Homeಕರ್ನಾಟಕಅನ್ಯಾಯವನ್ನು ಸಹಿಸಿಕೊಂಡು ಮೌನವಾಗಿದ್ದರೆ ಅದು ಅಪರಾಧ: ಚಂದ್ರಶೇಖರ್ ಆಝಾದ್ ರಾವಣ್

ಅನ್ಯಾಯವನ್ನು ಸಹಿಸಿಕೊಂಡು ಮೌನವಾಗಿದ್ದರೆ ಅದು ಅಪರಾಧ: ಚಂದ್ರಶೇಖರ್ ಆಝಾದ್ ರಾವಣ್

ದಕ್ಷಿಣ ಭಾರತಕ್ಕೆ ಮೊದಲ ಬಾರಿಗೆ ಆಗಮಿಸಿದ್ದ ದಲಿತರ ಸಿಡಿಲ ದನಿ ಚಂದ್ರಶೇಖರ್ ಆಝಾದ್ ರಾವಣ್ ಅವರ ಮಾತುಗಳನ್ನು ಕೇಳಲು ಸಾವಿರಾರು ಜನ ಮಂತ್ರಿ ಮಾಲ್ ಬಳಿಯ ಶಿರೂರ್ ಪಾರ್ಕ್ ನಲ್ಲಿ ಮಳೆ ನಡುವೆಯೂ ಆಗಮಿಸಿದ್ದರು

- Advertisement -
- Advertisement -

“ಇಲ್ಲಿನ ಪೊಲೀಸರು ನನಗೆ ಆಕ್ಷೇಪಾರ್ಯ ಭಾಷಣ ಮಾಡಬಾರದೆಂಬ ಹೇಳಿಕೆಗೆ ಸಹಿ ಹಾಕಿಸಿಕೊಂಡಿದ್ದಾರೆ. ಆದರೆ ನಾನು ಏನು ಮಾತಾಡಲು ಬಂದಿದ್ದೇನೋ ಅದನ್ನು ಮಾತಾಡುತ್ತೇನೆ. ಬಂಧನಕ್ಕೋ, ಜೈಲಿಗೋ ಹೆದರಿಕೊಂಡು ನಾನು ಸುಮ್ಮನಿರಲಾರೆ. ದಲಿತರ ಪರವಾಗಿ ಹೋರಾಡಿದ್ದಕ್ಕೆ ಉತ್ತರ ಪ್ರದೇಶದಲ್ಲಿ ಒಂದೂವರೆ ವರ್ಷ ಜೈಲುವಾಸ ಅನುಭವಿಸಿದ್ದೀನಿ. ಇಲ್ಲಿ ತಳಸಮುದಾಯಗಳಿಗೆ ಭೂಮಿಗಾಗಿ ಹೋರಾಡಿ ಜೈಲಿಗೆ ಹೋಗಲು ಸಿದ್ದನಿದ್ದೇನೆ. ನಾವು ಅನ್ಯಾಯವನ್ನು ಸಹಿಸಿಕೊಂಡು ಮೌನವಾಗಿ ಉಳಿದರೆ ಅದು ಅಪರಾಧ. ಇಂತಹ ತಪ್ಪನ್ನು ನಾವ್ಯಾರೂ ಮಾಡಬಾರದು. ಅನ್ಯಾಯದ ವಿರುದ್ದ ನಾವು ಮಾಡುವ ಹೋರಾಟ ಸಂವಿಧಾನವನ್ನು ಉಳಿಸಿಕೊಳ್ಳುವ ಕೆಲಸವಾಗಿದೆ.

ಈ ಹೋರಾಟದ ಸಂದರ್ಭದಲ್ಲಿ ನಮ್ಮ ಒಗ್ಗಟ್ಟನ್ನು ಮುರಿಯುವ ಹಲವಾರು ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿವೆ. ನಮ್ಮ ಒಗ್ಗಟ್ಟು ಮುರಿಯಲು ನಾವು ಅವಕಾಶ ಕೊಡಬಾರದು. ಭೂಮಿ-ವಸತಿಯ ಹೋರಾಟವನ್ನು ದೇಶಮಟ್ಟದಲ್ಲಿ ಮಾಡಲು ಪ್ರಯತ್ನ ಪಡುತ್ತೇನೆ. ಸರ್ಕಾರಕ್ಕೆ ಸಂವಿಧಾನವನ್ನು, ಈ ನೆಲದ ಕಾನೂನನ್ನು ಗೌರವಿಸೋದನ್ನು ನಾವೆಲ್ಲರೂ ಸೇರಿ ಕಲಿಸಿಕೊಡಬೇಕಿದೆ.” ಈ ಕಿಡಿನುಡಿಗಳು ಹೊರಬಂದಿದ್ದು ಭೀಮ್ ಆರ್ಮಿ ಸಂಘಟನೆಯ ಚಂದ್ರಶೇಖರ್ ಆಝಾದ್ ರಾವಣ್ ರವರಿಂದ..

ಬುಧವಾರ ಬೆಂಗಳೂರಿನಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ‘ನಡುರಾತ್ರಿ ಸ್ವಾತಂತ್ರ್ಯೋತ್ಸವ; ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ‘ನಮ್ಮ ಹೋರಾಟದ ಗಂಭೀರತೆಯನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಇವತ್ತು ಆಳುವವರು ಶ್ರೀಮಂತರಾಗಿದ್ದಾರೆ. ಬಡವರ ಸರ್ಕಾರ ಅಧಿಕಾರಕ್ಕೆ ಬಂದಾಗ ನಮ್ಮ ಹಕ್ಕುಗಳನ್ನು ಜಾರಿಗೊಳಿಸಿಕೊಳ್ಳಬಹುದು. ಸರ್ಕಾರದ ನಿರ್ಲಕ್ಷ್ಯತನವನ್ನು ಬದಲಾಯಿಸಿಕೊಳ್ಳಬೇಕು ಮತ್ತು ಬಡವರ ಹಕ್ಕಗಳಿಗೆ ಸ್ಪಂದಿಸಬೇಕು. ಈ ಕಿವುಡರ ಕಿವಿಗೆ ಕೇಳಿಸಲು ನಮ್ಮ ಧ್ವನಿ ಮತ್ತಷ್ಟು ಗಟ್ಟಿಯಾಗಬೇಕು. ನಗಾರಿಯ ಮೂಲಕ ಉದ್ಘಾಟನೆಯಾದ ಈ ಸಮಾವೇಶದ ದನಿ ಕಿವುಡು ಸರ್ಕಾರಕ್ಕೆ ಎಚ್ಚರಿಕೆಯ ದನಿಯಾಗಬೇಕು’ ಎಂದರು.

ಶ್ರೀಮಂತರು ಈ ದೇಶವನ್ನು ತಮ್ಮ ಹಣದ ಶಕ್ತಿಯಿಂದ ಆಳುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಭೂಮಿ ಕಸಿಯಲು ಸಾಧ್ಯವಿಲ್ಲ ಎಂಬುದನ್ನು ಈ ಸರ್ಕಾರಗಳಿಗೆ ತೋರಿಸಬೇಕಿದೆ. ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸಬಹುದು ಆದರೆ ನಮ್ಮನ್ನು ಬಗ್ಗಿಸಲು ಸಾಧ್ಯವಿಲ್ಲ. ಅವರು ನಮ್ಮನ್ನು ಬೆದರಿಸಿ ಓಡಿಸಲು ಸಾಧ್ಯವಿಲ್ಲ. ಬಡವರ ಹಕ್ಕುಗಳ ಸಾಕಾರಕ್ಕಾಗಿ ಭೀಮ್ ಆರ್ಮಿ ಸಂಘರ್ಷಕ್ಕೆ ಮುಂದಾಗಲಿದೆ ನಿಮ್ಮೊಡನೆ ಯಾವಾಗಲೂ ಜೊತೆಗಿರುತ್ತೇನೆ ಎಂದರು. ದಕ್ಷಿಣ ಭಾರತಕ್ಕೆ ಮೊದಲ ಬಾರಿಗೆ ಆಗಮಿಸಿದ್ದ ದಲಿತರ ಸಿಡಿಲ ದನಿ ಚಂದ್ರಶೇಖರ್ ಆಝಾದ್ ರಾವಣ್ ಅವರ ಮಾತುಗಳನ್ನು ಕೇಳಲು ಸಾವಿರಾರು ಜನ ಮಂತ್ರಿ ಮಾಲ್ ಬಳಿಯ ಶಿರೂರ್ ಪಾರ್ಕ್ ನಲ್ಲಿ ಮಳೆ ನಡುವೆಯೂ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹೋರಾಟಗಾರ ನೂರ್ ಶ್ರೀಧರ್ ಅವರು “ಹಳ್ಳಿ ಬಿಟ್ಟು ನಗರಕ್ಕೆ ಜನ ವಲಸೆ ಬಂದರೆ ಗಟಾರಗಳ ಪಕ್ಕ ಕೆಟ್ಟ ವಾಸನೆಯ ಜೊತೆ ಬದುಕುವ ಪರಿಸ್ಥಿತಿ ಇದೆ. ಆ ಗಟಾರದ ಪಕ್ಕ ಇರುವ ಜಾಗವನ್ನೂ ಸಹ ಸರ್ಕಾರ ಬಡವರಿಗೆ ಬಿಟ್ಟು ಕೊಡುತ್ತಿಲ್ಲ. ಇಡೀ ದಿಡ್ಡಳ್ಳಿ ಜನ ಕೇಳಿದ್ದು ಏನು? ಕೂಲಿ ಮಾಡಲು ಸ್ವಾತಂತ್ರ್ಯ ಕೊಡಿ ಎಂದು. ಕೂಲಿಗೆ ಹೋಗಲು ನನ್ನದೇ ಒಂದು ಜಾಗ ಬೇಕು ಎಂದು ಕೇಳಿದರೆ ಅದನ್ನು ಕೊಡಲು ಆಗಲ್ಲ ಅಂದಿತು ಸರ್ಕಾರ. ಬೆಂಗಳೂರಿನ ಜಗಮಗಿಸುವ ಬೆಳಕಿನ ಕೆಳಗೆ ಗಂಭೀರವಾದ ಕತ್ತಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಂತೋಷದಿಂದ ಆಚರಿಸಬೇಕಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ದುಃಖ ಹಾಗೂ ನೋವಿನಿಂದ ಆಚರಿಸುತ್ತಿದ್ದೇವೆ. ಈ ದೇಶದ ಶೋಷಿತರಿಗೆ, ದಲಿತರಿಗೆ, ಮಹಿಳೆಯರಿಗೆ ನೈಜ ಸ್ವಾತಂತ್ರ್ಯ ಕೈಗೆಟುಕಿಲ್ಲ. ಈ ವರ್ಗಗಳಿಗೆ ಗೌರವಯುತವಾಗಿ ಹಾಗೂ ಸ್ವಾಭಿಮಾನದಿಂದ ಜೀವನ ನಡೆಸಲು ಸಾಧ್ಯವಾದಾಗ ಮಾತ್ರ ಸ್ವಾತಂತ್ರ್ಯಕ್ಕೆ ಒಂದು ಅರ್ಥ ಬರುತ್ತದೆ. ಇದು ಕೇವಲ ಗ್ರಾಮೀಣ, ಬುಡಕಟ್ಟು ಜನಗಳ ಸಮಸ್ಯೆಯಲ್ಲ. ನಗರವಾಸಿಗಳಾದ ಶ್ರಮಿಕನಗರವಾಸಿಗಳು (ಸ್ಲಂ ನಿವಾಸಿಗಳು) ಕೂಡಾ ದಿನನಿತ್ಯ ನರಳುತ್ತಿದ್ದಾರೆ. ಅವರು ಕೇಳುತ್ತಿರುವುದು ಸಾವಿರಾರು ಎಕರೆ ಭೂಮಿಯನ್ನಲ್ಲ ಬದಲಿಗೆ ಸ್ವಾಭಿಮಾನದಿಂದ ಬದುಕು ನಡೆಸಲು ಬೇಕಾದ ‘ತುಂಡು ಭೂಮಿ ಮತ್ತು ವಸತಿ ಮಾತ್ರ’ ಎಂದರು.

ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ: ಸಭೆ ಕರೆಯಲು ನಿರ್ಧಾರ

ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಡಾ.ಎ.ಲೋಕೇಶ್, ಸಂಪುಟ ರಚನೆಯಾದ 2 ದಿನಗಳಲ್ಲಿ ಭೂಮಿ ವಸತಿಯ ಹೈಪವರ್ ಸಮಿತಿಯ ಸಭೆ ಕರೆಯುವುದಾಗಿ ಭರವಸೆ ನೀಡಿದರು. ಅಲ್ಲಿ ಈ ಎಲ್ಲಾ ವಿಚಾರಗಳು ಕುರಿತು ಸವಿವರವಾಗಿ ಚರ್ಚೆ ನಡೆಸಿ ಪರಿಹಾರಕ್ಕೆ ಮುಂದಾಗೋಣ ಎಂದರು.

ಹಣತೆಯ ಮೆರವಣಿಗೆ

ಆಗಸ್ಟ್ 14ರ ಬುಧವಾರ ಸಂಜೆ 6 ಗಂಟೆಗೆ ಬೆಂಗಳೂರಿನ ರೈಲ್ವೇ ನಿಲ್ದಾಣದಿಂದ ‘ಹಣತೆಯೊಂದಿಗೆ ಮೆರವಣಿಗೆ’ಯನ್ನು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಬೆಂಗಳೂರು ಘಟಕದ ಅಧ್ಯಕ್ಷರಾದ ಕೆಜೆಎಸ್ ಮರಿಯಪ್ಪನವರು ಉದ್ಘಾಟಿಸಿದರು. ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಭೂಮಿ-ವಸತಿ ವಂಚಿತ ಬಡಜನರು ಮೇಣದ ಹಣತೆಯೊಂದಿಗೆ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಂತ್ರಿ ಮಾಲ್ ಬಳಿಯ ಸಿರೂರ್ ಪಾರ್ಕ್ ಮೈದಾನದಲ್ಲಿ ಸೇರಿ ಅಹೋರಾತ್ರಿ ಸತ್ಯಾಗ್ರಹವನ್ನು ನಡೆಸಿದರು.

ಹಿರಿಯ ಸ್ವಾತಂತ್ರ್ಯ ಸೇನಾನಿ, ಶತಾಯುಶಿ ಎಚ್.ಎಸ್.ದೊರೆಸ್ವಾಮಿಯವರು ನಡುರಾತ್ರಿ 12 ಗಂಟೆಗೆ ಧ್ವಜಾರೋಹಣವನ್ನು ನೆರವೇರಿಸಿ ಭೂಮಿ-ವಸತಿ ಹಕ್ಕು ವಂಚಿತರನ್ನು ಉದ್ದೇಶಿಸಿ ಬಡವರ ವಿಮುಕ್ತಿಯೇ ನಿಜವಾದ ಸ್ವಾತಂತ್ರ್ಯ ಅದಕ್ಕಾಗಿ ಕೊನೆಯುಸಿರು ಇರುವವರೆಗೂ ಹೋರಾಡುತ್ತೇನೆ ಎಂದು ಶಪಥ ಮಾಡಿದರು.

ಸಿರೂರ್ ಪಾರ್ಕ್ ಮೈದಾನದಲ್ಲಿ ನಡುರಾತ್ರಿ ಸ್ವಾತಂತ್ರ್ಯದ ಸಮಾವೇಶವನ್ನು ನಗಾರಿ ಬಾರಿಸುವ ಮೂಲಕ ನೆರೆದ ಹೋರಾಟಗಾರರು ಉದ್ಘಾಟಿಸಿದರು. ಉದ್ಘಾಟನೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ, ಭೀಮ್ ಆರ್ಮಿಯ ಸಂಸ್ಥಾಪಕರಾದ ಚಂದ್ರಶೇಖರ್ ರಾವಣ್, ಡಾ.ವಿಜಯ, ನೂರ್ ಶ್ರೀಧರ್, ಡಿ.ಎಚ್.ಪೂಜಾರ್, ಸಿದ್ದನಗೌಡ ಪಾಟೀಲ್, ಆರ್. ಮಾನಸಯ್ಯ, ಇಂದಿರಾ ಕೃಷ್ಣಪ್ಪ, ಕುಮಾರ್ ಸಮತಳ, ಸಿರಿಮನೆ ನಾಗರಾಜ್, ಹೆಗ್ಗೋಡು ಪ್ರಸನ್ನ, ಸಿದ್ಧನಗೌಡ ಮೋದಿಗೆ, ವೆಂಕಟೇಶ್ ಅಗಲಗಂಚಿ, ವಿಶ್ವಶಾಂತಿ ಸೌಹಾರ್ದ ಪೀಠದ ಸಂಸ್ಥಾಪಕರಾದ ವಿಜಯಾನಂದ ಸ್ವಾಮೀಜಿಗಳು ಮುಂತಾದವರು ಉಪಸ್ಥಿತರಿದ್ದರು.

ರಾತ್ರಿಯೆಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಡಜನರ ಪರ ಘೋಷಣೆಗಳು ಮೊಳಗಿದವು. ಬೆಳಿಗ್ಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಪೇರೇಡ್ ಮೈದಾನದ ಕಡೆಗೆ ಮೆರವಣಿಗೆ ಮಾಡಲು ಸಮಿತಿಯು ಸಿದ್ಧತೆ ನಡೆಸಿತ್ತು. ಆದರೆ ಸರ್ಕಾರದ ವತಿಯಿಂದ ಪ್ರತಿನಿಧಿಗಳು ಬಂದು ಬಡಜನರ ಸಮಸ್ಯೆಯನ್ನು ಆಲಿಸಿ ಸಭೆ ನಿಗಧಿ ಮಾಡಿದ್ದರಿಂದ ಹೋರಾಟವನ್ನು 12 ಗಂಟೆಗೆ ಅಂತ್ಯಗೊಳಿಸಲಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...