ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಎರಡನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಹಿರಿಯ ಕಾಂಗ್ರೆಸ್ ಮುಖಂಡ ಮುಕುಲ್ ವಾಸ್ನಿಕ್ 42 ಜನರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಸಮಿತಿ ಅಂತಿಮಗೊಳಿಸಿರುವ 2ನೇ ಪಟ್ಟಿ ಹೀಗಿದೆ. ಕಾಂಗ್ರೆಸ್ಅನ್ನು ಅಧಿಕಾರಕ್ಕೆ ತರುವ ಬಹು ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ಎಲ್ಲರಿಗೂ ಶುಭವಾಗಲಿ. ಛಲಬಿಡದೆ ಗುರಿಯತ್ತ ಮುನ್ನಡೆಯಿರಿ. ಕರುನಾಡಿನಲ್ಲಿ ಕಾಂಗ್ರೆಸ್ ಸೂರ್ಯೋದಯಕ್ಕೆ ಇನ್ನೊಂದು ತಿಂಗಳಷ್ಟೇ ಬಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಅಭ್ಯರ್ಥಿಗಳ ಪಟ್ಟಿ ಕೆಳಗಿನಂತಿದೆ.
- ನಿಪ್ಪಾಣಿ – ಕನಕಸಾಹೇಬ್ ಪಾಟೀಲ್
- ಗೋಕಾಕ್ – ಮಹಾಂತೇಶ್ ಕಡದಿ
- ಕಿತ್ತೂರು – ಬಾಬಾಸಾಹೇನ್ ಡಿ ಪಾಟೀಲ್
- ಸವದತ್ತಿ ಯಲ್ಲಮ್ಮ – ವಿಶ್ವಾಶ್ ವಸಂತ್ ವೈದ್ಯ
- ಮುಧೋಳ್ (ಎಸ್ಸಿ) – ರಾಮಪ್ಪ ಬಾಳಪ್ಪ ತಿಮ್ಮಾಪೂರ್
- ಬೀಳಗಿ – ಜೆ.ಟಿ ಪಾಟೀಲ್
- ಬಾದಾಮಿ – ಭೀಮಸೇನ್ ಬಿ ಚಿಮ್ಮನಟ್ಟಿ
- ಬಾಗಲಕೋಟೆ – ಹುಲ್ಲಪ್ಪ ವೈ ಮೇಟಿ
- ಬಿಜಾಪುರ ನಗರ – ಅದ್ಬುಲ್ ಹಮೀದ್ ಖಾಜಸಾಹೇಬ್ ಮುಶ್ರಿಫ್
- ನಾಗಠಾಣ (ಎಸ್ಸಿ) ವಿಠ್ಠಲ್ ಕಟಕದೊಂಡ್
- ಅಫಜಲಪುರ – ಎಂ.ವೈ ಪಾಟೀಲ್
- ಯಾದಗಿರಿ – ಚನ್ನರೆಡ್ಡಿ ಪಾಟೀಲ್
- ಗುರುಮಿಠಕಲ್ – ಬಾಬುರಾವ್ ಚಿಂಚನಸೂರ್
- ಗುಲ್ಬರ್ಗ ದಕ್ಷಿಣ- ಅಲ್ಲಮಪ್ರಭು ಪಾಟೀಲ್
- ಬಸವಕಲ್ಯಾಣ – ವಿನಯ್ ಧರಂ ಸಿಂಗ್
- ಗಂಗಾವತಿ – ಇಕ್ವಾಲ್ ಅನ್ಸಾರಿ
- ನರಗುಮದ್ – ಬಿ.ಆರ್ ಯಾವಗಲ್
- ಧಾರವಾಡ – ವಿನಯ್ ಕುಲಕರ್ಣಿ
- ಕಲಘಟಗಿ – ಸಂತೋಷ್ ಲಾಡ್
- ಸಿರಸಿ – ಭೀಮಣ್ಣ ನಾಯ್ಕ್
- ಯೆಲ್ಲಾಪುರ – ವಿ.ಎಸ್ ಪಾಟೀಲ್
- ಕೂಡ್ಲಿಗಿ (ಎಸ್ಟಿ) ಡಾ.ಶ್ರೀನಿವಾಸ್ ಎನ್.ಟಿ
- ಮೊಳಕಾಲ್ಮೂರು (ಎಸ್ಟಿ) – ಎನ್.ವೈ ಗೋಪಾಲಕೃಷ್ಣ
- ಚಿತ್ರದುರ್ಗ – ಕೆ.ಸಿ ವೀರೇಂದ್ರ
- ಹೊಳ್ಕಕೆರೆ (ಎಸ್ಸಿ)- ಆಂಜನೇಯ ಎಚ್
- ಚನ್ನಗಿರಿ – ಬಸವರಾಜು ವಿ ಶಿವಗಂಗ
- ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್
- ಉಡುಪಿ – ಪ್ರಸಾದರಾಜ್ ಕಂಚನ್
- ಕಡೂರ್ – ಆನಂದ ಕೆ.ಎಸ್
- ತುಮಕೂರು ನಗರ – ಇಕ್ಬಾಲ್ ಅಹ್ಮದ್
- ಗುಬ್ಬಿ – ಎಸ್.ಆರ್ ಶ್ರೀನಿವಾಸ್
- ಯೆಲಹಂಕ – ಕೇಶವ ರಾಜಣ್ಣ
- ಯಶವಂತಪುರ – ಎಸ್.ಬಾಲರಾಜ್ ಗೌಡ
- ಮಹಾಲಕ್ಷ್ಮಿ ಲೇಔಟ್ – ಕೇಶವ ಮೂರ್ತಿ
- ಪದ್ಮನಾಭನಗರ – ವಿ.ರಘುನಾಥ ನಾಯ್ಡು
- ಮೇಲುಕೋಟೆ – ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯನವರಿಗೆ ಬೆಂಬಲ
- ಮಂಡ್ಯ – ಪಿ. ರವಿಕುಮಾರ್
- ಕೆ.ಆರ್ ಪೇಟೆ – ಬಿ.ಎಲ್ ದೇವರಾಜ್
- ಬೇಲೂರು – ಬಿ.ಶಿವರಾಂ
- ಮಡಿಕೇರಿ – ಡಾ.ಮಂತರ್ ಗೌಡ
- ಚಾಮುಂಡೇಶ್ವರಿ – ಸಿದ್ದೇಗೌಡ
- ಕೊಳ್ಳೇಗಾಲ (ಎಸ್ಸಿ) – ಎ.ಆರ್ ಕೃಷ್ಣ ಮೂರ್ತಿ
Congress releases second list of 42 candidates for Karnataka Assembly elections pic.twitter.com/wzpumgNTf3
— ANI (@ANI) April 6, 2023
ಧಾರವಾಡ ವಿಧಾನಸಭಾ ಕ್ಷೇತ್ರದಿಂದ ವಿನಯ್ ಕುಲಕರ್ಣಿ ಅವರನ್ನು ಅಖಾಡಕ್ಕಿಳಿಸಿದರೆ, ಕಲಘಟಗಿಯಿಂದ ಸಂತೋಷ್ ಲಾಡ್, ತೀರ್ಥಹಳ್ಳಿಯಿಂದ ಕಿಮ್ಮನೆ ರತ್ನಾಕರ್, ಗುಬ್ಬಿ ಕ್ಷೇತ್ರದಿಂದ ಎಸ್ ಆರ್ ಶ್ರೀನಿವಾಸ್, ಕಡೂರ್ನಿಂದ ಆನಂದ, ನಿಪ್ಪಾಣಿ ಕಾಕಾ ಸಾಹೇಬ್ ಪಾಟೀಲ್ಗೋ, ಕಾಕ್ನಿಂದ ಮಹಾಂತೇಶ್ ಕಡಾಡಿ, ಬೀಳಗಿಯಿಂದ ಜೆ ಟಿ ಪಾಟೀಲ್, ಮುಧೋಳ್ದಿಂದ ರಾಮಪ್ಪ ತಿಮ್ಮಾಪುರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಬಾಬುರಾವ್ ಚಿಂಚನಸೂರು ಅವರಿಗೆ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಇದನ್ನೂ ಓದಿ: ವಿಧಾನಸಭಾ ಚುನಾವಣೆ: 124 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ; ಇಲ್ಲಿದೆ ವಿವರ