Homeಕರೋನಾ ತಲ್ಲಣಒಂದೇ ಕುಟುಂಬದ 16 ಜನರಿಗೆ ಕೊರೊನಾ: ಮನೆಯಲ್ಲಿದ್ದುಕೊಂಡೇ ಎಲ್ಲರೂ ಗುಣಮುಖ

ಒಂದೇ ಕುಟುಂಬದ 16 ಜನರಿಗೆ ಕೊರೊನಾ: ಮನೆಯಲ್ಲಿದ್ದುಕೊಂಡೇ ಎಲ್ಲರೂ ಗುಣಮುಖ

ಈ ಕುಟುಂಬದಲ್ಲಿ ಹತ್ತು ತಿಂಗಳ ಶಿಶು, ಮೂರು ವರ್ಷದ ಒಳಗಿನ ನಾಲ್ಕು ಮಕ್ಕಳು ಮತ್ತು 45 ವರ್ಷ ಮೇಲ್ಪಟ್ಟವರು ಸಹ ಗುಣಮುಖರಾಗಿದ್ದಾರೆ.

- Advertisement -
- Advertisement -

ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವೇಳೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಒಂದೇ ಕುಟುಂಬದ 16 ಜನಕ್ಕೆ ಕೊರೊನಾ ಪಾಸಿಟಿವ್ ಆಗಿದ್ದು, ಹೋಮ್ ಐಸೋಲೇಷನ್‌ಗೆ ಒಳಪಟ್ಟು, ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರು ಸೂಚಿಸಿದ ಔಷಧಿ ಸೇವಿಸಿ, ಅವರು ಹೇಳಿದ ಗೈಡ್‌ಲೈನ್ಸ್ ಪಾಲಿಸಿ ಕೊರೊನಾದಿಂದ ವಿಮುಕ್ತರಾಗಿದ್ದಾರೆ. ಒಂದನೇ ಅಲೆಯಲ್ಲಿ ಹೀಗೇ ಹಲವು ಕುಟುಂಬಗಳು ಮನೆಯಲ್ಲೇ ಇದ್ದು ಕೊರೊನಾ ಹಿಮ್ಮೆಟ್ಟಿಸಿದ್ದವು.

ಇಲ್ಲಿ ಒಟ್ಟು ಸಾರಾಂಶವೆಂದರೆ, ಈ ಕುಟುಂಬದ ಪಾಸಿಟಿವ್ ಪೀಡಿತ ಸದಸ್ಯರಾರು ಕೋವಿಡ್ ಕೇಂದ್ರಗಳಲ್ಲಿ ದಾಖಲಾಗಲಿಲ್ಲ. ವೈದ್ಯರು ಮತ್ತು ಆಶಾ ಕಾರ್ಯಕರ್ತರ ಸಕಹೆಗಳನ್ನು ಕಟ್ಟಾ ಪಾಲಿಸಿದರು. ಅವರು ಸೂಚಿಸಿದ ಮಾತ್ರೆ ಪಡೆದುಕೊಂಡರು.

ಆದರೆ ಇಲ್ಲಿ ಹತ್ತು ತಿಂಗಳ ಮಗು, 3 ವರ್ಷಕ್ಕಿಂತ ಕಡಿಮೆಯ ಮೂವರು ಮಕ್ಕಳು ಮತ್ತು 45 ದಾಟಿದ ಆದರೆ ಎರಡೂ ಲಸಿಕೆ ಪಡೆದ ಹಿರಿಯರೊಬ್ಬರಿಗೂ ಪಾಸಿಟಿವ್ ಆಗಿತ್ತು. ಈಗ ಎಲ್ಲರೂ ಆರೋಗ್ಯವಾಗಿದ್ದಾರೆ. ಆದರೆ ನಮ್ಮ ವೈದ್ಯರಿಗೆ ಇದು ಒಂದು ಕೇಸ್ ಸ್ಟಡಿಗೆ ಅವಕಾಶ ಒದಗಿಸಿದೆ.
ಏಕೆಂದರೆ, ಕೋವಿಡ್ ಕುರಿತಂತೆ ಇನ್ನೂ ನೂರಾರು ಗೊಂದಲ ಇರುವಾಗ ಈ ಪ್ರಕರಣ ಇಟ್ಟುಕೊಂಡು ಹುಬ್ಬಳ್ಳಿಯ ಕೆಎಂಸಿ (ಕಿಮ್ಸ್) ಕೂಡ ಒಂದು ಕೇಸ್ ಸ್ಟಡಿ ಮಾಡಬಹುದು ಅಲ್ಲವೇ?

ಒಂದಿಷ್ಟು ಪೂರ್ವ ವಿವರ

ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಶಿವಳ್ಳಿ ಮಠ ಕುಟುಂಬದ 16 ಸದಸ್ಯರಿಗೆ ಈ ತಿಂಗಳು ಮೊದಲ ವಾರದ ಹೊತ್ತಿಗೆ ಪಾಸಿಟಿವ್ ದೃಢಪಟ್ಟಿತ್ತು. ಕಿಮ್ಸ್‌ನ ಒಬ್ಬ ವೈದ್ಯರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಸಲಹೆ ಮೇರೆಗೆ ಇವರೆಲ್ಲ ಹೋಮ್ ಐಸೋಲೇಷನ್‌ನಲ್ಲಿ ಇದ್ದುಕೊಂಡು ಚೇತರಿಸಿಕೊಂಡಿದ್ದಾರೆ.

ಸುಳ್ಳದ ಈ ಕುಟುಂಬದ ಸದಸ್ಯರಲ್ಲಿ ಒಬ್ಬರಾದ, ಪಾಸಿಟಿವ್‌ಗೆ ಒಳಗಾಗಿ ಈಗ ಗುಣಮುಖರಾದ, ಕಾಲೇಜೊಂದರ ಜರ್ನಲಿಸಂ ವಿಭಾಗದ ಅಧ್ಯಾಪಕರೂ ಆಗಿರುವ ಮಲ್ಲಿಕಾರ್ಜುನ್ ಅವರೊಂದಿಗೆ ನಾನುಗೌರಿ.ಕಾಂ ಮಾತನಾಡಿತು.

‘ವಿಜ್ಞಾನ, ವೈದ್ಯಕೀಯಗಳ ಆಚೆ ನಾವೆಂದೂ ನೋಡಲಿಲ್ಲ. ಎಲ್ಲರಿಗೂ ಮನೆಯಲ್ಲಿ ಧೈರ್ಯ ತುಂಬಿದೆವು. ಯಾವುದೇ ಮೂಢ ವಿಚಾರಗಳನ್ನು ಫಾಲೋ ಮಾಡಲಿಲ್ಲ. ಕಿಮ್ಸ್‌ನ ಹಿರಿಯ ವೈದ್ಯರು, ಇಲ್ಲೇ ಪಕ್ಕದ ಊರಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಮನೆಗೇ ಬಂದು ಉಪಚಾರ ಮಾಡುವ ಆಶಾ ಕಾರ್ಯಕರ್ತೆಯರ ಸಲಹೆ ಪಾಲಿಸಿದೆವು. ಇಲ್ಲಿ ಆತ್ಮಸ್ಥೈರ್ಯವೇ ಮುಖ್ಯ ಅಷ್ಟೇ. ಒಂದು ಜ್ವರವನ್ನು ವಿಭಿನ್ನವಾಗಿ ಎದುರಿಸಲು ನಮಗೆ ಈಗ ವಿಜ್ಞಾನ ಮತ್ತು ವೈದ್ಯಕೀಯವಷ್ಟೇ ಮಾರ್ಗದರ್ಶಕ ಆಗಬೇಕು’ ಎಂದು ಗುಣಮುಖರಾದ ಮಲ್ಲಿಕಾರ್ಜುನ ನಮಗೆ ತಿಳಿಸಿದರು.

ಈ ಕುಟುಂಬದಲ್ಲಿ ಹತ್ತು ತಿಂಗಳ ಶಿಶು, ಮೂರು ವರ್ಷದ ಒಳಗಿನ ನಾಲ್ಕು ಮಕ್ಕಳು ಸಹ ಗುಣಮುಖರಾಗಿದ್ದಾರೆ. ಇದರಲ್ಲಿ 45 ವರ್ಷ ಮೇಲ್ಪಟ್ಟ 4 ಜನರು ಈ ಮೊದಲೇ ಎರಡನೆ ಡೋಸ್ ಲಸಿಕೆ ಪಡೆದಿದ್ದರು, ಅದರಲ್ಲಿ ಮೂವರಿಗೆ ನೆಗೆಟಿವ್ ರಿಪೋರ್ಟ್ ಬಂದಿತ್ತು. ಆದರೆ, ಎರಡು ಡೋಸ್‌ಗಳ ನಂತರವೂ ಪಾಸಿಟಿವ್ ರಿಪೋರ್ಟ್ ಪಡೆದಿದ್ದ 60 ವರ್ಷದ ಮಹಿಳೆಯಲ್ಲಿ ಯಾವ ಲಕ್ಷಣವೂ ಇರಲಿಲ್ಲ. ಅವರೂ ಈಗ ಗುಣಮುಖರಾಗಿದ್ದಾರೆ.

ಪ್ರಶ್ನೆ ಏನು ಅಂದರೆ ಮಕ್ಕಳಿಗೂ ಕೋವಿಡ್ ಕಾಟ ಶುರುವಾಗಿದೆಯಾ? ಇದು ಮೂರನೇ ಅಲೆಯ ಆರಂಭವೇ? ಎರಡು ಲಸಿಕೆ ಪಡೆದವರು ಇದನ್ನು ಎದುರಿಸಬಲ್ಲರು ಎಂದಾದರೆ, ಯಾಕೆ ತುರ್ತಾಗಿ ಮನೆಮನೆಗೆ ತೆರಳಿ ಲಸಿಕೆ ನೀಡುತ್ತಿಲ್ಲ? ನಮ್ಮ ಪಾಲಿಸಿಯೇ ತಪ್ಪಾಗಿದೆಯೇ?
ಈ ಕುರಿತು ಮಾತನಾಡಿದ ಧಾರವಾಡದ ಸರ್ಕಾರಿ ವೈದ್ಯ ಡಾ. ಸಂತೋಷ್, ‘ರೋಗ ನಿರೋಧಕ ಶಕ್ತಿ ಚೆನ್ನಾಗಿ ಇರುವವರಿಗೆ ಕೊರೊನಾ ತಟ್ಟುವುದು ಅಪರೂಪ. ದಿನವೂ ಹಲವು ರೋಗಿಗಳನ್ನು ನಾನು ಪರೀಕ್ಷೆ ಮಾಡುತ್ತೇನೆ. ಬಹುತೇಕರು ಶ್ರೀಮಂತ ಅಥವಾ ಮಧ್ಯಮ ವರ್ಗದವರೇ. ಇವರು ತುಂಬ ನಾಜೂಕಾದ ಜೀವನಶೈಲಿ ಅಳವಡಿಸಿಕೊಂಡ ಜನರು. ಇವರ ಜೀವನಶೈಲಿಯೇ ಅವರ ಪ್ರತಿರೋಧಕ ಶಕ್ತಿಯನ್ನು ಕಡಿಮೆ ಮಾಡಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಎಲ್ಲೋ ಮಲಗಿ ಜೀವನ ಸಾಗಿಸುವ ಭಿಕ್ಷುಕರು ನಮ್ಮ ಆಸ್ಪತ್ರೆಗಳತ್ತ ಬಂದೇ ಇಲ್ಲ. ಅವರು ಕೊರೊನಾಗೆ ಎಕ್ಸ್‌ಪೋಸ್‌ ಆಗಿದ್ದಾರೆ, ಅವರಿಗೆ ಈಗ ಕೊರೊನಾ ತಟ್ಟುವ ಸಂಭವವೂ ಕಡಿಮೆ’ ಎಂದರು.

‘ಈ ವಿಷಯದಲ್ಲಿ ಯಾವುದು ಅಂತಿಮವಲ್ಲವಾದರೂ, ಗಾಬರಿ ಬಿದ್ದು ಆಸ್ಪತ್ರೆ ಸೇರದೇ ಇರುವುದು, ವೈದ್ಯರ ಸಲಹೆ ಪಡೆದು ಮನೆಯಲ್ಲೇ ಐಸೋಲೇಷನ್ ಆಗುವುದು ಮುಖ್ಯ. ಎರಡನೇ ಅಲೆಯಲ್ಲಿ ಆಕ್ಸಿಜನ್ ಮಟ್ಟದ ಸಮಸ್ಯೆ ಬಂದಾಗ ಆಸ್ಪತ್ರೆಯ ಅಗತ್ಯ ಇದೆ. ಆದರೆ, ಯಾವುದಕ್ಕೂ ವೈದ್ಯರ ಸಲಹೆ ಪಡೆದೇ ಎಲ್ಲವನ್ನೂ ನಿಭಾಯಿಸಬೇಕು. ಸುಳ್ಳ ಗ್ರಾಮದ ಕುಟುಂಬ ಅದನ್ನು ಅನುಸರಿಸಿದ ಕಾರಣಕ್ಕೇ ಮನೆಯಲ್ಲೇ ಗುಣಮುಖ ಆಗಿರಬಹುದು’ ಎಂದು ಗದಗಿನ ವೈದ್ಯ ಡಾ. ಎಂ.ಡಿ ಸಾಮುದ್ರಿ ಹೇಳಿದರು.

‘ಕಳೆದ ತಿಂಗಳು 29ರಂದು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಮನೆಯಲ್ಲಿಯೇ ಹೋಮ್ ಐಸೋಲೇಷನ್ ಆಗಿದ್ದೆವು ಹಾಗೂ ಪಾಸಿಟಿವ್ ರಿಪೋರ್ಟ್ ಬಂದಾಗ ಯಾವುದೇ ರೀತಿಯಲ್ಲೂ ಭಯಪಡದೆ ಆತ್ಮಸ್ಥೈರ್ಯದಿಂದ ಇದ್ದೆವು ಹಾಗೂ ಮನೆಯಲ್ಲಿನ ಸದಸ್ಯರಿಗೂ ಧೈರ್ಯ ತುಂಬಿ ವೈದ್ಯರ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿದೆವು’ ಎಂದು ಮನೆಯ ಹಿರಿಯ ಮಲ್ಲಯ್ಯ ಶಿವಳ್ಳಿಮಠ ಹೇಳಿದರು.

ಎಂಬಿಬಿಎಸ್ ವಿದ್ಯಾರ್ಥಿಗಳು ಈ ಬಗ್ಗೆ ಒಂದು ಕೇಸ್ ಸ್ಟಡಿ ಮಾಡಬಹುದು ಅನಿಸುತ್ತೆ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ (ಮ್ಯುಕಾರ್ ಮೈಕೋಸಿಸ್ MucorMycosis) ಕುರಿತ ಪ್ರಶ್ನೆಗಳಿಗೆ ವೈದ್ಯರ ಸರಳ ಉತ್ತರಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...