Homeಅಂತರಾಷ್ಟ್ರೀಯಬಾಯ್ಕಟ್ ಚೀನಾ ಎಂಬ ಮಕ್ಕಳಾಟ: ಪ್ರಪಂಚವನ್ನು ಚೀನಾ ಆವರಿಸುತ್ತಿವುದು ಬಗೆ

ಬಾಯ್ಕಟ್ ಚೀನಾ ಎಂಬ ಮಕ್ಕಳಾಟ: ಪ್ರಪಂಚವನ್ನು ಚೀನಾ ಆವರಿಸುತ್ತಿವುದು ಬಗೆ

- Advertisement -
- Advertisement -

ಈಗ ದೇಶದಲ್ಲಿ ಸದ್ಯಕ್ಕೆ ಚೀನಾ ವಸ್ತುಗಳನ್ನು ಬಹಿಷ್ಕರಿಸಿ, ಬಾಯ್ಕಟ್ ಚೀನಾ, ಚೀನಾ ಮೊಬೈಲ್‌ ಆಪ್‌ಗಳನ್ನು ಅನ್‌ಇನ್ಸ್ಟಾಲ್‌ ಮಾಡಿ ಎಂಬ ಮಾತು ಎಲ್ಲ ಕಡೆಯಿಂದ ಕೇಳ್ತಾ ಇದ್ದಿವಿ. ಆದ್ರೆ ಇದು ವಾಸ್ತವದಲ್ಲಿ ಬರಿ APP ಗಳನ್ನು ಡಿಲೀಟ್‌ ಮಾಡಿ ಚೀನಾ ಕಟ್ಟಿ ಹಾಕಕ್ಕೆ ಸಾಧ್ಯನಾ? ಒಂದು ನಾವು ತಿಳ್ಕೊಬೇಕು ಚೀನಾ ದುಷ್ಟರಾಷ್ಟ್ರ ಅನ್ನೋದು ನಿಮ್ಮ ಅಭಿಪ್ರಾಯ ಆದ್ರೆ ಚೀನಾ ಮೂರ್ಖರಾಷ್ಟ್ರ ಅಲ್ಲ ಅನ್ನೋದು ಕೂಡ ಸತ್ಯ.

ಜೇಮ್ಸ್‌ ಬಾಂಡ್‌ನ SPECTRE ಸಿನಿಮಾದಲ್ಲಿ ಒಂದು ಡೈಲಾ‌ಗ್‌ ಇದೆ. WHERE ARE THEY? THEY ARE EVERY WHERE (ಎಲ್ಲಿದ್ದಾರೆ ಅವರು ಎಂದರೆ, ಅವರು ಎಲ್ಲಾ ಕಡೆ ಇದ್ದಾರೆ) ಅಂತ. ಅದೇ ತರ ಚೀನಾ ಹೂಡಿಕೆ ￰ಮಾಡದ ದೇಶ ಆಗಲಿ, ಕ್ಷೇತ್ರವಾಗಲಿ ಇಲ್ಲ ಅಂತ ಹೇಳಬಹುದು. ಒಂದು ಕಾಲದಲ್ಲಿ ಚೀನಾ ಅಂದ್ರೆ ಡುಪ್ಲಿಕೇಟ್‌ ಗೊಂಬೆ ಮಾಡೋರು, ಹಾವು, ಚೇಳು ತಿನ್ನೋ ದೇಶ ಅಂತ ಕರೀತಾ ಇದ್ರೂ ಆದ್ರೆ ಈಗ ಕಾಲ ಬದಲಾಗಿದೆ. ಚೀನಾ ತನ್ನ ಕಬಂದ ಬಾಹುಗಳಿಂದ ಪ್ರಪಂಚದ ಬಹುಪಾಲು ದೇಶವನ್ನ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದೆ.

ಚೀನಾ ಹೇಗೆ ತನ್ನ ಅಧಿಪತ್ಯ ಸಾಧಿಸುತ್ತಿದೆ ಅಂದ್ರೆ, ಒಬ್ಬ ವ್ಯಕ್ತಿಗೆ 10,000₹ ಅವಶ್ಯಕತೆ ಇದ್ರೆ ಅವನಿಗೆ ಒಂದು ಲಕ್ಷ ಸಾಲ ಕೊಡುತ್ತೆ. ಬಹುಪಾಲು ಜನ ಹಾಗೆ ಸಾಲ ಮಾಡಿ ಹಾಳು ಮಾಡ್ಕೊಂಡು ಸಾಲಗಾರರಾಗ್ತಾರೆ ಮತ್ತೆ ತೀರಿಸಕ್ಕೆ ಆಗದೆ ಶರಣಾಗ್ತಾರೆ. ಅದೇ ಫಾರ್ಮುಲಾ ಚೀನಾ ಕೆಲವು ಬಡ ದೇಶಗಳ ಪ್ರಯೋಗ ಮಾಡಿ ಯಶಸ್ವೀ ಆಗಿದೆ. ಇದನ್ನು ಮೊದಲು ಮಾಡಿ ಯಶಸ್ವಿಯಾಗಿದ್ದು ಅಮೆರಿಕ. ಈಗ ಚೀನಾ ಸರ್ಕಾರ ತಾನು ಸಾಲ ಕೊಟ್ಟ ರಾಷ್ಟ್ರಗಳಲ್ಲಿನ ಕಂಪನಿಗಳಲ್ಲಿ ಒಂದು ಭಾಗ ಹೂಡಿಕೆ ಮಾಡುತ್ತದೆ. ಯಾವುದೇ ರಾಷ್ಟ್ರದಲ್ಲಿ ಅದು ಹೂಡಿಕೆ ಮಾಡಿದ್ರೆ ಚೀನಾ ಸರ್ಕಾರ ಆ ದೇಶದ ಪಾಲುದಾರ ಎಂದರ್ಥ.

ಚೀನಾವು ಆಫ್ರಿಕಾ ಖಂಡದಲ್ಲಿ 2005 ರಿಂದ 2019 ರವರೆಗೆ 360 ಬಿಲಿಯನ್ ಡಾಲರ್‌ ಅಂದ್ರೆ ಸರಿ ಸುಮಾರು 23 ಲಕ್ಷ ಕೋಟಿಯಷ್ಟು ಹಣ ಹೂಡಿಕೆ ಮಾಡಿದೆ. (ಭಾರತದ ಕೊರೊನಾ ಪ್ಯಾಕೇಜ್‌ಗಿಂತಲೂ ಹೆಚ್ಚು). ಅದು ಕೃಷಿ, ಮೂಲಸೌಕರ್ಯ, ರಿಯಲ್‌ ಎಸ್ಟೇಟ್‌, ಪ್ರವಾಸೋಧ್ಯಮ, ಟೆಲಿಕಾಂನಿಂದ ಹಿಡಿದು ಎಲ್ಲ ರಂಗಗಳಲ್ಲೂ ಅವರ ಪಾಲು ಇದೆ. ಆಫ್ರಿಕಾ ದೇಶದ 2G, 3G ಮತ್ತೆ 4G ಸೇವೆಗಳಲ್ಲಿ ￰ಅರ್ಧದಷ್ಟು ನೀಡಿದ್ದು ಚೀನಾದ ದೈತ್ಯ HUAWEI ಕಂಪನಿ. ಈಗ 5G ಕೂಡ ಕೊಡಕ್ಕೆ ಸಿದ್ಧತೆ ಮಾಡಿಕೊಂಡಿದೆ. ಆಫ್ರಿಕ ಒಕ್ಕೂಟದ ಮುಖ್ಯ ಕಚೇರಿ ಇರೋದು ಇಥಿಯೋಪಿಯಾದಲ್ಲಿ. ಅದರ ಕಟ್ಟಡ ಕಟ್ಟಿಕೊಟ್ಟಿದ್ದು ಇದೆ ಚೀನಾ. ಅದು ಕೂಡ ಕೊಡುಗೆ ಆಗಿ. ಏನು ಲಾಭ ಇಲ್ಲದೆ ಯಾರು ಕೂಡ ಉಚಿತವಾಗಿ ಏನು ಕೊಡಲ್ಲ ಅನ್ನೋದು ಅಮೇರಿಕಾ ದೇಶದ ಅನುಮಾನ. ಅದಕ್ಕೆ HUAWEI ಕಂಪನಿ ಆಫ್ರಿಕಾ ಒಕ್ಕೂಟದ ಮುಖ್ಯ ಕಚೇರಿಯಿಂದ ರಹಸ್ಯ ಮಾಹಿತಿ ಶಾಂಗೈ ತಲುಪಿಸ್ತಾರೆ ಅಂತ ಅಮೆರಿಕ ಆರೋಪಿಸಿದೆ. ಆದರೆ ಆಫ್ರಿಕಾ ಒಕ್ಕೂಟ ಇದನ್ನ ನಿರಾಕರಿಸಿ ಚೀನಾ ಜೊತೆ ನಿಂತಿದೆ ಅಂದ್ರೆ ಚೀನಾ ಇನ್ಯಾವ ಮಟ್ಟಕ್ಕೆ ಆಫ್ರಿಕಾನಾ ನಿಯಂತ್ರಣ ಮಾಡುತ್ತೆ ಅನ್ನೋದು ಅರ್ಥ ಮಾಡ್ಕೋಬಹುದು.

ಇನ್ನು ಏಷ್ಯಾದಲ್ಲೂ ಚೀನಾ ತನ್ನ ಪಾರುಪತ್ಯ ಸ್ಥಾಪಿಸಿದೆ. ಅದು ಪಾಕಿಸ್ತಾನಕ್ಕೆ ಮೂಲಸೌಕರ್ಯಕ್ಕೋಸ್ಕರ 60 ಬಿಲಿಯನ್ ಡಾಲರ್‌ ಸಾಲ ಕೊಟ್ಟಿದೆ. ಶ್ರೀಲಂಕಾಗೇ ಎಷ್ಟು ಸಾಲ ಕೊಟ್ಟಿದೆ ಅಂದ್ರೆ ಕೊಟ್ಟ ಸಾಲ ವಾಪಾಸ್ ಕೊಡಕ್ಕೆ ಆಗದ ಶ್ರೀಲಂಕಾ HAMBANTOTA ಬಂದರು ಅನ್ನು ಚೀನಾಗೆ 99 ವರ್ಷ ಗುತ್ತಿಗೆಗೆ ಕೊಟ್ಟಿದ್ದಾರೆ. ಇನ್ನು ಮಾಲ್ಡಿವ್ಸ್ ಕೂಡ ಇದಕ್ಕೆ ಹೊರತಾಗಿಲ್ಲ. ಇದರ ಮುಂದುವರೆದ ಭಾಗವಾಗಿ ಮೊನ್ನೆ ನೇಪಾಳ 150 ವರ್ಷ ಹಳೆ ಗಡಿ ಕ್ಯಾತೆ ತೆಗೆದು ಹೊಸ ಭೂಪಟ ಬಿಟ್ಟಿದ್ದು ಇದರ ಹಿಂದೆ ಚೀನಾ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ.

ಇನ್ನು ವಿಯೆಟ್ನಾಂ, ಥೈಲ್ಯಾಂಡ್, ಇಂಡೋನೇಷಿಯಾ, ಸಿಂಗಾಪೂರ್‌, ಮಲೇಷ್ಯಾ, ಕಾಂಬೋಡಿಯಾದಲ್ಲೂ ಚೀನಾ ಸಾಕಷ್ಟು ಮಾಡಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಕಾಂಬೋಡಿಯಾ ದೇಶ ತನ್ನ ದೇಶದ ಕರಾವಳಿ ಜಾಗವನ್ನ 99 ವರ್ಷ ಗುತ್ತಿಗೆಗೆ ಕೊಟ್ಟಿದೆ. ಅಲ್ಲಿ ಪ್ರವಾಸಿತಾಣ ಮಾಡ್ತೀವಿ ಅಂತ ಹೇಳಿದ್ರು ಅಲ್ಲಿ ರಹಸ್ಯವಾಗಿ ಆರ್ಮಿ ಬೇಸ್‌ ಮಾಡ್ತಾ ಇದ್ದಾರೆ ಅಂತ ಅಮೆರಿಕಾ ಆರೋಪಿಸಿದೆ. ಈ ಸಮುದ್ರ ತೀರ 3 ದೇಶಗಳ ಗಡಿಯಾಗಿದ್ದು, ಮುಂದೊಂದು ದಿನ ಆರ್ಮಿ ಬೇಸ್‌ ಆಗುವುದರಲ್ಲಿ ಸಂಶಯವಿಲ್ಲ.

ಚೀನಾ ಬರಿ ಬಡ ದೇಶಗಳಷ್ಟೇ ಅಲ್ಲದೆ ಮುಂದುವರೆದ ದೇಶಗಳಾದ ಯೂರೋಪ್‌ ದೇಶಗಳಲ್ಲಿ, ಅಮೆರಿಕಾದಲ್ಲಿ ಹೂಡಿಕೆ ಮಾಡಿದೆ.

ಇನ್ನು ನಮ್ಮ ದೇಶದಲ್ಲಿ 2014ರ ವರೆಗೆ ಚೀನಾ ಹೂಡಿಕೆ ಅಷ್ಟೇನೂ ಇರಲಿಲ್ಲ. ಆದ್ರೆ ಯಾವಾಗ FDI ಗೆ ಅವಕಾಶ ದೊರಕಿತೋ, 50%,75% ಹೂಡಿಕೆ ಮುಕ್ತವಾಯಿತೋ ಚೀನಾ ಇಲ್ಲೂ ದಾಳಿ ಮಾಡಕ್ಕೆ ಶುರು ಮಾಡಿತು. ಅದು ಎಷ್ಟರ ಮಟ್ಟಿಗೆ ಅಂದ್ರೆ 4 ಬಿಲಿಯನ್‌ ಡಾಲರ್‌ ಹಣವನ್ನು ಕೇವಲ ಸ್ಟಾರ್ಟಪ್‌ ಕಂಪನಿಗಳ ಮೇಲೆ ಚೀನಾದ ದೈತ್ಯ ಕಂಪನಿಗಳಾದ ALIBABA, ByteDance,Tencent ಮೂಲಕ ಹೂಡಿಕೆ ಮಾಡಿದೆ. ಒಟ್ಟು 92 ಭಾರತದ ಸ್ಟಾರ್ಟಪ್‌ ಕಂಪನಿಗಳಲ್ಲಿ ಚೀನಾದ ಹೂಡಿಕೆಯಿದೆ.

ನಾವು ಬಾಯ್ಕಟ್ ಚೀನಾ ಎನ್ನುತ್ತಿದ್ದರೆ ಅದೇ ಚೀನಾ ನಮ್ಮ ದೇಶದಲ್ಲಿ 2 ಲಕ್ಷ ಕೋಟಿಗಿಂತ ಹೆಚ್ಚು ಹಣವನ್ನು ನೇರ ಹೂಡಿಕೆ ಮಾಡಿದೆ. Xiaomi, Oppo, VIVO, Redmi, Oneplus ಮುಂತಾದ ಚೀನಾ ಕಂಪನಿಗಳ ಮೊಬೈಲ್‌ಗಳು ದೇಶದ 66% ಮಾರುಕಟ್ಟೆಯನ್ನು ಹೊಂದಿವೆ. ಮತ್ತೆ PayTM ಅನ್ನು ನಮ್ಮ ಸರ್ಕಾರನೇ ಪ್ರಮೋಟ್‌ ಮಾಡಿದೆ. ಇನ್ನು ಅಮಿತ್ ಶಾ ಮಗ ಜೈ ಶಾ ಕಾರ್ಯದರ್ಶಿ ಆಗಿರೋ BCCI ಮಂಡಳಿ ತನ್ನ ಆಟಗಾರರ T-SHIRT ಮೇಲೆ ಇರೋ ಲೋಗೊ BYJU ಕೂಡ ಚೀನಾಯಿಂದ ಹೂಡಿಕೆ ಸ್ವೀಕರಿಸಿದೆ!

ಈಗ ಇವುಗಳನ್ನು ಡಿಲೀಟ್‌ ಮಾಡೋರು ಯಾರು ? ಇನ್ನು AIRTEL, IDEA, VODAFONE ಕಂಪನಿಗಳು 5G TRIALಗೋಸ್ಕರ HUAWEI ಕಂಪನಿ ಜೊತೆ ಕೈಜೋಡಿಸಿವೆ. ಇನ್ನು ಚೀನಾವು ಹಾಂಕ್‌ಕಾಂಗ್‌, ಸಿಂಗಾಪುರ ಮೂಲಕ ಕಂಪನಿಗಳ ಮೂಲಕ ಭಾರತದಲ್ಲಿ ಹೂಡಿಕೆ ಮಾಡಿರೋ ಹಣಕ್ಕೆ ಲೆಕ್ಕವೇ ಇಲ್ಲ. ಈಗ ಚೀನಾ ಮೇಲಿನ ಸಿಟ್ಟಿಗೆ ಒಂದಷ್ಟು ಅಮೆರಿಕಾದ ಕಂಪನಿಗಳು ಚೀನಾಯಿಂದ ಹೊರಗೆ ಬರ್ತಾ ಇದೆ. ಆದ್ರೆ ಅದ್ರಲ್ಲಿ ಎಷ್ಟು ಬರುತ್ತಿವೆ ಎಂದರೆ ಬಹಳ ಕಡಿಮೆ.

ಹಲವು ಗಾರ್ಮೆಂಟ್ಸ್‌ಗಳು ಬಾಂಗ್ಲಾದೇಶಕ್ಕೆ ಹೋಗುತ್ತಿವೆ. ಹಲವು ಉತ್ಪಾದಕ ಕಂಪನಿಗಳು ವಿಯೆಟ್ನಾಂಗೆ, ಶೂ ಕಂಪನಿಗಳು ಇಥಿಯೋಪಿಯಾಗೆ ಹೋಗುತ್ತಿದ್ದರೆ ನಾವಿಲ್ಲ TIKTOK ಮತ್ತು ಚೀನಾ APP DELETE ಮಾಡ್ತಾ ಇದ್ದಿವಿ. ಬಾಯ್ಕಟ್ ಚೀನಾ ಅಂತ ಬೊಬ್ಬೆ ಹೊಡೆಯುತ್ತಿದ್ದೇವೆ. ಚೀನಾಯಿಂದ ಹೊರಗೆ ಹೋಗ್ತಾ ಇರೋ ಕಂಪನಿಗಳು ಯಾಕೆ ಭಾರತಕ್ಕೆ ಬರುತ್ತಿಲ್ಲ ಎಂದರೆ ಇಲ್ಲಿ ಸ್ಕಿಲ್ ಇರೋ ಜನ ಕಡಿಮೆ ಎನ್ನುತ್ತಿದ್ದಾರೆ.

2003 ರಿಂದ 2015 ರವರೆಗೆ ದೇಶ ಆರ್ಥಿಕವಾಗಿ ಮುಂದೆ ಹೋಗ್ತಾ ಇತ್ತು. ಆದ್ರೆ ಯಾವಾಗ ನೋಟು ಅಮಾನ್ಯೀಕರಣ ಆಯಿತೋ, ಜಿಎಸ್‌ಟಿ ಬರೆ ಬಿದ್ದಿತೋ 2016 ರಿಂದ ಆರ್ಥಿಕತೆ ಹಿಮ್ಮುಕವಾಗಿ ಓಡ್ತಾ ಇದೆ. ಅದರ ಪರಿಣಾಮ 40 ವರ್ಷದಲ್ಲೇ ಅತಿ ಹೆಚ್ಚು ನಿರುದ್ಯೋಗ ಹೆಚ್ಚಿದರೆ GDP ￰ಸತತವಾಗಿ ಬೀಳ್ತಾ ಇದೆ. ಮುಂದಿನ ದಿನಗಳಲ್ಲಿ NEGETIVE GDP ಬರಬಹುದು ಅಂತ ಅಂತಾರಾಷ್ಟ್ರೀಯ ಆರ್ಥಿಕ ತಜ್ಞರ ಅಭಿಪ್ರಾಯ.

ಹಾಗಂತ ನಮಗೆ ಇದರಿಂದ ಆಚೆ ಬರಕ್ಕೆ ಸಾಧ್ಯ ಇಲ್ಲ ಅಂತಲ್ಲ ಸರ್ಕಾರ ಮಾಡಬೇಕಿರೋದು ನಮ್ಮ ದೇಶದಲ್ಲಿ ಇರೋ ಅತ್ಯತ್ತಮ ಆರ್ಥಿಕ ತಜ್ಞರ ಮಾತು ಕೆಳಕ್ಕೆ ಕಿವಿ ಕೊಡಬೇಕು ಅಷ್ಟೇ. ಪ್ರಪಂಚದ ಯಾವ ದೇಶದಲ್ಲೂ ಕೂಡ ನಮ್ಮ ದೇಶದಷ್ಟು ಯುವಕರಿಲ್ಲ. ಅವರನ್ನ ಸರಿಯಾಗಿ ಬಳಸಿಕೊಳ್ಳಬೇಕು ಅಷ್ಟೇ. ಅತ್ಯುತ್ತಮ ಶಿಕ್ಷಣ ನೀಡಿ ತಾಂತ್ರಿಕತೆಯಲ್ಲಿ ವಿಜಯ ಸಾಧಿಸಬೇಕು. ಸದ್ಯಕ್ಕೆ ರಾಜಕೀಯ, ದ್ವೇಷ ಬಿಟ್ಟು ದೇಶ ಕಟ್ಟಬೇಕು. ಮತ್ತೆ ಈಗಿನ ಜನ ತಿಳ್ಕೊಬೇಕಾಗಿರೋದು ದೇಶದ ಜೊತೆ ನಿಲ್ಲೋದು ಅಂದ್ರೆ ವ್ಯಕ್ತಿ ಜೊತೆ ನಿಲ್ಲೋದಲ್ಲ,ಯಾರೇ ತಪ್ಪು ಮಾಡಿದ್ರು ಪ್ರಶ್ನೆ ಮಾಡಬೇಕು. ಅದು ಬಿಟ್ಟು ಪ್ರಶ್ನೆ ಮಾಡೋರನ್ನೇ ದೇಶದ್ರೋಹಿ ಅನ್ನಬಾರದು. ದೇಶಾಭಿಮಾನ ಅಂದ್ರೆ ದೇಶದ ಪ್ರತಿಯೊಬ್ಬರನ್ನು ಪ್ರೀತಿಸೋದು ಮತ್ತೆ ದೇಶದ ಏಳಿಗೆಗೆ ಶ್ರಮಿಸೋದು. ಇಷ್ಟು ಮಾಡಿದರೆ ನಾವು ಖಂಡಿತ ವಿಶ್ವ ಗುರು ಆಗ್ತಿವಿ. ಇಲ್ಲ ನಾವು ಜಾತಿ, ಧರ್ಮ ಅಂತ ಕಿತ್ತಾಡ್ತಾ ಇರ್ತೀವಿ ಅಂದ್ರೆ ದೇಶಕ್ಕೆ ಬಾರಿ ಗಂಡಾಂತರ ತಪ್ಪಿದ್ದಲ್ಲ.


ಇದನ್ನೂ ಓದಿ: ಬಾಯ್ಕಟ್‌ ಚೀನಾ ಅಭಿಯಾನ: ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಗೊತ್ತೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...