Homeಕರ್ನಾಟಕಅಮಾಯಕ ಹಿಂದೂ ಹುಡುಗ ಶ್ರೇಯಸ್ ಸಾವಿಗೆ ಭಜರಂಗಿಗಳು ಕಾರಣರೇ? 

ಅಮಾಯಕ ಹಿಂದೂ ಹುಡುಗ ಶ್ರೇಯಸ್ ಸಾವಿಗೆ ಭಜರಂಗಿಗಳು ಕಾರಣರೇ? 

- Advertisement -
- Advertisement -

“ನನ್ನ ಮಗ ಯಾರ ತಂಟೆಗೂ ಹೋಗೋನಲ್ಲ… ಮನೆಯ ಜಗುಲಿ ಮೇಲೆ ತನ್ನ ಪಾಡಿಗೆ ತಾನು ಕುಳಿತಿದ್ದವನನ್ನು ಬಿಜೆಪಿಯ ಪಾತಕ ಸ್ವಭಾವದ ಇಬ್ಬರು ಪುಢಾರಿಗಳು ಪ್ಲಾನ್‌ಮಾಡಿ ಏಳು ಕಿ.ಮೀ ದೂರದ ದುರ್ಗಮ ಕಾಡಿನ ಹೊಳೆ ಹತ್ತಿರ ಕರೆದೊಯ್ದು ಕಗ್ಗೊಲೆ ಮಾಡಿದ್ದಾರೆ… ಅಲ್ಲಿಗೆ ಹೋಗಲು ಸರಿಯಾದ ದಾರಿಯೂ ಇಲ್ಲ…. ಏಳೆಂಟು ಅಡಿಯಷ್ಟು ಆಳ ನೀರು ಹರಿವ ಆ ಹೊಳೆಗೆ ಮೀನು ಹಿಡಿಯಲಿಕ್ಕೂ ಯಾರೂ ಹೋಗೋದಿಲ್ಲ…. ಅಂಥ ಕಡೆ ನನ್ನ ಮಗನ ಕರೆದೊಯ್ದು ಕೊಂದು ಹಾಕಿದ್ದಾರೆ…. ನನ್ನ ಮನೆ ದೀಪವೇ ಆರಿಹೋಗಿದೆ…” ಎಂದು ಆ ತಾಯಿ ಭೋರೆಂದು ಬಿಕ್ಕಳಿಸುವಾಗ ಎಂಥವರ ಕರುಳು ಚುರ್ ಅನ್ನದೇ ಇರದು!!

ಆಕೆ ಬ್ರಹ್ಮಾವರ ತಾಲ್ಲೂಕಿನ ಹೊಸೂರು ಗ್ರಾಮದ ಕುರ್ಪಾಡಿಯಲ್ಲಿ ಬೀಡಿ ಕಟ್ಟಿ ಬದುಕು ಸಾಗಿಸುವ ಶೋಭಾ ಶೇರ್ವೆಗಾರ್. ಗಂಡನಿಗೆ ಅನಾರೋಗ್ಯ, ಇರುವ ಚೂರುಪಾರು ಬಂಗಾರ ಗಿರವಿಯಿಟ್ಟು, ಕೂಲಿ ಮಾಡಿ ತನ್ನೆರಡು ಮಕ್ಕಳನ್ನು ಓದಿಸುತ್ತಿದ್ದ ಆಕೆ ಹಿರಿಯ ಮಗ ಶ್ರೇಯಸ್‌ನನ್ನು ಅನ್ಯಾಯವಾಗಿ ಕಳಕೊಂಡ ನೋವಿನಲ್ಲಿ ಜರ್ಜರಿತಳಾಗಿಹೋಗಿದ್ದಾಳೆ. ವಯಸ್ಸಿನಲ್ಲಿ ಶ್ರೇಯಸ್‌ಗಿಂತ ಎರಡು ಪಟ್ಟು ದೊಡ್ಡವನಾದ ಸದಾನಂದ ಪೂಜಾರಿ ಮತ್ತಾತನ ಶಿಷ್ಯ ಯೋಗೀಶ್ ಪೂಜಾರಿ ಎಂಬ ರೌಡಿಗಳೇ ಕೊಲೆ ಮಾಡಿದ್ದಾರೆಂದು ಆಕೆ ನೇರಾನೇರ ಹೇಳುತ್ತ ಬಾಯ್ಬಾಯಿ ಬಡಿದುಕೊಳ್ಳುತ್ತಿದ್ದಾಳೆ. ಈ ಇಬ್ಬರೂ ಪಕ್ಕಾ ಭಜರಂಗಿ ಭೂಪರು ಹಲವು ದೋನಂಬರ್ ದಂಧೆ-ದೊಂಬಿಯ ಈ ಧೀರರ ಬಗ್ಗೆ ಕರ್ಜೆ-ಕಳ್ತೂರು, ಹೊಸೂರು ಪರಿಸರದಲ್ಲಿ ಯಾರೊಬ್ಬರಲ್ಲೂ ಒಳ್ಳೆಯ ಅಭಿಪ್ರಾಯವಿಲ್ಲ.

ಸದಾನಂದ ಪೂಜಾರಿ

ಆ ತಾಯಿ ಆರೋಪಿಸುತ್ತಿರುವ ಸದಾನಂದ ಪೂಜಾರಿ ಯಾರು ಎಂದು ಹುಡುಕಿದರೆ ಗಾಬರಿಯಾಗುತ್ತದೆ. ಹುಡುಗಿಯರಂತೂ ಸದಾನಂದ ಪೂಜಾರಿಯ ನೆರಳು ಕಂಡರೇ ಸಾಕು, ದೂರದಲ್ಲೇ ಅದೃಶ್ಯರಾಗಿ ಬಿಡುತ್ತಾರೆ. ಇಂಥ ಸದಾನಂದ ಪೂಜಾರಿಯ ದಾದಾಗಿರಿ ಯಾವ ರೇಂಜಿಗಿದೆಯೆಂದರೆ, ಕೌಬ್ರಿಗೇಡ್, ಅನೈತಿಕ ಪೊಲೀಸ್ ಪಡೆಯೂ ಆತ ಖತರ್‌ನಾಕ್ ಅಂತಲೇ ಬ್ರಾಂಡ್ ಮಾಡಿಬಿಟ್ಟಿದೆ!! ಆದರೆ ಪೊಲೀಸರು ಮಾತ್ರ ಅದ್ಯಾಕೋ ಸುಮ್ಮನಿದ್ದಾರೆ. ಖಡಕ್ ಎಸ್ಪಿ ನಿಶಾ ಜೇಮ್ಸ್‌ಗೂ ಏನು ಮಾಡೋದಂತಲೇ ಹೊಳೆಯುತ್ತಿಲ್ಲ. ಉಡುಪಿ-ಬ್ರಹ್ಮಾವರದ ಶಾಸಕ ರಂಗೀಲಾ ರಘುಪತಿಭಟ್ಟನ ಅತ್ಯಾಪ್ತ ಸರ್ಕಲ್ಲಿನ ಧಾಂಡಿಗ ಈ ಸದಾನಂದ ಪೂಜಾರಿ ಎಂಬುದೇ ಪೊಲೀಸರ ಕೈಕಟ್ಟಿಹಾಕಿಬಿಟ್ಟಿದೆಯೆಂದು ಜನರಾಡಿಕೊಳ್ಳುತ್ತಿದ್ದಾರೆ…….

ಯೋಗೇಶ್

ಅಂದು ನವೆಂಬರ್ ಐದನೇ ತಾರೀಖು ಮಧ್ಯಾಹ್ನ 12;30ರ ಸುಮಾರಿಗೆ ಪಕ್ಕದ ಮನೆಯ ರಾಕೇಶ್ ಎಂಬ ಹುಡುಗ ಬಂದು ಮೀನು ಹಿಡಿಯಲು ಹೋಗೋಣ ಎಂದು ಶ್ರೇಯಸ್‌ನ ಕರೆದಿದ್ದಾರೆ. ಇಲ್ಲ ನಂಗೆ ಓದೋದಿದೆ ಎಂದು ಹೇಳಿದ್ದಾನೆ ಶ್ರೇಯಸ್. ಒತ್ತಾಯ ಮಾಡಿ ತನ್ನ ಬೈಕಲ್ಲಿ ರಾಕೇಶ್ ಆತನ ಕರೆದುಕೊಂಡು ಮುಡಿಸಾಲು ಹೊಳೆಬಳಿ ಹೋಗಿದ್ದಾನೆ. ಅಲ್ಲಿ ಸದಾನಂದ ಪೂಜಾರಿ ತನ್ನ ಚೇಲಾ ಯೋಗೀಶ್ ಜೊತೆ ತೋಟೆ (ಸ್ಫೋಟಕ) ಹಾಕಿ ಮೀನು ಹಿಡಿಯುತ್ತಿರುತ್ತಾನೆ. ಕೆಲದಿನಗಳ ಹಿಂದೆ ಸಂತೆಕಟ್ಟೆಯಲ್ಲಿ ನಡೆದ ಶಾರದೋತ್ಸವ ಮೆರವಣಿಗೆ ಸಂದರ್ಭದಲ್ಲಿ ಶ್ರೇಯಸ್ ಮತ್ತವನ ಗೆಳೆಯರ ಮೇಲೆ ವಿನಾಕಾರಣ ಮುಗಿಬಿದ್ದಿದ್ದ ಸದಾನಂದ ಪೂಜಾರಿ-ಯೋಗೀಶ್ ಪೂಜಾರಿ ಕಂಡಾಗ ಆತ ಗಾಬರಿಗೆ ಬಿದ್ದಿರಬೇಕು. ಯಾಕೆ ಉಪಾಯವಾಗಿ ರಾಕೇಶ್ ತನ್ನನ್ನು ವೈರಿಗಳ ಕೈಗೆ ಕೊಡುತ್ತಿದ್ದಾನೆಂಬ ಭಯಕ್ಕೂ ಬಿದ್ದಿರಲೇಬೇಕು.

ಹುಡುಗಿ ಒಬ್ಬಳ ವಿಷಯವಾಗಿ ಸದಾನಂದ ಪೂಜಾರಿ ಮತ್ತು ಶ್ರೇಯಸ್ ನಡುವೆ ವೈಮನಸ್ಸು ಬೆಳೆದಿತ್ತು. ಸುರಸುಂದರಾಂಗನೂ, ಪ್ರತಿಭಾನ್ವಿತ ವಿದ್ಯಾರ್ಥಿಯೂ, ಪ್ರಸಿದ್ಧ ವಾಲಿಬಾಲ್ ಪಟುವೂ ಆಗಿದ್ದ ಶ್ರೇಯಸ್‌ಗೆ ಬುಡಕಟ್ಟು ಸಮುದಾಯದ ಚೆಂದದ ಸಹಪಾಠಿ ಜತೆ ಅನ್ಯೋನ್ಯ ಗೆಳೆತನವಿತ್ತು. ಆ ಬಡವರ ಮನೆ ಹುಡುಗಿ ಮೇಲೆ ಸದಾನಂದ ಕಣ್ಣುಹಾಕಿದ್ದ. ಹೇಗಾದರೂ ಮಾಡಿ ಆಕೆಯನ್ನು ತನ್ನ ಅಡ್ಡೆಗೆ ತಂದುಬಿಡುವಂತೆ ಶ್ರೇಯಸ್‌ಗೆ  ಆತ ಒತ್ತಡ ಹಾಕುತ್ತಲೇ ಇದ್ದ. ಇದೇ ಕಾರಣಕ್ಕೆ ಶಾರದೋತ್ಸವ ಹೊತ್ತಲ್ಲಿ ಶ್ರೇಯಸ್‌ಗೆ ಹೆದರಿಸಲು ಸದಾನಂದ ಗ್ಯಾಂಗ್ ಕಟ್ಟಿಕೊಂಡುಹೋಗಿದ್ದ. ಶ್ರೇಯಸ್‌ನ ಪಳಗಿಸಲು ವಿಫಲವಾಗಿದ್ದ ಸದಾನಂದ ಆತನ ಮನ ಒಲಿಸಲಿಕ್ಕೋ ಅಥವಾ ಬೆದರಿಸಲಿಕ್ಕೋ ಭೀಭತ್ಸ ಹೊಳೆ ಹತ್ತಿರ ಕರೆಸಿಕೊಂಡಿದ್ದನಾ ಎಂಬ ಅನುಮಾನ ಊರಲ್ಲಿ ಮಡುಗಟ್ಟಿದೆ.

ಹೊಳೆಯಿಂದ ಹೊರತಂದ ಶ್ರೇಯಸ್‌ನ ಮೃತದೇಹ ಕಂಡವರಿಗೆ ಅದು ನೀರಿಗೆ ಬಿದ್ದು ಸಾವು ಅನ್ನಿಸುತ್ತಿಲ್ಲ. ಕೊಲೆ ಎಂಬ ಅನುಮಾನ ಮೂಡಲು ಇದಕ್ಕೆ ಬಲವಾದ ಸಾಂದರ್ಭಿಕ ಸಾಕ್ಷ್ಯಗಳೂ ಇವೆ. ತಾವು ನೀರಿಗೆ ಬಿದ್ದ ಶ್ರೇಯಸ್‌ನ ಬಚಾಯಿಸಲು ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ ಎನ್ನುತ್ತಿರುವ ಸದಾನಂದ ಮತ್ತು ಯೋಗೀಶನ ಬಟ್ಟೆ ಒಂಚೂರು ಒದ್ದೆಯಾಗಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಶ್ರೇಯಸ್‌ನ ಕುತ್ತಿಗೆಯಲ್ಲಿ ಗಾಯದ ಗುರುತೂ ಇತ್ತು. ನಡುವಯಸ್ಸಿಗೆ ಹತ್ತಿರವಿರುವ ಸದಾನಂದನೊಂದಿಗೆ ಹತ್ತೊಂಬತ್ತರ ಪೋರ ಶ್ರೇಯಸ್‌ಗೆ ಮೀನು ಹಿಡಿಯಲು ಜತೆಯಾಗಿ ಹೋಗುವಂತ ದೋಸ್ತಿ ಇರಲು ಸಾಧ್ಯವೇ ಇಲ್ಲ. ಅಲ್ಲದೆ ಹುಡುಗಿ ವಿಷಯವಾಗಿ ಸದಾನಂದ ಸತಾಯಿಸಲು ಶುರುಮಾಡಿದ ನಂತರವಂತೂ ಶ್ರೇಯಸ್ ಆತನ ಫೋನ್ ಕಾಲ್ ಕೂಡ ಸ್ವೀಕರಿಸದೆ ಅವಾಯ್ಡ್ ಮಾಡುತ್ತಿದ್ದನಂತೆ ಎನ್ನುವ ಅವನ ಸ್ನೇಹಿತರು ಶ್ರೇಯಸ್‌ನ ಹೆಣ ಕಂಡ ಹತ್ತಿರದವರು ಆತ ನೀರೇ ಕುಡಿದಿಲ್ಲವೆಂದು ದೃಢವಾಗಿ ಹೇಳುತ್ತಾರೆ.

ಇದೆಲ್ಲ ಸಹಜವಾಗೇ ಕೊಲೆಯ ಶಂಕೆ ಮೂಡಿಸುತ್ತದೆ. ಹೆಣಸಿಕ್ಕ ನಂತರ ಬ್ರಹ್ಮಾವರದ ಪೊಲೀಸರ ವರ್ತನೆಯೂ ಏನೋ ಮುಚ್ಚಿಹಾಕಲು ತಿಣುಕಾಡುತ್ತಿರುವಂತಿದೆ. ಮಣಿಪಾಲದಲ್ಲಿ ಪೋಸ್ಟ್ಮಾರ್ಟಮ್ ನಡೆಯುತ್ತಿದ್ದಾಗ ಸಬ್‌ಇನ್ಸ್ಪೆಕ್ಟರ್ ರಾಘವೇಂದ್ರ ವೈದ್ಯರ ಬಳಿಯೇ ಇದ್ದದ್ದು ಏಕೆ? ಪ್ರಕರಣ ನಡೆದು ಎರಡು ವಾರವಾದರೂ ಪೊಲೀಸರೇಕೆ ಹುಡುಗನ ತಾಯ್ತಂದೆಯ ಹೇಳಿಕೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ? ಶಾಸಕ ರಘುಪತಿ ಭಟ್ಟರ ರಹಸ್ಯ ನಿರ್ದೇಶನ ಪೊಲೀಸರು ಪಾಲಿಸುತ್ತಿದ್ದಾರಾ? ಸದಾನಂದ ಪೂಜಾರಿಯ “ಇತಿಹಾಸ” ಗೊತ್ತಿದ್ದೂ ಪೊಲೀಸರೇಕೆ ಕಾನೂನಿನ ಕುಣಿಕೆ ಬಿಗಿಮಾಡುತ್ತಿಲ್ಲಾ? ಇಂಥ ಚರ್ಚೆ ಈಗ ಉಡುಪಿ-ಬ್ರಹ್ಮಾವರದಾದ್ಯಂತ ಬಿರುಸಾಗಿ ಸಾಗಿದೆ.

ಶ್ರೇಯಸ್‌ನ ಸಂಶಯಾಸ್ಪದ ಸಾವಿನ ಪ್ರಕರಣದಲ್ಲಿ ಸದಾನಂದ ಪೂಜಾರಿ “ಅಮಾಯಕ”ನೆಂದು ಹೇಳಲು ಸ್ಥಳೀಯರಿಗೆ ಕಾರಣಗಳೇ ಸಿಗುತ್ತಿಲ್ಲ. ಸದ್ಯಕ್ಕೆ ಅಕ್ರಮ ಮರಳು ದಂಧೆಯಲ್ಲಿ ಹೆಬ್ರಿ ಪೊಲೀಸ್ ಸ್ಟೇಷನ್‌ನಲ್ಲೇ ರೌಡಿ ಶೀಟರ್ ಎಂಬ ಕೀರ್ತಿಯೂ ಇದೆ. ತನಗೆ ಎಮ್ಮೆಲ್ಲೆ ಸಾಹೇಬರ ಬಲವಿರುವುದರಿಂದ ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುತ್ತೇನೆಂಬ ಪೊಗರಿನ ಸದಾನಂದ ಕರ್ಜೆ ಪರಿಸರದಲ್ಲಿ ಬಾರಾಭಾನ್ಗಡಿ ಮಾಡುತ್ತಲೇ ಇದ್ದಾನೆ.  ಕೆಲವು ದಿನಗಳ ಹಿಂದೆ ಪಾಪದವರೊಬ್ಬರ ಮನೆಯ ಗೇಟು ಕಿತ್ತು ಎಲ್ಲೋ ಎಸೆದಿದ್ದ ಸದಾನಂದನ ಗ್ಯಾಂಗ್ ಮೇಲೆ ಕಂಪ್ಲೇಂಟೂ ಆಗಿದೆ. ಕಳೆದ ಡಿಸೆಂಬರ್‌ನಲ್ಲಿ ಕರ್ಜೆಯ ಮಹಾಲಿಂಗೇಶ್ವರ ದೇವಳದ ಆನುವಂಶಿಕ ಮೊಕ್ತೇಸರ ಮತ್ತು ಅರ್ಚಕನ ಬೆತ್ತಲೆ ಮಾಡಿ ಹಲ್ಲೆ ನಡೆಸಿದ ಪ್ರಕರಣ ಕೇಸೂ ಈ ಗ್ಯಾಂಗಿನ ಮೇಲಿದೆ. ದಿನಕ್ಕೊಂದು ಅನಾಹುತ-ಅವ್ಯವಹಾರ ಮಾಡುವ ಸದಾನಂದನ ತಂಡ ಮುಗ್ಧ ಶ್ರೇಯಸ್‌ನ ಸಾಯಿಸಿಲ್ಲವೆಂದು ಹೇಳೋದಾದರೂ ಎನ್ನುವುದು ಊರವರ ಅಭಿಪ್ರಾಯ.

ದುರ್ಬಲ-ಅಸಹಾಯಕ ಶ್ರೇಯಸ್ ಹೆತ್ತವರಿಗೆ ಎಸ್ಪಿ ನಿಶಾ ಮೇಡಮ್ ನ್ಯಾಯ ಕೊಡಿಸುವರಾ? ಒಂದು ವಾರದಲ್ಲಿ ಸರಿಯಾದ ತನಿಖೆ ನಡೆಯದಿದ್ದರೆ ಎಸ್ಪಿ ಕಚೇರಿ ಎದುರು ಧರಣಿ ಕುಳಿತುಕೊಳ್ಳುವುದಾಗಿ ಮಾಜಿ ಶಾಸಕ ಪ್ರಮೋದ್ ಮಧ್ವಾರಾಜ್ ಆವಾಜ್ ಹಾಕಿದ್ದಾರೆ. ಆಗಲೇ ಹತ್ತು ದಿನ ಕಳೆದಿದೆ. ಶ್ರೇಯಸ್ ತಾಯ್ತಂದೆ ಪ್ರಮೋದ್‌ರನ್ನು ನಂಬಿಕೊಂಡಿದ್ದಾರೆ. ಏಳು ಮೀನುಗಾರರ ಸುವರ್ಣ ತ್ರಿಭುಜ ನೋಟನ್ನು ಮುಳುಗಿಸಿದ ನೇವಿ ಹಡಗು ಐಎಸ್‌ಎಸ್ ಕೊಚ್ಚಿನ್ ಪ್ರಕರಣ ತಾರ್ಕಿಕ ಅಂತ್ಯಕ್ಕೆ ತಲುಪಿಸದ ಪ್ರಮೋದ್ ಮಧ್ವರಾಜ್ ಶ್ರೇಯಸ್ ಕೇಸ್ ಗಂಭೀರವಾಗಿ ಪರಿಗಣಿಸಿದ್ದಾರಾ? ಎಂಬ ಪ್ರಶ್ನೆ ಏಳುವುದು ಸಹಜವಾಗಿದೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಆದರೆ ಕೇಂದ್ರ ಮತ್ತು ರಾಜ್ಯ; ಎರಡೂ ಕಡೆ ಮನುವಾದಿಗಳೇ ಅಧಿಕಾರದಲ್ಲಿ ಇರುವುದರಿಂದ ಇದು ಸಾಧ್ಯವಾ?

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...