HomeUncategorizedದೆಹಲಿ ಚುನಾಚಣಾ ನೋಟ: ಇಳಿಕೆಯಾದ ಮತಚಲಾವಣೆ ಏನನ್ನು ಸೂಚಿಸುತ್ತಿದೆ?

ದೆಹಲಿ ಚುನಾಚಣಾ ನೋಟ: ಇಳಿಕೆಯಾದ ಮತಚಲಾವಣೆ ಏನನ್ನು ಸೂಚಿಸುತ್ತಿದೆ?

ಮತದಾನದ ಪ್ರಮಾಣದಲ್ಲಿ ಕಂಡುಬಂದ ಕಡಿತದ ಬಗ್ಗೆ ಎಲ್ಲರೂ ಪದೇ ಪದೇ ಹೇಳುತ್ತಿರುವುದೇನೆಂದರೆ, ಇದು ಆಡಳಿತಪಕ್ಷಕ್ಕೆ ಬೆಂಬಲವನ್ನು ಸೂಚಿಸುತ್ತೆ ಎನ್ನುವುದು. ಆದರೆ ಪ್ರಶ್ನೆ ಇರುವುದು, ಯಾವ ಆಡಳಿತ ಪಕ್ಷಕ್ಕೆ ಲಾಭ ಆಗುತ್ತಿದೆ?

- Advertisement -
- Advertisement -

ಅನೀಶ್ ನಾಯರ್, ದೆಹಲಿ 
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಈ ಲೇಖನವನ್ನು ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭಾನುವಾರ ಸಂಜೆಯ ಹೊತ್ತಿಗೆ ದೆಹಲಿಯ ಮತದಾನದ ಪ್ರಮಾಣ 60% ಆಗಿತ್ತು, ಇದು 2014ರ ಲೋಕಸಭೆಯ ಚುನಾವಣೆಯ ಪ್ರಮಾಣಕ್ಕಿಂತ 5% ಕಡಿಮೆ ಹಾಗೂ 2015 ರ ವಿಧಾನಸಭೆ ಚುನಾವಣೆಗಿಂತ 7% ಕಡಿಮೆ. ಮತದಾನ ಭಾನುವಾರದಂದು ಇದ್ದರೂ ಮತದಾನದ ಪ್ರಮಾಣ ಕಡಿಮೆಯಾಗಿದ್ದು ಚಕಿತಗೊಳಿಸುವಂಥದ್ದು.

ಮತದಾನದ ಪ್ರಮಾಣದಲ್ಲಿ ಕಂಡುಬಂದ ಕಡಿತದ ಬಗ್ಗೆ ಎಲ್ಲರೂ ಪದೇ ಪದೇ ಹೇಳುತ್ತಿರುವುದೇನೆಂದರೆ, ಇದು ಆಡಳಿತಪಕ್ಷಕ್ಕೆ ಬೆಂಬಲವನ್ನು ಸೂಚಿಸುತ್ತೆ ಎನ್ನುವುದು. ಆದರೆ ಪ್ರಶ್ನೆ ಇರುವುದು, ಯಾವ ಆಡಳಿತ ಪಕ್ಷಕ್ಕೆ ಲಾಭ ಆಗುತ್ತಿದೆ?

ಇದು ಜಟಿಲ ಪ್ರಶ್ನೆ. ದೆಹಲಿಗೆ ಸಂಬಂಧಪಟ್ಟ ವಿಷಯಗಳು, ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ಸಂಬಂಧಿಸಿದ ವಿಷಯಗಳು. ರಾಷ್ಟ್ರದ ರಾಜಧಾನಿಯೂ ಆಗಿದ್ದು ದೆಹಲಿಗೆ ತನ್ನದೇ ಆದ ಸ್ಥಳೀಯ ಮತ್ತು ಆಡಳಿತಾತ್ಮಕ ಸಮಸ್ಯೆಗಳಿವೆ. ಇದು ಸಂಪೂರ್ಣ ರಾಜ್ಯವೂ ಅಲ್ಲ ಅಥವಾ ಕೇಂದ್ರಾಡಳಿತ ಪ್ರದೇಶವೂ ಅಲ್ಲ. ಅದರೊಂದಿಗೆ, ದೆಹಲಿಯ ನಿವಾಸಿಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡನ್ನೂ ಜವಾಬ್ದಾರರನ್ನಾಗಿ ಕಾಣುತ್ತಾರೆ.ಅಂದರೆ ಈಗಿರುವ ಹಾಲಿ ಸರಕಾರ ಯಾವುದು? ರಾಜ್ಯ ಸರಕಾರವನ್ನು ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿಯೋ ಅಥವಾ ಕೇಂದ್ರದ ಭಾರತೀಯ ಜನತಾ ಪಕ್ಷವೋ? ಅರವಿಂದ್ ಕೇಜ್ರಿವಾಲೋ ಅಥವಾ ನರೇಂದ್ರ ಮೋದಿಯೋ? ಈ ಪ್ರಶ್ನೆಗೆ ಸಮರ್ಪಕ ಸಿಕ್ಕಿಲ್ಲ.

ಮೊದಲು ದೆಹಲಿಯಲ್ಲಿ ಸ್ಪರ್ಧಿಸುತ್ತಿರುವ ಮೂರು ಪ್ರಮುಖ ಪಕ್ಷಗಳ ಪ್ರಚಾರವನ್ನು ನೋಡುವ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ದೆಹಲಿಯನ್ನು ಇಡೀ ಭಾರತದ ಒಂದು ಚಿಕ್ಕ ಪ್ರತಿರೂಪ ಎಂದು ಪರಿಗಣಿಸಿ ಪ್ರಚಾರ ಮಾಡಿದರೆ, ಆಮ್ ಆದ್ಮಿ ಪಾರ್ಟಿಯು ಸ್ಥಳೀಯ ವಿಷಯಗಳ ಮೇಲೇ ಗಮನವನ್ನು ಕೇಂದ್ರೀಕರಿಸಿ ಪ್ರಚಾರ ಮಾಡಿದೆ.

ಬಿಜೆಪಿಯ ನಾಯಕರು ರಾಷ್ಟ್ರೀಯ ಸುರಕ್ಷತೆಯ ಬಗ್ಗೆ ಮಾತನಾಡಿದರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ‘ಯಶಸ್ಸು’ಗಳ ಆಧಾರದ ಮೇಲೆ ಮತಯಾಚಿಸಿದರು. ಅದಕ್ಕೆ ಉತ್ತರವಾಗಿ ಕಾಂಗ್ರೆಸ್ ಪ್ರಧಾನ ಮಂತ್ರಿಯ ವೈಫಲ್ಯಗಳ ಬಗ್ಗೆ ಮಾತನಾಡಿ, ತನ್ನ ಯೋಜನೆ ‘ನ್ಯಾಯ’ನ ಭರವಸೆಗಳ ಆಧಾರದ ಮೇಲೆ ಮತ ನೀಡುವಂತೆ ಅಪೀಲ್ ಮಾಡಿತು. ಆದರೆ ಆಮ್ ಆದ್ಮಿ ಪಾರ್ಟಿ ಬೇರೆ ಹಾದಿಯನ್ನು ತುಳಿಯಿತು. ದೆಹಲಿಗೆ ಸಂಪೂರ್ಣ ರಾಜ್ಯದ ಮಾನ್ಯತೆಗಾಗಿ ಕೆಲಸ ಮಾಡುವುದಾಗಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಆದ ಸುಧಾರಣೆಗಳ ಬಗ್ಗೆ ಒತ್ತು ನೀಡಿ ಮತ್ತು ಉನ್ನತ ಶಿಕ್ಷಣದಲ್ಲಿ ಹಾಗೂ ಸರಕಾರಿ ಉದ್ಯೋಗಗಳಲ್ಲಿ ದೆಹಲಿಯ ನಿವಾಸಿಗಳಿಗೆ ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿ ತಮ್ಮ ಪ್ರಚಾರ ಮಾಡಿತು.

ದೆಹಲಿಯನ್ನು ಪರಿಗಣಿಸಿದ ಈ ರೀತಿಯು ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಹೊಸತಲ್ಲ. ಶಬರಿಮಲಾ ಪ್ರಕರಣವನ್ನಿಟ್ಟುಕೊಂಡು ಕೇರಳದಲ್ಲಿ ಎಡಪಕ್ಷದ ಸರಕಾರವನ್ನು ಉರುಳಿಸಲು ಈ ಪಕ್ಷಗಳು ಪ್ರಯತ್ನಿಸಿದರೆ, ಒರಿಸ್ಸಾದಲ್ಲಿ ಫನಿ ಸೈಕ್ಲೋನ್‍ದ ಪರಿಹಾರ ಕಾರ್ಯಾಚರಣೆಗಳ ನಿರ್ವಹಣೆಯಲ್ಲಿ ಆದ ಸಮಸ್ಯೆಗಳನ್ನು ಇಷ್ಯೂ ಮಾಡಿ ನವೀನ್ ಪಟ್ನಾಯಕ್ ಸರಕಾರದ ವಿರುದ್ಧ ಮಾತನಾಡುತ್ತವೆ. ಆದರೆ ಲೋಕಸಭೆ ಚುನಾವಣೆಗಳ ಸಮಯದಲ್ಲಿ ದೆಹಲಿಯ ಸ್ಥಳೀಯ ವಿಷಯಗಳಿಗೆ ಗಮನ ಕೊಡುವ ಗೋಜಿಗೆ ಹೋಗುವುದಿಲ್ಲ ಈ ಎರಡೂ ಪಕ್ಷಗಳು.

ದೆಹಲಿಗೆ ಸಂಪೂರ್ಣ ರಾಜ್ಯದ ಮಾನ್ಯತೆ ಸಿಗಬೇಕು ಎನ್ನುವ ಬೇಡಿಕೆ ಹಳೆಯದಾದರೂ, ದೆಹಲಿಯ ನಿವಾಸಿಗಳು ‘ಎರಡನೇ ದರ್ಜೆ’ಯ ಪ್ರಜೆಗಳು ಎನ್ನುವಂತಹ ಭಾಷೆ ಹೊಸದು. ಅದರೊಂದಿಗೆ, ದೆಹಲಿಯ ನಿವಾಸಿಗಳಿಗೆ ಮೀಸಲಾತಿ ಕಲ್ಪಿಸುವುದು, ನಗರದ ಮೂಲಸೌಕರ್ಯಗಳ ಬಗ್ಗೆ ಮತ್ತು ಸಾರ್ವಜನಿಕ ಶಿಕ್ಷಣದಲ್ಲಿ ಮಾಡಿದ ಸಾಧನೆಗಳ ಬಗ್ಗೆ ಹೇಳಿಕೊಳ್ಳುವುದು ಇತ್ಯಾದಿಗಳೂ ಹೊಸದಾಗಿ ಕಂಡುಬಂದಿದ್ದು. ಇದು ಒಂದು ರೀತಿಯ ಪ್ರಾದೇಶಿಕತ್ವದೆಡೆಗೆ ಇಟ್ಟ ಹಜ್ಜೆಯಾಗಿ ಕಾಣಿಸಿಕೊಳ್ಳುತ್ತಿದೆ.

2014ರಲ್ಲಿ ಮತ್ತು ಈಗಿನ ಆಮ್ ಆದ್ಮಿ ಪಾರ್ಟಿಯ ಪ್ರಚಾರದಲ್ಲಿ ಕಂಡುಬರುವ ವ್ಯತ್ಯಾಸಗಳೂ ಗಮನಾರ್ಹವಾಗಿವೆ. 2014ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ತಾನೊಂದು ರಾಷ್ಟ್ರೀಯ ಪರ್ಯಾಯ ಎಂದು ಆಪ್ ಬಿಂಬಿಸಿತ್ತು. ಆದರೆ ಇಂದು ಐದು ವರ್ಷಗಳ ನಂತರ ಅದು ಪಂಜಾಬ್, ಹರಿಯಾಣ ಮತ್ತು ದೆಹಲಿಗೆ ಮಾತ್ರ ಸೀಮಿತವಾಗಿಸಿಕೊಂಡಿದೆ. ಬೇರೆಡೆ ವಿಸ್ತರಿಸಲು ಪ್ರಯತ್ನಿಸಿದರೂ ವಾಸ್ತವದಲ್ಲಿ ಈ ಮೂರು ರಾಜ್ಯಗಳನ್ನು ಬಿಟ್ಟರೆ ಬೇರೆಲ್ಲೂ ಈ ಪಕ್ಷದ ಅಸ್ತಿತ್ವ ಇಲ್ಲ. ರಾಷ್ಟ್ರೀಯ ಪಕ್ಷಕ್ಕಿಂತಲೂ ತಾನೊಂದು ಪ್ರಾದೇಶಿಕ ಪಕ್ಷ ಎನ್ನುವುದನ್ನು ಆಮ್ ಆದ್ಮಿ ಪಕ್ಷ ಒಪ್ಪಿಕೊಂಡಂತಿದೆ.

1993ರಿಂದ ವಿಧಾನಸಭೆ ಚುನಾವಣೆಗಳಲ್ಲಿ ಸ್ಥಳೀಯ ವಿಷಯಗಳೇ ಕೇಂದ್ರವಾಗಿದ್ದವು. ಈ ಸ್ಥಳೀಯ ವಿಷಯಗಳ ಆಧಾರದ ಮೇಲೆಯೇ ಶೀಲಾ ದೀಕ್ಷಿತ್ ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದು. ಆಮ್ ಆದ್ಮಿ ಪಾರ್ಟಿಯ ಈ ಸ್ಥಳೀಯ, ಪ್ರಾದೇಶಿಕ ನಿಲುವಿನಿಂದ ಇತರ ಪಕ್ಷಗಳೂ ತಮ್ಮ ರಾಜಕೀಯದಲ್ಲಿ ಬದಲಾವಣೆ ಮಾಡಿಕೊಂಡಂತಿವೆ. 2013ರ ಸೋಲಿನ ನಂತರ ನಿವೃತ್ತರಾಗಿದ್ದ ಶೀಲಾ ದೀಕ್ಷಿತ್ ಅವರನ್ನು ಮತ್ತೇ ಕಣಕ್ಕಿಳಿಸುವುದು ಹಾಗೂ ಬಿಜೆಪಿಯ ಜನರಿಂದ ಹರಡಲಾಗುತ್ತಿರುವ ‘ಕೇಂದ್ರದಲ್ಲಿ ಮೋದಿ, ದೆಹಲಿಯಲ್ಲಿ ಕೇಜ್ರಿವಾಲ್’ ಎನ್ನುವಂತಹ ವಾಟ್ಸ್‍ಆಪ್ ಸಂದೇಶಗಳು ಮತ್ತು ಘೋಷಣೆಗಳು ಬದಲಾಗುತ್ತಿರುವ ರಾಜಕೀಯ ವಾತಾವರಣವನ್ನು ಸೂಚಿಸುತ್ತವೆ.

ಆದರೆ ಈ ಬೆಳವಣಿಗೆಗಳು ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಆತಂಕ ಹುಟ್ಟಿಸಿಲ್ಲ ಎಂದಿಲ್ಲ. ಏಕೆಂದರೆ, ಇದು ದೆಹಲಿ ಅಷ್ಟೇ ಅಲ್ಲದೇ ಇತರ ರಾಜ್ಯಗಳಲ್ಲಿ ಈ ರಾಷ್ಟ್ರೀಯ ಪಕ್ಷಗಳಿಗೆ ಹುಟ್ಟಿಕೊಳ್ಳುತ್ತಿರುವ ಪರ್ಯಾಯ ಅಥವಾ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಯನ್ನು ಸೂಚಿಸುತ್ತದೆ. ಬಹುತೇಕ ಇವುಗಳು ಕಾಂಗ್ರೆಸ್ಸಿನ ಮತಗಳನ್ನು ತಮ್ಮೆಡೆ ಸೆಳೆಯುತ್ತವೆ, ಕೆಲವೊಮ್ಮೆ ನಾಯಕರನ್ನು ಕೂಡ. ಅದರೊಂದಿಗೆ, ಭಾಷೆ ಮತ್ತು ಜಾತಿ ಜನಾಂಗಗಳನ್ನು ಮೀರಿ ಮತದಾರರನ್ನು ತನ್ನೆಡೆಗೆ ಸೆಳೆದುಕೊಂಡು ಒಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಗಳೂ ಇರುತ್ತವೆ. ದೆಹಲಿಯಲ್ಲಂತೂ ಆಮ್ ಆದ್ಮಿ ಪಕ್ಷವು ಬಿಜೆಪಿಯ ವಿರುದ್ಧ ನಿಂತಿರುವ ಒಂದು ಪ್ರಬಲ ಶಕ್ತಿಯಾಗಿದೆ.

2013, 2014 ಮತ್ತು 2015ರ ಚುನಾವಣೆಗಳಲ್ಲಿ ಕಾಂಗ್ರೆಸ್‍ನ ಮತಗಳು ನಿರಂತರವಾಗಿ ಕುಸಿದಿವೆ; 2013ರಲ್ಲಿ 25%, 2014ರಲ್ಲಿ 15% ಮತ್ತು 2015ರಲ್ಲಿ 9%. ಹಾಗೂ 2014 ಮತ್ತು 15 ರಲ್ಲಿ ಯಾವ ಸೀಟಲ್ಲೂ ಕಾಂಗ್ರೆಸ್ ಗೆಲುವನ್ನು ಕಂಡಿಲ್ಲ. ಆದರೆ ಆಮ್ ಆದ್ಮಿ ಪಕ್ಷದ ಮತಗಳು 30% ರಿಂದ 33%ಕ್ಕೆ ಏರಿ 2015ರಲ್ಲಿ 54%ಕ್ಕೆ ಏರಿತ್ತು. ಅದೇ ಸಮಯದಲ್ಲಿ ಬಿಜೆಪಿಯ ಮತಗಳ ಪ್ರಮಾಣ 33%, 46% ಮತ್ತು 32% ಆಗಿತ್ತು.

‘ಮೋದಿ ಅಲೆ’ ಇದ್ದ 2014 ರ ಚುನಾವಣೆ ಹೊರತುಪಡಿಸಿ, ಬಿಜೆಪಿಯು ದೆಹಲಿಯಲ್ಲಿ ಹೆಚ್ಚುಕಡಿಮೆ ಒಂದನೇ ಮೂರರಷ್ಟು ಮತದಾರರನ್ನು ತನ್ನೊಂದಿಗೆ ಉಳಿಸಿಕೊಂಡೇ ಬಂದಿದೆ. ಈ ಸಲ ಬಿಜೆಪಿ ಹೆಚ್ಚು ಮತಗಳನ್ನು ಪಡೆಯುವ ಸಾಧ್ಯತೆಯಿದ್ದರೂ 40%ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇಲ್ಲ. ಆದರೆ ಬಿಜೆಪಿಯು ಪ್ರದರ್ಶನ ಹೇಗಿರುತ್ತೆ ಎನ್ನುವುದು ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯು ಇತರ ಮತಗಳನ್ನು ತನ್ನೆಡೆಗೆ ಕ್ರೋಢಿಕರಿಸಬಲ್ಲರೋ ಇಲ್ಲವೋ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಶೀಲಾ ದೀಕ್ಷಿತ್ ಅವರನ್ನು ಕರೆತಂದು ತನ್ನ ಉತ್ಸಾಹವನ್ನು ಹೆಚ್ಚಿಸಿದರೂ, ವಾಸ್ತವದಲ್ಲಿ ಸೀಟುಗಳನ್ನು ಗೆಲ್ಲುವುದು ಕಷ್ಟ ಹಾಗೂ ಆಮ್ ಆದ್ಮಿ ಪಾರ್ಟಿಯ ಗೆಲ್ಲುವ ಸಾಧ್ಯತೆಗಳನ್ನು ಕಡಿತಗೊಳಿಸಿ ಬಿಜೆಪಿ ಮತ್ತೊಮ್ಮೆ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವಂತೆ ಮಾಡಬಹುದು. 2014 ಮತ್ತು 2015ರಲ್ಲಿ ಕಾಂಗ್ರೆಸ್ ತೋರಿಸಿದ ಕಳಪೆ ಪ್ರದರ್ಶನ ಮರುಕಳಿಸಿದರೆ ಆಮ್ ಆದ್ಮಿ ಪಾರ್ಟಿ 3-4 ಸೀಟು ಅಥವಾ ಅದಕ್ಕಿಂತ ಹೆಚ್ಚೂ ಗೆಲ್ಲಬಹುದು.

ಇದನ್ನು ಓದಿ: ದೆಹಲಿಯ ಸರ್ಕಾರಿ ಶಾಲೆಗಳ ಮಕ್ಕಳು ಕಾನ್ವೆಂಟ್ ಗಳನ್ನ ಮೀರಿಸಿದ್ದು ಹೇಗೆ?

ಇದು 2017ರ ಮುನಿಸಿಪಲ್ ಚುನಾವಣೆಯಲ್ಲಿ ಸ್ಪಷ್ಟವಾಗಿತ್ತು. ಆಗ ಕಾಂಗ್ರೆಸ್ 21% ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆಮ್ ಆದ್ಮಿ ಪಾರ್ಟಿಗೆ 26% ಮತಗಳು ಬಂದಿದ್ದವು ಮತ್ತು ಬಿಜೆಪಿಯ ಹೆಚ್ಚಳ ಕಡಿಮೆಯಿದ್ದ 37% ಮತಗಳನ್ನು ಪಡೆದರೂ ಎಲ್ಲೆಡೆ ಜಯಭೇರಿ ಬಾರಿಸಿತು. ವೋಟುಗಳ ವಿಭಜನೆಯಿಂದ ಬಿಜೆಪಿ 2ನೇ ಮೂರರಷ್ಟು ಪಡೆಯಿತು.

ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳು ಭಿನ್ನ ಎಂದು ಒಪ್ಪಿಕೊಂಡರೂ ಇಲ್ಲಿ ಕಾಣಿಸುತ್ತಿರುವ ಚಿತ್ರಣವನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗೂ ಕಾಂಗ್ರೆಸ್‍ನ ಮತಗಳ ಪ್ರಮಾಣ ಹೆಚ್ಚಾದಷ್ಟು, ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸಿದಷ್ಟು ಬಿಜೆಪಿಗೇ ಅನುಕೂಲವಾಗಿ 5 ಅಥವಾ ಅದಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲಬಹುದು. ಇದರಿಂದ ಆಗುವ ಒಂದು ಸಾಧ್ಯತೆಯೆಂದರೆ, ಬಿಜೆಪಿ ವಿರೋಧಿ ಪಕ್ಷಗಳ ರಾಜಕೀಯ ಕಥನ ಬದಲಾಗಬಹುದು. ದೆಹಲಿಯಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ತಂತ್ರ ಮಾರ್ಪಡಿಸಿ ದೆಹಲಿ ಎನ್ನುವುದು ರಾಷ್ಟ್ರದ ಚಿಕ್ಕ ಪ್ರತಿರೂಪವೆಂದು ಪರಿಗಣಿಸದೇ ದೆಹಲಿಗೇ ಮೀಸಲಾದ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...