Homeಮುಖಪುಟ#2RupeeBhakts ; ಬಿಜೆಪಿ ಐಟಿಸೆಲ್‌‌ನ ನಿಜಸ್ವರೂಪ ಬಿಚ್ಚಿಡುತ್ತಿರುವ ನೆಟ್ಟಿಗರು

#2RupeeBhakts ; ಬಿಜೆಪಿ ಐಟಿಸೆಲ್‌‌ನ ನಿಜಸ್ವರೂಪ ಬಿಚ್ಚಿಡುತ್ತಿರುವ ನೆಟ್ಟಿಗರು

- Advertisement -
- Advertisement -

ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ #2RupeeBhakts ಟ್ರೆಂಡ್ ಆಗುತ್ತಿದ್ದು ಬಿಜೆಪಿ ಪಕ್ಷವು ಸಾಮಾಜಿಕ ಜಾಲತಾಣವನ್ನು ಹೇಗೆ ಬಳಸಿಕೊಂಡಿತು ಎಂಬ ಬಗ್ಗೆ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣೆಯ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ನಕಲಿ ಖಾತೆಗಳನ್ನು ಸೃಷ್ಟಿ ಮಾಡಿಸಿ ಅದಲ್ಲಿ ಹಾಕುವ ಒಂದೊಂದು ಪೋಸ್ಟ್ ಹಾಗೂ ಕಮೆಂಟುಗಳಿಗೆ ಬಿಜೆಪಿಯು ಹಣ ಪಾವತಿ ಮಾಡುತ್ತಿತ್ತು ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಪ್ರಸ್ತುತ ಟ್ವಿಟ್ಟರ್‌ ಟ್ರೆಂಡಿಂಗ್‌ನಲ್ಲಿ #2RupeeBhakts ಜನಪ್ರಿಯ ಟ್ರೆಂಡ್ ಆಗುತ್ತಿದ್ದು ಹಲವಾರು ಜನರು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪೋಸ್ಟ್ ಹಾಕುತ್ತಿದ್ದಾರೆ.

ಇದನ್ನೂ ಓದಿ: 2019 ರ ಲೋಕಸಭಾ ಚುನಾವಣೆಗೆ ಬಿಜೆಪಿ ವ್ಯಯಿಸಿದ್ದು ಎಷ್ಟು ಗೊತ್ತೇ ?

ರಾಘು ಬಿ ಹಿಂದೂ ಎಂಬ ಹೆಸರಲ್ಲಿರುವ ಫೇಸ್‌ಬುಕ್‌ ಖಾತೆದಾರರೊಬ್ಬ, “2014 ರಿಂದ ನನಗೆ ಬಿಜೆಪಿ ಪಕ್ಷದವರು ಪ್ರತಿಯೊಂದು ಕಮೆಂಟ್‌ಗೂ 2 ರೂ. ಮತ್ತು ಪ್ರತಿ ಪೋಸ್ಟ್‌ಗೂ 3 ರೂ. ನಂತೆ ಪ್ರತಿ ತಿಂಗಳ ಕೊನೆಯಲ್ಲಿ ನನ್ನ ಅಕೌಂಟ್‌ಗೆ ಹಾಕುತ್ತಿದ್ದರು. ಆದರೆ ನನ್ನ ಆತ್ಮಸಾಕ್ಷಿ ಇತ್ತೀಚಿನ ದಿನಗಳಲ್ಲಿ ಒಪ್ಪುತ್ತಾ ಇರಲಿಲ್ಲ, ಎಂಜಲು ಕಾಸಿಗೋಸ್ಕರ ನನ್ನ ದೇಶವನ್ನು ಬಲಿಕೊಡಬಾರದೆಂದು ತಿರ್ಮಾನಿಸಿ ಹೊರಗಡೆ ಬಂದಿದ್ದೇನೆ.

ನಿಮಗಿದು ತಿಳಿದಿರಲಿ ಸಾಮಾಜಿಕ ಜಾಲತಾಣದಲ್ಲಿ ಅಸಹ್ಯವಾಗಿ ಕಮೆಂಟ್ ಮಾಡೋಕೆ ಅಂತಾನೆ ಈಗಿನ ಕೆಲವು ಮಂತ್ರಿಗಳ ನೇತೃತ್ವದಲ್ಲಿ ತಂಡವೊಂದು ಇದೆ. ಹುಡುಗಿಯರ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡೋದು ಬಿಜೆಪಿಗರ ಪ್ಲ್ಯಾನ್..ಸಧ್ಯ ನನ್ನ ಹಳೆಯ ಅಕೌಂಟ್ ಡಿಲೀಟ್ ಮಾಡಿ ಮತ್ತೊಮ್ಮೆ ಮನುಷ್ಯನಾಗಿ ಬದಲಾಗಿದ್ದೇನೆ” ಎಂದು ಬರೆದು ಕೊಂಡಿದ್ದಾರೆ.

2014ರಿಂದ ನಂಗೆ ಬಿಜೆಪಿ ಪಕ್ಷದವರು ಪ್ರತಿಯೊಂದು ಕಮೆಂಟ್ಗೂ 2 ರೂ ಮತ್ತು ಪ್ರತಿ ಪೋಸ್ಟ್ ಗೂ 3 ರೂ ಹಾಗೆ ಪ್ರತಿ ತಿಂಗಳ ಕೊನೆಯಲ್ಲಿ ನನ್ನ…

Posted by ರಾಘು ಬಿ ಹಿಂದೂ on Friday, August 21, 2020

ಚಂದ್ರಶೇಖರ್‌ ಶೆಟ್ಟಿ ಎಂಬವರು ಬಿಜೆಪಿ ಐಟಿ ಸೆಲ್‌ ಕಳುಹಿಸಿದ್ದಾರೆ ಎಂದು ಹೇಳಲಾದ ಮೆಸೇಜಿನ ಸ್ಕೀನ್ ಶಾರ್ಟ್ ಹಾಕಿ “ಭಕ್ತರೇ,2 ರೂಪಾಯಿ ಆಸೆಗೆ ಸುಳ್ಳು ಸುದ್ದಿ ಹಬ್ಬಿಸೋದು ಬಿಟ್ಟು ಕಾಂಗ್ರೆಸ್ ಪಕ್ಷ ಜಾರಿಗೆ ತಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಹೋಗಿ ದಿನಕ್ಕೆ 275ರೂ ಸಿಗುತ್ತೆ” ಎಂದು ವ್ಯಂಗ್ಯವಾಡಿದ್ದಾರೆ.

ಭಕ್ತರೇ,2 ರೂಪಾಯಿ ಆಸೆಗೆ ಸುಳ್ಳು ಸುದ್ದಿ ಹಬ್ಬಿಸೋದು ಬಿಟ್ಟು ಕಾಂಗ್ರೆಸ್ ಪಕ್ಷ ಜಾರಿಗೆ ತಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಹೋಗಿ ದಿನಕ್ಕೆ 275ರೂ ಸಿಗುತ್ತೆ#2RupeeBhakts

Posted by Chandrashekar Shetty on Saturday, August 22, 2020

ಮೊಹಮ್ಮದ್ ಅಝರ್‌ ಎನ್ನುವವರು, “ಎರಡು ರುಪಾಯಿಗೆ ತಬ್ಲೀಗ್‌ ಜಮಾತ್ ವಿಷಯದಲ್ಲಿ ಹಿಂದೂ ಮುಸ್ಲಿಮರ ನಡುವೆ ದ್ವೇಷವನ್ನು ಸೃಷ್ಟಿಸಿದವರು” ಎಂದು ಹೇಳಿದ್ದಾರೆ.

“18% ಜಿಎಸ್ಟಿ ಕಳೆದು ಪ್ರತಿ ಟ್ವೀಟ್‌ಗೆ ನಿಜವಾದ ಪಾವತಿ ಕೇವಲ 1.64 ರೂ.” ಎಂದು ಒಬ್ಬರು ಪ್ರಧಾನಿ ಮೋದಿಯ ಚಿತ್ರದ ಜೊತೆಗೆ ಟ್ವೀಟ್ ಮಾಡಿದ್ದಾರೆ.


ಓದಿ: ಕೊರೊನಾ ವಿಚಾರದಲ್ಲಿ ತಬ್ಲೀಘಿಗಳನ್ನು ’ಬಲಿಪಶು’ ಮಾಡಲಾಗಿದೆ: ಬಾಂಬೆ ಹೈಕೋರ್ಟ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...