 1994 ರಲ್ಲಿ ರಾಜಕೀಯ ಎದುರಾಳಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಅವರು ಮತ್ತು ಇತರ ಪಕ್ಷದ ಐವರು ಕಾರ್ಯಕರ್ತರ ಮೇಲೆ ಆರೋಪ ಹೊರಿಸಲಾಗಿತ್ತು.
ಮುಖ್ಯ ನ್ಯಾಯಮೂರ್ತಿ ಅರ್ಜಿದಾರರಿಗೆ ಜಾಮೀನು ನೀಡಿದ್ದು, ಜಾಮೀನು ಬಾಂಡ್ ಜೊತೆಗೆ ರೂ .25,000 ಮೊತ್ತದ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ದೇಶಿಸಲಾಗಿದೆ.
ಓದಿ: ಸರ್ಕಾರದ ಪರವಾಗಿ ರಫೇಲ್, ಅಯೋಧ್ಯಾ, ಸಿಬಿಐ ತೀರ್ಪು ನೀಡಿದ ನಂತರ ನಿಮಗೆ ರಾಜ್ಯಸಭಾ ಸ್ಥಾನ ಮತ್ತು ಝಡ್ ಶ್ರೇಣಿಯ ಭದ್ರತೆ ಸಿಗುತ್ತದೆ: ಇದರ ಅರ್ಥವೇನು?