Homeಮುಖಪುಟ‘ಹಿಂದೂ ರಾಷ್ಟ್ರದಲ್ಲಿ ದಲಿತ-ಶೂದ್ರರಿಗೆ ಮತದಾನದ ಹಕ್ಕಿರುತ್ತದೆಯೇ?’

‘ಹಿಂದೂ ರಾಷ್ಟ್ರದಲ್ಲಿ ದಲಿತ-ಶೂದ್ರರಿಗೆ ಮತದಾನದ ಹಕ್ಕಿರುತ್ತದೆಯೇ?’

ಮೀಸಲಾತಿಯ ಕುರಿತು ದಲಿತ ಸಮುದಾಯದ ಕುರಿತು ಭಾರತದ ಮೇಲ್ಜಾತಿಗಳಿಗೆ ಇರುವ ಅಸಹನೆಯ ಕುರಿತು ಯಾವುದೇ ಪುರಾವೆ ಒದಗಿಸುವ ಅಗತ್ಯವಿಲ್ಲ.

- Advertisement -
- Advertisement -

ಲೇಖನದ ಶೀರ್ಷಿಕೆಯು ಹಿಂದೂ ರಾಷ್ಟ್ರ ಎಂಬುದೊಂದು ಅಸ್ತಿತ್ವಕ್ಕೆ ಬರಲಿದೆ ಎಂಬ ಸಾಧ್ಯತೆಯನ್ನು ಧ್ವನಿಸುತ್ತದೆ. ಇಂದು ಅಂತಹ ಸಾಧ್ಯತೆಯನ್ನು ಖಡಾಖಂಡಿತವಾಗಿ ಯಾರಾದರೂ ಅಲ್ಲಗಳೆದರೆ ಅಂತಹವರನ್ನು ಒಂದು ಮಾತು ಕೇಳಬೇಕಾಗುತ್ತದೆ. ಈ ದೇಶದಲ್ಲಿ ಮುಸ್ಲಿಮರಾಗಿರುವ ಏಕೈಕ ಕಾರಣಕ್ಕೆ ವ್ಯಕ್ತಿಗಳನ್ನು, ಕೆಲವೊಮ್ಮೆ ಅಪರಿಚಿತರನ್ನೂ ಕೊಲ್ಲಬಹುದು ಎಂದು ನೀವು ಊಹಿಸಿದ್ದೀರಾ? ದೇಶದ ಪ್ರಧಾನಮಂತ್ರಿಯು ಧರ್ಮವನ್ನು ಎಳೆದುತಂದು ಕೆಲವರ ಪರ ಅಥವಾ ವಿರುದ್ಧ ನೇರವಾಗಿ ಮಾತಾಡಬಹುದು ಎಂದು ಭಾವಿಸಿದ್ದೀರಾ? ಭಾರತ ದೇಶದ ಪೌರತ್ವವನ್ನು ಧರ್ಮಾಧಾರಿತವಾಗಿ ನಿರ್ಧರಿಸುವ ಕಾನೂನೊಂದು ಬರುತ್ತದೆ ಎಂದು ನಿರೀಕ್ಷಿಸಿದ್ದಿರಾ? ಭಾರತದ ಪ್ರಧಾನಿಯು ಪತ್ರಕರ್ತೆಯೊಬ್ಬರ ಕೊಲೆಯನ್ನು ಸಂಭ್ರಮಿಸುವ ವ್ಯಕ್ತಿಗಳನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಾರಷ್ಟೇ ಅಲ್ಲದೇ, ಅದನ್ನು ಬಯಲಿಗೆ ತಂದರೂ ಅದನ್ನು ಬದಲಿಸದೇ ಸೂಚನೆಯೊಂದನ್ನು ನೀಡಬಹುದು ಎಂದುಕೊಂಡಿದ್ದಿರಾ?

ಪ್ರಶ್ನೆಗಳ ಪಟ್ಟಿ ಇನ್ನೂ ದೀರ್ಘವಿದೆ ಎಂಬುದು ನಿಮಗೆ ಗೊತ್ತು. ಹಾಗಾಗಿ ಹಿಂದೂ ರಾಷ್ಟ್ರವೆಂಬುದೊಂದು ಬರುವುದೇ ಇಲ್ಲ ಎಂದು ಅಂದುಕೊಳ್ಳಲಾಗದು. ಪ್ರಧಾನಿ ಹಾಗೂ ಆಳುವ ಪಕ್ಷವು ಸದಾ ಪೂಜಿಸುವ ಭಾರತ ಮಾತೆಯ ಫೋಟೋದಲ್ಲಿ ರಾಷ್ಟ್ರಧ್ವಜ ಇರುವುದಿಲ್ಲ; ಕೇಸರಿ ಧ್ವಜ ಮಾತ್ರ ಇರುತ್ತದೆ ಎಂಬುದನ್ನು ಗಮನಿಸಿ. ಈ ಪರಿವಾರವು ಬಳಸುವ ಸಂಕೇತಗಳು, ದೀರ್ಘಕಾಲದಿಂದ ಮುಂದಿಡುತ್ತಾ ಬಂದಿರುವ ಯೋಜನೆಗಳು, ಡಿಮ್ಯಾಂಡ್‍ಗಳು ಒಂದೊಂದೇ ನಿಜವಾಗುತ್ತಿರುವುದನ್ನೂ ಗಮನಿಸಿ. ಮುಂದಿನ ಎರಡು ವರ್ಷಗಳಲ್ಲಿ ಗೋಡ್ಸೆಯನ್ನು ಬಹಿರಂಗವಾಗಿ ಆರಾಧಿಸುವ (ಆ ಚಿಂತನೆಯು ಸಾಕಷ್ಟು ಕಾಲದಿಂದ ಸಾಕಷ್ಟು ವ್ಯಾಪಕವಾಗಿಯೇ ಚಾಲನೆಯಲ್ಲಿದೆ ಎಂಬುದು ತಿಳಿದಿಲ್ಲವಾದರೆ, ಆರೆಸ್ಸೆಸ್‍ನ ಯಾವುದೇ ಸ್ವಯಂಸೇವಕನನ್ನು ಖಾಸಗಿಯಾಗಿ ಮಾತನಾಡಿಸಿ) ಕಾರ್ಯಕ್ರಮಗಳು ನಡೆಯಲು ಎಲ್ಲಾ ತಯಾರಿಗಳು ನಡೆದಿಲ್ಲವೇ?

ಪ್ರಗ್ಯಾ ಠಾಕೂರ್ ಎಂಬ ಸಂಸದೆ ಈಗಾಗಲೇ ಗೋಡ್ಸೆ ಒಬ್ಬ ದೇಶಭಕ್ತ ಎಂದು ದೇಶದ ಸಂಸತ್ತಿನಲ್ಲೇ ಹೇಳಿಯಾಗಿದೆ. ಅಂತಹ ಹಲವು ಹೇಳಿಕೆಗಳ ನಂತರ ಬಿಜೆಪಿ ಪಕ್ಷವು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲವೆಂಬುದು ಸ್ಪಷ್ಟ ಸೂಚನೆಯನ್ನು ನೀಡುತ್ತಿದೆ. ಅಂದರೆ ಹಿಂದೂ ರಾಷ್ಟ್ರದ ಕಲ್ಪನೆ ಏನಿತ್ತೋ, ಅದು ಸಾಕಾರವಾಗುವ ದಿಕ್ಕಿನಲ್ಲಿ ದೇಶ ನಡೆದಿದೆ. ಗಾಂಧಿ ಕೊಲೆಯನ್ನು ಆರೆಸ್ಸೆಸ್ಸಿನವರೇ ಮಾಡಿದ್ದು ಮತ್ತು ಅದನ್ನು ಅವರು ಸಂಭ್ರಮಿಸಿದರು ಎಂಬುದಕ್ಕೆ ದಾಖಲೆಗಳಿವೆ. ಗಾಂಧಿ ದ್ವೇಷ ಮಾತ್ರವಲ್ಲದೇ ಅಂಬೇಡ್ಕರ್‍ಗೆ ವಿರೋಧ, ಮಂಡಲ್ ವರದಿಗೆ ವಿರೋಧ ಇತ್ಯಾದಿಗಳು ಬಹಿರಂಗವಾಗಿ ವ್ಯಕ್ತವಾಗಿವೆ. ಮೀಸಲಾತಿಯ ಕುರಿತು ದಲಿತ ಸಮುದಾಯದ ಕುರಿತು ಭಾರತದ ಮೇಲ್ಜಾತಿಗಳಿಗೆ ಇರುವ ಅಸಹನೆಯ ಕುರಿತು ಯಾವುದೇ ಪುರಾವೆ ಒದಗಿಸುವ ಅಗತ್ಯವಿಲ್ಲ.

ಅದೇ ರೀತಿ ಬಡವರು, ಅನಕ್ಷರಸ್ಥರು, ‘ಕೀಳು’ ಜಾತಿಯವರು (ಕೀಳು ಜಾತಿ ಎಂಬ ಪದ ಇಂದಿಗೂ ಬಳಕೆಯಲ್ಲಿದೆ ಎಂಬುದನ್ನು ಮರೆಯಲಾಗುತ್ತದೆಯೇ?) ಚುನಾವಣೆಯಲ್ಲಿ ಸರಿಯಾದ ಆಯ್ಕೆ ಮಾಡುವುದಿಲ್ಲ; ಸ್ಲಂ ಜನರಂತಹವರು ಸೇರಿಕೊಂಡು ದೇಶ ಹಾಳು ಮಾಡುತ್ತಿದ್ದಾರೆ ಎಂಬ ಭಾವವೂ ‘ಕುಲೀನ’ರಲ್ಲಿ ಗಾಢವಾಗಿಯೇ ಇದೆ. ವಿದ್ಯಾವಂತರಲ್ಲದವರಿಗೆ ಮತದಾನದ ಹಕ್ಕು ಇರಬಾರದು ಎಂದು ಪ್ರತಿಪಾದಿಸುವವರೂ ಇದ್ದಾರೆ.

ಪೌರತ್ವವೆಂಬುದು ಹಕ್ಕುಗಳನ್ನು ಪಡೆಯಲು ಇರುವ ಹಕ್ಕಾಗಿದೆ. ಇಂದು ದಾಖಲಾತಿಗಳ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸುವ ಪ್ರಕ್ರಿಯೆಯೊಂದು ದೇಶದಲ್ಲಿ ಚಾಲ್ತಿಗೆ ಬಂದಿದೆ. ಅಂತಹ ಹಕ್ಕುಗಳಲ್ಲಿ ಒಂದು ಮತದಾನದ ಹಕ್ಕೂ ಆಗಿದೆ. ದೇಶದ ಬಡವರಿಗೆ, ದಲಿತರಿಗೆ ಏನಾದರೂ ಹಕ್ಕುಗಳು ಸಿಕ್ಕಿದ್ದರೆ ಅದಕ್ಕೆ ಓಟೂ ಒಂದು ಕಾರಣವಾಗಿದೆ. ಆದರೆ, ದಾಖಲಾತಿಗಳ ಮೇಲೆ ನಿರ್ಧರಿಸಲಾಗುವ ಪೌರತ್ವವು ಮುಂದೊಂದು ದಿನ ಈ ಬಡವರ, ದಲಿತರ, ಹಿಂದುಳಿದವರ ಓಟಿನ ಹಕ್ಕನ್ನೂ ಕಸಿಯುವ ಅಸ್ತ್ರವಾಗುವುದಿಲ್ಲ ಎಂದು ಸುಮ್ಮನೇ ಕೂರುವ ಹಾಗಿಲ್ಲ. ಈಗ ಮೈಮರೆತರೆ ಮುಂದೊಂದು ದಿನ ಬಹಳ ದುಬಾರಿ ಬೆಲೆ ತೆರಬೇಕಾಗಿ ಬರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...