Homeಮುಖಪುಟಪ್ರತಾಪ ಚಂದ್ರ ಸಾರಂಗಿ ರಾಜೀನಾಮೆ: ಓರಿಸ್ಸಾದ ಮೋದಿಯವರ ಮತ್ತೊಂದು ಮುಖ

ಪ್ರತಾಪ ಚಂದ್ರ ಸಾರಂಗಿ ರಾಜೀನಾಮೆ: ಓರಿಸ್ಸಾದ ಮೋದಿಯವರ ಮತ್ತೊಂದು ಮುಖ

ಸಾರಂಗಿಯವರು ಹಲವು ಸಂದರ್ಶನಗಳಲ್ಲಿ ಈಗಲೂ ತಾವು ಕ್ರೈಸ್ತ ಮಿಷನರಿಗಳಿಗೆ ವಿರುದ್ಧವಾಗಿದ್ದೇನೆಂದು ಬಹಿರಂಗವಾಗಿ ಎಂದು ಹೇಳಿಕೊಂಡಿದ್ದಾರೆ. ಇಂತಹ ವ್ಯಕ್ತಿಯನ್ನು ಹೀರೊ ಮಾಡಲು ಮಾಧ್ಯಮಗಳು ಹೊರಟಿವೆ

- Advertisement -
- Advertisement -

ಮಾಧ್ಯಮಗಳು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಕೆಲವೇ ದಿನಗಳಲ್ಲಿ ಹೀರೋನ್ನನ್ನಾಗಿ ಮಾಡುತ್ತವೆ. ಹೀರೋ ಆದವನು ತಮ್ಮ ಮಾತು ಕೇಳದಿದ್ದರೆ ಮತ್ತೆ ಕೆಲವೇ ದಿನಗಳಲ್ಲಿ ಆತನನ್ನು ದೊಡ್ಡ ವಿಲನ್ ಎಂದು ಚಿತ್ರಿಸಿಬಿಡುತ್ತವೆ. ಈ ಮಾತು ಈಗ ಏಕೆಂದರೆ, ಕಳೆದೆರಡು ದಿನಗಳಿಂದ ಗುಡಿಸಲಿನಿಂದ ಪಾರ್ಲಿಮೆಂಟ್ ವರೆಗೆ, ಸೈಕಲ್ ನಿಂದ ಸಂಸತ್ತಿನವರೆಗೆ ಸಾಗಿದ ಬಡ ಸಾಧು, ಸರಳ ಜೀವಿ, ಓರಿಸ್ಸಾದ ಮೋದಿ, ರಾಜಕಾರಣದ ಫಕೀರ ಎಂದು ಇನ್ನಿತ್ಯಾದಿ ಭೂಷಣಗಳಿಂದ ಪ್ರತಾಪಚಂದ್ರ ಸಾರಂಗಿ ರವರ ಕುರಿತು ಒಂದೇ ಸಮನೇ ಎಲ್ಲಾ ಮಾಧ್ಯಮಗಳು ವಿಪರೀತ ಹೊಗಳುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಮೋದಿ ಸಂಪುಟದಲ್ಲಿ ಸಣ್ಣ, ಅತಿಸಣ್ಣ ಉದ್ಯಮಗಳ ಇಲಾಖೆ ಮತ್ತು ಪಶುಸಂಗೋಪನೆ ಇಲಾಖೆಯ ರಾಜ್ಯ ಸಚಿವರಾಗಿ ಪ್ರತಾಪಚಂದ್ರ ಸಾರಂಗಿ ಕಾರ್ಯನಿರ್ವಹಿಸುತ್ತಿದ್ದರು. ಹಾಗಾಗಿ ಮಾಧ್ಯಮಗಳು ಬಹುಪರಾಕ್ ಹೇಳುವುದನ್ನು ಇನ್ನು ನಿಲ್ಲಿಸಿಲ್ಲ. ಅತಿ ಎನಿಸುವಷ್ಟು ಹೊಗಳಿ ಅಟ್ಟಕ್ಕೇರಿಸಿಬಿಟ್ಟಿದ್ದಾರೆ. ಇದಕ್ಕೆ ಸಾಮಾಜಿಕ ಜಾಲಾತಾಣಗಳಲ್ಲಿ ಚಪ್ಪಾಳೆ ತಟ್ಟುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಈಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 

ಆದರೆ ಕೇಂದ್ರ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಪ್ರತಾಪ ಸಾರಂಗಿ ವಿರುದ್ಧ ಗಂಭೀರವಾದ ಕ್ರಿಮಿನಲ್ ಆರೋಪಗಳಿವೆ ಎಂಬ ಸತ್ಯ ಬಯಲಿಗೆ ಬಂದಿದೆ. ಸಾರಂಗಿಯವರ ಈ ಇನ್ನೊಂದು ಮುಖವನ್ನು ತೋರಿಸಲು ಯಾವ ಮುಖ್ಯವಾಹಿನಿ ಮಾಧ್ಯಮಗಳು ಮನಸ್ಸು ಮಾಡುತ್ತಿಲ್ಲ.

ಸಾರಂಗಿಯವರು ತಮ್ಮ ಮೇಲೆ ಏಳು ಗಂಭೀರ ಕ್ರಿಮಿನಲ್ ಆಪಾದನೆಗಳಿವೆ ಎಂದು ಚುನಾವಣಾ ಅಫಿಡವಿಟ್ ನಲ್ಲಿ ಹೇಳಿಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನ ಕೇಸ್ ಗಳು ದಾಖಲಾಗಿರುವುದು ಬಿಜೆಪಿ-ಬಿಜೆಡಿ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದಾಗ. ಇಂತಹ ಗಂಭೀರ ಆರೋಪಿ ಈಗ ಕೇಂದ್ರದ ಸಚಿವ. ಅದೂ, ಹಲವಾರು ಖಾತೆಗಳಿಗೆ ಎಂದು ಫೇಸ್ ಬುಕ್ ನಲ್ಲಿ ನೂರಾರು ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

2002ರ ಮಾರ್ಚ್ ನಲ್ಲಿ ಒರಿಸ್ಸಾದ ವಿಧಾನಸಭೆಯ ಮೇಲೆ ಬಜರಂಗದಳದ ಸುಮಾರು 500 ಶಸ್ತ್ರದಾರಿ ಸದಸ್ಯರು ದಾಳಿ ನಡೆಸಿದಾಗ ಅದರ ರಾಜ್ಯ ಅಧ್ಯಕ್ಷರಾಗಿದ್ದು ಇದೇ ಸಾರಂಗಿ. 1999ರ ಫೆಬ್ರವರಿಯಲ್ಲಿ ಕ್ರೈಸ್ತ ಧರ್ಮದ ಪ್ರಚಾರಕ ಗ್ರಹಾಂ ಸ್ಟೈನ್ ಮತ್ತು ಅವರ ಮೂವರು ಪುಟ್ಟ ಮಕ್ಕಳನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದ ದಾರಾಸಿಂಗನ ಗುರು ಈ ಸಾರಂಗಿ.

1999 ರಲ್ಲಿ ಒಡಿಶಾ ರಾಜ್ಯದ ಮಯೂಬರ್ಂಜ್ ಜಿಲ್ಲೆಯಲ್ಲಿ ಕುಷ್ಠ ರೋಗ ಮಿತಿ ಮೀರೀತ್ತು. ಆಗ ಗ್ರಹಾಂ ಸ್ಟೈನ್ಸ್ ಎಂಬ ಕ್ರೈಸ್ತ ಮಿಷನರಿ ರೋಗಿಗಳ ಚಿಕಿತ್ಸೆ, ಆರೈಕೆ ಮಾಡುತ್ತಿದ್ದರು. ಆದರೆ ಹಲವು ಜನರನ್ನು ಮತಾಂತಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಾರಾ ಸಿಂಗ್ ಮತ್ತು ಹಲವರು ಗ್ರಹಾಂ ಸ್ಟೈನ್ಸ್ ಅವರರನ್ನು ಅವರ ಮಕ್ಕಳ ಸಮೇತ ವಾಹನವೊಂದಕ್ಕೆ ಕೂಡಿ ಹಾಕಿ ಸಜೀವ ದಹನ ಮಾಡಿದ್ದರು. ಆ ತಂಡಕ್ಕೆ ಗುರುವಾಗಿದ್ದವರು ಇದೇ ಸಾರಂಗಿ ಎಂಬ ಆರೋಪವಿದೆ.

 

1999 ರಲ್ಲಿ ಒಡಿಶಾ ರಾಜ್ಯದ ಬಜರಂಗದಳ ಸಂಚಾಲಕರಾಗಿದ್ದ ಸಾರಂಗಿ, ದಾರಾ ಸಿಂಗ್ ತಂಡಕ್ಕೆ ನೇರಾ ಹಾಗೂ ಪರೋಕ್ಷವಾಗಿ ಸಹಕಾರಿಸಿದ್ದಾರೆ ಎಂಬ ಆರೋಪದ ಮೇಲೆ ಸಾರಂಗಿಯವರಿಗೆ 2003ರಲ್ಲಿ ಅಪರಾಧಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿದಿಸಿತ್ತು. ನಂತರ ಓರಿಸ್ಸಾ ಹೈಕೋರ್ಟ್ ಸಾಕ್ಷ್ಯಗಳ ಕೊರತೆಯ ನೆಪದಿಂದ ಜೀವಾವಧಿ ಶಿಕ್ಷೆಯನ್ನು ಎರಡು ವರ್ಷಕ್ಕೆ ಇಳಿಸಿ ನಂತರ ಬಿಡುಗಡೆಗೊಳಿಸಲಾಗಿತ್ತು.

ಸಾರಂಗಿಯವರು ಹಲವು ಸಂದರ್ಶನಗಳಲ್ಲಿ ಈಗಲೂ ತಾವು ಕ್ರೈಸ್ತ ಮಿಷನರಿಗಳಿಗೆ ವಿರುದ್ಧವಾಗಿದ್ದೇನೆಂದು ಬಹಿರಂಗವಾಗಿ ಎಂದು ಹೇಳಿಕೊಂಡಿದ್ದಾರೆ. ಇಂತಹ ವ್ಯಕ್ತಿಯನ್ನು ಹೀರೊ ಮಾಡಲು ಮಾಧ್ಯಮಗಳು ಹೊರಟಿವೆ. ಸಂಪೂರ್ಣ ಪರಾಮರ್ಶಿಸುವ ಗುಣವನ್ನು ಎಂದೋ ಕಳೆದುಕೊಂಡ ಬಹಳಷ್ಟು ಭಾರತೀಯರು ಅದಕ್ಕೆ ದನಿಗೂಡಿಸಿ ಬಹುಪರಾಕ್ ಹೇಳುತ್ತಿದ್ದಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ.

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‍ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)


ಇದನ್ನೂ ಓದಿ: ಬ್ರಾಹ್ಮಣ್ಯದ ಉಗಮ ಮತ್ತು ಹೂರಣ: ಅಂದು-ಇಂದು – ಜಿ ಎನ್ ನಾಗರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೀರೊ ಯಾವತ್ತಿಗು ಹೀರೊನೆ,
    ಅವರ ಸರಳತೆ ಹಾಗು ಜೀವನ ಶೈಲಿಯ ಬಗ್ಗೆ ತಿಳಿದು ಇಂತಹ ವ್ಯಕ್ತಿಯನ್ನು ಗುರುತಿಸಿ ಪಕ್ಷದಿಂದ ಟಿಕೆಟ್ ನೀಡಿ ಗೆಲ್ಲಿಸಿದಂತಹ ವಿಷಯ ಬಹಳ ಮಹತ್ವದಾಗಿತ್ತು,ನಿಜವಾದ ಅಚ್ಚೆ ದಿನ ಇದಾಗಿತ್ತು ಹೀಗಿದ್ದು ಅವರು ಸಂಘ ಪರಿವಾರ,ಭಜರಂಗದಳದ ವ್ಯಕ್ತಿಯೆಂಬ ಮಾಹಿತಿ ತಿಳಿದು ಇನ್ನಷ್ಟು ಹೆಮ್ಮೆ ಮೂಡುತ್ತಿದೆ ನಿಮ್ಮ ಈ ಮಾಹಿತಿಗಾಗಿ ಧನ್ಯವಾದಗಳು.
    ಸಂಘ ಶಕ್ತಿಗೆ ಜಯವಾಗಲಿ
    ಜೈ ಭಜರಂಗದಳ???

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...