ಹಿಜಾಬ್ ವಿಚಾರವಾಗಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ತಮಿಳುನಾಡಿನ ಚೆನ್ನೈನಲ್ಲಿರುವ ದಿ ನ್ಯೂ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ರಾಜ್ಯ ಹೈಕೋರ್ಟ್ ಮಂಗಳವಾರದಂದು ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ಹೇಳಿದ್ದು, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದಿದೆ.
ಸಾವಿರಾರು ವಿದ್ಯಾರ್ಥಿಗಳು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದು, ಅವರು ಹಿಡಿದಿರುವ ಬಿತ್ತಿಪತ್ರಗಳಲ್ಲಿ, ‘ಸಾಂಸ್ಕೃತಿಕ ನರಮೇಧದ ವಿರುದ್ಧ ಹೋರಾಟ’ ಮತ್ತು ‘ನಾವು ಹಿಜಾಬ್ ಅನ್ನು ಬೆಂಬಲಿಸುತ್ತೇವೆ’ ಎಂದು ಬರೆಯಲಾಗಿದೆ.
Students of New College in Chennai protest Karnataka High Court order that upheld ban on hijab in educational institutions. @TheQuint pic.twitter.com/C90qqRJjiA
— Nikhila Henry (@NikhilaHenry) March 15, 2022
ಇಂದು ಮುಂಜಾನೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಅವರು ನೀಡಿದ ತೀರ್ಪಿನಲ್ಲಿ, “ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಮಿಕ್ ನಂಬಿಕೆಯಲ್ಲಿ ಅತ್ಯಗತ್ಯವಾದ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ನಾವು ಪರಿಗಣಿಸಿದ್ದೇವೆ” ಎಂದು ಹೇಳಿದ್ದಾರೆ
“ಶಾಲಾ ಸಮವಸ್ತ್ರದ ಸೂಚನೆಯನ್ನು ಅನ್ನು ವಿರೋಧಿಸಲು ಸಾಧ್ಯವಿಲ್ಲ, ಅದು ಸಮಂಜಸವಾದ ನಿರ್ಬಂಧವಾಗಿದೆ” ಎಂದು ಅವರು ತೀರ್ಪಿನಲ್ಲಿ ಹೇಳಿದ್ದಾರೆ.
ಹಿಜಾಬ್ ಪರವಾಗಿ ಮೊದಲು ಪ್ರತಿಭಟನೆ ಆರಂಭಿಸಿದ ಉಡುಪಿ ಕಾಲೇಜಿನ ವಿದ್ಯಾರ್ಥಿಗಳು ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಲಿದ್ದಾರೆ ಎಂದು ಸುಪ್ರೀಂ ಕೋರ್ಟ್ನ ವಕೀಲ ಅನಸ್ ತನ್ವೀರ್ ಟ್ವೀಟ್ ಮಾಡಿದ್ದಾರೆ. “ಹಿಜಾಬ್ ವಿಚಾರವಾಗಿ ಉಡುಪಿಯ ನನ್ನ ಕಕ್ಷಿದಾರರನ್ನು ಭೇಟಿಯಾದೆ. ಶೀಘ್ರದಲ್ಲೇ ಸುಪ್ರೀಂಕೋರ್ಟ್ಗೆ ಹೋಗುತ್ತಿದ್ದೇನೆ, ಇನ್ಶಾ ಅಲ್ಲಾಹ್. ಈ ಹುಡುಗಿಯರು ಹಿಜಾಬ್ ಧರಿಸುವ ತಮ್ಮ ಹಕ್ಕುಗಳನ್ನು ಚಲಾಯಿಸುತ್ತಲೇ ತಮ್ಮ ಶಿಕ್ಷಣವನ್ನು ಮುಂದುವರಿಸುತ್ತಾರೆ, ಇನ್ಶಾ ಅಲ್ಲಾಹ್. ಈ ಹುಡುಗಿಯರು ಸಂವಿಧಾನ ಮತ್ತು ನ್ಯಾಯಾಲಯದ ಮೇಲಿನ ಭರವಸೆ ಕಳೆದುಕೊಂಡಿಲ್ಲ…” ಎಂದು ಹೇಳಿದ್ದಾರೆ.
Met my clients in Hijab matter in Udupi. Moving to SC soon In sha Allah. These girls will In sha Allah continue their education while exercising their rights to wear Hijab. These girls have not lost hope in Courts and Constitution.#Hijab pic.twitter.com/MFVJkQGj5T
— Anas Tanwir (बुकरात वकील) (@Vakeel_Sb) March 15, 2022
ಇದನ್ನೂ ಓದಿ: ಹಿಜಾಬ್ ಬಗ್ಗೆ ಹೈಕೋರ್ಟ್ ನೀಡಿರುವ ತೀರ್ಪು ಒಂದು ಧರ್ಮವನ್ನು ಗುರಿಯಾಗಿಸಿದೆ: ಅಸಾದುದ್ದೀನ್ ಓವೈಸಿ ಆಕ್ರೋಶ
ನ್ಯಾಯಾಂಗ ಉಲ್ಲಂಘನೆ ಆದಾರದ ಮೇಲೆ ಒದ್ದು ಒಳಗೆ ಹಾಕಬೇಕಿದೆ ಇವರಿಗೆ
ಕಡ್ಡಿ ಇದ್ದನ್ನ ಗುಡ್ಡ ಮಾಡಿ ರಾಜಕಾರಿಣಿಗಳು ಮಜಾ ನೋಡ್ತಾ ಇದ್ದಾರೆ. ಹಿಂದೂ ಮುಸ್ಲಿಮ್ ಸಾಮರಸ್ಯದಿಂದ ಬದುಕುತಿದ್ದವರನ್ನ ವೈರಿಗಳನ್ನಾಗಿ ಮಾಡಿ ಮಜಾ ನೋಡ್ತಾ ಇದ್ದಾರೆ. ಮೊದಲು ಈ ರಾಜಕಾರಿಣಿಗಳು ಹಾಗೂ ಗೊಧಿ ಮೀಡಿಯಾದವರನ್ನ ಹಿಡಿತದಲ್ಲಿಡಬೇಕು..
ಹೈಕೋರ್ಟಿನ ಈ ತೀರ್ಪಿನಿಂದ ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗಲಿದೆ. ಮನುವಾದಿಗಳು ಬಯಸಿದ್ದೂ ಇದನ್ನೇ. ಇದು ಆಗಬಾರದಿತ್ತು.