ಅಧಿಕೃತ ಪೈಪ್ ನೀರು ಮತ್ತು ಒಳಚರಂಡಿ ಸಂಪರ್ಕವಿಲ್ಲದ ದೆಹಲಿ ನಿವಾಸಿಗಳಿಗೆ ಸಹಾಯ ಮಾಡಲು ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಇಳಿಸಲಾಗಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಕೈಗೊಂಡಿರುವ ಈ ಕ್ರಮದಿಂದ ನೀರಿನಿಂದ ಮತ್ತು ಗಾಳಿಯಿಂದ ಹರಡುವ ರೋಗಗಳ ಪ್ರಕರಣಗಳನ್ನು ತಗ್ಗಿಸುತ್ತದೆ ಎಂದು ಹೇಳಲಾಗಿದೆ. ಶುದ್ಧ ನೀರನ್ನು ಮನೆ ಮನೆಗೂ ತಲುಪಿಸುವ ಯೋಜನೆಗೆ ಇದು ಪೂರಕವಾಗಿದೆ. ಇಷ್ಟು ದಿನ ಲಕ್ಷಗಟ್ಟಲೇ ಹಣ ಸುರಿಯುತ್ತಿದ್ದ ಜನರು ಕಡಿಮೆ ಹಣದಲ್ಲಿ ನೀರಿನ ಸಂಪರ್ಕ ವ್ಯವಸ್ಥೆ ಹೊಂದಬಹುದು ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
दिल्ली सरकार ने आज फैसला लिया है कि पानी व सीवर के नए कनेक्शन के लिए अब सिर्फ ₹2,310 देने होंगे। पहले नए कनेक्शन के लिए हजारों, लाखों रुपए देने पड़ते थे। मुझे विश्वास है कि अब लोग अधिकृत कनेक्शन लेना शुरू करेंगे। ये कदम अपने आप में पानी के क्षेत्र में बहुत बड़ा सुधार साबित होगा। pic.twitter.com/OPlbv7wKF3
— Arvind Kejriwal (@ArvindKejriwal) November 22, 2019
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಜಲಮಂಡಳಿ ಹೊಸ ನೀರು ಮತ್ತು ಒಳಚರಂಡಿ ಸಂಪರ್ಕದ ಶುಲ್ಕದ ಮೂಲ ಮೊತ್ತವನ್ನು 1/50 ಕ್ಕೆ ಇಳಿಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ಅಂದರೆ 200 ಚದರ ಮೀಟರ್ ಪ್ರದೇಶಕ್ಕೆ 1,14,110 ರೂ. ಕಟ್ಟುವ ಬದಲು ಕೇವಲ 2310 ರೂ. ಕಟ್ಟುವ ಸೌಲಭ್ಯ ದೊರೆತಿದೆ.
मेरा मकसद है, दिल्ली के लोगों तक साफ पानी पहुंचाना : सीएम
✅हमारी सरकार बनने के वक्त दिल्ली के 58 फीसदी जगहों पर ही पानी की पाइपलाइन थी, वहीं अब 93 फीसदी पाइपलाइन बिछ चुकी है : @ArvindKejriwal
✅मीडिया छानबीन में सामने आ चुका है BIS रिपोर्ट का फर्जीवाड़ा। pic.twitter.com/6VTlhXWi9u
— AAP (@AamAadmiParty) November 23, 2019
ಸರಿಸುಮಾರು ಶೇ. 18ರಷ್ಟು ಜನ ಇದರ ಪ್ರಯೋಜನ ಪಡೆಯಲಿದ್ದಾರೆ. ದೆಹಲಿಯ ಸುಮಾರು 6 ಲಕ್ಷ ಕುಟುಂಬಗಳು ಪ್ರಸ್ತುತ ಕೊಳವೆ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಹೊಂದಿಲ್ಲ. ಈ ಮನೆಗಳು ಹೆಚ್ಚಾಗಿ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿವೆ.
ದೆಹಲಿ ಜಲ ಮಂಡಳಿಯ ಅಧ್ಯಕ್ಷರೂ ಆಗಿರುವ ಸಿಎಂ ಕೇಜ್ರಿವಾಲ್ ಅವರು ಹೊಸ ನೀರು ಮತ್ತು ಒಳಚರಂಡಿ ಸಂಪರ್ಕಕ್ಕಾಗಿ ಅಭಿವೃದ್ಧಿ ಮತ್ತು ಮೂಲಸೌಕರ್ಯ ಶುಲ್ಕವನ್ನು ಮನ್ನಾ ಮಾಡಿದ್ದಾರೆ. ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಾಗ ಮೀಟರ್ಗೆ 500 ರೂ. ಇದ್ದಿದ್ದನ್ನು 100 ರೂ.ಗೆ ಇಳಿಸಿದರು. ಆದಾಗ್ಯೂ, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಿಗೆ ವೆಚ್ಚ ಕಡಿತ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಭವ್ಯ ದೇಗುಲ ನಿರ್ಮಾಣವಾಗಲಿ ಎಂದು ಕಾಂಗ್ರೆಸ್ ಬಯಸುತ್ತದೆ: ಸಚಿನ್ ಪೈಲಟ್
ನೀರಿನ ಪೈಪ್ಲೈನ್ ಮೂಲಕ ಅಕ್ರಮ ಎಸಗುತ್ತಿದ್ದವರಿಗೆ ಇದು ಕಡಿವಾಣ ಹಾಕಿದೆ. ನಿರ್ದಿಷ್ಟ ಪ್ರದೇಶಗಳಲ್ಲಿ ಡಿಜೆಬಿ ನೀರಿನ ಪೈಪ್ಲೈನ್ಗಳನ್ನು ಹಾಕಿದ್ದರೂ, ಹೆಚ್ಚಿನ ಅಭಿವೃದ್ಧಿ ಮತ್ತು ಮೂಲಸೌಕರ್ಯ ಶುಲ್ಕದಿಂದಾಗಿ ಹೆಚ್ಚಿನ ನಿವಾಸಿಗಳು ಇನ್ನೂ ಸಂಪರ್ಕವನ್ನು ಪಡೆದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಪೈಪ್ಲೈನ್ಗಳು, ನೀರು ಸಂಸ್ಕರಣಾ ಘಟಕಗಳು ಮತ್ತು ಪಂಪಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಸರ್ಕಾರ ಈ ಅವಶ್ಯಕತೆಗಳಲ್ಲಿ ಹೂಡಿಕೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಆಪ್ ಅಧಿಕಾರಾವಧಿಯಲ್ಲಿ, 2014 ರಿಂದ 1,047 ಚದರ ಕಿ.ಮೀ ವ್ಯಾಪ್ತಿಯಲ್ಲಿ ನೀರಿನ ಪೈಪ್ಲೈನ್ಗಳನ್ನು ಹೊಂದಿರುವವರ ಸಂಖ್ಯೆ ಶೇ. 58 ರಿಂದ ಶೇ. 93ಕ್ಕೆ ಏರಿಕೆಯಾಗಿದೆ. ಕಡಿತಗೊಳಿಸಿದ ಶುಲ್ಕಗಳು ದೆಹಲಿಯಲ್ಲಿ ಲೆಕ್ಕವಿಲ್ಲದ ಅಥವಾ ಆದಾಯರಹಿತ ನೀರನ್ನು ತಗ್ಗಿಸುತ್ತವೆ ಹಲವು ಜನ ಅಕ್ರಮ ಸಂಪರ್ಕವನ್ನು ಬಿಟ್ಟಿದ್ದಾರೆ.
ಪ್ರಸ್ತುತ ನೀರಿನ ಅಭಿವೃದ್ಧಿ ಶುಲ್ಕ ಪ್ರತಿ ಚದರ ಮೀಟರ್ಗೆ 440 ರೂ. ಮತ್ತು ಒಳಚರಂಡಿ ಅಭಿವೃದ್ಧಿ ಶುಲ್ಕ, ಚದರ ಮೀಟರ್ಗೆ 494 ರೂ. ಇದೆ. ಈಗ ಎಲ್ಲಾ ದೆಹಲಿ ಜಲ ಮಂಡಳಿ ಗ್ರಾಹಕರು ಆ ಆರೋಪಗಳಿಂದ ಮುಕ್ತರಾಗಿದ್ದಾರೆ. ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಮೂಲಸೌಕರ್ಯವನ್ನು ಖಾತ್ರಿಪಡಿಸಿಕೊಳ್ಳಲು ದೆಹಲಿ ಜಲ ಮಂಡಳಿಯು ಜಿಟಿ ರಸ್ತೆಯಲ್ಲಿ (ಶಹದ್ರಾ) ಹೆಚ್ಚುವರಿ ಭೂಗತ ಜಲಾಶಯ ಮತ್ತು ಬೂಸ್ಟರ್ ಪಂಪಿಂಗ್ ಸ್ಟೇಷನ್ನಂತಹ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುತ್ತಿದೆ ಎಂದು ಸಿಎಂ ಘೋಷಿಸಿದ್ದಾರೆ.
ಬಡ ಪ್ರದೇಶಗಳಾದ ಪುನರ್ವಸತಿ ವಸಾಹತುಗಳು, ಕೊಳೆಗೇರಿಗಳು ಮತ್ತು ಜೆಜೆ ಕ್ಲಸ್ಟರ್ಗಳು ದೆಹಲಿಯವರಿಗೆ ಕೊಳವೆ ನೀರು ಮತ್ತು ಆರೋಗ್ಯಕರ ಒಳಚರಂಡಿ ವ್ಯವಸ್ಥೆ ಹೊಂದಿಲ್ಲದ ಪ್ರದೇಶಗಳಾಗಿವೆ. ದೂರದಿಂದ ಕೊಳಕು ನೀರನ್ನು ತಂದು ಹಲವು ದಿನಗಳವರೆಗೆ ಸಂಗ್ರಹಿಸಿಡುತ್ತಾರೆ. ಹೀಗಾಗಿ ರೋಗ-ರುಜಿನ ಹೆಚ್ಚಿದೆ. ಸರಿಯಾದ ಪೈಪ್ಲೈನ್ ಅಥವಾ ನೀರು ಮತ್ತು ಒಳಚರಂಡಿ ವ್ಯವಸ್ಥೆಯಿದ್ದರೆ ರೋಗಗಳ ಪ್ರಕರಣಗಳನ್ನು ತಗ್ಗಿಸುತ್ತದೆ.
ದೆಹಲಿ ಜಲ ಮಂಡಳಿಯು ಸೋನಿಯಾ ವಿಹಾರ್ ಮತ್ತು ರಾಜೀವ್ ನಗರದಲ್ಲಿ 110 ಕಿ.ಮೀ ಹೊಸ ಒಳಚರಂಡಿ ಮಾರ್ಗ ನಿರ್ಮಿಸಲಿದೆ. ರಾಜಧಾನಿಯ ಅನೇಕ ಪ್ರದೇಶಗಳ ಕಿರಿದಾದ ಬೀದಿಗಳನ್ನು ತೆರವುಗೊಳಿಸಲು ಡಿಜೆಬಿ ಹೊಸ ಒಳಚರಂಡಿ ಶುಚಿಗೊಳಿಸುವ ಯಂತ್ರಗಳನ್ನು ನಿಯೋಜಿಸುತ್ತಿದೆ.
ಕೇಜ್ರೀವಾಲರ ಈ ಕ್ರಮ ಸ್ವಾಗತಾರ್ಹ. ಆಡಳಿತಾರೂಢರು ಮನಸ್ಸು ಮಾಡಿದರೆ ಇಂತಹ ಜನಪರ ಕಾರ್ಯಗಳನ್ನು ಜಾರಿಗೊಳಿಸಬಹುದು ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ.