Homeನ್ಯಾಯ ಪಥವಿಶ್ವದೆಲ್ಲೆಡೆ ಬಹುತೇಕ ರದ್ದುಗೊಂಡಿರುವ ವಸಾಹತುಶಾಹಿ ಪಳೆಯುಳಿಕೆ ಕಾನೂನು ‘ನ್ಯಾಯಾಂಗ ನಿಂದನೆ’

ವಿಶ್ವದೆಲ್ಲೆಡೆ ಬಹುತೇಕ ರದ್ದುಗೊಂಡಿರುವ ವಸಾಹತುಶಾಹಿ ಪಳೆಯುಳಿಕೆ ಕಾನೂನು ‘ನ್ಯಾಯಾಂಗ ನಿಂದನೆ’

- Advertisement -
- Advertisement -

ಪ್ರಶಾಂತ್ ಭೂಷಣ್ ಅವರು ಮಾಡಿದ್ದ ಎರಡು ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರನ್ನು ತಪ್ಪಿತಸ್ಥರೆಂದು ತೀರ್ಪಿತ್ತಿದೆ. ‘ಇವು ಭಾರತದ ಸುಪ್ರೀಂ ಕೋರ್ಟ್ ಸಂಸ್ಥೆಯ ಮತ್ತು ಮುಖ್ಯ ನ್ಯಾಯಮೂರ್ತಿಗಳ ಘನತೆಯನ್ನು ಮತ್ತು ಅಧಿಕಾರವನ್ನು ಕುಂದಿಸುವುದೂ ಅಲ್ಲದೆ ನ್ಯಾಯದಾನ ವ್ಯವಸ್ಥೆಯನ್ನು ನಿಂದಿಸಿವೆ’, ಎಂದು ಹೇಳಿರುವುದಲ್ಲದೆ ‘ನಿರ್ಭೀತ ಮತ್ತು ನಿಷ್ಪಕ್ಷಪಾತ ನ್ಯಾಯವನ್ನು ನೀಡುವ’ ನ್ಯಾಯಾಂಗದ ಸಾಮರ್ಥ್ಯದಲ್ಲಿ ‘ಜನರ ನಂಬಿಕೆ ಮತ್ತು ವಿಶ್ವಾಸವನ್ನು’ ಟ್ವೀಟ್‌ಗಳು ದುರ್ಬಲಗೊಳಿಸುತ್ತವೆೆ ಎಂದೂ ಹೇಳಿದೆ.

ಈ ತೀರ್ಪಿನಿಂದ ಸುಪ್ರೀಂ ಕೋರ್ಟ್, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ನೀಡಲಾದ ರಕ್ಷಣೆಯನ್ನು ಸಂಕುಚಿತಗೊಳಿಸಿದ್ದಲ್ಲದೆ ಸಾಮಾನ್ಯವಾಗಿ ಅತಿವಿರಳವಾಗಿ ಆರೋಪಿಸುವ ಅಧಿಕಾರದ ತನ್ನ ನ್ಯಾಯವ್ಯಾಖ್ಯಾನವನ್ನೆ ಉಪೇಕ್ಷಿಸಿದೆ.

ಇದನ್ನೂ ಓದಿ: ಪ್ರಶಾಂತ್ ಭೂಷಣ್ ಮೇಲಿನ ಸುಪ್ರೀಂಕೋರ್ಟ್ ಕ್ರಮ ಅಸಂವಿಧಾನಿಕ: ನ್ಯಾಯಮೂರ್ತಿ ಕರ್ಣನ್

ಎಸ್ ಮಳ್ಗಾಂವ್ಕರ್ ಪ್ರಕರಣದಲ್ಲಿ ಜಸ್ಟೀಸ್ ಕೃಷ್ಣ ಅಯ್ಯರ್ ಅವರ ತಿಳಿವಳಿಕೆಯನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ: ಅವರು ಅಂದು ಹೇಳಿದ ವಿವೇಕದ ಮಾತುಗಳು ‘ಘನವಾದ ಉದಾರವಾದಿತನದಿಂದ ನ್ಯಾಯಾಲಯ ಕ್ಲುಲ್ಲಕ ಮತ್ತು ಲಘುವಾದ ಅಪರಾಧಗಳನ್ನು ಉಪೇಕ್ಷಿಸಲು ನಿರ್ಧರಿಸಿದೆ – ನಾಯಿಗಳು ಬೊಗಳಬಹುದು, ರಥ ಮುಂದುವರೆಯುತ್ತದೆ’ ಎಂದಿದ್ದವು.

ಪ್ರಶಾಂತ್‌ ಭೂಷಣ್ ಮಾಡಿದ್ದ ಟ್ವೀಟ್

ಆದರೆ ಈ ಟ್ವೀಟ್‌ಗಳ ವಿಚಾರದಲ್ಲಿ ಜಸ್ಟಿಸ್ ಅಯ್ಯರ್ ಅವರ ಮೇಲ್ಪಂಕ್ತಿಯನ್ನು ಸುಪ್ರೀಂ ಕೋರ್ಟ್ ಉಪೇಕ್ಷಿಸಿರುವುದು ಮಾತ್ರವಲ್ಲ ಆ ಟ್ವೀಟ್‌ಗಳು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರ ಭರವಸೆಗೆ ಧಕ್ಕೆ ತಂದಿವೆ ಎನ್ನುವ ರೀತಿಯಲ್ಲಿ ಪರಿಗಣಿಸಿದ್ದಾರೆ.

ಜೊತೆಗೆ ತಮ್ಮ ಅಫಿಡವಿಟ್ ಮೂಲಕ ಪ್ರಶಾಂತ್ ಭೂಷಣ್ ತಾವು ಮಾಡಿರುವ ಟೀಕೆಗಳಿಗೆ ಪೂರಕವಾದ ವಿಸ್ತೃತ ದಾಖಲೆ ಒದಗಿಸಿರುವುದನ್ನು ನೋಡಿದ ಮೇಲೆ ಅಂತಹ ಟೀಕೆಗಳನ್ನು ಕೇವಲ ನ್ಯಾಯಾಂಗ ಕ್ಷೇತ್ರದ ಪಂಡಿತರು ಮತ್ತು ಮಾಧ್ಯಮ ಕ್ಷೇತ್ರದವರು ಮಾತ್ರವಲ್ಲದೆ ಹಲವು ಮಾಜಿ ನ್ಯಾಯಾಧೀಶರೂ ಕೂಡ ಮಾಡಿದ್ದಾರೆ ಎಂಬುದನ್ನು ಗಮನಿಸಿದ ಮೇಲೆ ಸುಪ್ರೀಂ ಕೋರ್ಟ್ ನಿರ್ಧಾರ ಅಚ್ಚರಿಯುಂಟುಮಾಡುತ್ತದೆ.

ಇದನ್ನೂ ಓದಿ: ಸುಪ್ರೀಂಕೋರ್ಟಿನಲ್ಲಿ ಪ್ರಶಾಂತ್ ಭೂಷಣ್ ಅವರ ಐತಿಹಾಸಿಕ ಹೇಳಿಕೆಯ ಪೂರ್ಣಪಾಠ

ಇಂಥ ಗಂಭೀರವಲ್ಲದ ಸಂಗತಿಗಳಿಗೆ ಕೋರ್ಟು ಅತಿ ಸೂಕ್ಷ್ಮತೆಯಿಂದ ಅಸಮಾಧಾನಗೊಂಡಂತೆ ಪ್ರತಿಕ್ರಿಯಿಸುತ್ತಿರುವುದು, ನ್ಯಾಯಾಂಗನಿಂದನೆ ಅಧಿಕಾರವನ್ನು ಸೀಮಿತವಾಗಿ ಪರಿಗಣಿಸುವ ಕೋರ್ಟುಗಳಿರುವ ಜಗತ್ತಿನ ಇತರೆ ಪ್ರಜಾಪ್ರಭುತ್ವ ವ್ಯವಸ್ಥೆಗಳ ಜೊತೆಗೆ ಹೊಂದಾಣಿಕೆಯಾಗುವುದಿಲ್ಲ.

ಮತ್ತೊಂದು ಟ್ವೀಟ್

ಇಂಗ್ಲೆಂಡಿನ ಲಾರ್ಡ್ ಡೆನ್ನಿಂಗ್ ಅವರ ಮಾತುಗಳು ಹೀಗಿವೆ: ‘ನ್ಯಾಯಾಂಗನಿಂದನೆ ಕಾನೂನಿನ ವ್ಯಾಪ್ತಿಯನ್ನು ನಮ್ಮ ಸ್ವಂತ ಘನತೆಯನ್ನು ಎತ್ತಿಹಿಡಿಯಲು ಎಂದಿಗೂ ಬಳಸುವುದಿಲ್ಲ. ನಮ್ಮ ವಿರುದ್ಧ ಮಾತನಾಡುವವರ ದನಿ ಅಡಗಿಸಲೂ ಬಳಸುವುದಿಲ್ಲ. ನಾವು ಟೀಕೆ ಟಿಪ್ಪಣಿಗಳಿಗೆ ಹೆದರಬೇಕಿಲ್ಲ, ಅಸಮಾಧಾನಗೊಳ್ಳಬೇಕಿಲ್ಲ.

ಅದಕ್ಕಿಂತಲೂ ಮಹತ್ವದ ಸಂಗತಿ ಅಪಾಯದಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ಯ್ರ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಹಕ್ಕಾಗಿದೆ. ಶಾಸನಸಭೆಯ ಒಳಗಿರಲಿ, ಹೊರಗಿರಲಿ. ಪತ್ರಿಕೆಯಲ್ಲಾಗಲಿ, ರೇಡಿಯೋ ಪ್ರಸಾರದಲ್ಲಾಗಲಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಸಂಗತಿಗಳಲ್ಲಿ, ಅದು ಆವೇಶಭರಿತ ಪ್ರತಿಕ್ರಿಯೆಯೇ ಆಗಿದ್ದರೂ, ನ್ಯಾಯಸಮ್ಮತ ಅಭಿವ್ಯಕ್ತಿ ಮುಕ್ತವಾಗಿರಬೇಕು’.

ಇದನ್ನೂಓದಿ: ಅಪರಾಧದ ಮರುವ್ಯಾಖ್ಯಾನ; ಪ್ರಭುತ್ವ, ಪ್ರತಿರೋಧ ಮತ್ತು ಪ್ರಜಾಪ್ರಭುತ್ವ

ಅಮೆರಿಕದಲ್ಲಿ “ನ್ಯಾಯಾಲಯ ತೇಜೋವಧೆ” ಅಪರಾಧವನ್ನು ಹಲವು ದಶಕಗಳಿಂದ ಸೀಮಿತಗೊಳಿಸಲಾಗಿದೆ. ನಿಂದನೆ ಪ್ರಕರಣವನ್ನು ಆರೋಪಿಸಬೇಕು ಎಂದಿದ್ದರೆ, ಆರೋಪಿ ಪ್ರಕಟಣೆ ನ್ಯಾಯಾಂಗ ವ್ಯವಸ್ಥೆಗೆ ‘ಕ್ಲಿಯರ್ ಆ್ಯಂಡ್ ಪ್ರೆಸೆಂಟ್ ಡೇಂಜರ್’ (ಸ್ಪಷ್ಟ ಅಪಾಯ) ಸೃಷ್ಟಿಸಬೇಕು ಎಂದು ಹಲವು ಸರಣಿ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಕೆನಡಾದ ಆರ್.ವಿ. ಕ್ಯೊಟೊ ಪ್ರಕರಣದಲ್ಲಿ ವಕೀಲರೊಬ್ಬರು ಕೋರ್ಟಿನ ತೀರ್ಪಿನ ಕುರಿತು ‘ಇದು ನ್ಯಾಯದ ವ್ಯಂಗ್ಯ ಮಾತ್ರವಲ್ಲ ಗಬ್ಬುನಾರುತ್ತಿದೆ’ ಎಂದಾಗ ಕೋರ್ಟ್ ಹೇಳಿದ್ದು ಹೀಗೆ: ‘ಈ ಟೀಕೆಯಲ್ಲಿ ಹಲವು ನಿಜವಾಗಿದ್ದಿರಬಹದು, ಕೆಲವು ಸುಧಾರಣೆಗೆ ಅಳವಡಿಸಿಕೊಳ್ಳಲು ತಕ್ಕನಾಗಿಯೂ ಇರಬಹುದು. ಆದರೆ ವಿವಾದದ ಧಗೆಯಲ್ಲಿ ಮುದುಡಿಹೋಗುವ ಹೂವಿನ ದಳಗಳಲ್ಲ ಕೋರ್ಟುಗಳು’ ಎಂದಿದ್ದರು.

ಆಸ್ಟ್ರೇಲಿಯಾದ ಕಾನೂನು ಆಯೋಗವು ನ್ಯಾಯಾಂಗ ನಿಂದನೆ ಕಾನೂನಿನ ಕುರಿತು ತನ್ನ ತಕರಾರನ್ನು ಹೀಗೆ ದಾಖಲಿಸಿದೆ. ‘ಈ ಅಪರಾಧಕ್ಕೆ ನೀಡುವ ಕಾರಣ ನ್ಯಾಯಾಂಗ ವ್ಯವಸ್ಥೆ ಬಗೆಗಿನ ಪ್ರಜೆಗಳ ವಿಶ್ವಾಸವನ್ನು ಕುಗ್ಗಿಸುತ್ತದೆ ಎಂಬುದು. ಇದು ತೀರ ಊಹಾತ್ಮಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ದಮನ ಮಾಡಲು ಅಸ್ಪಷ್ಟ ಷರತ್ತುಗಳನ್ನು ಇದು ಹೇರುತ್ತದೆ ಎಂದು ಕೂಡ ಕೆಲವರು ಹೇಳಬಹುದು’ ಎಂದಿತ್ತು.

ಇವೆಲ್ಲವಕ್ಕೆ ತದ್ವಿರುದ್ಧವಾಗಿ ಹಿಂದೆ ವಸಾಹತುಗಳಾಗಿದ್ದ ದೇಶಗಳಲ್ಲಿ ಇನ್ನೂ ನ್ಯಾಯಾಂಗನಿಂದನೆಯ ಕಾನೂನನ್ನು ಜೀವಂತವಿಡಲಾಗಿದೆ. 19 ನೇ ಶತಮಾನದ ಮ್ಯಾಕ್ಲಿಯೋಡ್ ವರ್ಸಸ್ ಸೇಂಟ್ ಔಬ್ಯನ್ ಪ್ರಕರಣದಲ್ಲಿ ಪ್ರಿವಿ ಕೌನ್ಸಿಲ್ ವಾದಿಸಿದ್ದು ಏನೆಂದರೆ ‘ನ್ಯಾಯಾಲಯಗಳನ್ನು ತೇಜೋವಧೆಗೊಳಿಸಿ ನ್ಯಾಯಾಂಗನಿಂದನೆ ಮಾಡುವ ಕಾನೂನುಗಳೇ ಈ ದೇಶದಲ್ಲಿ ಈಗ ನಿರುಪಯೋಗ’ ….

‘ಆದರೆ ಈ ಕಾನೂನನ್ನು ಬಿಳಿಯರಲ್ಲದ ಜನರಿರುವ ಸಣ್ಣ ವಸಾಹತುಗಳಲ್ಲಿ ಪರಿಗಣಿಸಬಹುದು. ಅಲ್ಲಿ ನಮ್ಮ ಕೋರ್ಟು ಕಾನೂನು ಪದ್ಧತಿಯನ್ನು ಮತ್ತು ನ್ಯಾಯಾಧೀಶರನ್ನು ಟೀಕಾಕಾರರಿಂದ ಸಂರಕ್ಷಿಸಿಕೊಳ್ಳಲು ನ್ಯಾಯಾಂಗನಿಂದನೆ ಕಾನೂನನ್ನು ಹೇರಬಹುದು’ ಎಂದು.

ಇದನ್ನೂ ಓದಿ: ತುರ್ತು ಪರಿಸ್ಥಿತಿಯ ವಿರುದ್ದ ಹೋರಾಡಿದ ಹೋರಾಟಗಾರ ಹಿರೇಮಠ್ ಅವರ ನೆನಪುಗಳಲ್ಲಿ ಪ್ರಶಾಂತ್ ಭೂಷಣ್ ಜನಪರ ಹೋರಾಟದ ದಿನಗಳು

ನ್ಯಾಯಾಲಯಗಳನ್ನು ಟೀಕೆ-ವಿಮರ್ಶೆಗಳಿಂದ ರಕ್ಷಿಸಲು ಇರುವ ವಸಾಹತುಶಾಹಿಯ ಪಳೆಯುಳಿಕೆ ಕಾನೂನು ಇದು ಮತ್ತು ನ್ಯಾಯಾಂಗನಿಂದನೆ ವ್ಯಾಪ್ತಿಯನ್ನು ಮುಂದುವರೆಸಿಕೊಂಡು ಬಂದಿದೆ. ನಮ್ಮ ಸಂವಿಧಾನದಲ್ಲಿ ಇಂದು ಭಾರತೀಯರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯದ ರಕ್ಷಣೆ ಒದಗಿಸಿರುವ ಅದೇ ಸಂದರ್ಭದಲ್ಲಿ, ಅದೇ ಸಂವಿಧಾನದಲ್ಲಿ ಮಾನ್ಯವಾಗಿರುವ ನ್ಯಾಯಾಂಗನಿಂದನೆ ಅಧಿಕಾರವನ್ನು ಸೀಮಿತವಾಗಿ ಮತ್ತು ಅತ್ಯಂತ ಸಂಯಮದಿಂದ ಬಳಸಬೇಕಾಗಿದೆ.

ಪ್ರಶಾಂತ್ ಭೂಷಣ್ ಅವರು ತಮ್ಮ ಆ ಎರಡು ಟ್ವೀಟ್‌ಗಳ ಕುರಿತು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ (ನ್ಯಾಯಾಲಯ ತನ್ನ ತೀರ್ಪಿನಲ್ಲಿ ಇದನ್ನು ಪರಿಗಣಿಸದೆ ಇರುವುದು ವಿಚಾರಣೆಯ
ಸರಿಯಾದ ಮಾರ್ಗವನ್ನು ಅನುಸರಿಸಲು ಸೋತಿದೆ) ಅತ್ಯಂತ ಎಚ್ಚರದಿಂದ ಮತ್ತು ವಿವರವಾಗಿ ಅವುಗಳನ್ನು ಸಮರ್ಥಿಸಿಕೊಂಡಿದ್ದಾಗಲೂ, ನ್ಯಾಯಾಲಯ ತನ್ನ ಸಾಂವಿಧಾನಿಕ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ.

ನಾಗರಿಕರು ಇಂದು ಎಚ್ಚೆತ್ತುಕೊಳ್ಳಬೇಕು ಏಕೆಂದರೆ ದೇಶ ಮತ್ತೊಮ್ಮೆ ತುರ್ತು ಪರಿಸ್ಥಿತಿಯಂತ ಕಾಲಘಟ್ಟಕ್ಕೆ ತಳ್ಳಲ್ಪಟ್ಟರೆ, ಭೂಷಣ್ ಅವರೇ ಹೇಳುವಂತೆ ‘ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವ ವಿಚಾರದಲ್ಲಿ ಅತ್ಯಂತ ಸುಶಿಕ್ಷಿತ ಮತ್ತು ಪ್ರಬುದ್ಧ ಜನರಿರುವ ಸಂಸ್ಥೆಗಳು ವಿಫಲವಾದವು ಆದರೆ ಅದೇ ಸಮಯದಲ್ಲಿ ಸಾಮಾನ್ಯ ನಾಗರಿಕರು ತಮ್ಮ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗೆ ಹೋರಾಡಿದರು ಎಂಬುದನ್ನು ಚರಿತ್ರೆ ದಾಖಲಿಸುತ್ತದೆ’ ಎನ್ನುತ್ತಾರೆ.

~ಟಿ ಅರವಿಂದ್ ನಾರಾಯಣ್
ಲೇಖಕರು ಸಂವಿಧಾನ ತಜ್ಞರು,
ಪರ್ಯಾಯ ಕಾನೂನು ವೇದಿಕೆ (ಎಎಲ್‌ಎಫ್‌ನ) ಸ್ಥಾಪಕ ಸದಸ್ಯರು.

ಅನುವಾದ: ರೋಹಿತ್


ಮರೆಯಲೆ ಬಾರದ ಸುದ್ದಿಗಳಿವು; ವಿಡಿಯೋ ನೋಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...