ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಅವರನ್ನು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಇಂದು ಬಂಧಿಸಲಾಗಿದೆ.
ಶಾರ್ಜೀಲ್ ಇಮಾಮ್ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವ ಪೊಲೀಸರು ಇಂದು ಬಿಹಾರದ ಜಹಾನಾಬಾದ್ನಲ್ಲಿ ಬಂಧಿಸಿದ್ದು ವಿಚಾರಣೆಗಾಗಿ ದೆಹಲಿಗೆ ಕರೆತಂದಿದ್ದಾರೆ.
ನಗರದ ಶಾಹೀನ್ ಬಾಗ್ನಲ್ಲಿ ನಡೆಯುತ್ತಿರುವ ಪೌರತ್ವ ವಿರೋಧಿ ಕಾಯ್ದೆ ಪ್ರತಿಭಟನೆಯ ಸಂಘಟಕರಲ್ಲಿ ಒಬ್ಬರಾದ ಶಾರ್ಜೀಲ್ ಇಮಾಮ್ ಅಸ್ಸಾಂ ಅನ್ನು ಭಾರತದ ಇತರ ಭಾಗಗಳಿಂದ ಬೇರ್ಪಡಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧಿಸಲಾಗಿದೆ.
ಅಲ್ಲದೇ ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಉತ್ತರಪ್ರದೇಶದಲ್ಲೂ ಆತನ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎನ್ನಲಾಗುತ್ತಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124 ಎ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಪೌರತ್ವ ವಿರೋಧಿ ಕಾಯ್ದೆ ಕಾರ್ಯಕರ್ತ ಶಾರ್ಜೀಲ್ ಇಮಾಮ್ ಅವರನ್ನು ಹುಡುಕಲು ದೆಹಲಿ ಮತ್ತು ಬಿಹಾರದ ಪೊಲೀಸ್ ತಂಡ ಸೋಮವಾರ ಜೆಹಾನಾಬಾದ್ನಿಂದ ಪಾಟ್ನಾದವರೆಗೆ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದ ನಂತರ ಶಾರ್ಜಿಲ್ ಇಮಾಮ್ ಬಂಧನವಾಗಿದೆ.
ಐಐಟಿ ಮುಂಬೈ ಹಳೆಯ ವಿದ್ಯಾರ್ಥಿ ಮಾಜಿ ಜನತಾದಳ (ಯುನೈಟೆಡ್) ನಾಯಕ ದಿವಂಗತ ಅಕ್ಬರ್ ಇಮಾಮ್ ಅವರ ಪುತ್ರನಾದ ಶಾರ್ಜೀಲ್ ಅವರು ಆಧುನಿಕ ಇತಿಹಾಸದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ 2017 ರಲ್ಲಿ ಜೆಎನ್ಯುಗೆ ಸೇರಿದ್ದರು.