Homeಮುಖಪುಟಮೋದಿಜಿ ಕನಿಷ್ಟ 4ಜಿ ಇಂಟರ್ನೆಟ್‌ ಆದರೂ ಕೊಡಿ: ಭಾವನಾತ್ಮಕ ಪತ್ರ ಬರೆದ ಕಾಶ್ಮೀರದ ಬಾಲಕ

ಮೋದಿಜಿ ಕನಿಷ್ಟ 4ಜಿ ಇಂಟರ್ನೆಟ್‌ ಆದರೂ ಕೊಡಿ: ಭಾವನಾತ್ಮಕ ಪತ್ರ ಬರೆದ ಕಾಶ್ಮೀರದ ಬಾಲಕ

ನಾನು 2019ರ ಆಗಸ್ಟ್‌ನಿಂದಲೇ ಶಾಲೆಯಿಂದ ಹೊರಗುಳಿದಿದ್ದೇನೆ. ( ಕಾರಣ ನಿಮಗೆ ಗೊತ್ತಿದೆ ) ಕೆಲ ದಿನಗಳ ಹಿಂದೆ ನಾನು ಶಾಲೆಗೆ ಹೋಗಲು ಆರಂಭಿಸಿದ್ದೇ ಆದರೆ ಕೊರೊನಾ ವೈರಸ್‌ ಕಾರಣಕ್ಕೆ ಮಾರ್ಚ್‌‌ನಿಂದ ಶಾಲೆಗಳನ್ನು ಮುಚ್ಚಲಾಯಿತು.

- Advertisement -
- Advertisement -

ಕೊರೊನಾ ಮುನ್ನೆಚ್ಚರಿಕೆಯ ಭಾಗವಾಗಿ ನಮ್ಮ ಪ್ರಧಾನಿ ಮೋದಿಯವರು 21 ದಿನಗಳ ಲಾಕ್‌ಡೌನ್‌ ಘೋಷಿಸಿದ್ದಾರೆ. ಅದರಲ್ಲಿ ಒಂದು ವಾರ ಕಳೆದಿದ್ದು ಇಷ್ಟಕ್ಕೆ ಬಹಳಷ್ಟು ಜನ ನಲುಗಿಹೋಗಿದ್ದಾರೆ. ಬಡವರು, ವಲಸೆ ಕಾರ್ಮಿಕರು, ನಿರಾಶ್ರಿತರು ಕಂಗೆಟ್ಟಿದ್ದಾರೆ.

ಇನ್ನು ಮನೆಯಲ್ಲಿರಲಾರದೇ ದಿನಸಿ ತರಲೆಂದೋ ಅಥವಾ ಇನ್ಯಾವುದೋ ಅಗತ್ಯ ಕೆಲಸ ಹೋದವರ ಮೇಲೆಯೂ ಕೂಡ ಪೊಲೀಸರು ಲಾಠಿ ಬೀಸಿ ಕೊರೊನಾಕ್ಕಿಂತ ಹೆಚ್ಚಿನ ಭೀತಿ ಉಂಟು ಮಾಡಿದ್ದಾರೆ. ಹಾಗಾಗಿ ಒಂದು ವಾರದ ಲಾಕ್‌ಡೌನ್‌ ತಡೆದುಕೊಳ್ಳಲು ದೇಶದ ಹಲವಾರು ಜನ ಹೆಣಗಾಡುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಆಗಸ್ಟ್‌ 05 ರಿಂದ ಎಂಟು ತಿಂಗಳ ಕಾಲ ಲಾಕ್‌ಡೌನ್‌ ಅನುಭವಿಸುತ್ತಿರುವ ಜಮ್ಮು ಕಾಶ್ಮೀರದ ಜನರ ಪರಿಸ್ಥಿತಿ ಹೇಗಿರಬಹುದು ಎಂದಾದರೂ ಊಹಿಸಿದ್ದೀರಾ? ಅಲ್ಲಿನ 5ನೇ ತರಗತಿಯ ಪುಟ್ಟ ಹುಡುಗನೊಬ್ಬ ಬರೆದಿರುವ ಪತ್ರ ಓದಿದರೆ ಅದರ ಭೀಕರತೆ ಅರ್ಥವಾಗಬಹುದು.

ಆ ಬಾಲಕನ ಪತ್ರಕ ಕನ್ನಡ ಅನುವಾದ ಈ ಕೆಳಗಿನಂತಿದೆ.

ಪ್ರಿಯ ಮೋದಿಜಿ,

ನನ್ನ ಪಿ.ಸಿ.ಎಚ್‌.ಎಸ್‌.ಎಸ್‌ ಶಾಲೆಯು ಒದಗಿಸಿರುವ ಆನ್‌ಲೈನ್‌ ತರಗತಿಗಳಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದಕ್ಕೆ ನನಗೆ ಕೋಪ, ಒತ್ತಡ, ನೋವು ಮತ್ತು ಖಿನ್ನತೆ ಉಂಟಾಗಿದೆ. ಏಕೆಂದರೆ 2ಜಿ ಮೊಬೈಲ್‌ ನೆಟ್‌ವರ್ಕ್‌ ಕೆಲಸ ಮಾಡದ ಕಾರಣ ನಾನು ತರಗತಿಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.

ನಾನು 2019ರ ಆಗಸ್ಟ್‌ನಿಂದಲೇ ಶಾಲೆಯಿಂದ ಹೊರಗುಳಿದಿದ್ದೇನೆ. ( ಕಾರಣ ನಿಮಗೆ ಗೊತ್ತಿದೆ ) ಕೆಲ ದಿನಗಳ ಹಿಂದೆ ನಾನು ಶಾಲೆಗೆ ಹೋಗಲು ಆರಂಭಿಸಿದ್ದೇ ಆದರೆ ಕೊರೊನಾ ವೈರಸ್‌ ಕಾರಣಕ್ಕೆ ಮಾರ್ಚ್‌‌ನಿಂದ ಶಾಲೆಗಳನ್ನು ಮುಚ್ಚಲಾಯಿತು. ಆಗ ನಮ್ಮ ಶಾಲಾ ಶಿಕ್ಷಕರು ಆನ್‌ಲೈನ್‌ ಮೂಲಕ ತರಗತಿಗಳನ್ನು ನಡೆಸಲು ತೀರ್ಮಾನಿಸಿದರು. ಆದರೆ 2ಜಿ ನೆಟ್‌ವರ್ಕ್‌ ಕಾರಣಕ್ಕೆ ಅದು ಸಾಧ್ಯವಾಗಿಲ್ಲ. ಹಾಗಾಗಿ ದಯವಿಟ್ಟು ನಮಗೆ 4ಜಿ ನೆಟ್‌‌ವರ್ಕ್‌ ಅನ್ನು ವಾಪಸ್ ಕೊಡಿ. ನನಗೆ ಕಲಿಕೆಯನ್ನು ಕಳೆದುಕೊಳ್ಳಲು ಇಷ್ಟವಿಲ್ಲ.

ಇಂತಿ

ಪಿ.ಸಿ.ಎಚ್‌.ಎಸ್‌.ಎಸ್‌ ಶಾಲಾ ವಿದ್ಯಾರ್ಥಿ

5ನೇ ತರಗತಿ.

ಈ ಬಾಲಕನ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಒಬ್ಬ ವಿದ್ಯಾರ್ಥಿಯು ತನ್ನ ಕಳವಳವನ್ನು ವ್ಯಕ್ತಪಡಿಸಿ, ಕೆಲವು ಪ್ರಶ್ನೆಗಳನ್ನು ಕೇಳಿದ ಪತ್ರವು ನಮ್ಮೆಲ್ಲ ಭಾರತೀಯರನ್ನು ಯೋಚಿಸುವಂತೆ ಮಾಡಿದೆ. ಇಂದು ದೇಶವು ಈ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ, ಎಲ್ಲಾ ವಿದ್ಯಾರ್ಥಿಗಳು ಇಂಟರ್ನೆಟ್ ಸಹಾಯದಿಂದ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಕೆಲವು ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸಲು ಅದೇ ಅವಕಾಶವನ್ನು ಪಡೆಯುತ್ತಿಲ್ಲ. ಏಕೆಂದರೆ ಸರ್ಕಾರವು ಅವರಲ್ಲಿ 4 ಜಿ ಸೌಲಭ್ಯವನ್ನು ರದ್ದುಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಸಾವಿರಾರು ವಿದ್ಯಾರ್ಥಿಗಳಿಗೆ ಒಂದೇ ರೀತಿಯ ಶಿಕ್ಷಣದ ಅವಕಾಶ ಸಿಗುತ್ತಿಲ್ಲ ಎಂಬ ಕಾರಣದಿಂದ ತೊಂದರೆಗೀಡಾದ 5 ನೇ ತರಗತಿಯ ವಿದ್ಯಾರ್ಥಿಯು ಪ್ರಧಾನಿಯನ್ನು ಉದ್ದೇಶಿಸಿ ಪತ್ರ ಬರೆದಿದ್ದಾರೆ ಎಂದು ಯೂತ್‌ ಫಾರ್‌ ಸ್ವರಾಜ್‌ ಅಭಿಪ್ರಾಯಪಟ್ಟಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...