ಪ್ರಧಾನಿ ನರೇಂದ್ರ ಮೋದಿ ವಿರುದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತದ ಆರ್ಥಿಕತೆ ಕುಸಿದುಹೋಗುತ್ತಿದೆ. ಆದರೆ ಮುಂದೇನು ಮಾಡಬೇಕೆಂಬ ಕಲ್ಪನೆ ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಇಲ್ಲ ಎಂದು ಟೀಕಿಸಿದ್ದಾರೆ.
ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಪ್ರಧಾನಿ ಅರ್ಥಶಾಸ್ತ್ರವನ್ನು ಅರ್ಥ ಮಾಡಿಕೊಂಡಿಲ್ಲ. ಮೋದಿ ಮತ್ತು ಅವರ ಕನಸಿನ ಆರ್ಥಿಕ ಸಲಹೆಗಾರರ ತಂಡ ದೇಶದ ಆರ್ಥಿಕತೆ ಬದಲಿಸುತ್ತಿದೆ. ಮೊದಲು ಜಿಡಿಪಿ 7.5ರಷ್ಟಿತ್ತು. ಹಣದುಬ್ಬರ 3.5ರಷ್ಟಿತ್ತು.
ಈಗ ಜಿಡಿಪಿ 3.5ರಷ್ಟಿದೆ. ಹಣದುಬ್ಬರ 7.5ರಷ್ಟಿದೆ ಎಂದು ಗೇಲಿ ಮಾಡಿರುವ ರಾಹುಲ್ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಮುಂದೇನು ಮಾಡಬೇಕೆಂಬ ಕಲ್ಪನೆಯೇ ಇಲ್ಲ’ ೆಎಂದು ಲೇವಡಿ ಮಾಡಿದ್ದಾರೆ
ಕಳೆದ ಕೆಲವು ತಿಂಗಳಲ್ಲಿ ಒಂದು ಕೋಟಿ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ. CAA, NRC ಮತ್ತು NPR ಬಗ್ಗೆ ಪ್ರಧಾನಿ ಉದ್ದುದ್ದ ಭಾಷಣ ಮಾಡುತ್ತಾರೆ ಮತ್ತೆ ನಿರುದ್ಯೋಗದ ಬಗ್ಗೆ ಮೌನವಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಯುಪಿಎ ಅವಧಿಯಲ್ಲಿ ಆರ್ಥಿಕ ಬೆಳವಣಿಗೆಯ ದರ 9ರಷ್ಟಿತ್ತು. ಈ ಅದು 5ಕ್ಕೆ ಕುಸಿದಿದೆ. ಸರಿಯಾಗಿ ಲೆಕ್ಕ ಹಾಕಿದರೆ ಅದು 2.5ಕ್ಕೆ ಕುಸಿದುಹೋಗಿರುವುದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು..