Homeಕರ್ನಾಟಕದಲಿತನೆಂಬ ಕಾರಣಕ್ಕೆ ಸಂಸದರಿಗೇ ಗೊಲ್ಲರಹಟ್ಟಿ ಗ್ರಾಮ ಪ್ರವೇಶಕ್ಕೆ ನಿರಾಕರಣೆ: ಎಲ್ಲೆಡೆ ತೀವ್ರ ಆಕ್ರೋಶ..

ದಲಿತನೆಂಬ ಕಾರಣಕ್ಕೆ ಸಂಸದರಿಗೇ ಗೊಲ್ಲರಹಟ್ಟಿ ಗ್ರಾಮ ಪ್ರವೇಶಕ್ಕೆ ನಿರಾಕರಣೆ: ಎಲ್ಲೆಡೆ ತೀವ್ರ ಆಕ್ರೋಶ..

- Advertisement -
- Advertisement -

ಚಿತ್ರದುರ್ಗದ ಸಂಸದರಾದ ಎ.ನಾರಾಯಣಸ್ವಾಮಿಯವರನ್ನು ದಲಿತರೆಂಬ ಕಾರಣಕ್ಕೆ ಪಾವಗಡದ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿಯ ಪ್ರವೇಶ ನಿರಾಕರಿಸಿರುವ ಘಟನೆಗೆ ಎಲ್ಲೆಡೆ ತೀವ್ರ ಆಕ್ರೋಶ, ಟೀಕೆ ವ್ಯಕ್ತವಾಗಿದೆ. ಇದನ್ನು ಅಸ್ಪೃಶ್ಯತೆ ಅನ್ನದೇ ಮತ್ತೆ ಏನನ್ನಬೇಕು ಎಂದು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

ನಮ್ಮ ದೇಶದ ಪ್ರಜೆಗಳು ಜಾತಿಯ ವಿಚಾರದಲ್ಲಿ ಎಷ್ಟು ವಿಷ ರಕ್ತ ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ .
ಒಬ್ಬ ಸಂಸದರಿಗೆ ಗ್ರಾಮದ ಒಳಗೆ ಪ್ರವೇಶ ನಿರಾಕರಣೆ ಮಾಡಿದರೆ ಇನ್ನು ಸಾಮಾನ್ಯ ಪ್ರಜೆಗಳ ಸ್ಥಿತಿ ಹೇಗೆ ಊಹಿಸಲು ಸಾದ್ಯವಿಲ್ಲ !!! ಎಂದು ಹನುಮಂತ ನಂದಿಹಾಳ್ ರವರು ಪ್ರತಿಕ್ರಿಯಿಸಿದ್ದಾರೆ.

ವಿಕಾಸ್ ಆರ್.ಮೌರ್ಯ ರವರು ಫೇಸ್ ಬುಕ್ ನಲ್ಲಿ ಹೀಗೆ ಬರೆದಿದ್ದಾರೆ.

ಇದಕ್ಕೇ #ಪೂನಾ_ಪ್ಯಾಕ್ಟ್ ದಲಿತರ ಬದುಕನ್ನೇ ಕಿತ್ತುಕೊಂಡಿತು ಎನ್ನುವುದು

ಸಂಸದ ನಾರಾಯಣಸ್ವಾಮಿಯವರನ್ನು ಗೊಲ್ಲರು ತಮ್ಮ ಹಟ್ಟಿಗೆ ಬಿಟ್ಟುಕೊಳ್ಳದೆ ಸಂಸದರು ಅಂಗಲಾಚಿದರೂ ಒಪ್ಪದೇ ಹಟ್ಟಿಯಿಂದ ಹೊರಗೇ ಎಲ್ಲವನ್ನು ವಿಚಾರಿಸಿ ಅಟ್ಟಿದ್ದಾರೆ. ಸಂವಿಧಾನದ ಕಲಂ 17 ಅಸ್ಪೃಶ್ಯತೆ ನಿಷೇಧಿಸಲಾಗಿದೆ ಎನ್ನುತ್ತದೆ. ಆದರೆ ಈ ಘಟನೆಯಲ್ಲಿ ಕಾನೂನು ನಯಾಪೈಸೆಯ ಕೆಲಸ ಮಾಡಿಲ್ಲ, ಮಾಡಲ್ಲ. ಇದು ನಿಜ ಭಾರತದ ಸ್ಥಿತಿ. ಇರಲಿ. ಇಲ್ಲಿ ಸಂಸದರು ಆ ಅಮಾನವೀಯ ಜನರ ವಿರುದ್ಧ ಕ್ರಮ ಏಕೆ ಕೈಗೊಳ್ಳಲಿಲ್ಲ? ಅದಕ್ಕೆ ಕಾರಣ ಅವರೇ ಹೇಳಿದ್ದಾರೆ. ಶೇ. 80 ಗೊಲ್ಲ ಸಮುದಾಯ ಅವರಿಗೆ ಮತ ನೀಡಿ ಗೆಲ್ಲಿಸಿದೆ. ಹೀಗಿರುವಾಗ ಸಂಸದರೇನಾದರೂ ಕಾನೂನು ರೀತಿಯ ಕ್ರಮ ಕೈಗೊಂಡರೆ ಮುಂದಿನ ಬಾರಿ ಅವರು ಸೋಲುವುದು ಖಚಿತ.

ಈ ಕಾರಣಕ್ಕಾಗಿಯೇ ಅಂಬೇಡ್ಕರರು 1933 ರ ಪೂನಾ ಒಪ್ಪಂದವನ್ನು ಕಂಠಮಟ್ಟ ವಿರೋಧಿಸಿದ್ದು. ಏಕೆಂದರೆ ದುಂಡು ಮೇಜಿನ ಸಭೆಯಲ್ಲಿ ದಲಿತರಿಗೆ ಎರಡು ಓಟು ನೀಡುವ ಹಕ್ಕು ಸಿಕ್ಕಿತ್ತು. ಆಂದರೆ ದಲಿತ ಮೀಸಲು ಕ್ಷೇತ್ರಗಳಲ್ಲಿ ದಲಿತರಿಂದ ದಲಿತರಿಗಾಗಿ ದಲಿತರಿಗೋಸ್ಕರ ಆರಿಸಿ ಬರುವ ದಲಿತರನ್ನು ಅಯ್ಕೆ ಮಾಡಲು ಒಂದು ಓಟು. ಅದೇ ಕ್ಷೇತ್ರದಲ್ಲಿ ದಲಿತೇತರರನ್ನು ಆಯ್ಕೆ ಮಾಡಲು ಒಂದು ಓಟು. ಇದನ್ನೇ ಪ್ರತ್ಯೇಕ ಮತಕ್ಷೇತ್ರವೆನ್ನುವರು. ಇವತ್ತು ಸಿಖ್ ಜನಾಂಗ ಬಲಿಷ್ಟವಾಗಿರುವುದಕ್ಕೆ ಕಾರಣ ಅವರಿಗೆ ದಕ್ಕಿದ ಪ್ರತ್ಯೇಕ ಮತಕ್ಷೇತ್ರವೇ ಆಗಿದೆ. ಆದರೆ ಇದು ದಲಿತರಿಗೆ ಸಿಗಲಿಲ್ಲ. ಇದಕ್ಕೆ ನೇರವಾಗಿ ಗಾಂಧಿಯವರನ್ನು ನಾವು ಹೊಣೆ ಮಾಡುತ್ತೇವೆ. ಅದು ಸತ್ಯವಾದರೂ ಅವರಷ್ಟೇ ಹೊಣೆಗಾರರು ಅವರಿಗೆ ಬೇಷರತ್ ಬೆಂಬಲ ನೀಡಿದ ಅಖಿಲ ಭಾರತ ಹಿಂದೂ ಮಹಾಸಭಾ, ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಗಾಂಧಿವಾದಿ ದಲಿತರು.

ಅಂಬೇಡ್ಕರರು ಜುಲೈ 1947 ರವರೆಗೂ ಹಾಗೂ ಸಂವಿಧಾನ ಸಭೆಯಲ್ಲೂ ಮತ್ತೆ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ಸಿಗಬೇಕೆಂದು ಹೋರಾಡಿದರು. ಆದರೆ ಗಾಂಧಿವಾದಿ ದಲಿತರು ಹಾಗೂ ಕಾಂಗ್ರೆಸ್ ಅದನ್ನು ಕಂಠಮಟ್ಟ ವಿರೋಧಿಸಿ ಮೂಲೆಗುಂಪು ಮಾಡಿದರು. ಅವರ ಮುಂದೆ ಅಂಬೇಡ್ಕರ್ ಸೋಲೊಪ್ಪಲೇಬೇಕಾಯಿತು.

ಇಂದು ಯಾವುದೇ ದಲಿತ ಜನಪ್ರತಿನಿದಿ ಲೋಕಸಭೆಗೆ ಅಗಲೀ, ವಿಧಾನಸಭೆಗೆ ಆಗಲೀ ಆರಿಸಿ ಬರುತ್ತಿರುವುದು ದಲಿತೇತರರ ಓಟಿನಿಂದ. ದಲಿತರ ಓಟುಗಳಿಗೆ ಇಲ್ಲಿ ಬಿಡಿಗಾಸಿನ ಬೆಲೆಯಿಲ್ಲ. ಯಾವ ದಲಿತ ಅಥವಾ ಯಾವ ಜಾತಿಯ ದಲಿತ, ಶಾಸಕ ಅಥವಾ ಸಂಸದ ಆಗಬೇಕೆನ್ನುವುದನ್ನು ತೀರ್ಮಾನ ಮಾಡುವವರು ದಲಿತೇತರರೇ ಆಗಿರುವಾಗ ಯಾವ ದಲಿತ ರಾಜಕೀಯ ನಾಯಕ ತಾನೇ ದಲಿತೇತರರ ಓಟೆಂಬ ಭಿಕ್ಷೆಯ ವಿರುದ್ಧ ನಿಲ್ಲುತ್ತಾನೆ? ತನ್ನ ಸ್ವಾಭಿಮಾನವನ್ನು ತಾನೇ ಕೊಲೆ ಮಾಡಿಕೊಂಡು ಶಾಸಕ, ಸಂಸದನಾಗುತ್ತಾನೆ. ಅಷ್ಟೆ.

“ನನ್ನ ಮುತ್ತಾತಂದಿರು ಮತಾಂತರ ಆದದ್ದಕ್ಕೆ ಕಾರಣ ಇದು. ಅಂದು ಕೀಳು ಜಾತಿ ಅಂತ ಅವಮಾನಿಸಿದಿರಿ, ಇಂದು ದೇಶ ವಿರೋಧಿಗಳು ಅಂತ ಅನುಮಾನಿಸುತ್ತಿದ್ದೀರಿ” ಎಂದು ಅಬ್ದುಲ್ ಮುನೀರ್ ಪ್ರತಿಕ್ರಿಯಿಸಿದ್ದಾರೆ.

ಈ ಸಂಸದರಿಗೆ ದೇಶದ ಜ್ವಲಂತ ಸಮಸ್ಯೆ ಯಾವುದು ಎಂದು ಮನದಟ್ಟು ಮಾಡಿಕೊಟ್ಟ ಆ ಹಳ್ಳಿಗರಿಗೆ ವಂದನೆಗಳು. ಇನ್ನಾದರೂ ಅವರು ಸಂಸತ್ತಿನಲ್ಲಿ ಈ ಸಮಸ್ಯೆಯ ಬಗ್ಗೆ ದನಿ ಎತ್ತಬೇಕು. ಆಗಿಲ್ಲವೆಂದರೆ ಊರ ಹೊರಗೆ ಕುರ್ಚಿ ಹಾಕಿ ಕಾರ್ಯಕ್ರಮ ನಡೆಸಲಿ. ಅದೂ ಆಗಿಲ್ಲವೆಂದರೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಲಿ ಎಂದು ಸಂತೋಷ್ ಗುಡ್ಡಿಯಂಗಡಿಯವರು ಪ್ರತಿಕ್ರಿಯಿಸಿದ್ದಾರೆ.

ಬೆಳಗ್ಗೆಯಿಂದ ಒಂದಷ್ಟು ಗೊಲ್ಲ ಸಮುದಾಯದ ಸ್ನೇಹಿತರು ಪೋನ್ ಮಾಡಿ ಸಂಸದರಿಗೆ ತಟ್ಟಿದ ಅಸ್ಪೃಶ್ಯತೆ ಬಗ್ಗೆ ತೀವ್ರ ಸಂಕಟ ಹೊರಹಾಕಿದರು..ಅರಿವು ,ಬದ್ದತೆ ಇರುವ ಆ ಸಮುದಾಯದ ಗೆಳೆಯರೊಂದಿಗೆ ನಾವೆಲ್ಲರೂ ಸೇರಿ ಜಾಗೃತಿ ಮೂಡಿಸುವ ಅಥವಾ ಮನಸ್ಸು ಗಳನ್ನ ಪರಿವರ್ತಿಸುವ ಕೆಲಸ ಈ ಕ್ಷಣದ ತುರ್ತು…
ಶಿಕ್ಷೆಯಿಂದ ಎಲ್ಲಾ ಬದಲಾಗುವಂತಿದ್ದರೆ ಹೆಚ್ಚೂಕಮ್ಮಿ ಮೌಡ್ಯ ಇರುವ ಎಲ್ಲಾ ಗೊಲ್ಲರಟ್ಟಿಯವರ ಮೇಲೆ ಎರಡೂ ದಲಿತ ದೌರ್ಜನ್ಯ ಪ್ರಕರಣಗಳು ದಾಖಲಗುತ್ತಿದ್ದವು .
ಹಟ್ಟಿಗಳ ಪರಿವರ್ತನೆ ಗೆ ಇದು ರೈಟ್ ಟೈಮ್ ಎಂದು ಕೊಟ್ಟ ಶಂಕರ್ ರವರು ತಿಳಿಸಿದ್ದಾರೆ.

ಈ ವಿಚಾರ ಪತ್ರಿಕೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಕೂಡಲೇ ಗೊಲ್ಲರಹಟ್ಟಿಯ ಜನ ಎಚ್ಚೆತ್ತುಕೊಂಡಿದ್ದಾರೆ. “ನಮ್ಮ ನಡವಳಿಕೆಗಳಿಂದ ಸಂಸದರಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ, ನೀವು ಮತ್ತೊಮ್ಮೆ ನಮ್ಮ ಹಟ್ಟಿಗೆ ಬಂದು ನಮ್ಮ ಸಮಸ್ಯೆ ಆಲಿಸಿ, ನಮಗೆಲ್ಲಾ ಮನೆ ಕಟ್ಟಿಕೊಡಿ” ಎಂದು ಮನವಿ ಮಾಡಿದ್ದಾರೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...