Homeಕರ್ನಾಟಕಅಮಾಯಕ ಹಿಂದೂ ಹುಡುಗ ಶ್ರೇಯಸ್ ಸಾವಿಗೆ ಭಜರಂಗಿಗಳು ಕಾರಣರೇ? 

ಅಮಾಯಕ ಹಿಂದೂ ಹುಡುಗ ಶ್ರೇಯಸ್ ಸಾವಿಗೆ ಭಜರಂಗಿಗಳು ಕಾರಣರೇ? 

- Advertisement -
- Advertisement -

“ನನ್ನ ಮಗ ಯಾರ ತಂಟೆಗೂ ಹೋಗೋನಲ್ಲ… ಮನೆಯ ಜಗುಲಿ ಮೇಲೆ ತನ್ನ ಪಾಡಿಗೆ ತಾನು ಕುಳಿತಿದ್ದವನನ್ನು ಬಿಜೆಪಿಯ ಪಾತಕ ಸ್ವಭಾವದ ಇಬ್ಬರು ಪುಢಾರಿಗಳು ಪ್ಲಾನ್‌ಮಾಡಿ ಏಳು ಕಿ.ಮೀ ದೂರದ ದುರ್ಗಮ ಕಾಡಿನ ಹೊಳೆ ಹತ್ತಿರ ಕರೆದೊಯ್ದು ಕಗ್ಗೊಲೆ ಮಾಡಿದ್ದಾರೆ… ಅಲ್ಲಿಗೆ ಹೋಗಲು ಸರಿಯಾದ ದಾರಿಯೂ ಇಲ್ಲ…. ಏಳೆಂಟು ಅಡಿಯಷ್ಟು ಆಳ ನೀರು ಹರಿವ ಆ ಹೊಳೆಗೆ ಮೀನು ಹಿಡಿಯಲಿಕ್ಕೂ ಯಾರೂ ಹೋಗೋದಿಲ್ಲ…. ಅಂಥ ಕಡೆ ನನ್ನ ಮಗನ ಕರೆದೊಯ್ದು ಕೊಂದು ಹಾಕಿದ್ದಾರೆ…. ನನ್ನ ಮನೆ ದೀಪವೇ ಆರಿಹೋಗಿದೆ…” ಎಂದು ಆ ತಾಯಿ ಭೋರೆಂದು ಬಿಕ್ಕಳಿಸುವಾಗ ಎಂಥವರ ಕರುಳು ಚುರ್ ಅನ್ನದೇ ಇರದು!!

ಆಕೆ ಬ್ರಹ್ಮಾವರ ತಾಲ್ಲೂಕಿನ ಹೊಸೂರು ಗ್ರಾಮದ ಕುರ್ಪಾಡಿಯಲ್ಲಿ ಬೀಡಿ ಕಟ್ಟಿ ಬದುಕು ಸಾಗಿಸುವ ಶೋಭಾ ಶೇರ್ವೆಗಾರ್. ಗಂಡನಿಗೆ ಅನಾರೋಗ್ಯ, ಇರುವ ಚೂರುಪಾರು ಬಂಗಾರ ಗಿರವಿಯಿಟ್ಟು, ಕೂಲಿ ಮಾಡಿ ತನ್ನೆರಡು ಮಕ್ಕಳನ್ನು ಓದಿಸುತ್ತಿದ್ದ ಆಕೆ ಹಿರಿಯ ಮಗ ಶ್ರೇಯಸ್‌ನನ್ನು ಅನ್ಯಾಯವಾಗಿ ಕಳಕೊಂಡ ನೋವಿನಲ್ಲಿ ಜರ್ಜರಿತಳಾಗಿಹೋಗಿದ್ದಾಳೆ. ವಯಸ್ಸಿನಲ್ಲಿ ಶ್ರೇಯಸ್‌ಗಿಂತ ಎರಡು ಪಟ್ಟು ದೊಡ್ಡವನಾದ ಸದಾನಂದ ಪೂಜಾರಿ ಮತ್ತಾತನ ಶಿಷ್ಯ ಯೋಗೀಶ್ ಪೂಜಾರಿ ಎಂಬ ರೌಡಿಗಳೇ ಕೊಲೆ ಮಾಡಿದ್ದಾರೆಂದು ಆಕೆ ನೇರಾನೇರ ಹೇಳುತ್ತ ಬಾಯ್ಬಾಯಿ ಬಡಿದುಕೊಳ್ಳುತ್ತಿದ್ದಾಳೆ. ಈ ಇಬ್ಬರೂ ಪಕ್ಕಾ ಭಜರಂಗಿ ಭೂಪರು ಹಲವು ದೋನಂಬರ್ ದಂಧೆ-ದೊಂಬಿಯ ಈ ಧೀರರ ಬಗ್ಗೆ ಕರ್ಜೆ-ಕಳ್ತೂರು, ಹೊಸೂರು ಪರಿಸರದಲ್ಲಿ ಯಾರೊಬ್ಬರಲ್ಲೂ ಒಳ್ಳೆಯ ಅಭಿಪ್ರಾಯವಿಲ್ಲ.

ಸದಾನಂದ ಪೂಜಾರಿ

ಆ ತಾಯಿ ಆರೋಪಿಸುತ್ತಿರುವ ಸದಾನಂದ ಪೂಜಾರಿ ಯಾರು ಎಂದು ಹುಡುಕಿದರೆ ಗಾಬರಿಯಾಗುತ್ತದೆ. ಹುಡುಗಿಯರಂತೂ ಸದಾನಂದ ಪೂಜಾರಿಯ ನೆರಳು ಕಂಡರೇ ಸಾಕು, ದೂರದಲ್ಲೇ ಅದೃಶ್ಯರಾಗಿ ಬಿಡುತ್ತಾರೆ. ಇಂಥ ಸದಾನಂದ ಪೂಜಾರಿಯ ದಾದಾಗಿರಿ ಯಾವ ರೇಂಜಿಗಿದೆಯೆಂದರೆ, ಕೌಬ್ರಿಗೇಡ್, ಅನೈತಿಕ ಪೊಲೀಸ್ ಪಡೆಯೂ ಆತ ಖತರ್‌ನಾಕ್ ಅಂತಲೇ ಬ್ರಾಂಡ್ ಮಾಡಿಬಿಟ್ಟಿದೆ!! ಆದರೆ ಪೊಲೀಸರು ಮಾತ್ರ ಅದ್ಯಾಕೋ ಸುಮ್ಮನಿದ್ದಾರೆ. ಖಡಕ್ ಎಸ್ಪಿ ನಿಶಾ ಜೇಮ್ಸ್‌ಗೂ ಏನು ಮಾಡೋದಂತಲೇ ಹೊಳೆಯುತ್ತಿಲ್ಲ. ಉಡುಪಿ-ಬ್ರಹ್ಮಾವರದ ಶಾಸಕ ರಂಗೀಲಾ ರಘುಪತಿಭಟ್ಟನ ಅತ್ಯಾಪ್ತ ಸರ್ಕಲ್ಲಿನ ಧಾಂಡಿಗ ಈ ಸದಾನಂದ ಪೂಜಾರಿ ಎಂಬುದೇ ಪೊಲೀಸರ ಕೈಕಟ್ಟಿಹಾಕಿಬಿಟ್ಟಿದೆಯೆಂದು ಜನರಾಡಿಕೊಳ್ಳುತ್ತಿದ್ದಾರೆ…….

ಯೋಗೇಶ್

ಅಂದು ನವೆಂಬರ್ ಐದನೇ ತಾರೀಖು ಮಧ್ಯಾಹ್ನ 12;30ರ ಸುಮಾರಿಗೆ ಪಕ್ಕದ ಮನೆಯ ರಾಕೇಶ್ ಎಂಬ ಹುಡುಗ ಬಂದು ಮೀನು ಹಿಡಿಯಲು ಹೋಗೋಣ ಎಂದು ಶ್ರೇಯಸ್‌ನ ಕರೆದಿದ್ದಾರೆ. ಇಲ್ಲ ನಂಗೆ ಓದೋದಿದೆ ಎಂದು ಹೇಳಿದ್ದಾನೆ ಶ್ರೇಯಸ್. ಒತ್ತಾಯ ಮಾಡಿ ತನ್ನ ಬೈಕಲ್ಲಿ ರಾಕೇಶ್ ಆತನ ಕರೆದುಕೊಂಡು ಮುಡಿಸಾಲು ಹೊಳೆಬಳಿ ಹೋಗಿದ್ದಾನೆ. ಅಲ್ಲಿ ಸದಾನಂದ ಪೂಜಾರಿ ತನ್ನ ಚೇಲಾ ಯೋಗೀಶ್ ಜೊತೆ ತೋಟೆ (ಸ್ಫೋಟಕ) ಹಾಕಿ ಮೀನು ಹಿಡಿಯುತ್ತಿರುತ್ತಾನೆ. ಕೆಲದಿನಗಳ ಹಿಂದೆ ಸಂತೆಕಟ್ಟೆಯಲ್ಲಿ ನಡೆದ ಶಾರದೋತ್ಸವ ಮೆರವಣಿಗೆ ಸಂದರ್ಭದಲ್ಲಿ ಶ್ರೇಯಸ್ ಮತ್ತವನ ಗೆಳೆಯರ ಮೇಲೆ ವಿನಾಕಾರಣ ಮುಗಿಬಿದ್ದಿದ್ದ ಸದಾನಂದ ಪೂಜಾರಿ-ಯೋಗೀಶ್ ಪೂಜಾರಿ ಕಂಡಾಗ ಆತ ಗಾಬರಿಗೆ ಬಿದ್ದಿರಬೇಕು. ಯಾಕೆ ಉಪಾಯವಾಗಿ ರಾಕೇಶ್ ತನ್ನನ್ನು ವೈರಿಗಳ ಕೈಗೆ ಕೊಡುತ್ತಿದ್ದಾನೆಂಬ ಭಯಕ್ಕೂ ಬಿದ್ದಿರಲೇಬೇಕು.

ಹುಡುಗಿ ಒಬ್ಬಳ ವಿಷಯವಾಗಿ ಸದಾನಂದ ಪೂಜಾರಿ ಮತ್ತು ಶ್ರೇಯಸ್ ನಡುವೆ ವೈಮನಸ್ಸು ಬೆಳೆದಿತ್ತು. ಸುರಸುಂದರಾಂಗನೂ, ಪ್ರತಿಭಾನ್ವಿತ ವಿದ್ಯಾರ್ಥಿಯೂ, ಪ್ರಸಿದ್ಧ ವಾಲಿಬಾಲ್ ಪಟುವೂ ಆಗಿದ್ದ ಶ್ರೇಯಸ್‌ಗೆ ಬುಡಕಟ್ಟು ಸಮುದಾಯದ ಚೆಂದದ ಸಹಪಾಠಿ ಜತೆ ಅನ್ಯೋನ್ಯ ಗೆಳೆತನವಿತ್ತು. ಆ ಬಡವರ ಮನೆ ಹುಡುಗಿ ಮೇಲೆ ಸದಾನಂದ ಕಣ್ಣುಹಾಕಿದ್ದ. ಹೇಗಾದರೂ ಮಾಡಿ ಆಕೆಯನ್ನು ತನ್ನ ಅಡ್ಡೆಗೆ ತಂದುಬಿಡುವಂತೆ ಶ್ರೇಯಸ್‌ಗೆ  ಆತ ಒತ್ತಡ ಹಾಕುತ್ತಲೇ ಇದ್ದ. ಇದೇ ಕಾರಣಕ್ಕೆ ಶಾರದೋತ್ಸವ ಹೊತ್ತಲ್ಲಿ ಶ್ರೇಯಸ್‌ಗೆ ಹೆದರಿಸಲು ಸದಾನಂದ ಗ್ಯಾಂಗ್ ಕಟ್ಟಿಕೊಂಡುಹೋಗಿದ್ದ. ಶ್ರೇಯಸ್‌ನ ಪಳಗಿಸಲು ವಿಫಲವಾಗಿದ್ದ ಸದಾನಂದ ಆತನ ಮನ ಒಲಿಸಲಿಕ್ಕೋ ಅಥವಾ ಬೆದರಿಸಲಿಕ್ಕೋ ಭೀಭತ್ಸ ಹೊಳೆ ಹತ್ತಿರ ಕರೆಸಿಕೊಂಡಿದ್ದನಾ ಎಂಬ ಅನುಮಾನ ಊರಲ್ಲಿ ಮಡುಗಟ್ಟಿದೆ.

ಹೊಳೆಯಿಂದ ಹೊರತಂದ ಶ್ರೇಯಸ್‌ನ ಮೃತದೇಹ ಕಂಡವರಿಗೆ ಅದು ನೀರಿಗೆ ಬಿದ್ದು ಸಾವು ಅನ್ನಿಸುತ್ತಿಲ್ಲ. ಕೊಲೆ ಎಂಬ ಅನುಮಾನ ಮೂಡಲು ಇದಕ್ಕೆ ಬಲವಾದ ಸಾಂದರ್ಭಿಕ ಸಾಕ್ಷ್ಯಗಳೂ ಇವೆ. ತಾವು ನೀರಿಗೆ ಬಿದ್ದ ಶ್ರೇಯಸ್‌ನ ಬಚಾಯಿಸಲು ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ ಎನ್ನುತ್ತಿರುವ ಸದಾನಂದ ಮತ್ತು ಯೋಗೀಶನ ಬಟ್ಟೆ ಒಂಚೂರು ಒದ್ದೆಯಾಗಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಶ್ರೇಯಸ್‌ನ ಕುತ್ತಿಗೆಯಲ್ಲಿ ಗಾಯದ ಗುರುತೂ ಇತ್ತು. ನಡುವಯಸ್ಸಿಗೆ ಹತ್ತಿರವಿರುವ ಸದಾನಂದನೊಂದಿಗೆ ಹತ್ತೊಂಬತ್ತರ ಪೋರ ಶ್ರೇಯಸ್‌ಗೆ ಮೀನು ಹಿಡಿಯಲು ಜತೆಯಾಗಿ ಹೋಗುವಂತ ದೋಸ್ತಿ ಇರಲು ಸಾಧ್ಯವೇ ಇಲ್ಲ. ಅಲ್ಲದೆ ಹುಡುಗಿ ವಿಷಯವಾಗಿ ಸದಾನಂದ ಸತಾಯಿಸಲು ಶುರುಮಾಡಿದ ನಂತರವಂತೂ ಶ್ರೇಯಸ್ ಆತನ ಫೋನ್ ಕಾಲ್ ಕೂಡ ಸ್ವೀಕರಿಸದೆ ಅವಾಯ್ಡ್ ಮಾಡುತ್ತಿದ್ದನಂತೆ ಎನ್ನುವ ಅವನ ಸ್ನೇಹಿತರು ಶ್ರೇಯಸ್‌ನ ಹೆಣ ಕಂಡ ಹತ್ತಿರದವರು ಆತ ನೀರೇ ಕುಡಿದಿಲ್ಲವೆಂದು ದೃಢವಾಗಿ ಹೇಳುತ್ತಾರೆ.

ಇದೆಲ್ಲ ಸಹಜವಾಗೇ ಕೊಲೆಯ ಶಂಕೆ ಮೂಡಿಸುತ್ತದೆ. ಹೆಣಸಿಕ್ಕ ನಂತರ ಬ್ರಹ್ಮಾವರದ ಪೊಲೀಸರ ವರ್ತನೆಯೂ ಏನೋ ಮುಚ್ಚಿಹಾಕಲು ತಿಣುಕಾಡುತ್ತಿರುವಂತಿದೆ. ಮಣಿಪಾಲದಲ್ಲಿ ಪೋಸ್ಟ್ಮಾರ್ಟಮ್ ನಡೆಯುತ್ತಿದ್ದಾಗ ಸಬ್‌ಇನ್ಸ್ಪೆಕ್ಟರ್ ರಾಘವೇಂದ್ರ ವೈದ್ಯರ ಬಳಿಯೇ ಇದ್ದದ್ದು ಏಕೆ? ಪ್ರಕರಣ ನಡೆದು ಎರಡು ವಾರವಾದರೂ ಪೊಲೀಸರೇಕೆ ಹುಡುಗನ ತಾಯ್ತಂದೆಯ ಹೇಳಿಕೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ? ಶಾಸಕ ರಘುಪತಿ ಭಟ್ಟರ ರಹಸ್ಯ ನಿರ್ದೇಶನ ಪೊಲೀಸರು ಪಾಲಿಸುತ್ತಿದ್ದಾರಾ? ಸದಾನಂದ ಪೂಜಾರಿಯ “ಇತಿಹಾಸ” ಗೊತ್ತಿದ್ದೂ ಪೊಲೀಸರೇಕೆ ಕಾನೂನಿನ ಕುಣಿಕೆ ಬಿಗಿಮಾಡುತ್ತಿಲ್ಲಾ? ಇಂಥ ಚರ್ಚೆ ಈಗ ಉಡುಪಿ-ಬ್ರಹ್ಮಾವರದಾದ್ಯಂತ ಬಿರುಸಾಗಿ ಸಾಗಿದೆ.

ಶ್ರೇಯಸ್‌ನ ಸಂಶಯಾಸ್ಪದ ಸಾವಿನ ಪ್ರಕರಣದಲ್ಲಿ ಸದಾನಂದ ಪೂಜಾರಿ “ಅಮಾಯಕ”ನೆಂದು ಹೇಳಲು ಸ್ಥಳೀಯರಿಗೆ ಕಾರಣಗಳೇ ಸಿಗುತ್ತಿಲ್ಲ. ಸದ್ಯಕ್ಕೆ ಅಕ್ರಮ ಮರಳು ದಂಧೆಯಲ್ಲಿ ಹೆಬ್ರಿ ಪೊಲೀಸ್ ಸ್ಟೇಷನ್‌ನಲ್ಲೇ ರೌಡಿ ಶೀಟರ್ ಎಂಬ ಕೀರ್ತಿಯೂ ಇದೆ. ತನಗೆ ಎಮ್ಮೆಲ್ಲೆ ಸಾಹೇಬರ ಬಲವಿರುವುದರಿಂದ ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುತ್ತೇನೆಂಬ ಪೊಗರಿನ ಸದಾನಂದ ಕರ್ಜೆ ಪರಿಸರದಲ್ಲಿ ಬಾರಾಭಾನ್ಗಡಿ ಮಾಡುತ್ತಲೇ ಇದ್ದಾನೆ.  ಕೆಲವು ದಿನಗಳ ಹಿಂದೆ ಪಾಪದವರೊಬ್ಬರ ಮನೆಯ ಗೇಟು ಕಿತ್ತು ಎಲ್ಲೋ ಎಸೆದಿದ್ದ ಸದಾನಂದನ ಗ್ಯಾಂಗ್ ಮೇಲೆ ಕಂಪ್ಲೇಂಟೂ ಆಗಿದೆ. ಕಳೆದ ಡಿಸೆಂಬರ್‌ನಲ್ಲಿ ಕರ್ಜೆಯ ಮಹಾಲಿಂಗೇಶ್ವರ ದೇವಳದ ಆನುವಂಶಿಕ ಮೊಕ್ತೇಸರ ಮತ್ತು ಅರ್ಚಕನ ಬೆತ್ತಲೆ ಮಾಡಿ ಹಲ್ಲೆ ನಡೆಸಿದ ಪ್ರಕರಣ ಕೇಸೂ ಈ ಗ್ಯಾಂಗಿನ ಮೇಲಿದೆ. ದಿನಕ್ಕೊಂದು ಅನಾಹುತ-ಅವ್ಯವಹಾರ ಮಾಡುವ ಸದಾನಂದನ ತಂಡ ಮುಗ್ಧ ಶ್ರೇಯಸ್‌ನ ಸಾಯಿಸಿಲ್ಲವೆಂದು ಹೇಳೋದಾದರೂ ಎನ್ನುವುದು ಊರವರ ಅಭಿಪ್ರಾಯ.

ದುರ್ಬಲ-ಅಸಹಾಯಕ ಶ್ರೇಯಸ್ ಹೆತ್ತವರಿಗೆ ಎಸ್ಪಿ ನಿಶಾ ಮೇಡಮ್ ನ್ಯಾಯ ಕೊಡಿಸುವರಾ? ಒಂದು ವಾರದಲ್ಲಿ ಸರಿಯಾದ ತನಿಖೆ ನಡೆಯದಿದ್ದರೆ ಎಸ್ಪಿ ಕಚೇರಿ ಎದುರು ಧರಣಿ ಕುಳಿತುಕೊಳ್ಳುವುದಾಗಿ ಮಾಜಿ ಶಾಸಕ ಪ್ರಮೋದ್ ಮಧ್ವಾರಾಜ್ ಆವಾಜ್ ಹಾಕಿದ್ದಾರೆ. ಆಗಲೇ ಹತ್ತು ದಿನ ಕಳೆದಿದೆ. ಶ್ರೇಯಸ್ ತಾಯ್ತಂದೆ ಪ್ರಮೋದ್‌ರನ್ನು ನಂಬಿಕೊಂಡಿದ್ದಾರೆ. ಏಳು ಮೀನುಗಾರರ ಸುವರ್ಣ ತ್ರಿಭುಜ ನೋಟನ್ನು ಮುಳುಗಿಸಿದ ನೇವಿ ಹಡಗು ಐಎಸ್‌ಎಸ್ ಕೊಚ್ಚಿನ್ ಪ್ರಕರಣ ತಾರ್ಕಿಕ ಅಂತ್ಯಕ್ಕೆ ತಲುಪಿಸದ ಪ್ರಮೋದ್ ಮಧ್ವರಾಜ್ ಶ್ರೇಯಸ್ ಕೇಸ್ ಗಂಭೀರವಾಗಿ ಪರಿಗಣಿಸಿದ್ದಾರಾ? ಎಂಬ ಪ್ರಶ್ನೆ ಏಳುವುದು ಸಹಜವಾಗಿದೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಆದರೆ ಕೇಂದ್ರ ಮತ್ತು ರಾಜ್ಯ; ಎರಡೂ ಕಡೆ ಮನುವಾದಿಗಳೇ ಅಧಿಕಾರದಲ್ಲಿ ಇರುವುದರಿಂದ ಇದು ಸಾಧ್ಯವಾ?

LEAVE A REPLY

Please enter your comment!
Please enter your name here

- Advertisment -

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...

ನ್ಯಾಯಾಂಗ ಸೇವೆಗಳು, ಸರ್ಕಾರಿ ಸಮಿತಿಗಳಲ್ಲಿ ಶೇ. 50 ಮಹಿಳಾ ಪ್ರಾತಿನಿಧ್ಯ ಕೋರಿ ಪಿಐಎಲ್ : ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸರ್ಕಾರಿ ಸಮಿತಿಗಳು ಮತ್ತು ನ್ಯಾಯಾಂಗ ಸೇವೆಯ ಖಾಲಿ ಇರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ...

ರಷ್ಯಾ ತೈಲ ಖರೀದಿಸಲು ಭಾರತಕ್ಕೆ ನೀಡಿದ್ದ ಕಾಲಾವಕಾಶ ವಿಸ್ತರಿಸುವುದಿಲ್ಲ: ಅಮೆರಿಕ

ಇರಾನ್ ಮತ್ತು ರಷ್ಯಾದಿಂದ ತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈವರೆಗೆ ನೀಡಲಾಗಿದ್ದ ನಿರ್ಬಂಧ ಸಡಿಲಿಕೆಯನ್ನು ಇನ್ನು ಮುಂದೆ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬುಧವಾರ (ಏ.15)...

ಬೆಂಗಳೂರಿನಲ್ಲಿ ಮಾದಕ ವಸ್ತು ಜಾಲ ಪತ್ತೆ; 10 ಜನರ ಬಂಧನ, 23.6 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು: ಬೃಹತ್ ಮಾದಕ ವಸ್ತು ಜಾಲ ಪತ್ತೆಯಾಗಿದ್ದು, ಬೆಂಗಳೂರು ನಗರ ಪೊಲೀಸರು 10 ಜನ ಶಂಕಿತರನ್ನು ಬಂಧಿಸಿದ್ದಾರೆ ಮತ್ತು ಅಂದಾಜು 23.63 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಕೆಲವು...

‘ಮತ ಚಲಾಯಿಸದವರನ್ನು ಶಿಕ್ಷಿಸಲು ಸಾಧ್ಯವಿಲ್ಲ’: ಮತದಾನ ಕಡ್ಡಾಯಗೊಳಿಸಲು ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಮತ ಚಲಾಯಿಸುವುದನ್ನು ಕಡ್ಡಾಯಗೊಳಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸುಪ್ರೀಂ ಕೋರ್ಟ್ ಗುರುವಾರ (ಏ. 16) ವಜಾಗೊಳಿಸಿದೆ ಮತ್ತು ಉದ್ದೇಶಪೂರ್ವಕವಾಗಿ ಮತದಾನದಿಂದ ದೂರ ಉಳಿಯುವ ನಾಗರಿಕರಿಗೆ ದಂಡ ವಿಧಿಸಲು...

ಆರ್‌ಎಸ್‌ಎಸ್‌ಗೆ 100 ವರ್ಷ; ಮುದ್ರಣ ಮಾಧ್ಯಮ ಜಾಹೀರಾತಿಗೆ 76.13 ಲಕ್ಷ ರೂ. ಖರ್ಚು ಮಾಡಿದ ಕೇಂದ್ರ ಸರ್ಕಾರ

ಅಧಿಕೃತವಾಗಿ ನೊಂದಣಿಯಾಗದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದ 100ನೇ ವರ್ಷಾಚರಣೆಯ ಜಾಹೀರಾತುಗಳಿಗಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವು 76.13 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ ಎಂದು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಿಂದ ತಿಳಿದುಬಂದಿದೆ. ಹಿಂದೂ...

ಡಿಲಿಮಿಟೇಶನ್‌ಗೆ ಲಿಂಕ್ ಮಾಡದೆ ‘ಮಹಿಳಾ ಮೀಸಲಾತಿ’ ಜಾರಿ ಮಾಡಿ: ಗೌರವ್ ಗೊಗೊಯ್

"ಮಹಿಳಾ ಮೀಸಲಾತಿಯನ್ನು ಪ್ರಸ್ತುತ ಲೋಕಸಭೆಯ 543 ಸದಸ್ಯರ ಬಲದ ಮೇಲೆ ಜಾರಿಗೆ ತರಬೇಕು, ಅದನ್ನು ಡಿಲಿಮಿಟೇಷನ್ (ಕ್ಷೇತ್ರ ಪುನರ್‌ ವಿಂಗಡಣೆ) ಸೀಮಿತಗೊಳಿಸಬಾರದು" ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹೇಳಿದರು. "ಸರ್ಕಾರವು ಮಸೂದೆಗಳನ್ನು...

ಕ್ಷೇತ್ರ ಮರುವಿಂಗಡನೆ, ಮಹಿಳಾ ಮೀಸಲಾತಿ : ಲೋಕಸಭೆಯಲ್ಲಿ ಮೂರು ಪ್ರಮುಖ ಮಸೂದೆಗಳ ಮಂಡನೆ

ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಲು ಮತ್ತು ಕ್ಷೇತ್ರ ಮರುವಿಂಗಡಣಾ ಆಯೋಗವನ್ನು ಸ್ಥಾಪಿಸಲು ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಮತ್ತು ಅಮಿತ್ ಶಾ ಅವರು ಗುರುವಾರ (ಏ.16) ಲೋಕಸಭೆಯಲ್ಲಿ ಮೂರು ವಿಧೇಯಕಗಳನ್ನು...

ಮತಾಂತರ ವಿರೋಧಿ ಕಾನೂನನ್ನು ಪೊಲೀಸರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ: ಅಲಹಾಬಾದ್ ಹೈಕೋರ್ಟ್

ಉತ್ತರ ಪ್ರದೇಶದಲ್ಲಿ 2021 ರ ಕಾನೂನುಬಾಹಿರ ಧರ್ಮ ಮತಾಂತರ ನಿಷೇಧ ಕಾಯ್ದೆಯಡಿಯಲ್ಲಿ ದಾಖಲಾಗಿರುವ ಹಲವಾರು "ಸುಳ್ಳು, ನಕಲಿ ಮತ್ತು ಕ್ಷುಲ್ಲಕ ಎಫ್‌ಐಆರ್"ಗಳನ್ನು ಅಲಹಾಬಾದ್ ಹೈಕೋರ್ಟ್ ಗುರುತಿಸಿದೆ. "ಪೊಲೀಸರು ಮತ್ತು ದೂರುದಾರರು ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ...

ಸಂಸತ್ತಿನ 3 ದಿನಗಳ ವಿಶೇಷ ಅಧಿವೇಶನ: ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲಾತಿ ಕುರಿತ ಮಸೂದೆಗಳ ಮಂಡನೆ ಸಾಧ್ಯತೆ

ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನ ಗುರುವಾರದಿಂದ (ಏ.16) ಪ್ರಾರಂಭಗೊಂಡಿದೆ. ಕ್ಷೇತ್ರ ಮರುವಿಂಗಡನೆ, ಮಹಿಳಾ ಮೀಸಲಾತಿ ಸೇರಿದಂತೆ ಪ್ರಮುಖ ಮೂರು ಮಸೂದೆಗಳು ಮಂಡನೆಯಾಗುವ ಸಾಧ್ಯತೆ ಇದೆ. ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಪ್ರಸ್ತುತ...